ಪ್ರದೀಪ ನಾನು ಬೇಗ ಒಂದಾಗಬೇಕು.. ಚಿಕ್ಕತಿರುಪತಿ ಹುಂಡಿಯಲ್ಲಿ ವಿಶೇಷ ಕೋರಿಕೆ; ಪ್ರೇಮ ಪತ್ರದಲ್ಲಿ ಏನೇನಿದೆ?

author-image
Veena Gangani
Updated On
ಪ್ರದೀಪ ನಾನು ಬೇಗ ಒಂದಾಗಬೇಕು.. ಚಿಕ್ಕತಿರುಪತಿ ಹುಂಡಿಯಲ್ಲಿ ವಿಶೇಷ ಕೋರಿಕೆ; ಪ್ರೇಮ ಪತ್ರದಲ್ಲಿ ಏನೇನಿದೆ?
Advertisment
  • ತನ್ನ ಪ್ರೇಮ ನಿವೇದನೆಯನ್ನು ದೇವರ ಮುಂದಿಟ್ಟ ಪ್ರಿಯತಮೆ
  • ಚಿಕ್ಕತಿರುಪತಿ ಹುಂಡಿಯಲ್ಲೊಂದು ಪ್ರೇಮ ಕೋರಿಕೆ ಪತ್ರ ಪತ್ತೆ
  • ಎಲ್ಲರಿಗಿಂತ.. ಎಲ್ಲದಕ್ಕಿಂತ ಜಾಸ್ತಿ ಪ್ರೀತಿಸಬೇಕು ಎಂದು ಉಲ್ಲೇಖ

ಕೋಲಾರ: ಮುಡಿ ಕೊಡುತ್ತೇನೆ, ಪ್ರದೀಪ ನಾನು ಬೇಗ ಒಂದಾಗಬೇಕು ಎಂದು ಯುವತಿಯೊಬ್ಬಳು ಚಿಕ್ಕ ತಿರುಪತಿ ಹುಂಡಿಯಲ್ಲಿ ಲವ್​ ಲೇಟರ್​ ಬರೆದು ಹಾಕಿದ್ದಾಳೆ.

ಇದನ್ನೂ ಓದಿ: ಐಶ್ವರ್ಯಾ ಸಿಂಧೋಗಿ ಮನೆಗೆ ಮೋಕ್ಷಿತಾ ಪೈ ಸರ್‌ಪ್ರೈಸ್‌ ಎಂಟ್ರಿ; ಅಸಲಿಗೆ ಬಂದಿದ್ದು ಯಾರಿಗೋಸ್ಕರ ಗೊತ್ತಾ?

ಸಾಮಾನ್ಯವಾಗಿ ದೇವರ ಹುಂಡಿಯಲ್ಲಿ ಆಗಾಗ ಈ ರೀತಿಯ ವಿಚಿತ್ರ ಕೋರಿಕೆಗಳನ್ನು ಬರೆದಿರುವ ಪತ್ರಗಳು ಸಿಗುತ್ತಲೇ ಇರುತ್ತವೆ. ಇದೀಗ ಮತ್ತೊಂದು ಅಂತಹ ಘಟನೆ ಕೋಲಾರದಲ್ಲಿ ನಡೆದಿದೆ.

publive-image

ಆ ಪತ್ರದಲ್ಲಿ ಏನಿದೆ?

ವೆಂಕಟರಮಣ ಸ್ವಾಮಿ... ತಿರುಪತಿ ತಿಮ್ಮಪ್ಪ, ನಾ ನಿನ್ನ ಸನ್ನಿಧಿಗೆ ಬಂದು ತಲೆ ಮುಡಿ ಕೊಡುತ್ತೇನೆ. ದಯವಿಟ್ಟು ಪ್ರದೀಪ ನಾನು ಬೇಗ ಒಂದಾಗಬೇಕು. ಅವನು ನನ್ನನ್ನು ತುಂಬಾ ಇಷ್ಟ ಪಡಬೇಕು. ನನ್ನ ಬಿಟ್ಟು ಇರಲು ಆಗದಂತೆ ಮಾಡು. ಆಫೀಸ್​​ನಲ್ಲಿ ಎಲ್ಲದಕ್ಕಿಂತ, ಹೊರಗಡೆ ಎಲ್ಲರಿಗಿಂತ ನನ್ನ ಜಾಸ್ತಿ ಪ್ರೀತಿಸಬೇಕು. ಆದಷ್ಟು ಬೇಗ ನಾವಿಬ್ಬರೂ ಒಂದಾಗಬೇಕು. ಆಗ ಇಡೀ ಆಫೀಸ್ ನನ್ನ ಜೊತೆ ಆ ಬಗ್ಗೆ ಮಾತನಾಡಬೇಕು. ಆದಷ್ಟು ಬೇಗ ನನಗೆ ಏನು ಅವನ ಮೇಲೆ ಏನು ಫೀಲಿಂಗ್ ಇದೆಯೋ, ಅವನಿಗೂ ಅದಕ್ಕಿಂತ 7% ಜಾಸ್ತಿ ಫೀಲಿಂಗ್ ಇರಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment