ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದ ಘಟನೆ
ದೆಹಲಿ ವಿಮಾನ ಏರುವ ಗೆಳತಿಗಾಗಿ ಏರ್ಪೋರ್ಟ್ ಪ್ರವೇಶಿಸಿದ ಪ್ರಿಯಕರ
ವಿಮಾನ ಏರಿಸಿ ಟಾಟಾ ಮಾಡಿ ಬರಲು ಪ್ರಿಯಕರ ಮಾಡಿದ ಪ್ಲಾನ್ ಏನು ಗೊತ್ತಾ?
ಬೆಂಗಳೂರು: ಪ್ರೀತಿಗಾಗಿ, ಪ್ರೀತಿಸೋರಿಗಾಗಿ ಏನು ಬೇಕಾದ್ರು ಮಾಡಲು ತಯಾರಿರುತ್ತಾರೆ. ಹೆಚ್ಚೇನು ಬೇಡ ಪಾಕ್ನಿಂದ ಭಾರತಕ್ಕೆ ಸೀಮಾ ಹೈದರ್ ಇದಕ್ಕೆ ಪ್ರಮುಖ ಉದಾಹರಣೆ ಎನ್ನಬಹುದು. ಆದರೆ ಬೆಂಗಳೂರಲ್ಲೊಬ್ಬ ಪ್ರಿಯಕರ ತನ್ನ ಗೆಳತಿಗಾಗಿ ಏನು ಮಾಡಿದ್ದಾನೆ ಗೊತ್ತಾ? ಏರ್ಪೋರ್ಟ್ನಲ್ಲಿ ನಿಂತು ವಿಮಾನ ಏರುವ ಗೆಳತಿಗೆ ಟಾಟಾ ಬೈ ಬೈ ಮಾಡಲು ಮಾಡಿದ ಖತರ್ನಾಕ್ ಐಡಿಯಾ ಮಾತ್ರ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ.
ಗೆಳತಿಗಾಗಿ ಏನು ಮಾಡಿದ ಗೊತ್ತಾ?
ಮಾರ್ಚ್ 8 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದ ಘಟನೆ ಇದಾಗಿದೆ. ಪ್ರಕಾರ್ ಶ್ರೀವತ್ಸ ತನ್ನ ಗೆಳತಿ ಸಂಸ್ಕ್ರತಿ ಚೌಧರಿಗೆ ಟಾಟಾ ಮಾಡಲು ಭದ್ರತೆಯನ್ನು ಮೀರಿ ಏರ್ಪೋರ್ಟ್ ಒಳಕ್ಕೆ ಹೋಗಿದ್ದಾನೆ. ನಕಲಿ ಟಿಕೆಟ್ ಮಾಡಿಸಿ ಪ್ರವೇಶ ಪಡೆದು ಭದ್ರತಾ ಸಿಬ್ಬಂದಿಯನ್ನು ಯಾಮಾರಿಸಿದ್ದಾನೆ. ಆದರೆ ಪ್ರಕಾರ್ ಕಳ್ಳಾಟ ಏರ್ಪೋರ್ಟ್ ಸಿಬ್ಬಂದಿಗೆ ತಿಳಿದುಬಂದು ಕೂಡಲೇ ಆತನನ್ನು ಹಿಡಿದಿದ್ದಾರೆ.
ಅಧಿಕಾರಿಗಳಿಗೆ ಚಳ್ಳೆಹಣ್ಣು
ಪ್ರಕಾರ್ ತನ್ನ ಪ್ರೇಯಸಿಗಾಗಿ ಆಕಾಸ ಏರ್ಲೈನ್ಸ್ ಟಿಕೇಟ್ ಎಡಿಟ್ ಮಾಡಿ ಸ್ನೇಹಿತೆ ಜೊತೆ ಕೆಂಪೇಗೌಡ ಏರ್ಪೊರ್ಟ್ ಟರ್ಮಿನಲ್ ಪ್ರವೇಶಿಸಿದ್ದನು. ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಯಾಮಾರಿಸಲು ಮುಂದಾಗಿದ್ದನು. ಆದರೆ ಸ್ನೇಹಿತೆಯನ್ನು ಬೆಂಗಳೂರಿನಿಂದ ದೆಹಲಿ ವಿಮಾನಕ್ಕೆ ಹತ್ತಿಸಿ ವಾಪಸ್ಸು ಬರುವಾಗ ತಗ್ಲಾಕಿಕೊಂಡಿದ್ದ್ದಾನೆ.
ಪ್ರಕರಣ ದಾಖಲು
ಪ್ರಕಾರ್ ಮೇಲೆ ಅನುಮಾನಗೊಂಡು ಮರು ತಪಾಸಣೇ ವೇಳೆ ಆತ ಏರ್ಲೈನ್ಸ್ ಟಿಕೇಟ್ ನಕಲು ಮಾಡಿರೋದು ಬಯಲಿಗೆ ಬಂದಿದೆ. ಸದ್ಯ ಏರ್ಪೋರ್ಟ್ ಸಿಬ್ಬಂದಿಗಳು ಪ್ರಕಾರ್ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿನ್ನಲೆ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದ ಘಟನೆ
ದೆಹಲಿ ವಿಮಾನ ಏರುವ ಗೆಳತಿಗಾಗಿ ಏರ್ಪೋರ್ಟ್ ಪ್ರವೇಶಿಸಿದ ಪ್ರಿಯಕರ
ವಿಮಾನ ಏರಿಸಿ ಟಾಟಾ ಮಾಡಿ ಬರಲು ಪ್ರಿಯಕರ ಮಾಡಿದ ಪ್ಲಾನ್ ಏನು ಗೊತ್ತಾ?
ಬೆಂಗಳೂರು: ಪ್ರೀತಿಗಾಗಿ, ಪ್ರೀತಿಸೋರಿಗಾಗಿ ಏನು ಬೇಕಾದ್ರು ಮಾಡಲು ತಯಾರಿರುತ್ತಾರೆ. ಹೆಚ್ಚೇನು ಬೇಡ ಪಾಕ್ನಿಂದ ಭಾರತಕ್ಕೆ ಸೀಮಾ ಹೈದರ್ ಇದಕ್ಕೆ ಪ್ರಮುಖ ಉದಾಹರಣೆ ಎನ್ನಬಹುದು. ಆದರೆ ಬೆಂಗಳೂರಲ್ಲೊಬ್ಬ ಪ್ರಿಯಕರ ತನ್ನ ಗೆಳತಿಗಾಗಿ ಏನು ಮಾಡಿದ್ದಾನೆ ಗೊತ್ತಾ? ಏರ್ಪೋರ್ಟ್ನಲ್ಲಿ ನಿಂತು ವಿಮಾನ ಏರುವ ಗೆಳತಿಗೆ ಟಾಟಾ ಬೈ ಬೈ ಮಾಡಲು ಮಾಡಿದ ಖತರ್ನಾಕ್ ಐಡಿಯಾ ಮಾತ್ರ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ.
ಗೆಳತಿಗಾಗಿ ಏನು ಮಾಡಿದ ಗೊತ್ತಾ?
ಮಾರ್ಚ್ 8 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದ ಘಟನೆ ಇದಾಗಿದೆ. ಪ್ರಕಾರ್ ಶ್ರೀವತ್ಸ ತನ್ನ ಗೆಳತಿ ಸಂಸ್ಕ್ರತಿ ಚೌಧರಿಗೆ ಟಾಟಾ ಮಾಡಲು ಭದ್ರತೆಯನ್ನು ಮೀರಿ ಏರ್ಪೋರ್ಟ್ ಒಳಕ್ಕೆ ಹೋಗಿದ್ದಾನೆ. ನಕಲಿ ಟಿಕೆಟ್ ಮಾಡಿಸಿ ಪ್ರವೇಶ ಪಡೆದು ಭದ್ರತಾ ಸಿಬ್ಬಂದಿಯನ್ನು ಯಾಮಾರಿಸಿದ್ದಾನೆ. ಆದರೆ ಪ್ರಕಾರ್ ಕಳ್ಳಾಟ ಏರ್ಪೋರ್ಟ್ ಸಿಬ್ಬಂದಿಗೆ ತಿಳಿದುಬಂದು ಕೂಡಲೇ ಆತನನ್ನು ಹಿಡಿದಿದ್ದಾರೆ.
ಅಧಿಕಾರಿಗಳಿಗೆ ಚಳ್ಳೆಹಣ್ಣು
ಪ್ರಕಾರ್ ತನ್ನ ಪ್ರೇಯಸಿಗಾಗಿ ಆಕಾಸ ಏರ್ಲೈನ್ಸ್ ಟಿಕೇಟ್ ಎಡಿಟ್ ಮಾಡಿ ಸ್ನೇಹಿತೆ ಜೊತೆ ಕೆಂಪೇಗೌಡ ಏರ್ಪೊರ್ಟ್ ಟರ್ಮಿನಲ್ ಪ್ರವೇಶಿಸಿದ್ದನು. ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಯಾಮಾರಿಸಲು ಮುಂದಾಗಿದ್ದನು. ಆದರೆ ಸ್ನೇಹಿತೆಯನ್ನು ಬೆಂಗಳೂರಿನಿಂದ ದೆಹಲಿ ವಿಮಾನಕ್ಕೆ ಹತ್ತಿಸಿ ವಾಪಸ್ಸು ಬರುವಾಗ ತಗ್ಲಾಕಿಕೊಂಡಿದ್ದ್ದಾನೆ.
ಪ್ರಕರಣ ದಾಖಲು
ಪ್ರಕಾರ್ ಮೇಲೆ ಅನುಮಾನಗೊಂಡು ಮರು ತಪಾಸಣೇ ವೇಳೆ ಆತ ಏರ್ಲೈನ್ಸ್ ಟಿಕೇಟ್ ನಕಲು ಮಾಡಿರೋದು ಬಯಲಿಗೆ ಬಂದಿದೆ. ಸದ್ಯ ಏರ್ಪೋರ್ಟ್ ಸಿಬ್ಬಂದಿಗಳು ಪ್ರಕಾರ್ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿನ್ನಲೆ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ