/newsfirstlive-kannada/media/post_attachments/wp-content/uploads/2025/04/jammu-kashmir5.jpg)
ಜಮ್ಮು-ಕಾಶ್ಮೀರದ ಅನಂತಪುರ ಜಿಲ್ಲೆಯ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ಮೂವರು ಕರ್ನಾಟಕದವರು.
ಇದನ್ನೂ ಓದಿ:ಉಗ್ರರ ಗುಂಡಿನ ದಾಳಿ.. ಪ್ರಾಣ ಬಿಟ್ಟ ಮಗನ ಬರುವಿಕೆಗಾಗಿ ಕಾದು ಕುಳಿತ ತಾಯಿ
ಅದರಲ್ಲಿ ಮೂಲತಃ ಆಂಧ್ರದವರಾಗಿದ್ದ ಮಧುಸೂದನ್ ರಾವ್ ಅವರು, ಬೆಂಗಳೂರಿನಲ್ಲಿ ರಿಚಸ್ ಗಾರ್ಡನ್ನಲ್ಲಿ ವಾಸಿಸುತ್ತಿದ್ದರು. ಕಳೆದ 3 ದಿನಗಳ ಹಿಂದೆಷ್ಟೇ ಮಧುಸೂದನ್ ಕುಟುಂಬ ಪ್ರವಾಸಕ್ಕೆ ತೆರಳಿತ್ತು. ಆದರೆ ಉಗ್ರರ ದಾಳಿಯಲ್ಲಿ ಮೃತರಾದ ಮಧುಸೂದನ್ ರಾವ್ ಕೊನೆ ಕ್ಷಣ ಭಯಾನಕವಾಗಿದೆ.
ಗುಂಡಿಕ್ಕುವಾಗ ಏನಂದ್ರು..?
ಮಧುಸೂದನ್ ರಾವ್ ಕಾಶ್ಮೀರಕ್ಕೆ ಪ್ರೆಂಡ್ಸ್ ಹಾಗೂ ಫ್ಯಾಮಿಲಿ ಜೊತೆ ಟ್ರಿಪ್ ಹೋಗಿದ್ದರು. ಈ ವೇಳೆ ನಕಲಿ ಸೇನಾ ಯುನಿಫಾರಂ ಧರಿಸಿದ್ದ ಉಗ್ರರು ಎಂಟ್ರಿಯಾಗಿದ್ದಾರೆ. ಬರ್ತಿದ್ದಂತೆಯೇ, ಮಧುಸೂದನ್ ಬಳಿ ಪ್ರಶ್ನೆ ಮಾಡಿದ್ದಾರೆ. ಹಿಂದೂನಾ? ಮುಸ್ಲಿಂನಾ? ಗಾಬರಿಗೊಂಡ ಮಧುಸೂದನ್, ನಾನು ಮುಸ್ಲಿಂ ಎಂದಿದ್ದಾರೆ. ಆಗ ಉಗ್ರನೊಬ್ಬ ಜೇಬಿನಿಂದ ಕುರಾನ್ ತೆಗೆದು ಓದುವಂತೆ ಹೇಳಿದ್ದಾನೆ
ಅದಕ್ಕೆ ಮಧುಸೂದನ್ ನಾನು ಮರೆತು ಹೋಗಿದ್ದೇನೆ ಎಂದು ಸಮಜಾಯಿಸಿದ್ದಾರೆ. ಆಗ ಪ್ಯಾಂಟ್ ಬಿಚ್ಚು ಎಂದು ಉಗ್ರ ತಾಕೀತು ಮಾಡಿದ್ದಾನೆ. ಪ್ಯಾಂಟ್ ಬಿಚ್ಚುತ್ತಿದ್ದಂತೆಯೇ ಹೆಂಡತಿ, ಮಕ್ಕಳ ಎದುರೇ ತಲೆಗೆ ಗುಂಡಿಟ್ಟಿದ್ದಾರೆ. ಮಧುಸೂದನ್ ಮುಸ್ಲಿಂ ಅಲ್ಲ ಹಿಂದೂ ಎಂದು ತಿಳಿದುಕೊಂಡೇ ಅಟ್ಯಾಕ್ ಮಾಡಿದ್ದಾರೆ ಎಂದು ಜೊತೆಗಿದ್ದ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ