ಮಹಾಕುಂಭದಲ್ಲಿ ಪಾರಿವಾಳ ಬಾಬಾ.. ಇವರ ತಲೆ ಬಿಟ್ಟು ಎಲ್ಲಿಯೂ ಹೋಗಲ್ಲ ಈ ಹಕ್ಕಿ..!

author-image
Ganesh
Updated On
ಮಹಾಕುಂಭದಲ್ಲಿ ಪಾರಿವಾಳ ಬಾಬಾ.. ಇವರ ತಲೆ ಬಿಟ್ಟು ಎಲ್ಲಿಯೂ ಹೋಗಲ್ಲ ಈ ಹಕ್ಕಿ..!
Advertisment
  • ಮಹಾಕುಂಭ ಮೇಳ-2025 ಇಂದಿನಿಂದ ಆರಂಭ
  • ಕೋಟ್ಯಾಂತರ ಭಕ್ತರು ಮಹಾಕುಂಭಕ್ಕೆ ಆಗಮನ
  • ಮಧ್ಯಾಹ್ನದ ವೇಳೆ 1 ಕೋಟಿ ಭಕ್ತರಿಂದ ಪುಣ್ಯಸ್ನಾನ

ಉತ್ತರ ಪ್ರದೇಶದ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ವೈಭವದಿಂದ ಪ್ರಾರಂಭವಾಗಿದೆ. ಬೆಳಗ್ಗೆಯಿಂದಲೇ ಇಲ್ಲಿಯವರೆಗೆ ಬರೋಬ್ಬರಿ ಒಂದು ಕೋಟಿ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿ ಪಾವನರಾಗಿದ್ದಾರೆ.

ಈ ಮಹಾಕುಂಭದಲ್ಲಿ ಯಾತ್ರಾರ್ಥಿಗಳಿಗೆ ಚೋಟಾ ಬಾಬಾ (Chota baba), ಚಾಬಿ ಬಾಬಾ (Chabi baba) ಮತ್ತು ಪಾವೂರಂ ಬಾಬಾರಂತಹ (Pavurama baba) ಸಂತರು ಪ್ರಮುಖ ಆಕರ್ಷಣೆ. ಈ ಪಾವೂರಂ ಬಾಬಾರನ್ನು ನೋಡಲು ಮತ್ತು ಅವರ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಿದಾಯಕ ವಿಚಾರಗಳಿವೆ. ಅಂದ್ಹಾಗೆ ಇವರ ಹೆಸರು ಮಹಾಂತ್ ರಾಜ್​ಪುರಿ ಜೀ ಮಹಾರಾಜ್ (Mahant Rajpuri Ji Maharaj).

ಇದನ್ನೂ ಓದಿ: ನೀವು ಮನೆಯಲ್ಲೇ ಮಹಾಕುಂಭದ ಪುಣ್ಯ ಸ್ನಾನ ಮಾಡಬಹುದು.. ಪವಿತ್ರ ನೀರು ಪಡೆಯೋದು ಹೇಗೆ..?

ಸೃಷ್ಟಿಯಲ್ಲಿ ಜೀವಿಗಳಿಗೆ ಮಾಡುವ ಸೇವೆಯೇ ಶ್ರೇಷ್ಠ ಸೇವೆ ಎಂದು ನಂಬಿರುವ ಈ ಪಾರಿವಾಳ ವಾಲೆ ಬಾಬಾ ಮಹಾ ಕುಂಭದ ಪ್ರಮುಖ ಆಕರ್ಷಣೆ. ರಾಜಸ್ಥಾನದ ಇವರು, ಬಾಬಾ ಪಾರಿವಾಳ ವಾಲೆ ಬಾಬಾ ಎಂದೇ ಜನಪ್ರಿಯ. ಏಕೆಂದರೆ ತುಂಬಾ ವರ್ಷಗಳಿಂದ ತಲೆಯ ಮೇಲೆ ಪಾರಿವಾಳವನ್ನು ಹೊತ್ತುಕೊಂಡು ತಿರುಗಾಡುತ್ತಿದ್ದಾರೆ.

ಜೀವಿಗಳ ಸೇವೆ ಮಾಡುವುದೇ ತಮ್ಮ ಗುರಿ. ಪ್ರತಿ ಜೀವಿಯಲ್ಲೂ ದೇವರಿದ್ದಾನೆ. ಹಾಗಾಗಿ ಜೀವಿಗಳ ಸೇವೆ ಮಾಡುವುದೇ ಪರಮ ಧರ್ಮ ಮತ್ತು ಏಕೈಕ ಗುರಿ. ಸಕಲ ಜೀವಿಗಳ ಸೇವೆ ಮಾಡು.. ಜೀವಿಗಳಲ್ಲಿ ಶಿವನಿದ್ದಾನೆ. ಉಳಿದವುಗಳೆಲ್ಲವೂ ಸುಳ್ಳು. ಗೋವುಗಳ ಸೇವೆ ಮಾಡಬೇಕು. ನೀವು ತಂತ್ರ ಮಂತ್ರವನ್ನು ಅಭ್ಯಾಸ ಮಾಡಿದರೆ ಯಾವ ಫಲಿತಾಂಶ ಪಡೆಯುತ್ತೀರಿ? ಗೋವಿನ ಸೇವೆ ಮಾಡಿದ್ರೆ ಒಳ್ಳೆಯ ಫಲ ಸಿಗಲಿದೆ ಎಂದು ಪಾರಿವಾಳ ಬಾಬಾ ಹೇಳುತ್ತಾರೆ. ಕಳೆದ 9 ವರ್ಷಗಳಿಂದ ಇವರು ಪಾರಿವಾಳವನ್ನು ತಲೆಯ ಮೇಲೆ ಹೊತ್ತುಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿ: ದೇಶದ ಭದ್ರತೆಗೆ ಹೊಸ ಕ್ರಾಂತಿ.. ಬ್ಯಾಟಲ್ ರೋಬೋ​​ ಎಂಟ್ರಿ.. ಇವುಗಳ ವಿಶೇಷತೆ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment