ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಭಾಗಿಯಾದ ಆರೋಪ ಮೇಲೆ ನಟ ಅರೆಸ್ಟ್
ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸುತ್ತಿದ್ದಂತೆ ನಟ ಎಸ್ಕೇಪ್
ಪೊಲೀಸರಿಂದ ತಪ್ಪಿಸಿಕೊಳ್ಳಲು 4 ದಿನಗಳಲ್ಲಿ 4 ರಾಜ್ಯಕ್ಕೆ ಸಾಹಿಲ್ ಖಾನ್ ಸಂಚಾರ
ಮಹಾದೇವ್ ಬೆಟ್ಟಿಂಗ್ ಆ್ಯಪ್ ಕೇಸ್ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಈ ಕೇಸ್ನಲ್ಲಿ ಪೊಲೀಸ್ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಳ್ಳಬಾರದು ಎಂದು ಎಸ್ಕೇಪ್ ಆಗಿದ್ದ ನಟ ಕೊನೆಗೂ ಅರೆಸ್ಟ್ ಆಗಿದ್ದಾನೆ.
ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್.. ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಡಿಸಿ ಸಿ. ಸತ್ಯಭಾಮ!
ಹೌದು, ನಟ ಮತ್ತು ಉದ್ಯಮಿಯಾಗಿರೋ ಸಾಹಿಲ್ ಖಾನ್ ಬಂಧಿತ ಆರೋಪಿ. ಏಪ್ರಿಲ್ 28ರಂದು ಛತ್ತೀಸ್ಗಢದ ಜಗದಲ್ಪುರದಲ್ಲಿ ಪೊಲೀಸ್ ಅಧಿಕಾರಿಗಳು ಅರೆಸ್ಟ್ ಮಾಡಿ ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಇನ್ನು, ನ್ಯಾಯಾಲಯ ಸಾಹಿಲ್ ಖಾನ್ಗೆ ಮೇ 1ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ನಟ ಸಾಹಿಲ್ ಖಾನ್ ಅರೆಸ್ಟ್ ಆಗಿದ್ದು ಹೇಗೆ?
ನಟನಾಗಿರೋ ಸಾಹಿಲ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಇದಾದ ಬಳಿಕ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು 4 ದಿನಗಳಲ್ಲಿ 4 ರಾಜ್ಯಕ್ಕೆ ಸಂಚಾರ ಬೆಳಸಿ ಒಟ್ಟು 1,800 ಕಿ.ಮೀ ದೂರ ಪ್ರಯಾಣಿಸಿದ್ದಾನಂತೆ. ಪೊಲೀಸ ಕಣ್ತಪ್ಪಿಸಿ ಸಾಹಿಲ್ ಖಾನ್ ವೇಷ ಬದಲಿಸಿಕೊಂಡು ಕರ್ಚೀಫಿನಿಂದ ಮುಖವನ್ನು ಮುಚ್ಚಿಕೊಂಡು ಓಡಾಡುತ್ತಿದ್ದ ಎನ್ನಲಾಗುತ್ತಿತ್ತು. ಬಳಿಕ ನಟ ಸಾಹಿಲ್ ಜಗದಲ್ಪುರದ ಆರಾಧ್ಯ ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ಇರುವ ವಿಚಾರ ತಿಳಿದ ಕೂಡಲೇ ಆತನನ್ನು ಬೆನ್ನು ಹತ್ತಿದ ಪೊಲೀಸ್ ಅಧಿಕಾರಿಗಳು ಸುಮಾರು 40 ಗಂಟೆಗಳ ಕಾಲ ತೀವ್ರ ಹುಡುಕಾಟ ನಡೆಸಿದ ಬಳಿಕ ನಟ ಸಿಕ್ಕಿಬಿದ್ದಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಭಾಗಿಯಾದ ಆರೋಪ ಮೇಲೆ ನಟ ಅರೆಸ್ಟ್
ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸುತ್ತಿದ್ದಂತೆ ನಟ ಎಸ್ಕೇಪ್
ಪೊಲೀಸರಿಂದ ತಪ್ಪಿಸಿಕೊಳ್ಳಲು 4 ದಿನಗಳಲ್ಲಿ 4 ರಾಜ್ಯಕ್ಕೆ ಸಾಹಿಲ್ ಖಾನ್ ಸಂಚಾರ
ಮಹಾದೇವ್ ಬೆಟ್ಟಿಂಗ್ ಆ್ಯಪ್ ಕೇಸ್ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಈ ಕೇಸ್ನಲ್ಲಿ ಪೊಲೀಸ್ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಳ್ಳಬಾರದು ಎಂದು ಎಸ್ಕೇಪ್ ಆಗಿದ್ದ ನಟ ಕೊನೆಗೂ ಅರೆಸ್ಟ್ ಆಗಿದ್ದಾನೆ.
ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್.. ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಡಿಸಿ ಸಿ. ಸತ್ಯಭಾಮ!
ಹೌದು, ನಟ ಮತ್ತು ಉದ್ಯಮಿಯಾಗಿರೋ ಸಾಹಿಲ್ ಖಾನ್ ಬಂಧಿತ ಆರೋಪಿ. ಏಪ್ರಿಲ್ 28ರಂದು ಛತ್ತೀಸ್ಗಢದ ಜಗದಲ್ಪುರದಲ್ಲಿ ಪೊಲೀಸ್ ಅಧಿಕಾರಿಗಳು ಅರೆಸ್ಟ್ ಮಾಡಿ ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಇನ್ನು, ನ್ಯಾಯಾಲಯ ಸಾಹಿಲ್ ಖಾನ್ಗೆ ಮೇ 1ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ನಟ ಸಾಹಿಲ್ ಖಾನ್ ಅರೆಸ್ಟ್ ಆಗಿದ್ದು ಹೇಗೆ?
ನಟನಾಗಿರೋ ಸಾಹಿಲ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಇದಾದ ಬಳಿಕ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು 4 ದಿನಗಳಲ್ಲಿ 4 ರಾಜ್ಯಕ್ಕೆ ಸಂಚಾರ ಬೆಳಸಿ ಒಟ್ಟು 1,800 ಕಿ.ಮೀ ದೂರ ಪ್ರಯಾಣಿಸಿದ್ದಾನಂತೆ. ಪೊಲೀಸ ಕಣ್ತಪ್ಪಿಸಿ ಸಾಹಿಲ್ ಖಾನ್ ವೇಷ ಬದಲಿಸಿಕೊಂಡು ಕರ್ಚೀಫಿನಿಂದ ಮುಖವನ್ನು ಮುಚ್ಚಿಕೊಂಡು ಓಡಾಡುತ್ತಿದ್ದ ಎನ್ನಲಾಗುತ್ತಿತ್ತು. ಬಳಿಕ ನಟ ಸಾಹಿಲ್ ಜಗದಲ್ಪುರದ ಆರಾಧ್ಯ ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ಇರುವ ವಿಚಾರ ತಿಳಿದ ಕೂಡಲೇ ಆತನನ್ನು ಬೆನ್ನು ಹತ್ತಿದ ಪೊಲೀಸ್ ಅಧಿಕಾರಿಗಳು ಸುಮಾರು 40 ಗಂಟೆಗಳ ಕಾಲ ತೀವ್ರ ಹುಡುಕಾಟ ನಡೆಸಿದ ಬಳಿಕ ನಟ ಸಿಕ್ಕಿಬಿದ್ದಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ