Advertisment

10 ದಿನಕ್ಕೆ ₹10 ಕೋಟಿ ಗಳಿಸಿದ್ರಾ ಮಹಾಕುಂಭಮೇಳದ ಮೊನಾಲಿಸಾ? ಏನಿದರ ಅಸಲಿಯತ್ತು?

author-image
admin
Updated On
10 ದಿನಕ್ಕೆ ₹10 ಕೋಟಿ ಗಳಿಸಿದ್ರಾ ಮಹಾಕುಂಭಮೇಳದ ಮೊನಾಲಿಸಾ? ಏನಿದರ ಅಸಲಿಯತ್ತು?
Advertisment
  • ಕುಂಭಮೇಳದಲ್ಲಿ 10 ದಿನ ಹೂಮಾಲೆ, ರುದ್ರಾಕ್ಷಿ ಮಾರಿದ್ದ ಮೊನಾಲಿಸಾ
  • ಕಣ್ಣಿನಿಂದಲೇ ಪ್ರಯಾಗ್‌ರಾಜ್‌ನಲ್ಲಿ ಸದ್ದು ಮಾಡಿದ್ದ 17 ವರ್ಷದ ಹುಡುಗಿ
  • ಮೊನಾಲಿಸಾ 10 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದು ನಿಜಾನಾ?

ಪ್ರಯಾಗ್‌ರಾಜ್ ಮಹಾಕುಂಭಮೇಳ ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದೆ. ಈ ಬಾರಿಯ ಕುಂಭಮೇಳದಲ್ಲಿ ಸಾಧುಗಳಷ್ಟೇ ಸದ್ದು ಮಾಡಿದ್ದು ಈ ನೀಲಿ ಕಣ್ಣುಗಳ ಬ್ಯೂಟಿ ಮೊನಾಲಿಸಾ. ಇದು ಉತ್ಪ್ರೇಕ್ಷೆಯ ಮಾತಾದ್ರು ಸೋಷಿಯಲ್ ಮೀಡಿಯಾದಲ್ಲಿ ಮೊನಾಲಿಸಾ ಹವಾ ಜೋರಾಗಿಯೇ ಇದೆ.

Advertisment

ಮಹಾಕುಂಭಮೇಳದ ಮೊನಾಲಿಸಾ ಜನಪ್ರಿಯತೆ ಎಷ್ಟಿತ್ತು ಅಂದ್ರೆ ಖುದ್ದು ಮೊನಾಲಿಸಾ ಖ್ಯಾತಿ ಈ ವೈರಲ್ ಹುಡುಗಿಯೇ ಕೊನೆಗೆ ಪ್ರಯಾಗ್‌ರಾಜ್‌ ಬಿಟ್ಟು ಹೊರ ನಡೆಯಬೇಕಾಯ್ತು. ಕುಂಭಮೇಳದ ಜಾಗ ಖಾಲಿ ಮಾಡಿರುವ ಮೊನಾಲಿಸಾ ಮತ್ತೆ ಸುದ್ದಿಯಲ್ಲಿದ್ದಾರೆ. 10 ದಿನಗಳ ಕಾಲ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ 10 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿದೆ.
ಅಬ್ಬಾ! ಇದು ಕೇಳುವುದಕ್ಕೆ ಆಶ್ಚರ್ಯಕರವಾದ ಸುದ್ದಿಯಾಗಿದೆ. ಮಹಾಕುಂಭಮೇಳದಲ್ಲಿ 10 ದಿನಗಳಲ್ಲಿ 10 ಕೋಟಿ ರೂಪಾಯಿ ಗಳಿಸಿದ್ದಾರೆ ಅನ್ನೋ ಸಾಮಾನ್ಯವಾದ ಸಂಗತಿಯಲ್ಲ. ಆದರೆ ಮೊನಾಲಿಸಾ ಅನ್ನೋ ಈ ಹುಡುಗಿ 10 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು.

ಮೊನಾಲಿಸಾ ಕೇವಲ 10 ದಿನದಲ್ಲಿ 10 ಕೋಟಿ ರೂಪಾಯಿ ಗಳಿಸಿದ ಸುದ್ದಿ ವೈರಲ್ ಆಗಿದ್ದು, ಕೆಲವು ರಾಷ್ಟ್ರೀಯ ಮಾಧ್ಯಮಗಳು ಫ್ಯಾಕ್ಟ್‌ ಚೆಕ್‌ಗೆ ಮುಂದಾಗಿವೆ. ಮೊನಾಲಿಸಾ ಕಣ್ಣುಗಳನ್ನು ನೋಡಿದವರು ಅವಳ ಬಳಿ ಹೋಗಿ ಹೂಮಾಲೆಗಳನ್ನ ಕೊಂಡುಕೊಳ್ಳುವ ಬದಲು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದೇ ಹೆಚ್ಚು. ಹೀಗಿರುವಾಗ 10 ಕೋಟಿ ರೂಪಾಯಿ ಹೂಮಾಲೆಗಳು ಮಾರಾಟ ಆಗಿದ್ಯಾ ಅನ್ನೋದು ಅಚ್ಚರಿಯ ವಿಷಯವಾಗಿದೆ.

10 ದಿನದಲ್ಲಿ 10 ಕೋಟಿ ರೂ. ನಿಜಾನಾ?
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಸುದ್ದಿಯ ಪ್ರಕಾರ ಪ್ರಯಾಗ್‌ರಾಜ್‌ನಲ್ಲಿ ಮೊನಾಲಿಸಾ ಮುತ್ತುಗಳು ಮತ್ತು ರುದ್ರಾಕ್ಷ ಮಾಲೆಗಳನ್ನು ಸಿಕ್ಕಾಪಟ್ಟೆ ಮಾರಾಟ ಮಾಡಿದ್ದಾರೆ. ಕೇವಲ 10 ದಿನದಲ್ಲಿ 10 ಕೋಟಿ ರೂಪಾಯಿ ಗಳಿಸಿದ್ದಾರೆ ಎನ್ನಲಾಗಿದೆ. ಆದರೆ ವಾಸ್ತವವಾಗಿ ಈ ಪ್ರಶ್ನೆಗೆ ಮೊನಾಲಿಸಾ ಅವರೇ ಉತ್ತರಿಸಿದ್ದಾರೆ.

Advertisment

ಮೊನಾಲಿಸಾ ಹೇಳಿದ್ದೇನು?
ಈ ಮಾತು ಕೇಳಿ ಶಾಕ್ ಆಗಿರುವ ಮೊನಾಲಿಸಾ ಅಯ್ಯೋ ಅಷ್ಟೊಂದು ದುಡ್ಡು ನನ್ನ ಬಳಿ ಇದ್ದಿದ್ದರೆ ನಾನು ಹೂಮಾಲೆಗಳನ್ನು ಮಾರಲು ಬರುತ್ತಲೇ ಇರಲಿಲ್ಲ. ಅಷ್ಟಕ್ಕೂ ನನ್ನನ್ನು ನೋಡಿ ಬಂದವರು ನನಗೆ ಕಿರಿಕಿರಿ ಮಾಡಿದರೆ ಹೊರೆತು ಹೂಮಾಲೆಗಳನ್ನು ಕೊಂಡುಕೊಂಡಿಲ್ಲ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ಮಹಾಕುಂಭಮೇಳದ ಮೊನಾಲಿಸಾ ದಿಢೀರ್ ಕಣ್ಮರೆ ಯಾಕೆ? ವೈರಲ್ ಹುಡುಗಿಗೆ ಆಗಿದ್ದೇನು? 

ಮೊನಾಲಿಸಾ ಅವರದ್ದು ಬಡ ಕುಟುಂಬ. ರುದ್ರಕ್ಷಿಗಳನ್ನು ಮಾರಾಟ ಮಾಡಿ ಸ್ವಲ್ಪ ಹಣ ಸಂಪಾದನೆಗೆ ಎಂದು ಮಹಾಕುಂಭಮೇಳಕ್ಕೆ ಪೋಷಕರ ಜೊತೆ ಬಂದಿದ್ದರು. ಆದರೆ ಮೊನಾಲಿಸಾ ಅವರ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಮೊನಾಲಿಸಾ ಅಂದಕ್ಕೆ ಎಲ್ಲರೂ ಮನಸೋತರು. ಹೀಗಾಗಿ ಕುಂಭಮೇಳದಲ್ಲಿ ಫೋಟೋ, ವಿಡಿಯೋ ಮಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನ, ಮೊನಾಲಿಸಾ ಹಿಂದೆ ಬೀಳುತ್ತಿದ್ದರು. ಇದರಿಂದ ಆಕೆಗೆ ಸಮಸ್ಯೆಗಳು ಎದುರಾದವು.

Advertisment

ಜನರು ಮೊಬೈಲ್, ಕ್ಯಾಮೆರಾ ಹಿಡಿದುಕೊಂಡು ಬಂದು ಸೆಲ್ಫಿಗಾಗಿ ಹಿಂದೆ ಬೀಳುತ್ತಿದ್ದರು. ಇದರಿಂದ ಆಕೆ ವ್ಯಾಪಾರಕ್ಕೆ ತೊಂದರೆ ಆಗಿತ್ತು. ಒಂದು ರುದ್ರಾಕ್ಷಿ ಮಾಲೆ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದ ಜನ ಸೆಲ್ಫಿ ಬೇಕು ಎನ್ನುತ್ತಿದ್ದರು. ಮೊನಾಲಿಸಾ ಹಾಗೂ ಈಕೆಯ ಕುಟುಂಬದ ಖಾಸಗಿತನ ಮತ್ತು ಮಾನಸಿಕ ಶಾಂತಿ ಹಾಳಾಗಿದೆ ಎಂದು ಹೇಳಲಾಗಿದೆ.

ಇದು ಅಲ್ಲದೇ ಮೊನಾಲಿಸಾ ಇರುವ ಟೆಂಟ್​ಗೆ ಜನರು ಏಕಾಏಕಿ ನುಗ್ಗಿದ್ದರಿಂದ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಮೊನಾಲಿಸಾ ಕುಂಭವನ್ನು ಅರ್ಧಕ್ಕೆ ಬಿಟ್ಟು ಮನೆಗೆ ವಾಪಸ್ ಆಗಿದ್ದಾರೆ. 17 ವರ್ಷದ ಮೊನಾಲಿಸಾ, ಮಧ್ಯಪ್ರದೇಶದ ಇಂದೋರ್​ನ ನಿವಾಸಿ. ವ್ಯಾಪಾರ ಮಾಡಲೆಂದು ಪ್ರಯಾಗ್​ರಾಜ್​ಗೆ ಬಂದರೆ ಜನ ಕೊಟ್ಟ ಕಿರುಕುಳದಿಂದ ಮೊನಲಿಸಾ ಕುಂಭಮೇಳಕ್ಕೆ ಗುಡ್​ಬೈ ಹೇಳಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಜನವರಿ 13 ರಿಂದ 2025ರ ಮಹಾ ಕುಂಭಮೇಳ ಸಂಭ್ರಮದಿಂದ ನಡೆಯುತ್ತಿದೆ. ಈ ಮಹಾ ಕುಂಭದಲ್ಲಿ ಕೋಟ್ಯಂತರ ಜನರು ಬಂದು ಪುಣ್ಯ ಸ್ನಾನ ಮಾಡಿ ವಾಪಸ್ ಆಗುತ್ತಿದ್ದಾರೆ. ಇನ್ನು ಫೆಬ್ರವರಿ 26 ರವರೆಗೆ ಈ ಮಹಾ ಕುಂಭಮೇಳ ನಡೆಯಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment