/newsfirstlive-kannada/media/post_attachments/wp-content/uploads/2025/02/baba-artatrana.jpg)
ಪ್ರಯಾಗ್ರಾಜ್ ಮಹಾಕುಂಭಮೇಳ ಇನ್ನೂ ಕೋಟಿ, ಕೋಟಿ ಭಕ್ತರನ್ನ ತನ್ನತ್ತ ಸೆಳೆಯುತ್ತಿದೆ. ವಿಶ್ವ ವಿಖ್ಯಾತ ಈ ಮಹಾಕುಂಭಮೇಳ ಮುಕ್ತಾಯಕ್ಕೆ ಇನ್ನು 6 ದಿನಗಳು ಬಾಕಿ ಇದೆ. ಮಹಾಶಿವರಾತ್ರಿಯಂದು 144 ವರ್ಷದ ಮಹಾಕುಂಭಮೇಳಕ್ಕೆ ವಿದ್ಯುಕ್ತ ತೆರೆ ಬೀಳುತ್ತಿದೆ.
ಮಹಾಕುಂಭಮೇಳದಲ್ಲಿ ಒಬ್ಬ ಚಮತ್ಕಾರಿ ಬಾಬಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪ್ರಯಾಗ್ರಾಜ್ನಲ್ಲಿ ಈಗ ಈ ಬಾಬಾ ಎಲ್ಲರ ಕೇಂದ್ರ ಬಿಂದು ಆಗಿದ್ದು, ಇವರ ಶಿಬಿರದ ಮುಂದೆ ಸಾವಿರಾರು ಜನ ಸಾಲುಗಟ್ಟಿ ನಿಂತಿದ್ದಾರೆ.
ಈ ಬಾಬಾ ಹೆಸರು ಅರ್ಥತ್ರಾನ. ಈ ಬಾಬಾನಿಂದ ಕ್ಯಾನ್ಸರ್ ಸೇರಿದಂತೆ ಎಲ್ಲಾ ಕಾಯಿಲೆಗಳು ವಾಸಿಯಾಗುತ್ತಂತೆ ಅನ್ನೋ ಮಾತು ಕೇಳಿ ಬಂದಿದೆ. ಬಾಬಾ ಅರ್ಥತ್ರಾನ ತನ್ನ ಕಾಲಿನಿಂದ ಜನರನ್ನು ಟಚ್ ಮಾಡ್ತಾರೆ. ಅದಾದ ಬಳಿಕ ಜನರ ರೋಗ, ಕಾಯಿಲೆಗಳು ಸಂಪೂರ್ಣ ವಾಸಿಯಾಗುತ್ತವೆ ಎಂದು ಭಕ್ತರು ನಂಬಿದ್ದಾರೆ.
ಇದನ್ನೂ ಓದಿ: ಅಮ್ಮನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಕುಂಭ ಮೇಳ ಸುಂದರಿ ಮೊನಾಲಿಸಾ; ಏನದು?
ಮಹಾಕುಂಭಮೇಳದ ಸೆಕ್ಟರ್ 19ರಲ್ಲಿ ಬಾಬಾ ಅರ್ಥತ್ರಾನ ಶಿಬಿರ ತೆರೆದಿದ್ದು, ಪ್ರತಿ ದಿನ ಸಾವಿರಾರು ಜನರು ಜಮಾವಣೆ ಆಗುತ್ತಿದ್ದಾರೆ. ಕೊರೊನಾ ಕಾಲದಲ್ಲಿ ತಾನು ಕೊರೊನಾವನ್ನು ಗುಣಪಡಿಸುತ್ತೇನೆ ಎಂದು ಬಾಬಾ ಅರ್ಥತ್ರಾನ ಸಾಕಷ್ಟು ಸುದ್ದಿಯಾಗಿದ್ದರು.
ಬಾಬಾ ಅರ್ಥತ್ರಾನ ಶಿವನ ಆಶೀರ್ವಾದದಿಂದ ಜನರ ರೋಗಗಳನ್ನು ನಿವಾರಣೆ ಮಾಡುತ್ತಿದ್ದೇನೆ. ದೇವರು ಶಕ್ತಿಶಾಲಿಯಾಗಿರುವುದನ್ನು ಕಲಿಸಿದ್ದಾನೆ. ದೇವರು ನನಗೆ ಈ ಶಕ್ತಿಯನ್ನು ಏಕೆ ಕೊಟ್ಟಿದ್ದಾನೋ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಬಾಬಾ ಅರ್ಥತ್ರಾನ ಅವರ ವಿಡಿಯೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ