/newsfirstlive-kannada/media/post_attachments/wp-content/uploads/2025/01/mahakumbh-stampede-1.jpg)
ಚಿತ್ರದುರ್ಗ: ವಿಶ್ವವಿಖ್ಯಾತ ಪ್ರಯಾಗ್ರಾಜ್ ಮಹಾಕುಂಭಮೇಳದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, 30 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಕಾಲ್ತುಳಿತ ಘಟನೆಯಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿಯ 4 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಕರ್ನಾಟಕ ಮೂಲದ ನಾಗಾಸಾಧು ಸಾವನ್ನಪ್ಪಿರೋ ಸುದ್ದಿ ಬಂದಿದೆ. ಕಳೆದ 15 ದಿನಗಳ ಹಿಂದೆ ಮಹಾಕುಂಭಮೇಳಕ್ಕೆ ಹೋಗಿದ್ದ ಚಿತ್ರದುರ್ಗ ಮೂಲದ ರಾಜನಾಥ್ ಮಹಾರಾಜ್ ನಾಗಾಸಾಧು ಕಾಲ್ತುಳಿತದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗದ ರಾಜನಾಥ್ ಮಹಾರಾಜ್ ನಾಗಾಸಾಧು ಸೇವಾಲಾಲ ಮಠದ ಆಶ್ರಯದಲ್ಲಿದ್ದರು. ಪ್ರಯಾಗ್ರಾಜ್ ಮಹಾಕುಂಭಮೇಳಕ್ಕೆ ತೆರಳಿದ್ದ ನಾಗಾಸಾಧು ಚಿತ್ರದುರ್ಗದ ಸೇವಾಲಾಲ್ ಮಹಾರಾಜರ ಗುರುಪೀಠ ಸಂಪರ್ಕದಲ್ಲಿದ್ದರು. ಸೇವಾಲಾಲ್ ಗುರುಪೀಠದ ರಾಜನಾಥ ಮಹಾರಾಜ್ ಅವರಿಗೆ 49 ವರ್ಷ ವಯಸ್ಸಾಗಿತ್ತು.
ಇದನ್ನೂ ಓದಿ: ಕುಂಭ ಮೇಳದಲ್ಲಿ ಮತ್ತೊಂದು ಹುಡುಗಿ ವೈರಲ್.. ಈ ಗಗನಸಖಿಯ ಇಂಥ ನಿರ್ಧಾರಕ್ಕೆ ಅದೊಂದು ಕೆಟ್ಟ ಘಟನೆ..!
ರಾಜನಾಥ್ ಮಹಾರಾಜ್ ಅವರು ಪ್ರಯಾಗರಾಜ್ನಲ್ಲಿ ಕಳೆದ 8 ವರ್ಗಗಳಿಂದ ನಾಗಾಸಾಧು ಆಗಿದ್ದರು. ಪ್ರಯಾಗ್ರಾಜ್ ಜಿಲ್ಲಾಡಳಿತ ಚಿತ್ರದುರ್ಗದ ಸೇವಾಲಾಲ ಮಠಕ್ಕೆ ಸಂಪರ್ಕ ಮಾಡಿದ್ದು, ರಾಜನಾಥ ಮಹಾರಾಜ್ ಸಾವಿನ ಬಗ್ಗೆ ಮಾಹಿತಿ ರವಾನೆ ಮಾಡಿದೆ. ಚಿತ್ರದುರ್ಗ ಸೇವಾಲಾಲ ಸ್ವಾಮೀಜಿ ರಾಜನಾಥ ಮಹಾರಾಜರ ಪಾರ್ಥೀವ ಶರೀರವನ್ನು ಕಳಿಸುವಂತೆ ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ