/newsfirstlive-kannada/media/post_attachments/wp-content/uploads/2024/07/thar.jpg)
ಅತಿಯಾದ ವೇಗ ಅಪಘಾತಕ್ಕೆ ಆಹ್ವಾನ. ಎಷ್ಟು ನಿಧಾನವಾಗಿ ವಾಹನ ಚಲಾಯಿಸುತ್ತೇವೋ ಅದರಿಂದ ಅಪಘಾತವನ್ನು ತಡೆಯಬಹುದಾಗಿದೆ. ಆದರೆ ಇಲ್ಲೊಂದು ಅಪಘಾತವನ್ನು ಕಂಡಾಗ ಬೆಚ್ಚಿ ಬೀಳೋದು ಗ್ಯಾರೆಂಟಿ. ಕಾರಣ ಥಾರ್​ ವಾಹನವೊಂದು ಕರೆಂಟ್​ ಕಂಬವೇರಿ ನಿಂತಿದೆ.
ಇದನ್ನೂ ಓದಿ: ಭಾರೀ ಮಳೆ, ಒಳಹರಿವು ಹೆಚ್ಚಳ.. ಹಾರಂಗಿ ಜಲಾಶಯದಿಂದ 1 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಅಂದಹಾಗೆಯೇ ಇಂದು ಹರಿಯಾಣದ ಗುರುಗ್ರಾಮ್ ನಗರದ ಸೈಬರ್ ಸಿಟಿಯಲ್ಲಿ ನಡೆದ ಘಟನೆಯಾಗಿದೆ. ಅತಿ ವೇಗದಲ್ಲಿ ಬಂದ ಹೋಂಡಾ ಅಮೇಜ್ ಕಾರು ಮಹೀಂದ್ರಾ ಥಾರ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡಿಕ್ಕಿಯ ರಭಸಕ್ಕೆ ಥಾರ್ ಹಾರಿ ವಿದ್ಯುತ್ ಕಂಬ ವೇರಿ ನಿಂತಿದೆ.
ಇದನ್ನೂ ಓದಿ: ಮಗನಂತಿದ್ದ ಅಳಿಯನಿಗೆ ಇದ್ದ ಕೊರಗೇನು? ಆ ವಿಚಾರಕ್ಕೆ ಕೋರ್ಟ್​ ಮೊರೆಹೋಗಿದ್ರಂತೆ B.C ಪಾಟೀಲ್ ಅಳಿಯ
ಸ್ಥಳೀಯರ ನೆರವಿನಿಂದ ಥಾರ್ ಚಲಾಯಿಸುತ್ತಿದ್ದ ಯುವತಿಯನ್ನು ಕೆಳಗೆ ಇಳಿಸಲಾಯಿತು. ಕಾರು ಚಲಾಯಸಿದ ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ