ಬಿಜೆಪಿ ಆಟಕ್ಕೆ ಕಾಂಗ್ರೆಸ್ ಗಲ್ಲಿಯಲ್ಲಿ ಗಲಿಬಿಲಿ ಶುರು
ಕಾಂಗ್ರೆಸ್ಗೆ ಶೆಟ್ಟರ್ ಶಾಕ್.. ರಾಜ್ಯ ರಾಜಕೀಯ ಶೇಕ್!
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಖರ್ಗೆ ಬುದ್ಧಿವಾದ
ಬೆಂಗಳೂರು: ಬಿಜೆಪಿ ಆಟಕ್ಕೆ ಕಾಂಗ್ರೆಸ್ ಗಲ್ಲಿಯಲ್ಲಿ ಗಲಿಬಿಲಿ ಶುರುವಾಗಿದೆ. ಏಕಾಏಕಿ ಮನೆಯಿಂದ ಎದ್ದುಹೋದ ಶೆಟ್ಟರ್ ನಡೆಯಿಂದ ತಳಮಳ ಸೃಷ್ಟಿಸಿದೆ. ಎಐಸಿಸಿ ಅಧ್ಯಕ್ಷ ಖರ್ಗೆ ಈ ನಡೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಆಯಾರಾಮ್ ಗಯಾರಾಮ್ಗಳ ಬಗ್ಗೆ ಹುಶಾರಾಗಿರಿ ಅಂತ ಬುದ್ದಿ ಹೇಳಿದ್ದಾರೆ. ಜೊತೆಗೆ ಕಾಂಗ್ರೆಸ್ನ ಸಚಿವರ ತಂಡವೇ ಶೆಟ್ಟರ್ ವಿರುದ್ಧ ಸಿಡಿದುಬಿದ್ದಿದೆ.
ಲೋಕಸಭೆ ಎಲೆಕ್ಷನ್ ಹೊತ್ತಲ್ಲೇ ಬಿಜೆಪಿ ಸರ್ಪ್ರೈಸ್ ಅಟ್ಯಾಕ್ ಮಾಡಿದೆ. ಸುಳಿವೇ ಸಿಗದಂತೆ ನಡೆದ ಸರ್ಜಿಕಲ್ ಸ್ಟ್ರೈಕ್ನಿಂದ ಕಾಂಗ್ರೆಸ್ನಿಂದ ಬಹುದೊಡ್ಡ ಲಿಂಗಾಯತ ವಿಕೆಟ್ ಪತನ ಆಗಿದೆ. ಎಲೆಕ್ಷನ್ ಸಮೀಪಿಸ್ತಿದ್ದಂತೆ ಬಿಜೆಪಿ ಆರಂಭಿಸಿದ ಈ ಹೊಸ ಆಟಕ್ಕೆ ಕೈಪಡೆ ತಂತ್ರಗಳು ನೆಲಕಚ್ಚುತ್ತಿವೆ. ಕಾಂಗ್ರೆಸ್ ದುಖಾನ್ಗೆ ಶೆಟರ್ ಎಳೆದ ಮಾಜಿ ಸಿಎಂ, ಬಿಜೆಪಿ ಗಲ್ಲಿಯಲ್ಲಿದ್ದ ತಮ್ಮದೇ ಹಳೆಯ ಅಂಗಡಿಯನ್ನ ರೀ-ಓಪನ್ ಮಾಡಿದ್ದಾರೆ.
ಕಾಂಗ್ರೆಸ್ಗೆ ಶೆಟ್ಟರ್ ಶಾಕ್.. ರಾಜ್ಯ ರಾಜಕೀಯ ಶೇಕ್!
ಲೋಕಸಭೆ ಗೆಲ್ಲುವ ಕನಸಿನ ಬೆನ್ನೇರಿ ಪಾದಯಾತ್ರೆ ಹೊರಟ ರಾಹುಲ್, ನ್ಯಾಯ್ ಯಾತ್ರೆ ದಾರಿ ಮಧ್ಯೆಯೇ ಪಂಚರ್ ಆಗ್ತಿದೆ. ಎಲೆಕ್ಷನ್ನಲ್ಲಿ ಬೀಸುವ ಗಾಳಿಯತ್ತ ತೂರಿಕೊಳ್ಳುವ ನಾಯಕರು ಜಂಪಿಂಗ್ ಜಪಾಂಗ್ ಪಾಲಿಟಿಕ್ಸ್ ಶುರು ಮಾಡಿದ್ದಾರೆ. ಕಾಂಗ್ರೆಸ್ಗೆ ಸರ್ಪ್ರೈಸ್ ಶಾಕ್ ಕೊಡ್ತಿದ್ದಂತೆ ಕೈ ಪಡೆ ಕಂಗಾಲಾಗಿದ್ದು, ಕಾಂಗ್ರೆಸ್ನಲ್ಲಿ ಶೆಟ್ಟರ್ ಅಕೌಂಟ್ ತೆರೆದಿದ್ದ ಎಐಸಿಸಿ ಅಧ್ಯಕ್ಷ ಖರ್ಗೆಗೆ ಈ ಬೆಳವಣಿಗೆ ಮರ್ಮಾಘಾತ ನೀಡಿದೆ.
ತತ್ವ-ಸಿದ್ದಾಂತಗಳ ಮೇಲೆ ಸೇರ್ಪಡೆ ಮಾಡಿಕೊಳ್ಳಬೇಕು
ಈ ಬೆಳವಣಿಗೆ ನಡೆದ ಮರು ದಿನವೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾತ್ನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರು ಮಾತ್ರ ಬರಬೇಕು ಅಂತ ಶೆಟ್ಟರ್ಗೆ ತಿವಿದ್ರು. ಅಲ್ಲದೆ, ಯಾರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಯೋಚಿಸಿ, ತತ್ವ-ಸಿದ್ದಾಂತಗಳ ಮೇಲೆ ಸೇರ್ಪಡೆ ಮಾಡಿಕೊಳ್ಳಬೇಕು ಅಂತ ರಾಜ್ಯದ ಜೋಡೆತ್ತಿಗೆ ಬುದ್ದಿ ಹೇಳಿದ್ದಾರೆ.
ಕಾಂಗ್ರೆಸ್ ಸಮುದ್ರ ಇದ್ದಂತೆ, ನೂರಾರು ಜನ ಬರ್ತಾರೆ, ಹೋಗ್ತಾರೆ
ಇನ್ನು, ಶೆಟ್ಟರ್ ರಾಜಕೀಯ ಮರು ವಲಸೆಗೆ ಕಾಂಗ್ರೆಸ್ ಸಮುದ್ರ ಇದ್ದಂತೆ, ಬರ್ತಾರೆ ಹೋಗ್ತಾರೆ ಎಂದ ಡಿಸಿಎಂ ಡಿಕೆಶಿ, ಚುನಾವಣೆಯಲ್ಲಿ ಶೆಟ್ಟರ್ ಪರಾಭವಗೊಂಡ್ರೂ ನಾವು ಕೈ ಬಿಟ್ಟಿಲ್ಲ. ಹಿರಿಯರು ಅಂತ ಪರಿಷತ್ ಸ್ಥಾನಕ್ಕೂ ಅವಕಾಶ ಕಲ್ಪಿಸಿಕೊಟ್ಟೆವು ಅಂತ ಬೇಸರ ಹೊರಹಾಕಿದ್ರು.
ಬ್ಯಾಕ್ ಟು ಬ್ಯಾಕ್ ಕೈ ಸಚಿವರಿಂದ ಶೆಟ್ಟರ್ ವಿರುದ್ಧ ಕಿಡಿ
ಶೆಟ್ಟರ್ ರಿಟರ್ನ್ ಆಗಿದ್ದು, ಬೆಳಗಾವಿ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಬೆಳಗಾವಿಯ ಇಬ್ಬರು ಪ್ರಭಾವಿ ಕೈ ನಾಯಕರು, ಭವಿಷ್ಯದ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ. ಜಾರಕಿಹೊಳಿಗೆ ಇದು ಮಾಮೂಲಿ ಬೆಳವಣಿಗೆ ಎನಿಸಿದ್ರೆ, ಹೆಬ್ಬಾಳ್ಕರ್ಗೆ ಶಾಕ್ ನೀಡಿದೆ. ಆದ್ರೆ, ಪ್ರಿಯಾಂಕ್ ಖರ್ಗೆ ಕಣ್ಣಿಗೆ ಇ.ಡಿ ಕಾಣಿಸಿದೆ.
ಒಟ್ಟಾರೆ, ಶೆಟ್ಟರ್, ಬಿಜೆಪಿಯತ್ತ ಹಾರಿದ್ದು, ಇನ್ನಷ್ಟು ಹಕ್ಕಿಗಳು ಗೂಡು ತೊರೆಯುವ ಆತಂಕ ಕಾಂಗ್ರೆಸ್ಗೆ ಕಾಡ್ತಿದೆ. ಬಿಜೆಪಿ ಘರ್ವಾಪ್ಸಿ ಕಾರ್ಯಾಚರಣೆಯನ್ನ ಮತ್ತಷ್ಟು ತೀವ್ರಗೊಳಿಸಲು ಪ್ಲಾನ್ ರೂಪಿಸಿದ್ದು, ಹಾರುವ ಹಕ್ಕಿಗಳನ್ನ ಕಂಟ್ರೋಲ್ ಮಾಡೋದೇ ಕಾಂಗ್ರೆಸ್ಗೆ ಸವಾಲಾಗಿ ಪರಿಣಮಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಜೆಪಿ ಆಟಕ್ಕೆ ಕಾಂಗ್ರೆಸ್ ಗಲ್ಲಿಯಲ್ಲಿ ಗಲಿಬಿಲಿ ಶುರು
ಕಾಂಗ್ರೆಸ್ಗೆ ಶೆಟ್ಟರ್ ಶಾಕ್.. ರಾಜ್ಯ ರಾಜಕೀಯ ಶೇಕ್!
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಖರ್ಗೆ ಬುದ್ಧಿವಾದ
ಬೆಂಗಳೂರು: ಬಿಜೆಪಿ ಆಟಕ್ಕೆ ಕಾಂಗ್ರೆಸ್ ಗಲ್ಲಿಯಲ್ಲಿ ಗಲಿಬಿಲಿ ಶುರುವಾಗಿದೆ. ಏಕಾಏಕಿ ಮನೆಯಿಂದ ಎದ್ದುಹೋದ ಶೆಟ್ಟರ್ ನಡೆಯಿಂದ ತಳಮಳ ಸೃಷ್ಟಿಸಿದೆ. ಎಐಸಿಸಿ ಅಧ್ಯಕ್ಷ ಖರ್ಗೆ ಈ ನಡೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಆಯಾರಾಮ್ ಗಯಾರಾಮ್ಗಳ ಬಗ್ಗೆ ಹುಶಾರಾಗಿರಿ ಅಂತ ಬುದ್ದಿ ಹೇಳಿದ್ದಾರೆ. ಜೊತೆಗೆ ಕಾಂಗ್ರೆಸ್ನ ಸಚಿವರ ತಂಡವೇ ಶೆಟ್ಟರ್ ವಿರುದ್ಧ ಸಿಡಿದುಬಿದ್ದಿದೆ.
ಲೋಕಸಭೆ ಎಲೆಕ್ಷನ್ ಹೊತ್ತಲ್ಲೇ ಬಿಜೆಪಿ ಸರ್ಪ್ರೈಸ್ ಅಟ್ಯಾಕ್ ಮಾಡಿದೆ. ಸುಳಿವೇ ಸಿಗದಂತೆ ನಡೆದ ಸರ್ಜಿಕಲ್ ಸ್ಟ್ರೈಕ್ನಿಂದ ಕಾಂಗ್ರೆಸ್ನಿಂದ ಬಹುದೊಡ್ಡ ಲಿಂಗಾಯತ ವಿಕೆಟ್ ಪತನ ಆಗಿದೆ. ಎಲೆಕ್ಷನ್ ಸಮೀಪಿಸ್ತಿದ್ದಂತೆ ಬಿಜೆಪಿ ಆರಂಭಿಸಿದ ಈ ಹೊಸ ಆಟಕ್ಕೆ ಕೈಪಡೆ ತಂತ್ರಗಳು ನೆಲಕಚ್ಚುತ್ತಿವೆ. ಕಾಂಗ್ರೆಸ್ ದುಖಾನ್ಗೆ ಶೆಟರ್ ಎಳೆದ ಮಾಜಿ ಸಿಎಂ, ಬಿಜೆಪಿ ಗಲ್ಲಿಯಲ್ಲಿದ್ದ ತಮ್ಮದೇ ಹಳೆಯ ಅಂಗಡಿಯನ್ನ ರೀ-ಓಪನ್ ಮಾಡಿದ್ದಾರೆ.
ಕಾಂಗ್ರೆಸ್ಗೆ ಶೆಟ್ಟರ್ ಶಾಕ್.. ರಾಜ್ಯ ರಾಜಕೀಯ ಶೇಕ್!
ಲೋಕಸಭೆ ಗೆಲ್ಲುವ ಕನಸಿನ ಬೆನ್ನೇರಿ ಪಾದಯಾತ್ರೆ ಹೊರಟ ರಾಹುಲ್, ನ್ಯಾಯ್ ಯಾತ್ರೆ ದಾರಿ ಮಧ್ಯೆಯೇ ಪಂಚರ್ ಆಗ್ತಿದೆ. ಎಲೆಕ್ಷನ್ನಲ್ಲಿ ಬೀಸುವ ಗಾಳಿಯತ್ತ ತೂರಿಕೊಳ್ಳುವ ನಾಯಕರು ಜಂಪಿಂಗ್ ಜಪಾಂಗ್ ಪಾಲಿಟಿಕ್ಸ್ ಶುರು ಮಾಡಿದ್ದಾರೆ. ಕಾಂಗ್ರೆಸ್ಗೆ ಸರ್ಪ್ರೈಸ್ ಶಾಕ್ ಕೊಡ್ತಿದ್ದಂತೆ ಕೈ ಪಡೆ ಕಂಗಾಲಾಗಿದ್ದು, ಕಾಂಗ್ರೆಸ್ನಲ್ಲಿ ಶೆಟ್ಟರ್ ಅಕೌಂಟ್ ತೆರೆದಿದ್ದ ಎಐಸಿಸಿ ಅಧ್ಯಕ್ಷ ಖರ್ಗೆಗೆ ಈ ಬೆಳವಣಿಗೆ ಮರ್ಮಾಘಾತ ನೀಡಿದೆ.
ತತ್ವ-ಸಿದ್ದಾಂತಗಳ ಮೇಲೆ ಸೇರ್ಪಡೆ ಮಾಡಿಕೊಳ್ಳಬೇಕು
ಈ ಬೆಳವಣಿಗೆ ನಡೆದ ಮರು ದಿನವೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾತ್ನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರು ಮಾತ್ರ ಬರಬೇಕು ಅಂತ ಶೆಟ್ಟರ್ಗೆ ತಿವಿದ್ರು. ಅಲ್ಲದೆ, ಯಾರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಯೋಚಿಸಿ, ತತ್ವ-ಸಿದ್ದಾಂತಗಳ ಮೇಲೆ ಸೇರ್ಪಡೆ ಮಾಡಿಕೊಳ್ಳಬೇಕು ಅಂತ ರಾಜ್ಯದ ಜೋಡೆತ್ತಿಗೆ ಬುದ್ದಿ ಹೇಳಿದ್ದಾರೆ.
ಕಾಂಗ್ರೆಸ್ ಸಮುದ್ರ ಇದ್ದಂತೆ, ನೂರಾರು ಜನ ಬರ್ತಾರೆ, ಹೋಗ್ತಾರೆ
ಇನ್ನು, ಶೆಟ್ಟರ್ ರಾಜಕೀಯ ಮರು ವಲಸೆಗೆ ಕಾಂಗ್ರೆಸ್ ಸಮುದ್ರ ಇದ್ದಂತೆ, ಬರ್ತಾರೆ ಹೋಗ್ತಾರೆ ಎಂದ ಡಿಸಿಎಂ ಡಿಕೆಶಿ, ಚುನಾವಣೆಯಲ್ಲಿ ಶೆಟ್ಟರ್ ಪರಾಭವಗೊಂಡ್ರೂ ನಾವು ಕೈ ಬಿಟ್ಟಿಲ್ಲ. ಹಿರಿಯರು ಅಂತ ಪರಿಷತ್ ಸ್ಥಾನಕ್ಕೂ ಅವಕಾಶ ಕಲ್ಪಿಸಿಕೊಟ್ಟೆವು ಅಂತ ಬೇಸರ ಹೊರಹಾಕಿದ್ರು.
ಬ್ಯಾಕ್ ಟು ಬ್ಯಾಕ್ ಕೈ ಸಚಿವರಿಂದ ಶೆಟ್ಟರ್ ವಿರುದ್ಧ ಕಿಡಿ
ಶೆಟ್ಟರ್ ರಿಟರ್ನ್ ಆಗಿದ್ದು, ಬೆಳಗಾವಿ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಬೆಳಗಾವಿಯ ಇಬ್ಬರು ಪ್ರಭಾವಿ ಕೈ ನಾಯಕರು, ಭವಿಷ್ಯದ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ. ಜಾರಕಿಹೊಳಿಗೆ ಇದು ಮಾಮೂಲಿ ಬೆಳವಣಿಗೆ ಎನಿಸಿದ್ರೆ, ಹೆಬ್ಬಾಳ್ಕರ್ಗೆ ಶಾಕ್ ನೀಡಿದೆ. ಆದ್ರೆ, ಪ್ರಿಯಾಂಕ್ ಖರ್ಗೆ ಕಣ್ಣಿಗೆ ಇ.ಡಿ ಕಾಣಿಸಿದೆ.
ಒಟ್ಟಾರೆ, ಶೆಟ್ಟರ್, ಬಿಜೆಪಿಯತ್ತ ಹಾರಿದ್ದು, ಇನ್ನಷ್ಟು ಹಕ್ಕಿಗಳು ಗೂಡು ತೊರೆಯುವ ಆತಂಕ ಕಾಂಗ್ರೆಸ್ಗೆ ಕಾಡ್ತಿದೆ. ಬಿಜೆಪಿ ಘರ್ವಾಪ್ಸಿ ಕಾರ್ಯಾಚರಣೆಯನ್ನ ಮತ್ತಷ್ಟು ತೀವ್ರಗೊಳಿಸಲು ಪ್ಲಾನ್ ರೂಪಿಸಿದ್ದು, ಹಾರುವ ಹಕ್ಕಿಗಳನ್ನ ಕಂಟ್ರೋಲ್ ಮಾಡೋದೇ ಕಾಂಗ್ರೆಸ್ಗೆ ಸವಾಲಾಗಿ ಪರಿಣಮಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ