newsfirstkannada.com

ಮಂಡ್ಯದಲ್ಲಿ ಬಿರುಗಾಳಿ ಸಮೇತ ಮಳೆ; ಮರ ಬಿದ್ದು ಯುವಕ ಸ್ಥಳದಲ್ಲೇ ಸಾವು

Share :

Published May 6, 2024 at 11:08pm

    ಇಡೀ ರಾಜ್ಯಾದ್ಯಂತ ಎಡಬಿಡದೆ ಸುರಿಯುತ್ತಿರೋ ಮೊದಲ ಮಳೆ

    ಮಂಡ್ಯದಲ್ಲೂ ಬಿರುಗಾಳಿ ಸಮೇತ ವರುಣನ ಆರ್ಭಟ ಜೋರು

    ಭರ್ಜರಿ ಮಳೆಗೆ ಸಕ್ಕರೆ ನಾಡು ಮಂಡ್ಯದಲ್ಲಿ ಮೊದಲ ಸಾವು..!

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಭಾರೀ ಮಳೆಗೆ ಮೊದಲ ಬಲಿಯಾಗಿದೆ. ಬಿರುಗಾಳಿ ಸಮೇತ ಮಳೆಗೆ ಮರಬಿದ್ದು ಯುವಕ ಸಾವನ್ನಪ್ಪಿದ್ದಾನೆ.

ನಗರದ ಶಿಲ್ಪಶ್ರೀ ಆಸ್ಪತ್ರೆ ಬಳಿ ಘಟನೆ ನಡೆದಿದ್ದು, ಜಿ. ಬೊಮ್ಮನಹಳ್ಳಿ ಗ್ರಾಮದ ಕಾರ್ತಿಕ್​​ (27) ಮೃತ ಯುವಕ. ತನ್ನ ತಂದೆ ಆರೋಗ್ಯ ವಿಚಾರಿಸಿ ಆಸ್ಪತ್ರೆಯಿಂದ ವಾಪಸ್​ ಆಗುವಾಗ ಈ ಘಟನೆ ನಡೆದಿದೆ.

ಇಂದು ಬಿರುಗಾಳಿ ಸಮೇತ ಭಾರೀ ಮಳೆ ಬೀಳುತ್ತಿತ್ತು. ಹಾಗಾಗಿ ತನ್ನ ಬೈಕ್​ ನಿಲ್ಲಿಸಿ ಕಾರ್ತಿಕ್​​ ಸ್ನೇಹಿತನ ಕಾರಲ್ಲಿ ಕುಳಿತಿದ್ದ. ಬೃಹತ್​ ಮರದ ಕೆಳಗೆ ಕಾರು ನಿಂತಿತ್ತು. ಕಾರಿನ ಮೇಲೆ ಮರ ಬಿದ್ದಿದ್ದು ಕಾರ್ತಿಕ್​ ಸಾವನ್ನಪ್ಪಿದ್ದಾನೆ.

ಇನ್ನು, ಕಾರಲ್ಲಿದ್ದ ಕಾರ್ತಿಕ್​ ಜೀವ ಕಳೆದುಕೊಂಡಿದ್ದು, ಹೊರಗೆ ನಿಂತಿದ್ದ ಸ್ನೇಹಿತ ಪ್ರಾಣಪಾಯದಿಂದ ಪಾರಾಗಿದ್ದಾನೆ. ನಾಳೆ ಕಾರ್ತಿಕ್​​ ಹುಟ್ಟುಹಬ್ಬ ಇತ್ತು. ಅದಕ್ಕಾಗಿ ಹೊಸ ಬಟ್ಟೆ ಖರೀದಿ ಮಾಡಿದ್ದ. ಸದ್ಯ ಸ್ಥಳಕ್ಕೆ ಪೊಲೀಸ್ರು ಆಗಮಿಸಿದ್ದು, ಕ್ರೇನ್​ ಮೂಲಕ ತೆರವು ಕಾರ್ಯಾಚರಣೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ಮಳೆ ಮುನ್ಸೂಚನೆ.. ಬೆಂಗಳೂರು ಸೇರಿ ಎಲ್ಲೆಲ್ಲಿ ಮಳೆ ಸಾಧ್ಯತೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಲ್ಲಿ ಬಿರುಗಾಳಿ ಸಮೇತ ಮಳೆ; ಮರ ಬಿದ್ದು ಯುವಕ ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/05/Death-News1.jpg

    ಇಡೀ ರಾಜ್ಯಾದ್ಯಂತ ಎಡಬಿಡದೆ ಸುರಿಯುತ್ತಿರೋ ಮೊದಲ ಮಳೆ

    ಮಂಡ್ಯದಲ್ಲೂ ಬಿರುಗಾಳಿ ಸಮೇತ ವರುಣನ ಆರ್ಭಟ ಜೋರು

    ಭರ್ಜರಿ ಮಳೆಗೆ ಸಕ್ಕರೆ ನಾಡು ಮಂಡ್ಯದಲ್ಲಿ ಮೊದಲ ಸಾವು..!

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಭಾರೀ ಮಳೆಗೆ ಮೊದಲ ಬಲಿಯಾಗಿದೆ. ಬಿರುಗಾಳಿ ಸಮೇತ ಮಳೆಗೆ ಮರಬಿದ್ದು ಯುವಕ ಸಾವನ್ನಪ್ಪಿದ್ದಾನೆ.

ನಗರದ ಶಿಲ್ಪಶ್ರೀ ಆಸ್ಪತ್ರೆ ಬಳಿ ಘಟನೆ ನಡೆದಿದ್ದು, ಜಿ. ಬೊಮ್ಮನಹಳ್ಳಿ ಗ್ರಾಮದ ಕಾರ್ತಿಕ್​​ (27) ಮೃತ ಯುವಕ. ತನ್ನ ತಂದೆ ಆರೋಗ್ಯ ವಿಚಾರಿಸಿ ಆಸ್ಪತ್ರೆಯಿಂದ ವಾಪಸ್​ ಆಗುವಾಗ ಈ ಘಟನೆ ನಡೆದಿದೆ.

ಇಂದು ಬಿರುಗಾಳಿ ಸಮೇತ ಭಾರೀ ಮಳೆ ಬೀಳುತ್ತಿತ್ತು. ಹಾಗಾಗಿ ತನ್ನ ಬೈಕ್​ ನಿಲ್ಲಿಸಿ ಕಾರ್ತಿಕ್​​ ಸ್ನೇಹಿತನ ಕಾರಲ್ಲಿ ಕುಳಿತಿದ್ದ. ಬೃಹತ್​ ಮರದ ಕೆಳಗೆ ಕಾರು ನಿಂತಿತ್ತು. ಕಾರಿನ ಮೇಲೆ ಮರ ಬಿದ್ದಿದ್ದು ಕಾರ್ತಿಕ್​ ಸಾವನ್ನಪ್ಪಿದ್ದಾನೆ.

ಇನ್ನು, ಕಾರಲ್ಲಿದ್ದ ಕಾರ್ತಿಕ್​ ಜೀವ ಕಳೆದುಕೊಂಡಿದ್ದು, ಹೊರಗೆ ನಿಂತಿದ್ದ ಸ್ನೇಹಿತ ಪ್ರಾಣಪಾಯದಿಂದ ಪಾರಾಗಿದ್ದಾನೆ. ನಾಳೆ ಕಾರ್ತಿಕ್​​ ಹುಟ್ಟುಹಬ್ಬ ಇತ್ತು. ಅದಕ್ಕಾಗಿ ಹೊಸ ಬಟ್ಟೆ ಖರೀದಿ ಮಾಡಿದ್ದ. ಸದ್ಯ ಸ್ಥಳಕ್ಕೆ ಪೊಲೀಸ್ರು ಆಗಮಿಸಿದ್ದು, ಕ್ರೇನ್​ ಮೂಲಕ ತೆರವು ಕಾರ್ಯಾಚರಣೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ಮಳೆ ಮುನ್ಸೂಚನೆ.. ಬೆಂಗಳೂರು ಸೇರಿ ಎಲ್ಲೆಲ್ಲಿ ಮಳೆ ಸಾಧ್ಯತೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More