newsfirstkannada.com

ಶಿವಮೊಗ್ಗ ಜಿಲ್ಲೆಯಲ್ಲಿ ನಡೀತು ಭಯಾನಕ ಕೊಲೆ.. ಕತ್ತು ಹಿಸುಕಿ ತಲೆ ಮೇಲೆ ಕಾರು ಹತ್ತಿಸಿ ಹತ್ಯೆ

Share :

Published March 1, 2024 at 10:33am

    ತಮ್ಮನ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಬಂದಿದ್ದ

    ಸಾಗರ ತಾಲೂಕಿನ ಆನಂದಪುರ ಠಾಣೆಯಲ್ಲಿ ಪ್ರಕರಣ

    ಸೇಡಿಗಾಗಿ ಸಹೋದನಿಂದಲೇ ನಡೆಯಿತಾ ಬರ್ಬರ ಹತ್ಯೆ?

ಶಿವಮೊಗ್ಗ: ತಮ್ಮನ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ವ್ಯಕ್ತಿಯನ್ನು ಭೀಕರ ಹತ್ಯೆ ಮಾಡಲಾಗಿದೆ. ಕತ್ತು ಹಿಸುಕಿ-ತಲೆ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಲಾಗಿದೆ.

ಶಿವಮೊಗ್ಗದ ಸಾಗರ ತಾಲೂಕಿನ ಚಿಪ್ಪಳಿ ಕ್ರಾಸ್ ಬಳಿ ಎನ್ ಹೆಚ್-206 ಪಕ್ಕದಲ್ಲಿ ಕೃತ್ಯ ನಡೆಸಲಾಗಿದೆ. ರಫೀಕ್ (45) ಕೊಲೆಯಾದ ದುರ್ದೈವಿ. ರಫೀಕ್, ಜಿಲ್ಲೆಯ ಸೊರಬ ತಾಲೂಕಿನ ತುಡನೀರು ಗ್ರಾಮದ ನಿವಾಸಿ. ಸಹೋದರರ ನಡುವಿನ ಆಸ್ತಿ ಕಲಹದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ರಫೀಕ್ ಜಮೀನು ಗಲಾಟೆ ವಿಚಾರಕ್ಕೆ ಸ್ವಂತ ತಮ್ಮನನ್ನೇ ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ. 2ನೇ ತಮ್ಮ ಸಲೀಂ ಕೊಲೆ ಪ್ರಕರಣದಲ್ಲಿ ರಫೀಕ್ A1 ಆಗಿದ್ದ. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದು ಓಡಾಡುತ್ತಿದ್ದ. ಓರ್ವ ತಮ್ಮನ ಕೊಲೆ ಮಾಡಿದ್ದಕ್ಕೆ ಇನ್ನೋರ್ವ ತಮ್ಮ ಸೇಡು ತೀರಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

2ನೇ ತಮ್ಮ ಇನಾಯತ್ ಅಣ್ಣ ರಫೀಕ್ ವಿರುದ್ಧ ಸೇಡು ತೀರಿಸಿಕೊಂಡಿರುವ ಶಂಕೆ ಇದೆ. ಕಾರಿನಲ್ಲಿ ಬಂದು ಎನ್ ಹೆಚ್- 206 ಪಕ್ಕದಲ್ಲಿ ದುಷ್ಕರ್ಮಿಗಳು ಶವ ಬಿಸಾಡಿದ್ದಾರೆ. ಇದಕ್ಕೂ ಮುನ್ನ ಕುತ್ತಿಗೆಗೆ ತಂತಿಯಿಂದ ಬಿಗಿದು, ತಲೆ ಮೇಲೆ ಕಾರು ಹತ್ತಿಸಿರೋದು ಕಂಡು ಬರುತ್ತಿದೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವಮೊಗ್ಗ ಜಿಲ್ಲೆಯಲ್ಲಿ ನಡೀತು ಭಯಾನಕ ಕೊಲೆ.. ಕತ್ತು ಹಿಸುಕಿ ತಲೆ ಮೇಲೆ ಕಾರು ಹತ್ತಿಸಿ ಹತ್ಯೆ

https://newsfirstlive.com/wp-content/uploads/2024/03/SMG-MURDER.jpg

    ತಮ್ಮನ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಬಂದಿದ್ದ

    ಸಾಗರ ತಾಲೂಕಿನ ಆನಂದಪುರ ಠಾಣೆಯಲ್ಲಿ ಪ್ರಕರಣ

    ಸೇಡಿಗಾಗಿ ಸಹೋದನಿಂದಲೇ ನಡೆಯಿತಾ ಬರ್ಬರ ಹತ್ಯೆ?

ಶಿವಮೊಗ್ಗ: ತಮ್ಮನ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ವ್ಯಕ್ತಿಯನ್ನು ಭೀಕರ ಹತ್ಯೆ ಮಾಡಲಾಗಿದೆ. ಕತ್ತು ಹಿಸುಕಿ-ತಲೆ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಲಾಗಿದೆ.

ಶಿವಮೊಗ್ಗದ ಸಾಗರ ತಾಲೂಕಿನ ಚಿಪ್ಪಳಿ ಕ್ರಾಸ್ ಬಳಿ ಎನ್ ಹೆಚ್-206 ಪಕ್ಕದಲ್ಲಿ ಕೃತ್ಯ ನಡೆಸಲಾಗಿದೆ. ರಫೀಕ್ (45) ಕೊಲೆಯಾದ ದುರ್ದೈವಿ. ರಫೀಕ್, ಜಿಲ್ಲೆಯ ಸೊರಬ ತಾಲೂಕಿನ ತುಡನೀರು ಗ್ರಾಮದ ನಿವಾಸಿ. ಸಹೋದರರ ನಡುವಿನ ಆಸ್ತಿ ಕಲಹದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ರಫೀಕ್ ಜಮೀನು ಗಲಾಟೆ ವಿಚಾರಕ್ಕೆ ಸ್ವಂತ ತಮ್ಮನನ್ನೇ ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ. 2ನೇ ತಮ್ಮ ಸಲೀಂ ಕೊಲೆ ಪ್ರಕರಣದಲ್ಲಿ ರಫೀಕ್ A1 ಆಗಿದ್ದ. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದು ಓಡಾಡುತ್ತಿದ್ದ. ಓರ್ವ ತಮ್ಮನ ಕೊಲೆ ಮಾಡಿದ್ದಕ್ಕೆ ಇನ್ನೋರ್ವ ತಮ್ಮ ಸೇಡು ತೀರಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

2ನೇ ತಮ್ಮ ಇನಾಯತ್ ಅಣ್ಣ ರಫೀಕ್ ವಿರುದ್ಧ ಸೇಡು ತೀರಿಸಿಕೊಂಡಿರುವ ಶಂಕೆ ಇದೆ. ಕಾರಿನಲ್ಲಿ ಬಂದು ಎನ್ ಹೆಚ್- 206 ಪಕ್ಕದಲ್ಲಿ ದುಷ್ಕರ್ಮಿಗಳು ಶವ ಬಿಸಾಡಿದ್ದಾರೆ. ಇದಕ್ಕೂ ಮುನ್ನ ಕುತ್ತಿಗೆಗೆ ತಂತಿಯಿಂದ ಬಿಗಿದು, ತಲೆ ಮೇಲೆ ಕಾರು ಹತ್ತಿಸಿರೋದು ಕಂಡು ಬರುತ್ತಿದೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More