ಪ್ರವಾಸಕ್ಕೆಂದು ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಬಂದಿದ್ದ ಸ್ನೇಹಿತರು
ಮುರುಡೇಶ್ವರ ಕಡಲತೀರದಲ್ಲಿ ಈಜಲು ಹೋಗಿ ವಿದ್ಯಾರ್ಥಿ ನೀರುಪಾಲು
ಇತ್ತೀಚೆಗಷ್ಟೇ ಒಬ್ಬ ಈಜಲು ಹೋಗಿ ಮುರುಡೇಶ್ವರ ಸಮುದ್ರದ ಪಾಲು
ಉತ್ತರ ಕನ್ನಡ: ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಸಮುದ್ರದ ಅಲೆಗೆ ಸಿಲುಕಿ ಕಣ್ಮರೆಯಾಗಿದ್ದಾನೆ. ಮುರುಡೇಶ್ವರ ಕಡಲತೀರದಲ್ಲಿ 20 ವರ್ಷದ ಪವನ್ ನಾಯ್ಕ್ ಕಣ್ಮರೆಯಾದ ವಿದ್ಯಾರ್ಥಿ.
ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಿಂದ ಆರು ಜನ ಸ್ನೇಹಿತರು ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದರು. ಪವನ್ ಸೇರಿ ಮೂವರು ಸ್ನೇಹಿತರು ಸಮುದ್ರದಲ್ಲಿ ಈಜಲು ಇಳಿದಿದ್ದರು. ಈ ವೇಳೆ ನೀರಿನಲ್ಲೇ ಪವನ್ ಕಣ್ಮರೆ ಆಗಿದ್ದು, ಇಬ್ಬರ ರಕ್ಷಣೆ ಮಾಡಲಾಗಿದೆ.
ಇತ್ತೀಚೆಗಷ್ಟೇ ಓರ್ವ ಪ್ರವಾಸಿಗ ಸಮುದ್ರದಲ್ಲಿ ಈಜಲು ಹೋಗಿ ನೀರುಪಾಲಾಗಿದ್ದ. ಒಬ್ಬ ಪತ್ತೆ ಆಗೋ ಮುನ್ನವೇ ಮತ್ತೋರ್ವ ನೀರು ಪಾಲಾಗಿದ್ದಾನೆ. ಈ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರವಾಸಕ್ಕೆಂದು ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಬಂದಿದ್ದ ಸ್ನೇಹಿತರು
ಮುರುಡೇಶ್ವರ ಕಡಲತೀರದಲ್ಲಿ ಈಜಲು ಹೋಗಿ ವಿದ್ಯಾರ್ಥಿ ನೀರುಪಾಲು
ಇತ್ತೀಚೆಗಷ್ಟೇ ಒಬ್ಬ ಈಜಲು ಹೋಗಿ ಮುರುಡೇಶ್ವರ ಸಮುದ್ರದ ಪಾಲು
ಉತ್ತರ ಕನ್ನಡ: ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಸಮುದ್ರದ ಅಲೆಗೆ ಸಿಲುಕಿ ಕಣ್ಮರೆಯಾಗಿದ್ದಾನೆ. ಮುರುಡೇಶ್ವರ ಕಡಲತೀರದಲ್ಲಿ 20 ವರ್ಷದ ಪವನ್ ನಾಯ್ಕ್ ಕಣ್ಮರೆಯಾದ ವಿದ್ಯಾರ್ಥಿ.
ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಿಂದ ಆರು ಜನ ಸ್ನೇಹಿತರು ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದರು. ಪವನ್ ಸೇರಿ ಮೂವರು ಸ್ನೇಹಿತರು ಸಮುದ್ರದಲ್ಲಿ ಈಜಲು ಇಳಿದಿದ್ದರು. ಈ ವೇಳೆ ನೀರಿನಲ್ಲೇ ಪವನ್ ಕಣ್ಮರೆ ಆಗಿದ್ದು, ಇಬ್ಬರ ರಕ್ಷಣೆ ಮಾಡಲಾಗಿದೆ.
ಇತ್ತೀಚೆಗಷ್ಟೇ ಓರ್ವ ಪ್ರವಾಸಿಗ ಸಮುದ್ರದಲ್ಲಿ ಈಜಲು ಹೋಗಿ ನೀರುಪಾಲಾಗಿದ್ದ. ಒಬ್ಬ ಪತ್ತೆ ಆಗೋ ಮುನ್ನವೇ ಮತ್ತೋರ್ವ ನೀರು ಪಾಲಾಗಿದ್ದಾನೆ. ಈ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ