ವಯನಾಡು ಭೂಕುಸಿತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 308
200ಕ್ಕೂ ಹೆಚ್ಚು ಜನರು ನಾಪತ್ತೆ.. ಕುಟುಂಬದವರಿಂದ ಹುಡುಕಾಟ
ಕೆಲಸಕ್ಕೆಂದು ಗಲ್ಫ್ಗೆ ಹೋದ ಮಗ.. ಊರಲ್ಲಿದ್ದವರು ಭೂಕುಸಿತದಲ್ಲಿ ನಾಪತ್ತೆ
ದುಡಿಯಲೆಂದು ಗಲ್ಫ್ಗೆ ಹೋದ ಮಗನಿಗೆ ವಯನಾಡಿನಲ್ಲಿ ನಡೆದ ದುರಂತ ಬರ ಸಿಡಿಲಿನಂತೆ ಕೇಳಿಸಿತು. ಸುದ್ದಿ ತಿಳಿದು ವಿಚಲಿತರಾಗಿದ್ದ ಶಾಹಿದ್ ವಿಮಾನ ಏರಿ ನೇರವಾಗಿ ಕೇರಳಕ್ಕೆ ಬಂದಿಳಿದರು. ವಯನಾಡಿಗೆ ಬಂದು ನೋಡಿದಾಗ ಶಾಹಿದ್ಗೆ ಮೊದಲು ಸಿಕ್ಕಿದ್ದೇ ತಂದೆಯ ಮೃತದೇಹ.
ತಂದೆ ಭೂಕುಸಿತದ ರಣಾರ್ಭಟಕ್ಕೆ ಸಾವನ್ನಪ್ಪಿದರೆ, ಉಳಿದವರಿಗಾಗಿ ಶಾಹಿದ್ ಹುಡುಕಾಡುತ್ತಿದ್ದಾರೆ. ತನ್ನ ಕುಟುಂಬದ ಆರು ಜನರಿಗಾಗಿ ಅವಶೇಷಗಳ ಅಡಿಯಲ್ಲಿ ಹುಡುಕಾಡುತ್ತಿದ್ದಾರೆ. ಅಮ್ಮ, ಹೆಂಡತಿ, ಮಗ, ಸಹೋದರ ಎಲ್ಲರೂ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಭೂಕುಸಿತದಲ್ಲಿ ತಂದೆ-ತಾಯಿ ಸಾವು.. ಕಷ್ಟಪಟ್ಟು ಓದಿಸಿ ವಿದೇಶಕ್ಕೆ ಕಳುಹಿಸಿರುವ ಮಗಳ ನೋವು ಯಾರತ್ರ ಹೇಳೋದು?
ಅತ್ತ ಶಾಹಿದ್ ಮೆಪ್ಪಾಡಿ ಸರಕಾರಿ ಎಚ್ಎಸ್ಎಸ್ನ ಶಿಬಿರದಲ್ಲಿದ್ದಾರೆ. ತನ್ನ ಸಂಬಂಧಿಕರೊಂದಿಗೆ ನಾಪತ್ತೆಯಾದವರನ್ನು ಹುಡುಕಾಡುತ್ತಿದ್ದಾರೆ. ದಿನ ಬೆಳಗಾದರೆ ತನ್ನವರಿಗಾಗಿ ಅಲೆಯುತ್ತಿದ್ದಾರೆ.
ಇದನ್ನೂ ಓದಿ: ರಾತ್ರಿ ಮಟನ್ ಊಟ ಮಾಡಿ ಮಲಗಿದ್ದವರು ಏಳಲೇ ಇಲ್ಲ.. ಒಂದೇ ಮನೆಯಲ್ಲಿ ನಾಲ್ವರು ಸಾವು; ಆಗಿದ್ದೇನು?
ವಯನಾಡಿನ ದುರಂತ ಒಂದೊಂದು ಕತೆಯನ್ನು ಸಾರುತ್ತಿದೆ. ಈಗಾಗಲೇ ಸಾವಿನ ಸಂಖ್ಯೆ 300 ದಾಟಿದೆ. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಶೋಧಕಾರ್ಯವನ್ನು ನಿರಂತರವಾಗಿ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಯನಾಡು ಭೂಕುಸಿತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 308
200ಕ್ಕೂ ಹೆಚ್ಚು ಜನರು ನಾಪತ್ತೆ.. ಕುಟುಂಬದವರಿಂದ ಹುಡುಕಾಟ
ಕೆಲಸಕ್ಕೆಂದು ಗಲ್ಫ್ಗೆ ಹೋದ ಮಗ.. ಊರಲ್ಲಿದ್ದವರು ಭೂಕುಸಿತದಲ್ಲಿ ನಾಪತ್ತೆ
ದುಡಿಯಲೆಂದು ಗಲ್ಫ್ಗೆ ಹೋದ ಮಗನಿಗೆ ವಯನಾಡಿನಲ್ಲಿ ನಡೆದ ದುರಂತ ಬರ ಸಿಡಿಲಿನಂತೆ ಕೇಳಿಸಿತು. ಸುದ್ದಿ ತಿಳಿದು ವಿಚಲಿತರಾಗಿದ್ದ ಶಾಹಿದ್ ವಿಮಾನ ಏರಿ ನೇರವಾಗಿ ಕೇರಳಕ್ಕೆ ಬಂದಿಳಿದರು. ವಯನಾಡಿಗೆ ಬಂದು ನೋಡಿದಾಗ ಶಾಹಿದ್ಗೆ ಮೊದಲು ಸಿಕ್ಕಿದ್ದೇ ತಂದೆಯ ಮೃತದೇಹ.
ತಂದೆ ಭೂಕುಸಿತದ ರಣಾರ್ಭಟಕ್ಕೆ ಸಾವನ್ನಪ್ಪಿದರೆ, ಉಳಿದವರಿಗಾಗಿ ಶಾಹಿದ್ ಹುಡುಕಾಡುತ್ತಿದ್ದಾರೆ. ತನ್ನ ಕುಟುಂಬದ ಆರು ಜನರಿಗಾಗಿ ಅವಶೇಷಗಳ ಅಡಿಯಲ್ಲಿ ಹುಡುಕಾಡುತ್ತಿದ್ದಾರೆ. ಅಮ್ಮ, ಹೆಂಡತಿ, ಮಗ, ಸಹೋದರ ಎಲ್ಲರೂ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಭೂಕುಸಿತದಲ್ಲಿ ತಂದೆ-ತಾಯಿ ಸಾವು.. ಕಷ್ಟಪಟ್ಟು ಓದಿಸಿ ವಿದೇಶಕ್ಕೆ ಕಳುಹಿಸಿರುವ ಮಗಳ ನೋವು ಯಾರತ್ರ ಹೇಳೋದು?
ಅತ್ತ ಶಾಹಿದ್ ಮೆಪ್ಪಾಡಿ ಸರಕಾರಿ ಎಚ್ಎಸ್ಎಸ್ನ ಶಿಬಿರದಲ್ಲಿದ್ದಾರೆ. ತನ್ನ ಸಂಬಂಧಿಕರೊಂದಿಗೆ ನಾಪತ್ತೆಯಾದವರನ್ನು ಹುಡುಕಾಡುತ್ತಿದ್ದಾರೆ. ದಿನ ಬೆಳಗಾದರೆ ತನ್ನವರಿಗಾಗಿ ಅಲೆಯುತ್ತಿದ್ದಾರೆ.
ಇದನ್ನೂ ಓದಿ: ರಾತ್ರಿ ಮಟನ್ ಊಟ ಮಾಡಿ ಮಲಗಿದ್ದವರು ಏಳಲೇ ಇಲ್ಲ.. ಒಂದೇ ಮನೆಯಲ್ಲಿ ನಾಲ್ವರು ಸಾವು; ಆಗಿದ್ದೇನು?
ವಯನಾಡಿನ ದುರಂತ ಒಂದೊಂದು ಕತೆಯನ್ನು ಸಾರುತ್ತಿದೆ. ಈಗಾಗಲೇ ಸಾವಿನ ಸಂಖ್ಯೆ 300 ದಾಟಿದೆ. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಶೋಧಕಾರ್ಯವನ್ನು ನಿರಂತರವಾಗಿ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ