/newsfirstlive-kannada/media/post_attachments/wp-content/uploads/2024/10/wild-Elephat.jpg)
ವ್ಯಕ್ತಿಯೋರ್ವ ಕಾಡಾನೆ ಜೊತೆಗೆ ಸೆಲ್ಫಿ ತೆಗೆಯಲು ಹೋಗಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಲ್ಲಿನ ಗಡ್ಚಿರೋಲಿ ಅಬಾಪುರ ಅರಣ್ಯಕ್ಕೆ ಕಾಡಾನೆ ನೋಡಲು ಮೂವರು ಸ್ನೇಹಿತರು ಹೋಗಿದ್ದರು. ಈ ವೇಳೆ ಇಬ್ಬರು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದು, ಓರ್ವ ಸಾವನ್ನಪ್ಪಿದ್ದಾನೆ.
ಶ್ರೀಕಾಂತ್ ರಾಮಚಂದ್ರ ಸಾವನ್ನಪ್ಪಿರುವ ವ್ಯಕ್ತಿ. ಈತ ತನ್ನ ಮತ್ತಿಬ್ಬರು ಸ್ನೇಹಿತರೊಂದಿಗೆ ಕಾಡಾನೆ ವೀಕ್ಷಿಸಲು ಹೋಗುತ್ತಾನೆ. ಈ ವೇಳೆ ಕಾಡಾನೆ ಕಂಡಾಗ ಮೊಬೈಲ್ ತೆಗೆದು ಸೆಲ್ಫಿ ಕ್ಲಿಕ್ಕಿಸಲು ಮುಂದಾಗುತ್ತಾನೆ. ಅಷ್ಟರಲ್ಲಿ ಕಾಡಾನೆ ದಾಳಿ ಮಾಡುತ್ತದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ರೋಡ್ ರೇಜ್ ಪ್ರಕರಣ; ಟ್ರಾಫಿಕ್ ಪೊಲೀಸನ್ನೇ 100 ಮೀಟರ್ ಎಳೆದೊಯ್ದ ಕಾರು ಚಾಲಕ
23 ವರ್ಷದ ಶ್ರೀಕಾಂತ್ ಸಾತ್ರೆ ಗಡ್ಚಿರೋಲಿ ಜಿಲ್ಲೆಯವನಾಗಿದ್ದು, ಕೇಬಲ್ ಅಳವಡಿಕೆಯ ಕೆಲಸ ಮಾಡಿಕೊಂಡಿದ್ದನು. ಕಾಡಾನೆ ವೀಕ್ಷಿಸಲೆಂದು ನವೆಂಗಾಂವ್ನಿಂದ ತ್ನ ಸ್ನೇಹಿರರೊಂದಿಗೆ ಬಂದಿದ್ದಾನೆ.
ಇದನ್ನೂ ಓದಿ: 98 ಮಂದಿಗೆ ಜೀವಾವಧಿ ಶಿಕ್ಷೆ.. ಕೊಪ್ಪಳ ಕೋರ್ಟ್ನಿಂದ ಐತಿಹಾಸಿಕ ತೀರ್ಪು; ಕುಟುಂಬಸ್ಥರ ಕಣ್ಣೀರು!
ಚಿತ್ತಗಾಂಗ್ ಮತ್ತು ಗಡ್ಚಿರೋಲಿ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳಿಂದ ಕಾಡಾನೆ ಸಂಚರಿಸುತ್ತಿತ್ತು. ಮುಟ್ನೂರ್ ಅರಣ್ಯ ಪ್ರದೇಶದ ಅಬಾಪುರದಲ್ಲಿ ಕಾಡಾನೆ ಓಡಾಟ ಸ್ಥಳೀಯರ ಕಣ್ಣಿಗೆ ಕಂಡಿದೆ. ಇದನ್ನು ನೋಡಲೆಂದು ಶ್ರೀಕಾಂತ್ ತನ್ನ ಸ್ನೇಹಿತರೊಂದಿಗೆ ಬಂದಿದ್ದಾನೆ. ಕಾಡಾನೆ ಕಂಡು ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದಾನೆ. ಈ ವೇಳೆ ಕಾಡಾನೆ ತುಳಿದು ಆತನನ್ನು ಸಾಯಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ