ಒಮನ್ ದೇಶದ ರಾಯಭಾರಿಯನ್ನು ಬಂಧಿಸಿದ್ರಾ ಪೊಲೀಸರು? ಇದರ ಹಿಂದಿರುವ ಸತ್ಯವೇನು ಗೊತ್ತಾ?

author-image
Gopal Kulkarni
Updated On
ಒಮನ್ ದೇಶದ ರಾಯಭಾರಿಯನ್ನು ಬಂಧಿಸಿದ್ರಾ ಪೊಲೀಸರು? ಇದರ ಹಿಂದಿರುವ ಸತ್ಯವೇನು ಗೊತ್ತಾ?
Advertisment
  • ಒಮನ್ ರಾಯಭಾರಿಯನ್ನು ಬಂಧಿಸಿದ್ದು ಏಕೆ ಘಾಜಿಯಾಬಾದ್ ಪೊಲೀಸ್​?
  • ಈತನ ಹಿನ್ನೆಲೆಯನ್ನು ಕೆದುಕುತ್ತಾ ಹೋದ ಪೊಲೀಸರಿಗೆ ಎದುರಾಗಿತ್ತು ಶಾಕ್​
  • ಒಮನ್​ನ ಭಾರತೀಯ ರಾಯಭಾರಿ ಹಿಂದೆ ಅಡಗಿದ್ದವು ಹಸಿ ಹಸಿ ಸುಳ್ಳುಗಳು

ತನ್ನನ್ನು ತಾನು ಒಮನ್​ನ ರಾಯಭಾರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಉತ್ತರಪ್ರದೇಶದ ಘಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅವನ ಐಷಾರಾಮಿ ಮರ್ಸಿಡಿಜ್​ ಬೆಂಜ್​ನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ.

ವ್ಯಕ್ತಿಯ ಮರ್ಸಿಡಿಸ್​ ಬೆಂಜ್ ಕಾರಿನ ಜೊತೆಗೆ ಸುಮಾರು 46 ವಿಸಿಟಿಂಗ್ ಕಾರ್ಡ್​ಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 66 ವರ್ಷದ ಶೇಖರ್ ರಾಣಾ ಎಂಬ ದೆಹಲಿಯ ಅಮರ ಕಾಲೋನಿ ವ್ಯಕ್ತಿಯು ತನ್ನನ್ನು ತಾನು ಒಮನ್ ದೇಶದ ರಾಯಭಾರಿ ಎಂದು ಹೇಳಿಕೊಂಡು ತಿರುಗುತ್ತಿದ್ದ. ಸದ್ಯ ಈತ ಘಾಜಿಯಾಬಾದ್ ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ:ಹಿಂದಿ ಹೇರಿಕೆ ಸಮರ್ಥಿಸಿದ ಪವನ್ ಕಲ್ಯಾಣ್.. ತಮಿಳು ಸಿನಿಮಾ ತಾರೆಯರ ವಿರುದ್ಧ ಬೊಟ್ಟು ತೋರಿದ DCM

ಸದ್ಯ ಶೇಖರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಟ್ರಾನ್ಸ್ ಹಿಂಡೋನ್​ನ ಡಿಸಿಪಿ ನಿಮಿಷ್ ಪಟೇಲ್ ಹೇಳಿದ್ದಾರೆ. ಡಿಸಿಪಿ ಪಾಟೀಲ್ ಅವರು ಹೇಳುವ ಪ್ರಕಾರ ಶೇಖರ್ ರಾಣಾ ಆಗ್ರಾದ ಕಾಲೇಜ್​ವೊಂದರಲ್ಲಿ ಪ್ರಾಣಿಶಾಸ್ತ್ರ ಪಾಠ ಮಾಡುತ್ತಿದ್ದ ಪ್ರೊಫೇಸರ್​. ಅದು ಅಲ್ಲದೇ ಈತ ತನ್ನದೇ ಆದ ಕೃಷ್ಣ ಕಾಲೇಜ್ ಆಫ್​ ಸೈನ್ಸ್ ಅಂಡ್ ಟೆಕ್ನಾಲಜಿ ಎಂಬ ಕಾಲೇಜನ್ನು ಆಗ್ರಾದಲ್ಲಿ ಹೊಂದಿದ್ದಾನೆ. ಅಲ್ಲದೇ ರಾಜಸ್ಥಾನದಲ್ಲಿ ಇವನ ಹೆಸರಲ್ಲಿ ಒಂದು ರೆಸಾರ್ಟ್​ ಕೂಡ ಇದೆಯಂತೆ.

ಇದನ್ನೂ ಓದಿ:UKG, 1ನೇ ತರಗತಿ ಓದುತ್ತಿದ್ದ ಇಬ್ಬರು ಮಕ್ಕಳನ್ನು ಬಕೆಟ್ ನೀರಲ್ಲಿ ಮುಳುಗಿಸಿ ಕೊಂದ ಅಪ್ಪ!

ಕೆಲಸದಿಂದ ನಿವೃತ್ತಿಯಾದ ಬಳಿಕ ಆರೋಪಿಯು 2015 ರಿಂದ 2018ರವರೆಗೂ ಕೇಂದ್ರ ಪರಿಸರ ಸಚಿವಾಲಯದಲ್ಲಿಯೂ ಕಾರ್ಯ ನಿರ್ವಹಿಸಿದ್ದೆ ಎಂದು ಹೇಳಿದ್ದಾನೆ. ಆದ್ರೆ ಪೊಲೀಸರಿಗೆ ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟವಾದ ಉತ್ತರ ಸಚಿವಾಲಯದಿಂದ ಬಂದಿಲ್ಲ.ಇನ್ನು ಪೊಲೀಸರ ವಿಚಾರಣೆಯ ವೇಳೆ ತಿಳಿದು ಬಂದ ಮತ್ತೊಂದು ವಿಷಯವೆನೇಂದರೆ ಈತ ಒಟ್ಟು ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಉಪ ಕುಲಪತಿಯಾಗಿದ್ದಾನೆ ಎಂದು ಕೂಡ ತಿಳಿದು ಬಂದಿದೆ.
ಕೆಸ್​ ರಾಣಾ ತನ್ನನ್ನು ತಾನು ಒಮನ್​ನ ಹೈ ಕಮೀಷನರ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದನಂತೆ. ಭಾರತದಲ್ಲಿರುವ ಜಿಸಿಸಿ ಎನ್​ಜಿಒ ಒಂದರಲ್ಲಿ ಟ್ರೇಡ್ ಕೌನ್ಸಿಲ್ ಆಗಿ ಕಾರ್ಯ ನಿರ್ವಹಿಸಲು ತನ್ನನ್ನು ತಾನು ಒಮನ್ ದೇಶದ ಭಾರತೀಯ ರಾಯಭಾರಿ ಎಂದು ಸುಳ್ಳು ಹೇಳಿದ್ದಾನೆ ಹಾಗೆ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿದ್ದಾನೆ.

ಈತ ಪ್ರೊಟೊಕಾಲ್​​ಗೋಸ್ಕರ ಘಾಜಿಯಾಬಾದ್ ಪೊಲೀಸರಿಗೆ ಪತ್ರವೊಂದನ್ನು ಬರೆದಿದ್ದ. ಅವನಿಗೆ ಪ್ರೊಟೊಕಾಲ್ ನೀಡಲಾಗಿತ್ತು. ಆದ್ರೆಆ ವೇಳೆ ಆತ ಸಲ್ಲಿಸಿದ ದಾಖಲೆಗಳ ಮೇಲೆ ಪೊಲೀಸರಿಗೆ ಸಂಶಯ ಬಂದಿದೆ. ಇದೇ ಆಧಾರದ ಮೇಲೆ ಇವನ ಜಾಲವನ್ನು ಬೆನ್ನಟ್ಟಿ ಹೋದಾಗ ಅಸಲಿ ಸತ್ಯ ಹೊರಬಂದಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment