newsfirstkannada.com

ಅಬ್ಬಾ.. 1,265 ಕೆ.ಜಿ ತೂಕದ ಲಾಡು! ಅಯೋಧ್ಯೆಗೆ ಒಂದೇ ದಿನದಲ್ಲಿ ತಯಾರಾಯ್ತು ಈ ನೈವೇದ್ಯ!

Share :

Published January 17, 2024 at 2:04pm

Update January 18, 2024 at 7:48am

    ಅಯೋಧ್ಯೆಗೆ ಹೊರಟ 1,265 ಕೆ.ಜಿ ತೂಕದ ಲಾಡು

    ರಾಮ ಭಕ್ತರು ತಯಾರಿಸಿದ ಬೃಹದಾಕಾರದ ಲಡ್ಡು

    ಒಂದೇ ದಿನದಲ್ಲಿ ತಯಾರಾಯ್ತು ಶ್ರೀರಾಮನ ನೈವೇದ್ಯ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನಲೆ ರಾಮ ಭಕ್ತರು ನಾನಾ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಭಕ್ತರೊಬ್ಬರು 108 ಅಡಿ ಉದ್ದ ಅಗರಬತ್ತಿಯನ್ನು ನೀಡಿದ್ದರು. ಈ ಸುದ್ದಿ ಮುನ್ನೆಲೆಗೆ ಬಂದಿತ್ತು. ಇದೀಗ ತೆಲಂಗಾಣ ಮೂಲದ ಭಕ್ತರೊಬ್ಬರು 1,265 ಕೆ.ಜಿ ತೂಕದ ಲಾಡುವನ್ನು ತಯಾರಿಸಿದ್ದಾರೆ.

ನಾಗಭೂಷಣ ರೆಡ್ಡಿ ಎಂಬ ವ್ಯಕ್ತಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಗಾಗಿ ಈ ಲಡ್ಡನ್ನು ತಯಾರಿಸಿದ್ದಾರೆ. ಇಂದು ಹೈದರಾಬಾದ್​ನಿಂದ ಈ ಲಡ್ಡು ಅಯೋಧ್ಯೆಗೆ ತೆರಳಲಿದೆ.

ಇನ್ನು ಲಡ್ಡುವನ್ನು ರೆಫ್ರಿಜರೇಟೆಡ್​​ ಗಾಜಿನ ಪೆಟ್ಟಿಗೆಯಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ಈ ಲಾಡನ್ನು ಸುಮಾರು 30 ಜನರು ತಯಾರಿಸಿದ್ದು, 24 ಗಂಟೆಗಳಲ್ಲಿ 1,265 ಕೆ.ಜಿ ತೂಕದ ಲಾಡನ್ನು ತಯಾರಿಸಿದ್ದಾರೆ.

ನಾಗಭೂಷಣ ರೆಡ್ಡಿ ಈ ಬಗ್ಗೆ ಮಾತನಾಡಿದ್ದು, ‘ನಾನು 2000 ರಿಂದ ಶ್ರೀ ರಾಮ್ ಕ್ಯಾಟರಿಂಗ್ ಎಂಬ ಕೇಟರಿಂಗ್ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ರಾಮ ಜನ್ಮಭೂಮಿ ದೇವಸ್ಥಾನದ ಭೂಮಿ ಪೂಜೆ ನಡೆಯುತ್ತಿರುವಾಗ, ಶ್ರೀರಾಮನಿಗೆ ಯಾವ ನೈವೇದ್ಯವನ್ನು ನೀಡಬಹುದು ಎಂದು ಯೋಚಿಸಿದ್ದೆವು. ನಂತರ, ಭೂಮಿ ಪೂಜೆಯ ದಿನದಿಂದ ದೇವಾಲಯ ತೆರೆಯುವ ದಿನದವರೆಗೆ ನಾವು ಪ್ರತಿ ದಿನ 1 ಕೆಜಿ ಲಡ್ಡುವನ್ನು ನೀಡುತ್ತೇವೆ ಎಂಬ ಯೋಚನೆಗೆ ಬಂದೆವು’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. 1,265 ಕೆ.ಜಿ ತೂಕದ ಲಾಡು! ಅಯೋಧ್ಯೆಗೆ ಒಂದೇ ದಿನದಲ್ಲಿ ತಯಾರಾಯ್ತು ಈ ನೈವೇದ್ಯ!

https://newsfirstlive.com/wp-content/uploads/2024/01/Laddu.jpg

    ಅಯೋಧ್ಯೆಗೆ ಹೊರಟ 1,265 ಕೆ.ಜಿ ತೂಕದ ಲಾಡು

    ರಾಮ ಭಕ್ತರು ತಯಾರಿಸಿದ ಬೃಹದಾಕಾರದ ಲಡ್ಡು

    ಒಂದೇ ದಿನದಲ್ಲಿ ತಯಾರಾಯ್ತು ಶ್ರೀರಾಮನ ನೈವೇದ್ಯ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನಲೆ ರಾಮ ಭಕ್ತರು ನಾನಾ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಭಕ್ತರೊಬ್ಬರು 108 ಅಡಿ ಉದ್ದ ಅಗರಬತ್ತಿಯನ್ನು ನೀಡಿದ್ದರು. ಈ ಸುದ್ದಿ ಮುನ್ನೆಲೆಗೆ ಬಂದಿತ್ತು. ಇದೀಗ ತೆಲಂಗಾಣ ಮೂಲದ ಭಕ್ತರೊಬ್ಬರು 1,265 ಕೆ.ಜಿ ತೂಕದ ಲಾಡುವನ್ನು ತಯಾರಿಸಿದ್ದಾರೆ.

ನಾಗಭೂಷಣ ರೆಡ್ಡಿ ಎಂಬ ವ್ಯಕ್ತಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಗಾಗಿ ಈ ಲಡ್ಡನ್ನು ತಯಾರಿಸಿದ್ದಾರೆ. ಇಂದು ಹೈದರಾಬಾದ್​ನಿಂದ ಈ ಲಡ್ಡು ಅಯೋಧ್ಯೆಗೆ ತೆರಳಲಿದೆ.

ಇನ್ನು ಲಡ್ಡುವನ್ನು ರೆಫ್ರಿಜರೇಟೆಡ್​​ ಗಾಜಿನ ಪೆಟ್ಟಿಗೆಯಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ಈ ಲಾಡನ್ನು ಸುಮಾರು 30 ಜನರು ತಯಾರಿಸಿದ್ದು, 24 ಗಂಟೆಗಳಲ್ಲಿ 1,265 ಕೆ.ಜಿ ತೂಕದ ಲಾಡನ್ನು ತಯಾರಿಸಿದ್ದಾರೆ.

ನಾಗಭೂಷಣ ರೆಡ್ಡಿ ಈ ಬಗ್ಗೆ ಮಾತನಾಡಿದ್ದು, ‘ನಾನು 2000 ರಿಂದ ಶ್ರೀ ರಾಮ್ ಕ್ಯಾಟರಿಂಗ್ ಎಂಬ ಕೇಟರಿಂಗ್ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ರಾಮ ಜನ್ಮಭೂಮಿ ದೇವಸ್ಥಾನದ ಭೂಮಿ ಪೂಜೆ ನಡೆಯುತ್ತಿರುವಾಗ, ಶ್ರೀರಾಮನಿಗೆ ಯಾವ ನೈವೇದ್ಯವನ್ನು ನೀಡಬಹುದು ಎಂದು ಯೋಚಿಸಿದ್ದೆವು. ನಂತರ, ಭೂಮಿ ಪೂಜೆಯ ದಿನದಿಂದ ದೇವಾಲಯ ತೆರೆಯುವ ದಿನದವರೆಗೆ ನಾವು ಪ್ರತಿ ದಿನ 1 ಕೆಜಿ ಲಡ್ಡುವನ್ನು ನೀಡುತ್ತೇವೆ ಎಂಬ ಯೋಚನೆಗೆ ಬಂದೆವು’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More