ಕದ್ದು ಹೋದ ಚಪ್ಪಲಿಯ ಬೆನ್ನು ಬಿದ್ದ ವ್ಯಕ್ತಿ
ಪೊಲೀಸರ ಸಹಾಯ ಕೇಳಿದ ಚಪ್ಪಲಿ ಕಳೆದುಕೊಂಡ ಸಂತ್ರಸ್ತ
ದೇವಸ್ಥಾನಕ್ಕೆ ತೆರಳಿ ಹಿಂತಿರುಗುವಾಗ ಚಪ್ಪಲಿ ಮಾಯ
ಚಪ್ಪಲಿ ಕದಿಯುವ ಕಳ್ಳರಿದ್ದಾರೆ ನಿಜ. ಒಂದು ವೇಳೆ ಚಪ್ಪಲಿ ಕದ್ದು ಹೋದರೆ ಸುಮ್ಮನಾಗಿ ಬಿಡುತ್ತೇವೆ. ಹೊಸ ಚಪ್ಪಲಿ ಖರೀದಿಸಿದರೆ ಸಾಕು ಎಂದು ಚಿಂತಿಸದೆ ಕೂರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ತನ್ನ ಚಪ್ಪಲಿ ಕದ್ದು ಹೋಗಿರುವುದೇ ದೊಡ್ಡ ಚಿಂತೆಯಾಗಿದೆ. ಸಾಲದಕ್ಕೆ ಆತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಹಠ ಹಿಡಿದಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಎಲ್ಲಿ ಗೊತ್ತಾ?.
ಚಪ್ಪಲಿ ಹುಡುಕಿಕೊಡಿ
ಉತ್ತರ ಪ್ರದೇಶದಲ್ಲಿ ಕಾನ್ಪುರದಲ್ಲಿ ಈ ಘಟನೆ ನಡೆದಿದೆ. ಕಷ್ಟಪಟ್ಟು ದುಡಿದ ಹಣದಲ್ಲಿ ಚಪ್ಪಲಿ ಖರೀದಿಸಿದರೆ. ಆ ಚಪ್ಪಲಿಯನ್ನು ಯಾರೋ ಕದ್ದಿದ್ದಾರೆ ಎಂದು ಕ್ರಾಂತಿ ಶರಣ್ ನಿಗಮ್ ಎಂಬಾತ ಪೊಲೀಸ್ ಠಾಣೆಗೆಯಲ್ಲಿ ದೂರು ನೀಡಿದ್ದಾನೆ. ದೂರಿನ ಅನ್ವಯ ಎಫ್ಐಆರ್ ಕೂಡ ದಾಖಲಾಗಿದೆ.
ಪೊಲೀಸರ ಮೊರೆ ಹೋದ ಸಂತ್ರಸ್ತ
ಅಂದಹಾಗೆಯೇ ಕ್ರಾಂತಿ ಶರಣ್ ನಿಗಮ್ ಕಾನ್ಸುರದ ದಬೌಲಿ ಮೂಲದವನಾಗಿದ್ದು, ಗಾಲ್ಟೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಶ್ರೀ ಭೈರವಿ ದೇವಸ್ಥಾನಕ್ಕೆ ತೆರಳಿ ಹಿಂತಿರುಗಿ ಬರುವಾಗ ಆತನ ಚಪ್ಪಲಿ ಕಾಣೆಯಾಗಿದೆ. ಇದರಿಂದ ಆತ ನೊಂದಿದ್ದಾನೆ. ಬರಿಗಾಲಿನಲ್ಲೇ ಬಂದ್ದಿದ್ದಾನೆ. ಕೊನೆಗೆ ಕಳೆದು ಹೋದ ಚಪ್ಪಲಿ ಹುಡುಕಿ ಕೊಡಿ ಎಂದು ಕ್ರಾಂತಿ ಶರಣ್ ಆನ್ಲೈನ್ ಮೂಲಕ ಎಫ್ಐಆರ್ ದಾಖಲಿಸಿದ್ದಾನೆ. ಆದರೆ ಕಳೆದು ಹೋದ ಆತನ ಚಪ್ಪಲಿ ಮರಳಿ ಸಿಗುತ್ತೋ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕದ್ದು ಹೋದ ಚಪ್ಪಲಿಯ ಬೆನ್ನು ಬಿದ್ದ ವ್ಯಕ್ತಿ
ಪೊಲೀಸರ ಸಹಾಯ ಕೇಳಿದ ಚಪ್ಪಲಿ ಕಳೆದುಕೊಂಡ ಸಂತ್ರಸ್ತ
ದೇವಸ್ಥಾನಕ್ಕೆ ತೆರಳಿ ಹಿಂತಿರುಗುವಾಗ ಚಪ್ಪಲಿ ಮಾಯ
ಚಪ್ಪಲಿ ಕದಿಯುವ ಕಳ್ಳರಿದ್ದಾರೆ ನಿಜ. ಒಂದು ವೇಳೆ ಚಪ್ಪಲಿ ಕದ್ದು ಹೋದರೆ ಸುಮ್ಮನಾಗಿ ಬಿಡುತ್ತೇವೆ. ಹೊಸ ಚಪ್ಪಲಿ ಖರೀದಿಸಿದರೆ ಸಾಕು ಎಂದು ಚಿಂತಿಸದೆ ಕೂರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ತನ್ನ ಚಪ್ಪಲಿ ಕದ್ದು ಹೋಗಿರುವುದೇ ದೊಡ್ಡ ಚಿಂತೆಯಾಗಿದೆ. ಸಾಲದಕ್ಕೆ ಆತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಹಠ ಹಿಡಿದಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಎಲ್ಲಿ ಗೊತ್ತಾ?.
ಚಪ್ಪಲಿ ಹುಡುಕಿಕೊಡಿ
ಉತ್ತರ ಪ್ರದೇಶದಲ್ಲಿ ಕಾನ್ಪುರದಲ್ಲಿ ಈ ಘಟನೆ ನಡೆದಿದೆ. ಕಷ್ಟಪಟ್ಟು ದುಡಿದ ಹಣದಲ್ಲಿ ಚಪ್ಪಲಿ ಖರೀದಿಸಿದರೆ. ಆ ಚಪ್ಪಲಿಯನ್ನು ಯಾರೋ ಕದ್ದಿದ್ದಾರೆ ಎಂದು ಕ್ರಾಂತಿ ಶರಣ್ ನಿಗಮ್ ಎಂಬಾತ ಪೊಲೀಸ್ ಠಾಣೆಗೆಯಲ್ಲಿ ದೂರು ನೀಡಿದ್ದಾನೆ. ದೂರಿನ ಅನ್ವಯ ಎಫ್ಐಆರ್ ಕೂಡ ದಾಖಲಾಗಿದೆ.
ಪೊಲೀಸರ ಮೊರೆ ಹೋದ ಸಂತ್ರಸ್ತ
ಅಂದಹಾಗೆಯೇ ಕ್ರಾಂತಿ ಶರಣ್ ನಿಗಮ್ ಕಾನ್ಸುರದ ದಬೌಲಿ ಮೂಲದವನಾಗಿದ್ದು, ಗಾಲ್ಟೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಶ್ರೀ ಭೈರವಿ ದೇವಸ್ಥಾನಕ್ಕೆ ತೆರಳಿ ಹಿಂತಿರುಗಿ ಬರುವಾಗ ಆತನ ಚಪ್ಪಲಿ ಕಾಣೆಯಾಗಿದೆ. ಇದರಿಂದ ಆತ ನೊಂದಿದ್ದಾನೆ. ಬರಿಗಾಲಿನಲ್ಲೇ ಬಂದ್ದಿದ್ದಾನೆ. ಕೊನೆಗೆ ಕಳೆದು ಹೋದ ಚಪ್ಪಲಿ ಹುಡುಕಿ ಕೊಡಿ ಎಂದು ಕ್ರಾಂತಿ ಶರಣ್ ಆನ್ಲೈನ್ ಮೂಲಕ ಎಫ್ಐಆರ್ ದಾಖಲಿಸಿದ್ದಾನೆ. ಆದರೆ ಕಳೆದು ಹೋದ ಆತನ ಚಪ್ಪಲಿ ಮರಳಿ ಸಿಗುತ್ತೋ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ