newsfirstkannada.com

ಹಳೇ ದ್ವೇಷ; ಮಗಳನ್ನು ಭುಜದ ಮೇಲೆ ಕೂರಿಸಿಕೊಂಡು ಹೋಗುವಾಗ ತಂದೆ ಮೇಲೆ ಗುಂಡಿನ ದಾಳಿ

Share :

Published August 15, 2023 at 4:40pm

Update August 15, 2023 at 8:15pm

    ಉತ್ತರ ಪ್ರದೇಶದಲ್ಲಿ ಒಂದು ಹೇಯ ಕೃತ್ಯ..!

    ಜತೆ ಮಗಳಿದ್ದರೂ ಕ್ಯಾರೇ ಎನ್ನದೆ ಅಟ್ಯಾಕ್​​

    ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ಯಾರು?

ಲಕ್ನೋ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಕೃತ್ಯ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಗುಫ್ರಾನ್, ನದೀಮ್, ತಾರಿಕ್​​​ ಎಂಬ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿ ಪೊಲೀಸರ ಕೈಗೆ ಸಿಕ್ಕಿಬಿದ್ದವರು.

ತಂದೆಯೋರ್ವ ಮಗಳನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡು ನಡೆದುಕೊಂಡು ಹೋಗುವಾಗ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಬಂಧಿತರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ತಂದೆ ತೀವ್ರ ಗಾಯಗೊಂಡಿದ್ದಾರೆ. ಅದೃಷ್ಟವಶಾತ್​​ ಮಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಏನಿದು ಘಟನೆ?

ಶೋಯೆಬ್ ಎಂಬ 30 ವರ್ಷದ ಉದ್ಯಮಿ ಸಣ್ಣದೊಂದು ರೋಡ್​ನಲ್ಲಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಎದುರಿನಿಂದ ಬಂದ ವ್ಯಕ್ತಿಯೋರ್ವ ಗನ್​​ ತೆಗೆದು ಗುಂಡು ಹಾರಿಸಿದ್ದಾನೆ. ಈ ಕೇಸ್​​ ಸಂಬಂಧ ಪೊಲೀಸರು ಮೂವರನ್ನು ಅರೆಸ್ಟ್​ ಮಾಡಿದ್ದಾರೆ. ಆರೋಪಿಗಳಲ್ಲಿ ತಾರಿಕ್​​ ಎಂಬಾತ ಸಂತ್ರಸ್ತನ ಸಂಬಂಧಿ. ಪೊಲೀಸ್​​ ವಿಚಾರಣೆ ವೇಳೆ ಹಳೇ ದ್ವೇಷದಿಂದ ಅಟ್ಯಾಕ್​ ಮಾಡಿದ್ದೇವೆ ಎಂದು ತಾರಿಕ್​​ ಬಾಯಿಬಿಟ್ಟಿರುವುದಾಗಿ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಳೇ ದ್ವೇಷ; ಮಗಳನ್ನು ಭುಜದ ಮೇಲೆ ಕೂರಿಸಿಕೊಂಡು ಹೋಗುವಾಗ ತಂದೆ ಮೇಲೆ ಗುಂಡಿನ ದಾಳಿ

https://newsfirstlive.com/wp-content/uploads/2023/08/UP-Police.jpg

    ಉತ್ತರ ಪ್ರದೇಶದಲ್ಲಿ ಒಂದು ಹೇಯ ಕೃತ್ಯ..!

    ಜತೆ ಮಗಳಿದ್ದರೂ ಕ್ಯಾರೇ ಎನ್ನದೆ ಅಟ್ಯಾಕ್​​

    ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ಯಾರು?

ಲಕ್ನೋ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಕೃತ್ಯ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಗುಫ್ರಾನ್, ನದೀಮ್, ತಾರಿಕ್​​​ ಎಂಬ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿ ಪೊಲೀಸರ ಕೈಗೆ ಸಿಕ್ಕಿಬಿದ್ದವರು.

ತಂದೆಯೋರ್ವ ಮಗಳನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡು ನಡೆದುಕೊಂಡು ಹೋಗುವಾಗ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಬಂಧಿತರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ತಂದೆ ತೀವ್ರ ಗಾಯಗೊಂಡಿದ್ದಾರೆ. ಅದೃಷ್ಟವಶಾತ್​​ ಮಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಏನಿದು ಘಟನೆ?

ಶೋಯೆಬ್ ಎಂಬ 30 ವರ್ಷದ ಉದ್ಯಮಿ ಸಣ್ಣದೊಂದು ರೋಡ್​ನಲ್ಲಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಎದುರಿನಿಂದ ಬಂದ ವ್ಯಕ್ತಿಯೋರ್ವ ಗನ್​​ ತೆಗೆದು ಗುಂಡು ಹಾರಿಸಿದ್ದಾನೆ. ಈ ಕೇಸ್​​ ಸಂಬಂಧ ಪೊಲೀಸರು ಮೂವರನ್ನು ಅರೆಸ್ಟ್​ ಮಾಡಿದ್ದಾರೆ. ಆರೋಪಿಗಳಲ್ಲಿ ತಾರಿಕ್​​ ಎಂಬಾತ ಸಂತ್ರಸ್ತನ ಸಂಬಂಧಿ. ಪೊಲೀಸ್​​ ವಿಚಾರಣೆ ವೇಳೆ ಹಳೇ ದ್ವೇಷದಿಂದ ಅಟ್ಯಾಕ್​ ಮಾಡಿದ್ದೇವೆ ಎಂದು ತಾರಿಕ್​​ ಬಾಯಿಬಿಟ್ಟಿರುವುದಾಗಿ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More