ವಿವಾಹಿತ ಮಹಿಳೆಯೊಂದಿಗೆ ಓಡಿ ಹೋದ ಪುರುಷನಿಗೆ ಶಿಕ್ಷೆ
ಚಪ್ಪಲಿ ಹಾರ ಹಾಕಿ, ಬಲವಂತವಾಗಿ ಮೂತ್ರ ಕುಡಿಸಿದ ಶಿಕ್ಷೆ ನೀಡಿದ್ರು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಸಂತ್ರಸ್ತನ ವಿಡಿಯೋ
ಮಧ್ಯಪ್ರದೇಶ: ವಿವಾಹಿತ ಮಹಿಳೆಯೊಂದಿಗೆ ಓಡಿ ಹೋದ ಪುರುಷನಿಗೆ ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿ, ಚಪ್ಪಲಿ ಹಾರವನ್ನು ಹಾಕಿದ ಘಟನೆ ಉಜ್ಜಯಿನಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಬದ್ನಗರ ತಹಸಿಲ್ನ ಭಾಟ್ಪಚ್ಲಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಗಮ್ಡಿ ಗ್ರಾಮದಲ್ಲಿ ಘಟನೆ ನಡೆದಿದೆ.
ವ್ಯಕ್ತಿಯನ್ನು ಘಟ್ಟಿಯ ಪ್ರದೇಶವನು ಎಂದು ತಿಳಿದುಬಂದಿದೆ. ಮಹಿಳೆಯ ಜೊತೆಗೆ ಓಡಿ ಹೋಗಿದ್ದಕ್ಕೆ ಅರ್ಧ ತಲೆಗೂದಲು ಮತ್ತು ಮೀಸೆಯನ್ನೂ ಬೋಳಿಸಲಾಗಿದೆ.
ವ್ಯಕ್ತಿ ವಿವಾಹಿತ ಮಹಿಳೆಯ ಜೊತೆ ಸಂಬಂಧ ಹೊಂದಿದ್ದು, ಆಕೆಯ ಜೊತೆಗೆ ರಾಜಸ್ಥಾನಕ್ಕೆ ಓಡಿ ಹೋಗಿದ್ದಾನೆ. ಮಹಿಳೆಯ ಸಂಬಂಧಿಕರು ತನಿಖೆ ನಡೆಸಿದಾಗ ಇಬ್ಬರು ಸಿಕ್ಕಿದ್ದಾರೆ. ಬಳಿಕ ಅವರನ್ನು ಗ್ರಾಮಕ್ಕೆ ಕರೆತಂದಿದ್ದಾರೆ.
ವೈರಲ್ ಆದ ದೃಶ್ಯದಲ್ಲಿ ವ್ಯಕ್ತಿಗೆ ಚಪ್ಪಲಿ ಹಾರ ಹಾಕಲಾಗಿದೆ. ಬಾಟಲಿಯಲ್ಲಿ ಮೂತ್ರವನ್ನು ಸೇವಿಸುವಂತೆ ಹೇಳುವುದು ಕೇಳಿಬಂದಿದೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್ ಆದರು ಸಹ, ಸಂತ್ರಸ್ತ ವ್ಯಕ್ತಿ ಇದುವರೆಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಮೂರ್ನಾಲ್ಕು ದಿನಗಳ ಹಿಂದೆ ನಡೆದ ಘಟನೆ ಇದಾಗಿದೆ. ಸಂತ್ರಸ್ತನನ್ನು ಸಂಪರ್ಕಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಿತೇರ್ಶ್ ಭಾರ್ಗವ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಿವಾಹಿತ ಮಹಿಳೆಯೊಂದಿಗೆ ಓಡಿ ಹೋದ ಪುರುಷನಿಗೆ ಶಿಕ್ಷೆ
ಚಪ್ಪಲಿ ಹಾರ ಹಾಕಿ, ಬಲವಂತವಾಗಿ ಮೂತ್ರ ಕುಡಿಸಿದ ಶಿಕ್ಷೆ ನೀಡಿದ್ರು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಸಂತ್ರಸ್ತನ ವಿಡಿಯೋ
ಮಧ್ಯಪ್ರದೇಶ: ವಿವಾಹಿತ ಮಹಿಳೆಯೊಂದಿಗೆ ಓಡಿ ಹೋದ ಪುರುಷನಿಗೆ ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿ, ಚಪ್ಪಲಿ ಹಾರವನ್ನು ಹಾಕಿದ ಘಟನೆ ಉಜ್ಜಯಿನಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಬದ್ನಗರ ತಹಸಿಲ್ನ ಭಾಟ್ಪಚ್ಲಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಗಮ್ಡಿ ಗ್ರಾಮದಲ್ಲಿ ಘಟನೆ ನಡೆದಿದೆ.
ವ್ಯಕ್ತಿಯನ್ನು ಘಟ್ಟಿಯ ಪ್ರದೇಶವನು ಎಂದು ತಿಳಿದುಬಂದಿದೆ. ಮಹಿಳೆಯ ಜೊತೆಗೆ ಓಡಿ ಹೋಗಿದ್ದಕ್ಕೆ ಅರ್ಧ ತಲೆಗೂದಲು ಮತ್ತು ಮೀಸೆಯನ್ನೂ ಬೋಳಿಸಲಾಗಿದೆ.
ವ್ಯಕ್ತಿ ವಿವಾಹಿತ ಮಹಿಳೆಯ ಜೊತೆ ಸಂಬಂಧ ಹೊಂದಿದ್ದು, ಆಕೆಯ ಜೊತೆಗೆ ರಾಜಸ್ಥಾನಕ್ಕೆ ಓಡಿ ಹೋಗಿದ್ದಾನೆ. ಮಹಿಳೆಯ ಸಂಬಂಧಿಕರು ತನಿಖೆ ನಡೆಸಿದಾಗ ಇಬ್ಬರು ಸಿಕ್ಕಿದ್ದಾರೆ. ಬಳಿಕ ಅವರನ್ನು ಗ್ರಾಮಕ್ಕೆ ಕರೆತಂದಿದ್ದಾರೆ.
ವೈರಲ್ ಆದ ದೃಶ್ಯದಲ್ಲಿ ವ್ಯಕ್ತಿಗೆ ಚಪ್ಪಲಿ ಹಾರ ಹಾಕಲಾಗಿದೆ. ಬಾಟಲಿಯಲ್ಲಿ ಮೂತ್ರವನ್ನು ಸೇವಿಸುವಂತೆ ಹೇಳುವುದು ಕೇಳಿಬಂದಿದೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್ ಆದರು ಸಹ, ಸಂತ್ರಸ್ತ ವ್ಯಕ್ತಿ ಇದುವರೆಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಮೂರ್ನಾಲ್ಕು ದಿನಗಳ ಹಿಂದೆ ನಡೆದ ಘಟನೆ ಇದಾಗಿದೆ. ಸಂತ್ರಸ್ತನನ್ನು ಸಂಪರ್ಕಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಿತೇರ್ಶ್ ಭಾರ್ಗವ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ