Advertisment

ಮಂಡ್ಯದಲ್ಲಿ 3 ವರ್ಷದ ಮಗುವಿನ ದುರಂತ ಹೇಗಾಯ್ತು? ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದೇನು?

author-image
admin
Updated On
ಮಂಡ್ಯದಲ್ಲಿ 3 ವರ್ಷದ ಮಗುವಿನ ದುರಂತ ಹೇಗಾಯ್ತು? ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದೇನು?
Advertisment
  • ಮಂಡ್ಯ ನಗರದ ಸ್ವರ್ಣಸಂದ್ರ ಸರ್ಕಲ್ ಬಳಿ ದಾರುಣ ಘಟನೆ
  • ಹೆಲ್ಮೆಟ್ ಧರಿಸದೇ ಇದ್ದಿದ್ದರಿಂದ ತಡೆದು ನಿಲ್ಲಿಸಿದ ಪೊಲೀಸರು
  • ಮೂವರು ASIಗಳನ್ನು ಅಮಾನತು ಮಾಡಿದ ಮಂಡ್ಯ ಎಸ್‌ಪಿ

ಮಂಡ್ಯ: ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ 3 ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ಕರುಣಾಜನಕವಾಗಿದೆ. ಸ್ಥಳದಲ್ಲೇ ಮಗು ಕೊನೆಯುಸಿರು ಎಳೆದಿದ್ದು, ಪೋಷಕರು, ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪ್ರತಿಭಟನೆಯ ಜಾಗಕ್ಕೆ ಬಂದು ಮನವೊಲಿಸಲು ಹರಸಾಹಸಪಟ್ಟಿದ್ದಾರೆ.

Advertisment

ಅಸಲಿಗೆ ಆಗಿದ್ದೇನು?
ಮಂಡ್ಯ ನಗರದ ಸ್ವರ್ಣಸಂದ್ರ ಸರ್ಕಲ್ ಬಳಿ ಇಂದು ಬೆಳಗ್ಗೆ 10.30 ರಿಂದ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಂಡ್ಯ ಟ್ರಾಫಿಕ್‌ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಾಹನ ಸಂಚಾರ ಸುರಕ್ಷತಾ ನಿಯಮ ಪಾಲಿಸದೆ ಇರೋದನ್ನ ತಪಾಸಣೆ ನಡೆಸುತ್ತಿದ್ದರು.

publive-image

ಹೆಲ್ಮೆಟ್ ತಪಾಸಣೆ ವೇಳೆ ಮಂಡ್ಯ ಟ್ರಾಫಿಕ್ ಪೊಲೀಸರು ಮಗು ಬರುತ್ತಿದ್ದ ದ್ವಿಚಕ್ರ ವಾಹನವನ್ನು ತಡೆದಿದ್ದಾರೆ. ಆಗ ಪೋಷಕರು ಮಗುವಿಗೆ ನಾಯಿ ಕಚ್ಚಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಹೆಲ್ಮೆಟ್ ಧರಿಸದೇ ಇದ್ದಿದ್ದರಿಂದ ಪೊಲೀಸರು ತಪಾಸಣೆ ಮಾಡಿ ಆಮೇಲೆ ಬಿಟ್ಟು ಕಳಿಸಿದ್ದಾರೆ. ಆದರೆ ಮಗುವಿನ ಪೋಷಕರು ಹೋಗುವಾಗ ಹಿಂದೆಯಿಂದ ಬಂದ ವಾಹನ ಡಿಕ್ಕಿಯಾಗಿದೆ. ಆಗ ಬೈಕ್‌ ಮೇಲಿದ್ದ ಮಗು ಏಕಾಏಕಿ ರಸ್ತೆ ಮೇಲೆ ಬಿದ್ದಿದೆ. ಮಗುವಿನ ಮೇಲೆ ಲಾರಿ ಹರಿದು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ.

Advertisment

publive-image

ಹಿಂಭಾಗದಿಂದ ಬಂದ ವಾಹನ ಡಿಕ್ಕಿಯಾಗಿ ಮಗು ಕೆಳಗೆ ಬಿದ್ದಿದೆ. ಆ ಸಂದರ್ಭದಲ್ಲಿ ಹಿಂದೆಯಿಂದ ಬರುತ್ತಿದ್ದ ಲಾರಿ ಮಗುವಿನ ಮೇಲೆ ಹತ್ತಿದೆ ಎನ್ನಲಾಗ್ತಿದೆ. ಸಿಸಿಟಿವಿ ಪರಿಶೀಲನೆ ನಂತರ ಘಟನೆಗೆ ನಿಖರ ಕಾರಣ ತಿಳಿಯಲಿದೆ. ಮಗುವಿನ ಮೇಲೆ ವಾಹನ ಹತ್ತಿದೆಯಾ ಅಥವಾ ಪೊಲೀಸರು ತಡೆದು ಬೀಳಿಸಿದ್ದಾರಾ ಎಲ್ಲವೂ ತನಿಖೆಯಲ್ಲಿ ಗೊತ್ತಾಗಬೇಕಿದೆ.

ಇದನ್ನೂ ಓದಿ: ಮಂಡ್ಯ ಟ್ರಾಫಿಕ್ ಪೊಲೀಸರ ಯಡವಟ್ಟು; ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸ 

ಟ್ರಾಫಿಕ್‌ ತಪಾಸಣೆ ವೇಳೆ ಸುರಕ್ಷತಾ ಕ್ರಮ ಕೈಗೊಂಡಿಲ್ಲದ ಕಾರಣ ಮೂವರು ASIಗಳನ್ನು ಅಮಾನತು ಮಾಡಿದ್ದೇವೆ ಎಂದು ಮಂಡ್ಯ ಎಸ್ಪಿ‌ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment