newsfirstkannada.com

‘ಮಂಡ್ಯ ಎಲೆಕ್ಷನ್​ ಕ್ಯಾಂಪೇನ್​ಗೆ ದರ್ಶನ್​ ಬರೋದು ಪಕ್ಕಾ.. ಸುದೀಪ್​ ಬಗ್ಗೆ ನಕ್ಕು ಸುಮ್ಮನಾದ ಸುಮಲತಾ, ಯಾಕೆ?

Share :

Published February 26, 2024 at 8:24am

    ಸಂಸದೆ ಸುಮಲತಾಗೆ ಬೆಂಗಳೂರು ಉತ್ತರ ಕ್ಷೇತ್ರದ ಆಫರ್​​​ ಕೊಟ್ಟಿದ್ರಾ?

    ಪಟ್ಟು ಬಿಡದ ಎಂಪಿ ಸುಮಲತಾ, ಬಿಕ್ಕಟ್ಟು ಸೃಷ್ಟಿಸಿದ ಮಂಡ್ಯ ಕುರುಕ್ಷೇತ್ರ

    ಮಂಡ್ಯದಲ್ಲಿ ಸುಮಲತಾ ಪರ ಯಶ್ ಅಖಾಡಕ್ಕೆ ಇಳಿಯೋದು ಫಿಕ್ಸ್ ಆ?

ಮಂಡ್ಯ ಕದನ ದಳಕ್ಕೆ ಕಠಿಣವಾಗ್ತಿದೆ. ಲೋಕಸಭೆ ಎಲೆಕ್ಷನ್​​​ ಸಮೀಪಿಸ್ತಿದ್ದಂತೆ ಸುಮಲತಾ ಹಾಕಿದ ಬಿಗಿಪಟ್ಟು ದೋಸ್ತಿಗಳನ್ನ ಆತಂಕಕ್ಕೆ ತಳ್ಳಿದೆ. ಯಾವುದೇ ಕಾರಣಕ್ಕೂ ಮಂಡ್ಯ ಕಳೆದುಕೊಳ್ಳಲ್ಲ ಅಂತ ಸಾರಿದ್ದಾರೆ. ಇದೇ ವೇ ದರ್ಶನ್​​, ಯಶ್​​, ಸುದೀಪ್​ ವಿಚಾರವಾಗಿಯು ಮಾತಾಡಿದ್ದಾರೆ.

ಮಂಡ್ಯಕ್ಕಾಗಿ 2.O ಕದನಕ್ಕೆ ಚಾಲನೆ ಕೊಟ್ರಾ ಸ್ವಾಭಿಮಾನಿ?

ಮಂಡ್ಯ ಲೋಕಸಭೆ ಚುನಾವಣಾ ರಣಕಣ ರಂಗೇರಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ನಿನ್ನೆ ಸಭೆ ಬಳಿಕ ಸುಮಲತಾ, ಮಂಡ್ಯ ಬಿಟ್ಟು ಕೊಡುವ ಚಾನ್ಸೇ ಇಲ್ಲ ಎಂದಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಘೋಷಣೆ ಮಾಡಿದ್ದಾರೆ.

ನೀವು ಬಿಜೆಪಿ ಪಕ್ಷದ ಪರವಾಗಿ ಲೋಕಸಭೆ ಎಲೆಕ್ಷನ್​ಗೆ ನಿತ್ಕೊಳ್ಳಿ, ನಾವೆಲ್ಲ ಸಪೋರ್ಟ್​ ಮಾಡುತ್ತೇವೆ. ಜಿಲ್ಲೆಯಲ್ಲೂ ಪಕ್ಷವನ್ನು ಕಟ್ಟಿ ಬಾವುಟ ಹಾರಿಸೋಣ. ತುಂಬಾ ಸಪೋರ್ಟಿವ್ ಆಗಿ ಹೇಳಿದ್ದಾರೆ.

ಸುಮಲತಾ, ಮಂಡ್ಯ ಸಂಸದೆ

ಯಾವುದೇ ಕಾರಣಕ್ಕೂ ಮಂಡ್ಯವನ್ನ ಕಳೆದುಕೊಳ್ಳಲ್ಲ!

ಅಷ್ಟು ಸುಲಭವಾಗಿ ಮಂಡ್ಯವನ್ನು ಕಳೆದುಕೊಳ್ಳಲ್ಲ, ಬಿಟ್ಟುಕೊಡುವುದಿಲ್ಲ ಅಂತ ದೋಸ್ತಿಗಳಿಗೆ ಸುಮಲತಾ ಸೆಡ್ಡು ಹೊಡೆದಂತಿದೆ. ಮಂಡ್ಯ ಅಂಬರೀಶ್ ನಾಡು, ಅವರು ಮಂಡ್ಯದ ಗಂಡು. ಹಾಗಾಗಿ ನಾನು ಮಂಡ್ಯದಲ್ಲೇ ಸ್ಪರ್ಧೆ ಮಾಡ್ತೀನಿ ಅಂತ ಘೋಷಿಸಿದ್ದಾರೆ.

ಮಂಡ್ಯ ಜನರಿಗಾಗಿಯೇ ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದು ಟೇಬಲ್ ಗುದ್ದಿ ಹೇಳಿದ್ದೇನೆ. ಆ ಜನರ ಸಂಬಂಧ ಕಳೆದಿಕೊಳ್ಳಲು ಇಷ್ಟ ಇಲ್ಲ. ಅಂಬರೀಶ್ ಅವರು 25 ವರ್ಷ ಕ್ಷೇತ್ರದಲ್ಲಿ ಇದ್ದು ಸಾಕಷ್ಟು ಪ್ರೀತಿ ಗಳಿಸಿದ ಕ್ಷೇತ್ರ. ಮಂಡ್ಯದ ಗಂಡು ಅಂತಲೇ ಇಡೀ ಇಂಡಿಯಾ ಗುರುತಿಸಿ.

ಸುಮಲತಾ, ಮಂಡ್ಯ ಸಂಸದೆ

ಕೆಲವು ಕ್ಷಣ ಮಾತ್ರ ಎಂದ ಸುಮಲತಾ ಮಾತಿನ ಸಂಚಲನ!

ರಾಜಕೀಯಕ್ಕೆ ಬಂದಿದ್ದು ಮಂಡ್ಯ ಜನರ ವಿಶ್ವಾಸ ಕಳೆದುಕೊಳ್ಳಲು ಅಲ್ಲ. ತಮಗೆ ಬೆಂಗಳೂರು ಉತ್ತರದಲ್ಲಿ ಸ್ಪರ್ಧೆ ಮಾಡಬೇಕು ಅಂದ್ರೆ ಕೆಲವು ಕ್ಷಣ ಮಾತ್ರ ಅಂತ ಸುಮಲತಾ ಹೇಳಿದ್ದು ಕುತೂಹಲ.

ಬೆಂಗಳೂರು ಉತ್ತರ ಕ್ಷೇತ್ರ ಎಂದರೆ ನನಗೆ ಫೈಟ್​ ಅಲ್ಲವೇ ಅಲ್ಲ. ಅದು ನನಗೆ ತುಂಬಾ ಸುಲಭದ ಗೆಲುವು ಸಿಗುತ್ತದೆ. ಯಾವುದೇ ಪಕ್ಷದಿಂದ ಅಲ್ಲಿ ನಿಂತರು ನಾನು ಗೆಲ್ಲುತ್ತೇನೆ. ಆದರೆ ಅದು ನನಗೆ ಬೇಕಾಗಿಲ್ಲ. ನನ್ನ ಸ್ವಾರ್ಥ ಅಂತ ತೆಗೆದುಕೊಂಡರೇ ಯಾವುದಾದರೂ ಆಫರ್ ತೆಗೆದುಕೊಳ್ಳಬಹುದು. ಆದರೆ ನನಗೆ ಬೇಕಾಗಿಲ್ಲ. ನನ್ನ ಉದ್ದೇಶ ಒಂದು ಇದೆ. ಅದು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಮಂಡ್ಯ ಕ್ಷೇತ್ರವನ್ನ ಕಳೆದುಕೊಳ್ಳೋಕೆ ಇಷ್ಟವಿಲ್ಲ.

ಸುಮಲತಾ, ಮಂಡ್ಯ ಸಂಸದೆ

ಪ್ರಚಾರದ ಅಖಾಡಕ್ಕಿಳಿತಾರಾ ನಟ ಯಶ್, ಸುದೀಪ್​?​

ಕಳೆದ ಬಾರಿ ಸ್ವಾಭಿಮಾನಿ ಕಹಳೆಗೆ ಧ್ವನಿ ಆಗಿದ್ದ ದರ್ಶನ್​ ಈ ಸಲವೂ ಕ್ಯಾಂಪೇನ್​ ಮಾಡ್ತಾರೆ. ಆದ್ರೆ, ಯಶ್​​ ಜತೆ ಮಾತಾಡಿಲ್ಲ ಎಂದಿರುವ ಸುಮಲತಾ, ಸುದೀಪ್​​​ ವಿಚಾರಕ್ಕೆ ನಕ್ಕು ಸುಮ್ಮನಾಗಿದ್ದಾರೆ.

‘ಯಶ್​ಗೆ ಮಾತಾಡ್ತೀನಿ, ದರ್ಶನ್​ ಸಾಥ್​’, ‘ಸುದೀಪ್​​, ಹೂಂsss’

ಯಶ್​ ಅವರನ್ನು ಮಾತಾಡಿಸಿಲ್ಲ. ಅವರು ಲಂಡನ್​ನಲ್ಲಿ ಬ್ಯುಸಿಯಾಗಿದ್ದಾರೆ. ಆ ಬಗ್ಗೆ ಅವರ ಬಳಿ ಮಾತನಾಡುತ್ತೇನೆ. ದರ್ಶನ್​ಗೆ ಪಕ್ಷ ಅಂತ ಏನು ಇಲ್ಲ ಬರುತ್ತಾರೆ.

ಸುಮಲತಾ, ಮಂಡ್ಯ ಸಂಸದೆ

ಮಂಡ್ಯ ಮತ್ತೊಮ್ಮೆ ಇಂಡಿಯಾದ ಗಮನ ಸೆಳೆಯೋದು ಪಕ್ಕಾ ಆಗಿದೆ. ಸಕ್ಕರೆ ನಾಡು ದಕ್ಕೋದು ಸಲೀಸಲ್ಲ ಅನ್ನೋದು ದಳಪತಿಗೆ ಸಿಗ್ನಲ್​ ಸಿಕ್ಕಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮಂಡ್ಯ ಎಲೆಕ್ಷನ್​ ಕ್ಯಾಂಪೇನ್​ಗೆ ದರ್ಶನ್​ ಬರೋದು ಪಕ್ಕಾ.. ಸುದೀಪ್​ ಬಗ್ಗೆ ನಕ್ಕು ಸುಮ್ಮನಾದ ಸುಮಲತಾ, ಯಾಕೆ?

https://newsfirstlive.com/wp-content/uploads/2024/02/SUMALATHA_SUDEEP.jpg

    ಸಂಸದೆ ಸುಮಲತಾಗೆ ಬೆಂಗಳೂರು ಉತ್ತರ ಕ್ಷೇತ್ರದ ಆಫರ್​​​ ಕೊಟ್ಟಿದ್ರಾ?

    ಪಟ್ಟು ಬಿಡದ ಎಂಪಿ ಸುಮಲತಾ, ಬಿಕ್ಕಟ್ಟು ಸೃಷ್ಟಿಸಿದ ಮಂಡ್ಯ ಕುರುಕ್ಷೇತ್ರ

    ಮಂಡ್ಯದಲ್ಲಿ ಸುಮಲತಾ ಪರ ಯಶ್ ಅಖಾಡಕ್ಕೆ ಇಳಿಯೋದು ಫಿಕ್ಸ್ ಆ?

ಮಂಡ್ಯ ಕದನ ದಳಕ್ಕೆ ಕಠಿಣವಾಗ್ತಿದೆ. ಲೋಕಸಭೆ ಎಲೆಕ್ಷನ್​​​ ಸಮೀಪಿಸ್ತಿದ್ದಂತೆ ಸುಮಲತಾ ಹಾಕಿದ ಬಿಗಿಪಟ್ಟು ದೋಸ್ತಿಗಳನ್ನ ಆತಂಕಕ್ಕೆ ತಳ್ಳಿದೆ. ಯಾವುದೇ ಕಾರಣಕ್ಕೂ ಮಂಡ್ಯ ಕಳೆದುಕೊಳ್ಳಲ್ಲ ಅಂತ ಸಾರಿದ್ದಾರೆ. ಇದೇ ವೇ ದರ್ಶನ್​​, ಯಶ್​​, ಸುದೀಪ್​ ವಿಚಾರವಾಗಿಯು ಮಾತಾಡಿದ್ದಾರೆ.

ಮಂಡ್ಯಕ್ಕಾಗಿ 2.O ಕದನಕ್ಕೆ ಚಾಲನೆ ಕೊಟ್ರಾ ಸ್ವಾಭಿಮಾನಿ?

ಮಂಡ್ಯ ಲೋಕಸಭೆ ಚುನಾವಣಾ ರಣಕಣ ರಂಗೇರಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ನಿನ್ನೆ ಸಭೆ ಬಳಿಕ ಸುಮಲತಾ, ಮಂಡ್ಯ ಬಿಟ್ಟು ಕೊಡುವ ಚಾನ್ಸೇ ಇಲ್ಲ ಎಂದಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಘೋಷಣೆ ಮಾಡಿದ್ದಾರೆ.

ನೀವು ಬಿಜೆಪಿ ಪಕ್ಷದ ಪರವಾಗಿ ಲೋಕಸಭೆ ಎಲೆಕ್ಷನ್​ಗೆ ನಿತ್ಕೊಳ್ಳಿ, ನಾವೆಲ್ಲ ಸಪೋರ್ಟ್​ ಮಾಡುತ್ತೇವೆ. ಜಿಲ್ಲೆಯಲ್ಲೂ ಪಕ್ಷವನ್ನು ಕಟ್ಟಿ ಬಾವುಟ ಹಾರಿಸೋಣ. ತುಂಬಾ ಸಪೋರ್ಟಿವ್ ಆಗಿ ಹೇಳಿದ್ದಾರೆ.

ಸುಮಲತಾ, ಮಂಡ್ಯ ಸಂಸದೆ

ಯಾವುದೇ ಕಾರಣಕ್ಕೂ ಮಂಡ್ಯವನ್ನ ಕಳೆದುಕೊಳ್ಳಲ್ಲ!

ಅಷ್ಟು ಸುಲಭವಾಗಿ ಮಂಡ್ಯವನ್ನು ಕಳೆದುಕೊಳ್ಳಲ್ಲ, ಬಿಟ್ಟುಕೊಡುವುದಿಲ್ಲ ಅಂತ ದೋಸ್ತಿಗಳಿಗೆ ಸುಮಲತಾ ಸೆಡ್ಡು ಹೊಡೆದಂತಿದೆ. ಮಂಡ್ಯ ಅಂಬರೀಶ್ ನಾಡು, ಅವರು ಮಂಡ್ಯದ ಗಂಡು. ಹಾಗಾಗಿ ನಾನು ಮಂಡ್ಯದಲ್ಲೇ ಸ್ಪರ್ಧೆ ಮಾಡ್ತೀನಿ ಅಂತ ಘೋಷಿಸಿದ್ದಾರೆ.

ಮಂಡ್ಯ ಜನರಿಗಾಗಿಯೇ ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದು ಟೇಬಲ್ ಗುದ್ದಿ ಹೇಳಿದ್ದೇನೆ. ಆ ಜನರ ಸಂಬಂಧ ಕಳೆದಿಕೊಳ್ಳಲು ಇಷ್ಟ ಇಲ್ಲ. ಅಂಬರೀಶ್ ಅವರು 25 ವರ್ಷ ಕ್ಷೇತ್ರದಲ್ಲಿ ಇದ್ದು ಸಾಕಷ್ಟು ಪ್ರೀತಿ ಗಳಿಸಿದ ಕ್ಷೇತ್ರ. ಮಂಡ್ಯದ ಗಂಡು ಅಂತಲೇ ಇಡೀ ಇಂಡಿಯಾ ಗುರುತಿಸಿ.

ಸುಮಲತಾ, ಮಂಡ್ಯ ಸಂಸದೆ

ಕೆಲವು ಕ್ಷಣ ಮಾತ್ರ ಎಂದ ಸುಮಲತಾ ಮಾತಿನ ಸಂಚಲನ!

ರಾಜಕೀಯಕ್ಕೆ ಬಂದಿದ್ದು ಮಂಡ್ಯ ಜನರ ವಿಶ್ವಾಸ ಕಳೆದುಕೊಳ್ಳಲು ಅಲ್ಲ. ತಮಗೆ ಬೆಂಗಳೂರು ಉತ್ತರದಲ್ಲಿ ಸ್ಪರ್ಧೆ ಮಾಡಬೇಕು ಅಂದ್ರೆ ಕೆಲವು ಕ್ಷಣ ಮಾತ್ರ ಅಂತ ಸುಮಲತಾ ಹೇಳಿದ್ದು ಕುತೂಹಲ.

ಬೆಂಗಳೂರು ಉತ್ತರ ಕ್ಷೇತ್ರ ಎಂದರೆ ನನಗೆ ಫೈಟ್​ ಅಲ್ಲವೇ ಅಲ್ಲ. ಅದು ನನಗೆ ತುಂಬಾ ಸುಲಭದ ಗೆಲುವು ಸಿಗುತ್ತದೆ. ಯಾವುದೇ ಪಕ್ಷದಿಂದ ಅಲ್ಲಿ ನಿಂತರು ನಾನು ಗೆಲ್ಲುತ್ತೇನೆ. ಆದರೆ ಅದು ನನಗೆ ಬೇಕಾಗಿಲ್ಲ. ನನ್ನ ಸ್ವಾರ್ಥ ಅಂತ ತೆಗೆದುಕೊಂಡರೇ ಯಾವುದಾದರೂ ಆಫರ್ ತೆಗೆದುಕೊಳ್ಳಬಹುದು. ಆದರೆ ನನಗೆ ಬೇಕಾಗಿಲ್ಲ. ನನ್ನ ಉದ್ದೇಶ ಒಂದು ಇದೆ. ಅದು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಮಂಡ್ಯ ಕ್ಷೇತ್ರವನ್ನ ಕಳೆದುಕೊಳ್ಳೋಕೆ ಇಷ್ಟವಿಲ್ಲ.

ಸುಮಲತಾ, ಮಂಡ್ಯ ಸಂಸದೆ

ಪ್ರಚಾರದ ಅಖಾಡಕ್ಕಿಳಿತಾರಾ ನಟ ಯಶ್, ಸುದೀಪ್​?​

ಕಳೆದ ಬಾರಿ ಸ್ವಾಭಿಮಾನಿ ಕಹಳೆಗೆ ಧ್ವನಿ ಆಗಿದ್ದ ದರ್ಶನ್​ ಈ ಸಲವೂ ಕ್ಯಾಂಪೇನ್​ ಮಾಡ್ತಾರೆ. ಆದ್ರೆ, ಯಶ್​​ ಜತೆ ಮಾತಾಡಿಲ್ಲ ಎಂದಿರುವ ಸುಮಲತಾ, ಸುದೀಪ್​​​ ವಿಚಾರಕ್ಕೆ ನಕ್ಕು ಸುಮ್ಮನಾಗಿದ್ದಾರೆ.

‘ಯಶ್​ಗೆ ಮಾತಾಡ್ತೀನಿ, ದರ್ಶನ್​ ಸಾಥ್​’, ‘ಸುದೀಪ್​​, ಹೂಂsss’

ಯಶ್​ ಅವರನ್ನು ಮಾತಾಡಿಸಿಲ್ಲ. ಅವರು ಲಂಡನ್​ನಲ್ಲಿ ಬ್ಯುಸಿಯಾಗಿದ್ದಾರೆ. ಆ ಬಗ್ಗೆ ಅವರ ಬಳಿ ಮಾತನಾಡುತ್ತೇನೆ. ದರ್ಶನ್​ಗೆ ಪಕ್ಷ ಅಂತ ಏನು ಇಲ್ಲ ಬರುತ್ತಾರೆ.

ಸುಮಲತಾ, ಮಂಡ್ಯ ಸಂಸದೆ

ಮಂಡ್ಯ ಮತ್ತೊಮ್ಮೆ ಇಂಡಿಯಾದ ಗಮನ ಸೆಳೆಯೋದು ಪಕ್ಕಾ ಆಗಿದೆ. ಸಕ್ಕರೆ ನಾಡು ದಕ್ಕೋದು ಸಲೀಸಲ್ಲ ಅನ್ನೋದು ದಳಪತಿಗೆ ಸಿಗ್ನಲ್​ ಸಿಕ್ಕಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More