newsfirstkannada.com

ಮಂಡ್ಯದಲ್ಲಿ ಅವಳಿ ಮಕ್ಕಳು ನಿಗೂಢ ಸಾವು; ಐಸ್​ ​ಕ್ರೀಂ ತಿಂದ ಮೇಲೆ ಹೀಗಾಯಿತು ಎಂದ ತಾಯಿ

Share :

Published April 18, 2024 at 9:36am

    ತಳ್ಳುವ ಗಾಡಿಯಲ್ಲಿ ಬಂದ ಐಸ್ ಕ್ರೀಂ ತಿಂದು ಮಕ್ಕಳು ಸಾವನ್ನಪ್ಪಿದರೇ?

    ಮಕ್ಕಳಿಗೆ ಮಧ್ಯಾಹ್ನ ತಾಯಿ ಐಸ್ ಕ್ರೀಂ ತಿನ್ನಿಸಿದ ಬಳಿಕ ಅಸ್ವಸ್ಥ

    ಗ್ರಾಮದಲ್ಲಿ ಬೇರೆ ಮಕ್ಕಳಿಗೆ ಏನಾಗಿದೆ? ಅನುಮಾನ ಹುಟ್ಟಿಸಿದೆ ಅವಳಿ ಮಕ್ಕಳ ಸಾವು

ಮಂಡ್ಯ: ಒಂದೂವರೆ ವರ್ಷದ ಅವಳಿ ಕಂದಮ್ಮಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಪೂಜಾ, ಪ್ರಸನ್ನ ದಂಪತಿಗಳ ಮಕ್ಕಳಾದ ತ್ರಿಶುಲ್ ಹಾಗೂ ತ್ರಿಶ ಸಾವನ್ನಪ್ಪಿದ ಕಂದಮ್ಮಗಳು.

ನಿನ್ನೆ ಮಧ್ಯಾಹ್ನ ನಡೆದಿರೋ ಘಟನೆ ಇದಾಗಿದೆ. ಮಕ್ಕಳಿಗೆ ಮಧ್ಯಾಹ್ನ ತಾಯಿ ಐಸ್ ಕ್ರೀಂ ತಿನ್ನಿಸಿದ್ದಾರೆ. ಆನಂತರ ಮಕ್ಕಳು ಅಸ್ವಸ್ಥಗೊಂಡಿದ್ದಾರೆಂದು ಆರೋಪಿಸಿದ್ದಾರೆ.

ತಳ್ಳುವ ಗಾಡಿಯಲ್ಲಿ ಐಸ್ ಕ್ರೀಂ ಪಡೆದಿದ್ದರು. ಗ್ರಾಮದಲ್ಲಿ ಬೇರೆ ಮಕ್ಕಳು ಕೂಡ ಐಸ್ ಕ್ರೀಂ ‌ತಿಂದಿದ್ದರು. ಐಸ್ ಕ್ರೀಂ ತಿಂದ ಬೇರೆ ಯಾರಿಗೂ ತೊಂದರೆ ಆಗಿಲ್ಲ. ಆದರೆ ತ್ರಿಶುಲ್ ಹಾಗೂ ತ್ರಿಶ ಐಸ್​ ಕ್ರೀಂ ತಿಂದು ಸಾವನ್ನಪ್ಪಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ಸ್ಮೋಕ್ ಬಿಸ್ಕೆಟ್ ತಿನ್ನುತ್ತಿದ್ದಂತೆಯೇ ಬಾಲಕ ಅಸ್ವಸ್ಥ.. ಸ್ಮಾರ್ಟ್​ಫೋನ್​ನಲ್ಲಿ​ ಸೆರೆಯಾಯ್ತು ದಾವಣಗೆರೆಯ ಭಯಾನಕ ದೃಶ್ಯ

ಆದರೆ ಕಂದಮ್ಮಗಳ ಸಾವಿಗೆ ಇದುವರೆಗೂ ನೈಜ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ. ಮಿಮ್ಸ್ ಆಸ್ಪತ್ರೆಗೆ ಶವಗಳನ್ನು ರವಾನಿಸಲಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಲ್ಲಿ ಅವಳಿ ಮಕ್ಕಳು ನಿಗೂಢ ಸಾವು; ಐಸ್​ ​ಕ್ರೀಂ ತಿಂದ ಮೇಲೆ ಹೀಗಾಯಿತು ಎಂದ ತಾಯಿ

https://newsfirstlive.com/wp-content/uploads/2024/04/Ice-Cream-2.jpg

    ತಳ್ಳುವ ಗಾಡಿಯಲ್ಲಿ ಬಂದ ಐಸ್ ಕ್ರೀಂ ತಿಂದು ಮಕ್ಕಳು ಸಾವನ್ನಪ್ಪಿದರೇ?

    ಮಕ್ಕಳಿಗೆ ಮಧ್ಯಾಹ್ನ ತಾಯಿ ಐಸ್ ಕ್ರೀಂ ತಿನ್ನಿಸಿದ ಬಳಿಕ ಅಸ್ವಸ್ಥ

    ಗ್ರಾಮದಲ್ಲಿ ಬೇರೆ ಮಕ್ಕಳಿಗೆ ಏನಾಗಿದೆ? ಅನುಮಾನ ಹುಟ್ಟಿಸಿದೆ ಅವಳಿ ಮಕ್ಕಳ ಸಾವು

ಮಂಡ್ಯ: ಒಂದೂವರೆ ವರ್ಷದ ಅವಳಿ ಕಂದಮ್ಮಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಪೂಜಾ, ಪ್ರಸನ್ನ ದಂಪತಿಗಳ ಮಕ್ಕಳಾದ ತ್ರಿಶುಲ್ ಹಾಗೂ ತ್ರಿಶ ಸಾವನ್ನಪ್ಪಿದ ಕಂದಮ್ಮಗಳು.

ನಿನ್ನೆ ಮಧ್ಯಾಹ್ನ ನಡೆದಿರೋ ಘಟನೆ ಇದಾಗಿದೆ. ಮಕ್ಕಳಿಗೆ ಮಧ್ಯಾಹ್ನ ತಾಯಿ ಐಸ್ ಕ್ರೀಂ ತಿನ್ನಿಸಿದ್ದಾರೆ. ಆನಂತರ ಮಕ್ಕಳು ಅಸ್ವಸ್ಥಗೊಂಡಿದ್ದಾರೆಂದು ಆರೋಪಿಸಿದ್ದಾರೆ.

ತಳ್ಳುವ ಗಾಡಿಯಲ್ಲಿ ಐಸ್ ಕ್ರೀಂ ಪಡೆದಿದ್ದರು. ಗ್ರಾಮದಲ್ಲಿ ಬೇರೆ ಮಕ್ಕಳು ಕೂಡ ಐಸ್ ಕ್ರೀಂ ‌ತಿಂದಿದ್ದರು. ಐಸ್ ಕ್ರೀಂ ತಿಂದ ಬೇರೆ ಯಾರಿಗೂ ತೊಂದರೆ ಆಗಿಲ್ಲ. ಆದರೆ ತ್ರಿಶುಲ್ ಹಾಗೂ ತ್ರಿಶ ಐಸ್​ ಕ್ರೀಂ ತಿಂದು ಸಾವನ್ನಪ್ಪಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ಸ್ಮೋಕ್ ಬಿಸ್ಕೆಟ್ ತಿನ್ನುತ್ತಿದ್ದಂತೆಯೇ ಬಾಲಕ ಅಸ್ವಸ್ಥ.. ಸ್ಮಾರ್ಟ್​ಫೋನ್​ನಲ್ಲಿ​ ಸೆರೆಯಾಯ್ತು ದಾವಣಗೆರೆಯ ಭಯಾನಕ ದೃಶ್ಯ

ಆದರೆ ಕಂದಮ್ಮಗಳ ಸಾವಿಗೆ ಇದುವರೆಗೂ ನೈಜ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ. ಮಿಮ್ಸ್ ಆಸ್ಪತ್ರೆಗೆ ಶವಗಳನ್ನು ರವಾನಿಸಲಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More