8 ವರ್ಷಗಳಿಂದ ಕರ್ನಾಟಕಕ್ಕೆ ಟ್ರೋಫಿ ಬರ
ಕರ್ನಾಟಕಕ್ಕೆ ಕಾಡ್ತಿದ್ಯಾ ನಾಕೌಟ್ ಫೋಬಿಯಾ..?
ಸೆಲೆಕ್ಷನ್ ಕಮಿಟಿಯ ಮುಂದಿನ ನಡೆ ಏನು..?
ಈ ಸೀಸನ್ ರಣಜಿ ಟೂರ್ನಿಯಲ್ಲೂ ಕನ್ನಡಿಗರ ನಿರೀಕ್ಷೆ ಹುಸಿಯಾಗಿದೆ. ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕದ ಗೆಲುವಿಗೆ ಅನುಭವಿಗಳೇ ಅಡ್ಡಗಾಲು ಹಾಕಿದ್ರು. ಇದೀಗ ಆ ಸೋಲು ಅನುಭವಿಗಳಾದ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ ಭವಿಷ್ಯಕ್ಕೆ ಕುತ್ತು ತಂದಿದೆ.
ಕರ್ನಾಟಕದ ಅಸಂಖ್ಯ ಅಭಿಮಾನಿಗಳು ಕನಸು ಮತ್ತೆ ನುಚ್ಚು ನೂರಾಗಿದೆ. ಈ ಸೀಸನ್ನಲ್ಲಾದ್ರೂ ರಣಜಿ ಟ್ರೋಫಿ ನಮ್ದಾಗುತ್ತೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಗೆಲ್ಲೋ ಅವಕಾಶ ಕೊನೆಯ ದಿನದವರೆಗೂ ಇತ್ತು. ಕಳಪೆ ಆಟ ಸೋಲಿಗೆ ಗುರಿಮಾಡ್ತು.
ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿದ ಸೀನಿಯರ್ಸ್..!
ರಣಜಿ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ತಂಡಕ್ಕೆ ಕೊನೆ ದಿನವೂ ಕೂಡ ಗೆಲ್ಲೋ ಒಳ್ಳೇ ಚಾನ್ಸ್ ಇತ್ತು. ಆದ್ರೆ, ಸೋ ಕಾಲ್ಡ್ ಸೀನಿಯರ್ಸ್ ಬೇಜವಾಬ್ದಾರಿ ಬ್ಯಾಟಿಂಗ್ ತಂಡದ ಸೋಲಿಗೆ ಕಾರಣವಾಯ್ತು.
ಫಸ್ಟ್ ಇನ್ನಿಂಗ್ಸ್ನಲ್ಲಿ ಹಿನ್ನಡೆಯಾದ್ರೂ ಗೆಲುವಿಗೆ ಇತ್ತು ಚಾನ್ಸ್
ಫಸ್ಟ್ ಇನ್ನಿಂಗ್ಸ್ನಲ್ಲಿ ಯಡವಟ್ಟು ಮಾಡಿಕೊಂಡು ಅಲ್ಪ ಮೊತ್ತಕ್ಕೆ ಔಟಾಗಿದ್ದ ಕರ್ನಾಟಕ ತಂಡಕ್ಕೆ ಗೋಲ್ಡನ್ ಚಾನ್ಸ್ ಸಿಕಿತ್ತು. 371 ರನ್ಗಳ ಟಾರ್ಗೆಟ್ ಬೆನ್ನತ್ತಿದ ಕರ್ನಾಟಕ ಗುಡ್ ಸ್ಟಾರ್ಟ್ ಪಡೆದುಕೊಂಡಿತ್ತು. ಕೊನೆಯ ದಿನದಾಟದಲ್ಲಿ ಗೆಲ್ಲೋ ಭರವಸೆಯೂ ಹುಟ್ಟಿತ್ತು. ಆಗಲೇ ನೋಡಿ ಸೆಟಲ್ ಆಗಿದ್ದ ಕ್ಯಾಪ್ಟನ್ ಮಯಾಂಕ್ ಯಡವಟ್ಟು ಮಾಡಿದ್ದು. ಕೆಟ್ಟ ಹೊಡೆತಕ್ಕೆ ಕೈ ಹಾಕಿ ಔಟಾದ್ರು. ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದ್ದ ಮನೀಷ್ ಪಾಂಡೆ 1 ರನ್ಗಳಿಸಿ ಪೆವಿಲಿಯನ್ ಸೇರಿದ್ರು.
ವಿಕೆಟ್ ಗಿಫ್ಟ್ ಕೊಟ್ಟ ಮಯಾಂಕ್, ಮನೀಷ್
ಈ ಬಾರಿಯ ರಣಜಿ ಟೂರ್ನಿಯಲ್ಲಿ ಕ್ಯಾಪ್ಟನ್ ಮಯಾಂಕ್ ಅಗರ್ವಾರ್, ಮನೀಷ್ ಪಾಂಡೆ ಇಬ್ಬರೂ ಒಕೆ ಒಕೆ ಪರ್ಫಾಮೆನ್ಸ್ ನೀಡಿದ್ದಾರೆ. ಎಚ್ಚರಿಕೆಯಿಂದ ಆಡಬೇಕಾದ ಕ್ವಾರ್ಟರ್ ಫೈನಲ್ ಪಂದ್ಯದಲ್ಲೇ ಎಡವಿದ್ರು. ಅನುಭವಿಗಳಾಗಿ ಮುಂದೆ ನಿಂತು ತಂಡವನ್ನ ಲೀಡ್ ಮಾಡಬೇಕಾದವರು, ಔಟಾಗಿ ಪೆವಿಲಿಯನ್ ಸೇರಿದ್ರು. ನಾಕೌಟ್ ಸ್ಟೇಜ್ನಲ್ಲಿ ಇವರ ಕಳಪೆ ಆಟ ಕರ್ನಾಟಕದ ಸೋಲಿಗೆ ಪ್ರಮುಖ ಕಾರಣ ಆಯ್ತು.
ಅನುಭವಿಗಳು ಇದ್ರೂ ಮತ್ತೆ ಮತ್ತೆ ವೈಫಲ್ಯ..!
ಈ ಬಾರಿಯ ರಣಜಿ ಟೂರ್ನಿಯಲ್ಲಾಡಿದ ಕರ್ನಾಟಕ ತಂಡದಲ್ಲಿ ಒಳ್ಳೆ ಪ್ಲೇಯರ್ಸ್ ಇಲ್ಲ ಅಂತಿಲ್ಲ. ಟ್ಯಾಲೆಂಟೆಡ್ ಯುವಕರು ಮತ್ತು ಅನುಭವಿ ಆಟಗಾರರು ತಂಡದಲ್ಲಿದ್ರು. ಲೀಗ್ ಹಂತದಲ್ಲಿ ಒಂದು ಪಂದ್ಯ ಸೋತು. 3ರಲ್ಲಿ ಡ್ರಾ ಸಾಧಿಸಿ, 3 ಪಂದ್ಯ ಗೆದ್ದು ಕ್ವಾರ್ಟರ್ಫೈನಲ್ವರೆಗೂ ಬಂತು. ಆದ್ರೆ, ಕ್ವಾರ್ಟರ್ ಫೈನಲ್ನಲ್ಲಿ ವಿದರ್ಭ ವಿರುದ್ಧ ಇವ್ರ ಆಟ ಎಲ್ಲರ ತಲೆ ತಗ್ಗಿಸುವಂತೆ ಮಾಡಿದೆ.
ಕೊನೆಯ ರಣಜಿ ಟ್ರೋಫಿ ಗೆದ್ದಿದ್ದು 7 ಸೀಸನ್ಗಳ ಹಿಂದೆ..!
ಹೇಳಿಕೊಳ್ಳೋಕೆ ಕರ್ನಾಟಕ ರಣಜಿ ಟೂರ್ನಿಯ ಮೋಸ್ಟ್ ಸಕ್ಸಸ್ಫುಲ್ ತಂಡ. ಮುಂಬೈ ಬಿಟ್ರೆ ಕರ್ನಾಟಕವೇ ಹೆಚ್ಚು ಟ್ರೋಫಿ ಗೆದ್ದಿರೋದು. ಆದ್ರೆ, ಕಳೆದ 7 ಸೀಸನ್ಗಳಿಂದ ಕರ್ನಾಟಕದ ಟ್ರೋಫಿ ಗೆಲುವಿನ ಕಡೆ ಮುಖವೂ ಹಾಕಿಲ್ಲ. 2015ರಲ್ಲಿ ವಿನಯ್ ಕುಮಾರ್ ನಾಯಕತ್ವದಲ್ಲಿ ಟ್ರೋಫಿ ಗೆದ್ದಿದ್ದೇ ಕೊನೆ.! ವಿನಯ್ ಕುಮಾರ್ ಕೆಳಗಿಳಿದ ಬಳಿಕ ಕರ್ನಾಟಕ ತಂಡ ಟ್ರೋಫಿ ಲೆಸ್ ಆಗಿದೆ. ಮೊದಲು ಸೆಮಿಫೈನಲ್ ಫೋಬಿಯಾ ಇತ್ತು. ಈಗ ಕ್ವಾರ್ಟರ್ ಫೈನಲ್ ಫೋಬಿಯಾ ಶುರುವಾಗಿದೆ.
ಕರ್ನಾಟಕಕ್ಕೆ ನಾಕೌಟ್ ಫೋಬಿಯಾ..?
2016-17ನೇ ಸೀಸನ್ನಲ್ಲಿ ತಮಿಳುನಾಡು ಎದುರು ಕ್ವಾರ್ಟರ್ ಫೈನಲ್ನಲ್ಲಿ ಸೋಲುಂಡ ಕರ್ನಾಟಕ, 2017-18ರಲ್ಲಿ ವಿದರ್ಭ ಎದುರು ಸೆಮಿಫೈನಲ್ನಲ್ಲಿ ಮುಗ್ಗರಿಸಿತು. 2019-20ರಲ್ಲಿ ಬೆಂಗಾಲ್ ಎದುರು ಸೆಮಿಫೈನಲ್ನಲ್ಲಿ ಸೋಲುಂಡ ಕರ್ನಾಟಕ, 2022ರಲ್ಲಿ ಉತ್ತರ ಪ್ರದೇಶ ಎದುರು ಕ್ವಾರ್ಟರ್ ಫೈನಲ್ ಹಾಗೂ 2023ರಲ್ಲಿ ಸೌರಾಷ್ಟ್ರ ಎದುರು ಸೆಮಿಫೈನಲ್ನಲ್ಲಿ ಸೋಲು ಅನುಭವಿಸಿದೆ. ಈ ವರ್ಷ ವಿದರ್ಭ ಎದುರು ಕ್ವಾರ್ಟರ್ ಫೈನಲ್ನಲ್ಲಿ ಮುಗ್ಗರಿಸಿದೆ.
ಸೆಲೆಕ್ಷನ್ ಕಮಿಟಿಯ ಮುಂದಿನ ನಡೆ ಏನು..?
ಈ ಬಾರಿಯ ರಣಜಿ ಟೂರ್ನಿಗೆ ತಂಡದ ಆಯ್ಕೆ ಮಾಡಿದಾಗಲೇ ಜೆ.ಅಭಿರಾಮ್ ನೇತೃತ್ವದ ಕರ್ನಾಟಕ ಸೀನಿಯರ್ ಸೆಲೆಕ್ಷನ್ ಕಮಿಟಿ ಪ್ರಮುಖ ಬದಲಾವಣೆಯನ್ನ ಮಾಡಿತ್ತು. ಸೀನಿಯರ್ಸ್ಗೆ ಕೊಕ್ ಕೊಟ್ಟು, ಜೂನಿಯರ್ಸ್ ಮಣೆ ಹಾಕಿತ್ತು. ಇದೀಗ ಮತ್ತೊಂದು ಸೋಲು ಕಂಡಾಗಿದೆ. ಸೀನಿಯರ್ಸ್ಗಳ ಆಟವೂ ಇದಕ್ಕೆ ಕಾರಣವಾಗಿದೆ. ಹೀಗಾಗಿ ಈ ಹಿಂದೆ ಕೆ.ಗೌತಮ್, ಶ್ರೇಯಸ್ ಗೋಪಾಲ್, ಕರುಣ್ ನಾಯರ್ಗೆ ಎದುರಾದ ಪರಿಸ್ಥಿತಿ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆಗೂ ಎದುರಾಗುತ್ತಾ ಅನ್ನೋ ಪ್ರಶ್ನೆ ಹುಟ್ಟಿದೆ. ಸೆಲೆಕ್ಟರ್ಸ್ ಹಾರ್ಷ್ ಡಿಸಿಶನ್ ತೆಗೆದುಕೊಳ್ತಾರಾ ಅಥವಾ ಇವರನ್ನೆ ಮುಂದುವರೆಸ್ತಾರಾ.? ಕಾದು ನೋಡಬೇಕಿದೆ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
8 ವರ್ಷಗಳಿಂದ ಕರ್ನಾಟಕಕ್ಕೆ ಟ್ರೋಫಿ ಬರ
ಕರ್ನಾಟಕಕ್ಕೆ ಕಾಡ್ತಿದ್ಯಾ ನಾಕೌಟ್ ಫೋಬಿಯಾ..?
ಸೆಲೆಕ್ಷನ್ ಕಮಿಟಿಯ ಮುಂದಿನ ನಡೆ ಏನು..?
ಈ ಸೀಸನ್ ರಣಜಿ ಟೂರ್ನಿಯಲ್ಲೂ ಕನ್ನಡಿಗರ ನಿರೀಕ್ಷೆ ಹುಸಿಯಾಗಿದೆ. ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕದ ಗೆಲುವಿಗೆ ಅನುಭವಿಗಳೇ ಅಡ್ಡಗಾಲು ಹಾಕಿದ್ರು. ಇದೀಗ ಆ ಸೋಲು ಅನುಭವಿಗಳಾದ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ ಭವಿಷ್ಯಕ್ಕೆ ಕುತ್ತು ತಂದಿದೆ.
ಕರ್ನಾಟಕದ ಅಸಂಖ್ಯ ಅಭಿಮಾನಿಗಳು ಕನಸು ಮತ್ತೆ ನುಚ್ಚು ನೂರಾಗಿದೆ. ಈ ಸೀಸನ್ನಲ್ಲಾದ್ರೂ ರಣಜಿ ಟ್ರೋಫಿ ನಮ್ದಾಗುತ್ತೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಗೆಲ್ಲೋ ಅವಕಾಶ ಕೊನೆಯ ದಿನದವರೆಗೂ ಇತ್ತು. ಕಳಪೆ ಆಟ ಸೋಲಿಗೆ ಗುರಿಮಾಡ್ತು.
ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿದ ಸೀನಿಯರ್ಸ್..!
ರಣಜಿ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ತಂಡಕ್ಕೆ ಕೊನೆ ದಿನವೂ ಕೂಡ ಗೆಲ್ಲೋ ಒಳ್ಳೇ ಚಾನ್ಸ್ ಇತ್ತು. ಆದ್ರೆ, ಸೋ ಕಾಲ್ಡ್ ಸೀನಿಯರ್ಸ್ ಬೇಜವಾಬ್ದಾರಿ ಬ್ಯಾಟಿಂಗ್ ತಂಡದ ಸೋಲಿಗೆ ಕಾರಣವಾಯ್ತು.
ಫಸ್ಟ್ ಇನ್ನಿಂಗ್ಸ್ನಲ್ಲಿ ಹಿನ್ನಡೆಯಾದ್ರೂ ಗೆಲುವಿಗೆ ಇತ್ತು ಚಾನ್ಸ್
ಫಸ್ಟ್ ಇನ್ನಿಂಗ್ಸ್ನಲ್ಲಿ ಯಡವಟ್ಟು ಮಾಡಿಕೊಂಡು ಅಲ್ಪ ಮೊತ್ತಕ್ಕೆ ಔಟಾಗಿದ್ದ ಕರ್ನಾಟಕ ತಂಡಕ್ಕೆ ಗೋಲ್ಡನ್ ಚಾನ್ಸ್ ಸಿಕಿತ್ತು. 371 ರನ್ಗಳ ಟಾರ್ಗೆಟ್ ಬೆನ್ನತ್ತಿದ ಕರ್ನಾಟಕ ಗುಡ್ ಸ್ಟಾರ್ಟ್ ಪಡೆದುಕೊಂಡಿತ್ತು. ಕೊನೆಯ ದಿನದಾಟದಲ್ಲಿ ಗೆಲ್ಲೋ ಭರವಸೆಯೂ ಹುಟ್ಟಿತ್ತು. ಆಗಲೇ ನೋಡಿ ಸೆಟಲ್ ಆಗಿದ್ದ ಕ್ಯಾಪ್ಟನ್ ಮಯಾಂಕ್ ಯಡವಟ್ಟು ಮಾಡಿದ್ದು. ಕೆಟ್ಟ ಹೊಡೆತಕ್ಕೆ ಕೈ ಹಾಕಿ ಔಟಾದ್ರು. ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದ್ದ ಮನೀಷ್ ಪಾಂಡೆ 1 ರನ್ಗಳಿಸಿ ಪೆವಿಲಿಯನ್ ಸೇರಿದ್ರು.
ವಿಕೆಟ್ ಗಿಫ್ಟ್ ಕೊಟ್ಟ ಮಯಾಂಕ್, ಮನೀಷ್
ಈ ಬಾರಿಯ ರಣಜಿ ಟೂರ್ನಿಯಲ್ಲಿ ಕ್ಯಾಪ್ಟನ್ ಮಯಾಂಕ್ ಅಗರ್ವಾರ್, ಮನೀಷ್ ಪಾಂಡೆ ಇಬ್ಬರೂ ಒಕೆ ಒಕೆ ಪರ್ಫಾಮೆನ್ಸ್ ನೀಡಿದ್ದಾರೆ. ಎಚ್ಚರಿಕೆಯಿಂದ ಆಡಬೇಕಾದ ಕ್ವಾರ್ಟರ್ ಫೈನಲ್ ಪಂದ್ಯದಲ್ಲೇ ಎಡವಿದ್ರು. ಅನುಭವಿಗಳಾಗಿ ಮುಂದೆ ನಿಂತು ತಂಡವನ್ನ ಲೀಡ್ ಮಾಡಬೇಕಾದವರು, ಔಟಾಗಿ ಪೆವಿಲಿಯನ್ ಸೇರಿದ್ರು. ನಾಕೌಟ್ ಸ್ಟೇಜ್ನಲ್ಲಿ ಇವರ ಕಳಪೆ ಆಟ ಕರ್ನಾಟಕದ ಸೋಲಿಗೆ ಪ್ರಮುಖ ಕಾರಣ ಆಯ್ತು.
ಅನುಭವಿಗಳು ಇದ್ರೂ ಮತ್ತೆ ಮತ್ತೆ ವೈಫಲ್ಯ..!
ಈ ಬಾರಿಯ ರಣಜಿ ಟೂರ್ನಿಯಲ್ಲಾಡಿದ ಕರ್ನಾಟಕ ತಂಡದಲ್ಲಿ ಒಳ್ಳೆ ಪ್ಲೇಯರ್ಸ್ ಇಲ್ಲ ಅಂತಿಲ್ಲ. ಟ್ಯಾಲೆಂಟೆಡ್ ಯುವಕರು ಮತ್ತು ಅನುಭವಿ ಆಟಗಾರರು ತಂಡದಲ್ಲಿದ್ರು. ಲೀಗ್ ಹಂತದಲ್ಲಿ ಒಂದು ಪಂದ್ಯ ಸೋತು. 3ರಲ್ಲಿ ಡ್ರಾ ಸಾಧಿಸಿ, 3 ಪಂದ್ಯ ಗೆದ್ದು ಕ್ವಾರ್ಟರ್ಫೈನಲ್ವರೆಗೂ ಬಂತು. ಆದ್ರೆ, ಕ್ವಾರ್ಟರ್ ಫೈನಲ್ನಲ್ಲಿ ವಿದರ್ಭ ವಿರುದ್ಧ ಇವ್ರ ಆಟ ಎಲ್ಲರ ತಲೆ ತಗ್ಗಿಸುವಂತೆ ಮಾಡಿದೆ.
ಕೊನೆಯ ರಣಜಿ ಟ್ರೋಫಿ ಗೆದ್ದಿದ್ದು 7 ಸೀಸನ್ಗಳ ಹಿಂದೆ..!
ಹೇಳಿಕೊಳ್ಳೋಕೆ ಕರ್ನಾಟಕ ರಣಜಿ ಟೂರ್ನಿಯ ಮೋಸ್ಟ್ ಸಕ್ಸಸ್ಫುಲ್ ತಂಡ. ಮುಂಬೈ ಬಿಟ್ರೆ ಕರ್ನಾಟಕವೇ ಹೆಚ್ಚು ಟ್ರೋಫಿ ಗೆದ್ದಿರೋದು. ಆದ್ರೆ, ಕಳೆದ 7 ಸೀಸನ್ಗಳಿಂದ ಕರ್ನಾಟಕದ ಟ್ರೋಫಿ ಗೆಲುವಿನ ಕಡೆ ಮುಖವೂ ಹಾಕಿಲ್ಲ. 2015ರಲ್ಲಿ ವಿನಯ್ ಕುಮಾರ್ ನಾಯಕತ್ವದಲ್ಲಿ ಟ್ರೋಫಿ ಗೆದ್ದಿದ್ದೇ ಕೊನೆ.! ವಿನಯ್ ಕುಮಾರ್ ಕೆಳಗಿಳಿದ ಬಳಿಕ ಕರ್ನಾಟಕ ತಂಡ ಟ್ರೋಫಿ ಲೆಸ್ ಆಗಿದೆ. ಮೊದಲು ಸೆಮಿಫೈನಲ್ ಫೋಬಿಯಾ ಇತ್ತು. ಈಗ ಕ್ವಾರ್ಟರ್ ಫೈನಲ್ ಫೋಬಿಯಾ ಶುರುವಾಗಿದೆ.
ಕರ್ನಾಟಕಕ್ಕೆ ನಾಕೌಟ್ ಫೋಬಿಯಾ..?
2016-17ನೇ ಸೀಸನ್ನಲ್ಲಿ ತಮಿಳುನಾಡು ಎದುರು ಕ್ವಾರ್ಟರ್ ಫೈನಲ್ನಲ್ಲಿ ಸೋಲುಂಡ ಕರ್ನಾಟಕ, 2017-18ರಲ್ಲಿ ವಿದರ್ಭ ಎದುರು ಸೆಮಿಫೈನಲ್ನಲ್ಲಿ ಮುಗ್ಗರಿಸಿತು. 2019-20ರಲ್ಲಿ ಬೆಂಗಾಲ್ ಎದುರು ಸೆಮಿಫೈನಲ್ನಲ್ಲಿ ಸೋಲುಂಡ ಕರ್ನಾಟಕ, 2022ರಲ್ಲಿ ಉತ್ತರ ಪ್ರದೇಶ ಎದುರು ಕ್ವಾರ್ಟರ್ ಫೈನಲ್ ಹಾಗೂ 2023ರಲ್ಲಿ ಸೌರಾಷ್ಟ್ರ ಎದುರು ಸೆಮಿಫೈನಲ್ನಲ್ಲಿ ಸೋಲು ಅನುಭವಿಸಿದೆ. ಈ ವರ್ಷ ವಿದರ್ಭ ಎದುರು ಕ್ವಾರ್ಟರ್ ಫೈನಲ್ನಲ್ಲಿ ಮುಗ್ಗರಿಸಿದೆ.
ಸೆಲೆಕ್ಷನ್ ಕಮಿಟಿಯ ಮುಂದಿನ ನಡೆ ಏನು..?
ಈ ಬಾರಿಯ ರಣಜಿ ಟೂರ್ನಿಗೆ ತಂಡದ ಆಯ್ಕೆ ಮಾಡಿದಾಗಲೇ ಜೆ.ಅಭಿರಾಮ್ ನೇತೃತ್ವದ ಕರ್ನಾಟಕ ಸೀನಿಯರ್ ಸೆಲೆಕ್ಷನ್ ಕಮಿಟಿ ಪ್ರಮುಖ ಬದಲಾವಣೆಯನ್ನ ಮಾಡಿತ್ತು. ಸೀನಿಯರ್ಸ್ಗೆ ಕೊಕ್ ಕೊಟ್ಟು, ಜೂನಿಯರ್ಸ್ ಮಣೆ ಹಾಕಿತ್ತು. ಇದೀಗ ಮತ್ತೊಂದು ಸೋಲು ಕಂಡಾಗಿದೆ. ಸೀನಿಯರ್ಸ್ಗಳ ಆಟವೂ ಇದಕ್ಕೆ ಕಾರಣವಾಗಿದೆ. ಹೀಗಾಗಿ ಈ ಹಿಂದೆ ಕೆ.ಗೌತಮ್, ಶ್ರೇಯಸ್ ಗೋಪಾಲ್, ಕರುಣ್ ನಾಯರ್ಗೆ ಎದುರಾದ ಪರಿಸ್ಥಿತಿ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆಗೂ ಎದುರಾಗುತ್ತಾ ಅನ್ನೋ ಪ್ರಶ್ನೆ ಹುಟ್ಟಿದೆ. ಸೆಲೆಕ್ಟರ್ಸ್ ಹಾರ್ಷ್ ಡಿಸಿಶನ್ ತೆಗೆದುಕೊಳ್ತಾರಾ ಅಥವಾ ಇವರನ್ನೆ ಮುಂದುವರೆಸ್ತಾರಾ.? ಕಾದು ನೋಡಬೇಕಿದೆ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್