ಈಗಲೂ ಸಹ ಆ ಬಗ್ಗೆ ಮಾಜಿ ಪ್ಲೇಯರ್ ಗಂಭೀರ್ ಕೊರಗ್ತಾರಾ?
ನಿಸ್ವಾರ್ಥದ ಆಟ, ತಂಡ ಗೆಲ್ಲಬೇಕು ಎನ್ನುವುದೇ ಇವರ ಧ್ಯೇಯ
ಸ್ವಾರ್ಥಕ್ಕಾಗಿ ಕನ್ನಡಿಗನನ್ನ ಮುಂದೆ ಬಿಟ್ಟಿದ್ದ ಗೌತಮ್ ಗಂಭೀರ್
ಟೀಮ್ ಇಂಡಿಯಾದ ಹಾಲಿ ಕೋಚ್, ಮಾಜಿ ಪ್ಲೇಯರ್ ಗೌತಮ್ ಗಂಭೀರ್, ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತಿ. ಆದ್ರೆ, ಮಿಸ್ಟರ್ ಪರ್ಫೆಕ್ಟ್ ಹಿಂದೊಮ್ಮೆ ತನ್ನ ಸ್ವಾರ್ಥ ಸಾಧನೆಗಾಗಿ ಒಂದು ದೊಡ್ಡ ತಪ್ಪು ಮಾಡಿದ್ರು. ಈಗಲೂ ಸಹ ಆ ಬಗ್ಗೆ ಗಂಭೀರ್ ಕೊರಗ್ತಾರಂತೆ. ಅಷ್ಟಕ್ಕೂ ಗಂಭೀರ್ಗಿರೋ ಆ ಕೊರಗೇನು?.
ಇದನ್ನೂ ಓದಿ: ಮಫ್ಲರ್ನಿಂದ ನೇಣು ಬಿಗಿದುಕೊಂಡು SSLC ವಿದ್ಯಾರ್ಥಿ ಆತ್ಮ*ತ್ಯೆ.. ಬಾಲಕನ ಸಾವಿಗೆ ಅಸಲಿ ಕಾರಣ?
ಟೀಮ್ ಇಂಡಿಯಾ ಕೋಚ್ ಪಟ್ಟವೇರಿರೋ ಗೌತಮ್ ಗಂಭೀರ್, ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್ಮನ್ ಕೂಡ ಹೌದು. ಟೀಮ್ ಇಂಡಿಯಾ ಪರ ಇರಲಿ ಅಥವಾ ಐಪಿಎಲ್ ಇರಲಿ, ಎಂತದ್ದೇ ಸನ್ನಿವೇಶವಿರಲಿ, ಕೆಚ್ಚೆದೆಯ ಹೋರಾಟ ನಡೆಸ್ತಿದ್ದ ಪಂಟರ್. ಸಂಕಷ್ಟ ಬಂದಾಗ ಬೆನ್ನು ತೋರಿಸೋ ಜಾಯಮಾನ ಗೌತಿಯದ್ದಲ್ಲ. ಸ್ವಾರ್ಥ ಅನ್ನೋದೇ ಇಲ್ಲ.. ನಿಸ್ವಾರ್ಥ ಆಟ, ತಂಡ ಗೆಲ್ಲಬೇಕು ಅನ್ನೋದೊಂದೆ ಧ್ಯೇಯ. ಹೀಗಾಗಿಯೇ ವಿಶ್ವ ಕ್ರಿಕೆಟ್ನಲ್ಲಿ ಟ್ರೂ ಫೈಟರ್ ಎಂಬ ಪಟ್ಟವನ್ನ ಗಂಭೀರ್ ಸಂಪಾದಿಸಿದ್ದಾರೆ. ಇಂತಾ ಗಂಭೀರ್ ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಸ್ಥಾನ ಉಳಿಸಿಕೊಳ್ಳಲು ಹಿಂದೊಮ್ಮೆ ಕನ್ನಡಿಗನನ್ನ ಮುಂದೆ ಬಿಟ್ಟು ಹಿಂದೆ ಅಡಗಿದ್ರು.
ಇದನ್ನೂ ಓದಿ: ಮಹಿಳೆಯರನ್ನ ಜೀವಂತ ಸಮಾಧಿ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು.. ಭಯಾನಕ ಘಟನೆ!
ಅದು 2014ರ ಐಪಿಎಲ್ ಟೂರ್ನಿ. ಆ ಐಪಿಎಲ್ನಲ್ಲಿ ಕೆಕೆಆರ್ ನಾಯಕನಾಗಿದ್ದ, ಗೌತಮ್ ಗಂಭೀರ್ ಆರಂಭಿಕ 3 ಪಂದ್ಯಗಳಲ್ಲಿ ಡಕೌಟ್ ಆಗಿದ್ರು. ಈ ವೈಫಲ್ಯದ ಪರಿಣಾಮ ತೀವ್ರ ಟೀಕೆಗೆ ಗುರಿಯಾಗಿದ್ರು. ಸತತ ಟೀಕೆಗಳನ್ನ ಎದುರಿಸಿದ ಗಂಭೀರ್, ಮುಂದಿನ ಪಂದ್ಯದಲ್ಲಿ ಮನೀಷ್ ಪಾಂಡೆಯನ್ನ ಆರಂಭಿಕನಾಗಿ ಕಳಿಸಿ 3ನೇ ಕ್ರಮಾಂಕದಲ್ಲಿ ಆಡಿದ್ರು. ಆಗಲೂ ಗಂಭೀರ್ ಗಳಿಸಿದ್ದು ಕೇವಲ 1 ರನ್ ಮಾತ್ರ. ಅದು ನನ್ನ ಕರಿಯರ್ನಲ್ಲಿ ನಾನು ಮಾಡಿದ ದೊಡ್ಡ ತಪ್ಪು ಎಂದು ಗಂಭೀರ್ ಈಗ ಹೇಳಿಕೊಂಡಿದ್ದಾರೆ. ಅಂದು ನನ್ನ ಸ್ಥಾನವನ್ನ ಸೇಫ್ ಮಾಡಿಕೊಳ್ಳಲು ಮನೀಷ್ ಪಾಂಡೆಯನ್ನ ನಾನು ಬ್ಯಾಟಿಂಗ್ ಕಳಿಸಿದೆ. ನಾಯಕನಾಗಿ ಯುದ್ಧದಲ್ಲಿ ಎಂದಿಗೂ ನಾನು ಮುಂದೆ ನಿಲ್ಲಬೇಕು. ಆದ್ರೆ, ಮನೀಷ್ ಪಾಂಡೆಯನ್ನ ಮುಂದೆ ಬಿಟ್ಟು ಹಿಂದೆ ಉಳಿದಿದ್ದು, ನಾಯಕನಾಗಿ ನಾನು ಮಾಡಿದ ದೊಡ್ಡ ತಪ್ಪು ಎಂದು ಇದೀಗ ಗಂಭೀರ್ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಈಗಲೂ ಸಹ ಆ ಬಗ್ಗೆ ಮಾಜಿ ಪ್ಲೇಯರ್ ಗಂಭೀರ್ ಕೊರಗ್ತಾರಾ?
ನಿಸ್ವಾರ್ಥದ ಆಟ, ತಂಡ ಗೆಲ್ಲಬೇಕು ಎನ್ನುವುದೇ ಇವರ ಧ್ಯೇಯ
ಸ್ವಾರ್ಥಕ್ಕಾಗಿ ಕನ್ನಡಿಗನನ್ನ ಮುಂದೆ ಬಿಟ್ಟಿದ್ದ ಗೌತಮ್ ಗಂಭೀರ್
ಟೀಮ್ ಇಂಡಿಯಾದ ಹಾಲಿ ಕೋಚ್, ಮಾಜಿ ಪ್ಲೇಯರ್ ಗೌತಮ್ ಗಂಭೀರ್, ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತಿ. ಆದ್ರೆ, ಮಿಸ್ಟರ್ ಪರ್ಫೆಕ್ಟ್ ಹಿಂದೊಮ್ಮೆ ತನ್ನ ಸ್ವಾರ್ಥ ಸಾಧನೆಗಾಗಿ ಒಂದು ದೊಡ್ಡ ತಪ್ಪು ಮಾಡಿದ್ರು. ಈಗಲೂ ಸಹ ಆ ಬಗ್ಗೆ ಗಂಭೀರ್ ಕೊರಗ್ತಾರಂತೆ. ಅಷ್ಟಕ್ಕೂ ಗಂಭೀರ್ಗಿರೋ ಆ ಕೊರಗೇನು?.
ಇದನ್ನೂ ಓದಿ: ಮಫ್ಲರ್ನಿಂದ ನೇಣು ಬಿಗಿದುಕೊಂಡು SSLC ವಿದ್ಯಾರ್ಥಿ ಆತ್ಮ*ತ್ಯೆ.. ಬಾಲಕನ ಸಾವಿಗೆ ಅಸಲಿ ಕಾರಣ?
ಟೀಮ್ ಇಂಡಿಯಾ ಕೋಚ್ ಪಟ್ಟವೇರಿರೋ ಗೌತಮ್ ಗಂಭೀರ್, ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್ಮನ್ ಕೂಡ ಹೌದು. ಟೀಮ್ ಇಂಡಿಯಾ ಪರ ಇರಲಿ ಅಥವಾ ಐಪಿಎಲ್ ಇರಲಿ, ಎಂತದ್ದೇ ಸನ್ನಿವೇಶವಿರಲಿ, ಕೆಚ್ಚೆದೆಯ ಹೋರಾಟ ನಡೆಸ್ತಿದ್ದ ಪಂಟರ್. ಸಂಕಷ್ಟ ಬಂದಾಗ ಬೆನ್ನು ತೋರಿಸೋ ಜಾಯಮಾನ ಗೌತಿಯದ್ದಲ್ಲ. ಸ್ವಾರ್ಥ ಅನ್ನೋದೇ ಇಲ್ಲ.. ನಿಸ್ವಾರ್ಥ ಆಟ, ತಂಡ ಗೆಲ್ಲಬೇಕು ಅನ್ನೋದೊಂದೆ ಧ್ಯೇಯ. ಹೀಗಾಗಿಯೇ ವಿಶ್ವ ಕ್ರಿಕೆಟ್ನಲ್ಲಿ ಟ್ರೂ ಫೈಟರ್ ಎಂಬ ಪಟ್ಟವನ್ನ ಗಂಭೀರ್ ಸಂಪಾದಿಸಿದ್ದಾರೆ. ಇಂತಾ ಗಂಭೀರ್ ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಸ್ಥಾನ ಉಳಿಸಿಕೊಳ್ಳಲು ಹಿಂದೊಮ್ಮೆ ಕನ್ನಡಿಗನನ್ನ ಮುಂದೆ ಬಿಟ್ಟು ಹಿಂದೆ ಅಡಗಿದ್ರು.
ಇದನ್ನೂ ಓದಿ: ಮಹಿಳೆಯರನ್ನ ಜೀವಂತ ಸಮಾಧಿ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು.. ಭಯಾನಕ ಘಟನೆ!
ಅದು 2014ರ ಐಪಿಎಲ್ ಟೂರ್ನಿ. ಆ ಐಪಿಎಲ್ನಲ್ಲಿ ಕೆಕೆಆರ್ ನಾಯಕನಾಗಿದ್ದ, ಗೌತಮ್ ಗಂಭೀರ್ ಆರಂಭಿಕ 3 ಪಂದ್ಯಗಳಲ್ಲಿ ಡಕೌಟ್ ಆಗಿದ್ರು. ಈ ವೈಫಲ್ಯದ ಪರಿಣಾಮ ತೀವ್ರ ಟೀಕೆಗೆ ಗುರಿಯಾಗಿದ್ರು. ಸತತ ಟೀಕೆಗಳನ್ನ ಎದುರಿಸಿದ ಗಂಭೀರ್, ಮುಂದಿನ ಪಂದ್ಯದಲ್ಲಿ ಮನೀಷ್ ಪಾಂಡೆಯನ್ನ ಆರಂಭಿಕನಾಗಿ ಕಳಿಸಿ 3ನೇ ಕ್ರಮಾಂಕದಲ್ಲಿ ಆಡಿದ್ರು. ಆಗಲೂ ಗಂಭೀರ್ ಗಳಿಸಿದ್ದು ಕೇವಲ 1 ರನ್ ಮಾತ್ರ. ಅದು ನನ್ನ ಕರಿಯರ್ನಲ್ಲಿ ನಾನು ಮಾಡಿದ ದೊಡ್ಡ ತಪ್ಪು ಎಂದು ಗಂಭೀರ್ ಈಗ ಹೇಳಿಕೊಂಡಿದ್ದಾರೆ. ಅಂದು ನನ್ನ ಸ್ಥಾನವನ್ನ ಸೇಫ್ ಮಾಡಿಕೊಳ್ಳಲು ಮನೀಷ್ ಪಾಂಡೆಯನ್ನ ನಾನು ಬ್ಯಾಟಿಂಗ್ ಕಳಿಸಿದೆ. ನಾಯಕನಾಗಿ ಯುದ್ಧದಲ್ಲಿ ಎಂದಿಗೂ ನಾನು ಮುಂದೆ ನಿಲ್ಲಬೇಕು. ಆದ್ರೆ, ಮನೀಷ್ ಪಾಂಡೆಯನ್ನ ಮುಂದೆ ಬಿಟ್ಟು ಹಿಂದೆ ಉಳಿದಿದ್ದು, ನಾಯಕನಾಗಿ ನಾನು ಮಾಡಿದ ದೊಡ್ಡ ತಪ್ಪು ಎಂದು ಇದೀಗ ಗಂಭೀರ್ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ