Advertisment

ಕೊನೆಗೂ ಮನು ಭಾಕರ್‌ಗೆ ಅತ್ಯುನ್ನತ ಗೌರವ; ಗುಕೇಶ್​ ಸೇರಿ ನಾಲ್ವರಿಗೆ ಖೇಲ್ ​ರತ್ನ ಪ್ರಶಸ್ತಿ ಘೋಷಣೆ

author-image
Gopal Kulkarni
Updated On
ಕೊನೆಗೂ ಮನು ಭಾಕರ್‌ಗೆ ಅತ್ಯುನ್ನತ ಗೌರವ; ಗುಕೇಶ್​ ಸೇರಿ ನಾಲ್ವರಿಗೆ ಖೇಲ್ ​ರತ್ನ ಪ್ರಶಸ್ತಿ ಘೋಷಣೆ
Advertisment
  • ಈ ವರ್ಷ ನಾಲ್ವರು ಕ್ರೀಡಾಪಟುಗಳಿಗೆ ಒಲಿದು ಬಂದ ಖೇಲ್​ರತ್ನ ಪ್ರಶಸ್ತಿ
  • ಮನು ಭಾಕರ್​, ಡಾ.ಗುಕೇಶ್​ ಸೇರಿ ಒಟ್ಟು ನಾಲ್ವರ ಹೆಸರು ಘೋಷಣೆ!
  • ಜ. 17 ರಂದು ಪ್ರಶಸ್ತಿ ಪ್ರದಾನ ಮಾಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು

ಡಬಲ್ ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ ಹಾಗೂ ವಿಶ್ವ ಚೆಸ್ ಚಾಂಪಿಯನ್​ಶಿಪ್​ ವಿಜೇತ ಡಾ ಗುಕೇಶ್​ ಜೊತೆ ಒಟ್ಟು ನಾಲ್ಕು ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ ಖೇಲ್ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಮಾಡಿದೆ. ಜನವರಿ 17 ರಂದು ಈ ನಾಲ್ವರು ಕ್ರೀಡಾಪಟುಗಳೀಗೆ ಮೇಜರ್ ಧ್ಯಾನ್​ ಚಂದ್ ಖೇಲ್​ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.

Advertisment

ಮನು ಭಾಕರ್​ ಹಾಗೂ ಗುಕೇಶ್​ ಜೊತೆ ಭಾರತೀಯ ಪುರುಷರ ಹಾಕಿ ಟೀಂನ ನಾಯಕ ಹರ್ಮನ್​ಪ್ರೀತ್ ಸಿಂಗ್ ಹಾಗೂ ಪ್ಯಾರಾ ಒಲಿಂಪಿಯನ್ ಪ್ರವೀಣ್ ಕುಮಾರ್​ಗೂ ಕೂಡ ಈ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಟೀಮ್​ ಇಂಡಿಯಾದಲ್ಲಿ ಈಗಲೂ ನಡೆಯೋದು ಕೊಹ್ಲಿ ಮಾತೇ; ವಿರಾಟ್​​ ಕಂಡ್ರೆ ಬಿಸಿಸಿಐಗೆ ಭಯ ಏಕೆ?

ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆ ಹೇಳುವ ಪ್ರಕಾರ ಮನು ಭಾಕರ್​ ಅವರ ಹೆಸರು ಈ ಬಾರಿಯ ಖೇಲ್​ರತ್ನ ಪ್ರಶಸ್ತಿಯ ಪಟ್ಟಿಯಲ್ಲಿ ಆರಂಭದಲ್ಲಿ ಮಿಸ್ ಆಗಿತ್ತು. ಕೊನೆಗೆ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆಯಂತೆ. ಜನವರಿ 17 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ.
ಕ್ರೀಡಾ ಸಮಿತಿಯ ಶಿಫಾರಸ್ಸು ಹಾಗೂ ಹಲವು ಪರಿಶೀಲನೆಗಳನ್ನು ನಡೆಸಿದ ಬಳಿಕ ಈ ನಾಲ್ವರಿಗೆ ಈ ವರ್ಷದ ಖೇಲ್​ರತ್ನ ಪ್ರಶಸ್ತಿಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment