/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ನಿರ್ಧಾರ ಮಾಡಿದ ಕೆಲಸಗಳನ್ನು ಮತ್ತೆ ಪರಿಶೀಲಿಸಿ
- ಬೆಳಗಿನ ಸಮಯ ಚೆನ್ನಾಗಿರಲಿದೆ
- ವ್ಯಾವಹಾರಿಕ ಲಾಭವಿದೆ ಮೋಸ ಹೋಗಬಹುದು
- ಸಮಾಜಮುಖಿ ಕೆಲಸದಲ್ಲಿ ಗೌರವ ಸಿಗಲಿದೆ
- ಜಾಣ್ಮೆಯಿಂದ ವರ್ತಿಸಿ ಯಶಸ್ಸಿದೆ
- ಕುಟುಂಬದವರನ್ನು ಎಲ್ಲಾ ರೀತಿಯಿಂದ ಕಾಪಾಡಬೇಕಾಗಲಿದೆ
- ಕುಲದೇವತಾ ಪ್ರಾರ್ಥನೆ ಮಾಡಿ
ವೃಷಭ
- ಆಸ್ತಿಯ ವಿಚಾರದಲ್ಲಿ ಅನುಕೂಲವಾಗಬಹುದು
- ಮಕ್ಕಳ ಪ್ರಗತಿಯಿಂದ ಉತ್ಸುಕರಾಗಿರುತ್ತೀರಿ
- ವಿದ್ಯಾರ್ಥಿಗಳಿಗೆ ಶುಭವಿದೆ
- ಪ್ರೇಮಿಗಳಿಗೆ ಕೆಲವು ಸವಾಲುಗಳು ಕಾಣಬಹುದು
- ಸ್ನೇಹಿತರು ಬೆಂಬಲ ನೀಡದೆ ನಿರಾಸೆಯಾಗಬಹುದು
- ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಹಿನ್ನಡೆಯಾಗಲಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಕಾನೂನಿನ ವಿಚಾರದಲ್ಲಿ ವ್ಯತ್ಯಾಸದ ಸಂಭವ
- ಬೇರೆಯವರು ಮೋಸ ಮಾಡಬಹುದು ಎಚ್ಚರಿಕೆವಹಿಸಿ
- ಮನೆಯ ವಾತಾವರಣ ಉತ್ತಮವಾಗಿರಲಿದೆ
- ನಿಮ್ಮ ನಡುವಳಿಕೆಯಿಂದ ಜನರು ಕೋಪಗೊಳ್ಳಬಹುದು
- ವಿದ್ಯಾರ್ಥಿಗಳಿಗೆ ಗೊಂದಲದ ದಿನ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕಟಕ
- ಕೆಲಸದ ಸ್ಥಳದಲ್ಲಿ ಹೊಸಬರ ಪರಿಚಯವಾಗುವುದರಿಂದ ಅನುಕೂಲವಿದೆ
- ಮಕ್ಕಳ ಜೊತೆ ಉತ್ತಮ ಬಾಂಧವ್ಯವಿರಲಿದೆ
- ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯಬಹುದು
- ನಿಮ್ಮೆಲ್ಲ ಕೆಲಸಗಳು ಸಮಯಕ್ಕೆ ಸರಿಯಾಗಬಹುದು
- ಆರೋಗ್ಯ ಸಮಸ್ಯೆಗೆ ಪರಿಹಾರವಿದೆ
- ವ್ಯಾಪಾರ ವ್ಯವಹಾರದಲ್ಲಿ ಅನುಕೂಲವಿದೆ
- ದುರ್ಗಾರಾಧನೆ ಮಾಡಿ
ಸಿಂಹ
- ಮನೆಯ ವಿಚಾರಕ್ಕೆ ಸಮಯ ನೀಡಿ
- ವೈಯಕ್ತಿಕ ಚಿಂತನೆಗಳಿಗೆ ಅವಕಾಶವಿದೆ
- ದೇಹಶ್ರಮ ಮಾಡಿಕೊಳ್ಳಬೇಡಿ
- ಉನ್ನತ ಶಿಕ್ಷಣ ವಿಚಾರ ಚರ್ಚೆಯಾಗಬಹುದು
- ದಿನ ಆರಂಭ ಚೆನ್ನಾಗಿದ್ದರೂ ಸೋಮಾರಿತನ ಕಾಡಬಹುದು
- ಹಳೆಯ ಸ್ನೇಹಿತರ ಜೊತೆ ವಿವಾದ ಬೇಸರವಾಗಬಹುದು
- ಆಂಜನೇಯ ಆಜಾಡ್ಯನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ವಿಚಾರ ಸಂಗ್ರಹದ ಕೊರತೆಯಿಂದ ಸಮಸ್ಯೆಯಾಗಬಹುದು
- ಧನಾತ್ಮಕವಾಗಿ ಚಿಂತಿಸಿ ನಿರ್ಧರಿಸಿ
- ವೈವಾಹಿಕ ಜೀವನದಲ್ಲಿ ಅತೃಪ್ತಿಯ ಭಾವ
- ನಿರುದ್ಯೋಗಿಗಳ ಶ್ರಮಕ್ಕೆ ಬೆಲೆ ಕಡಿಮೆ
- ನಿಮ್ಮ ಕೆಲಸದಲ್ಲಿ ನಂಬಿಕೆ ಕಳೆದುಕೊಳ್ಳಬೇಡಿ
- ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಲಿದೆ
- ಪಾರ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಆಸ್ತಿಯ ವಿಚಾರದಲ್ಲಿ ಉತ್ತಮ ವಾರ್ತೆ ಸಿಗಲಿದೆ
- ದುರಾಸೆಗೆ ಒಪ್ಪದ ಮನಸ್ಸು ಗಟ್ಟಿಯಾಗಬೇಕು
- ತುಂಬಾ ಪರಿಶ್ರಮವಿದೆ ಅನುಕೂಲವಿದೆ
- ಅನಗತ್ಯ ವಿಚಾರಗಳು ಮುನ್ನಲೆಗೆ ಬರಲಿದೆ
- ವೃತ್ತಿಯಲ್ಲಿ ನಿರೀಕ್ಷಿಸಿದ ಲಾಭವಿಲ್ಲ
- ಕುಟುಂಬದ ಖರ್ಚು ಅಧಿಕವಾಗಬಹುದು
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ವೃಶ್ಚಿಕ
- ವ್ಯವಹಾರದಲ್ಲಿ ಬದಲಾವಣೆಗೆ ಶುಭವಿದೆ
- ವಿವಾಹಿತರ ಸಮಸ್ಯೆ ಹೆಚ್ಚಾಗಬಹುದು
- ವಿವಾದಗಳನ್ನು ಮಾತಿನಿಂದಲೇ ಬಗೆಹರಿಸಿಕೊಳ್ಳಿ
- ಮನೆಯ ವಾತಾವರಣ ಚೆನ್ನಾಗಿರಲಿದೆ
- ಸಂತೋಷ ಮತ್ತು ಉತ್ಸಾಹಕ್ಕೆ ಅವಕಾಶವಿದೆ
- ಋಣಾತ್ಮಕ ಆಲೋಚನೆಗಳನ್ನು ದೂರ ಮಾಡಿ
- ಲಕ್ಷ್ಮಿನಾರಾಯಣ ಸ್ತೋತ್ರ ಪಠಿಸಿ
ಧನಸ್ಸು
- ವ್ಯಕ್ತಿತ್ವ ವಿಕಸನದ ಬಗ್ಗೆ ಚಿಂತಿಸಿ
- ವ್ಯಾಪಾರದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಬೇಕು
- ಆತುರದ ನಿರ್ಧಾರ ತೊಂದರೆಗೆ ಕಾರಣ
- ಏಕಪಕ್ಷೀಯ ಮಾತುಗಾರರನ್ನು ನಂಬಬೇಡಿ
- ತಾಳ್ಮೆಯಿಂದ ವರ್ತಿಸಿ ಶುಭವಿದೆ
- ಅನಗತ್ಯ ಗೊಂದಲಗಳಿಗೆ ಅವಕಾಶ ಬೇಡ
- ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ಮಕರ
- ಇಂದು ಹೊಸ ಕೆಲಸಗಳ ಆರಂಭ ಬೇಡ
- ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಡೆತಡೆಗಳು ಬೇಡ
- ಪ್ರೀತಿ ಪ್ರೇಮಿಗಳ ವಿಚಾರದಲ್ಲಿ ಎಚ್ಚರಿಕೆವಹಿಸಿ
- ಕಚೇರಿ ಅಥವಾ ವೃತ್ತಿಯಲ್ಲಿ ಜನ ಹೊಗಳುತ್ತಾರೆ
- ಬೇರೆಯವರ ಮಾತಿಗೆ ಮರುಳಾಗಬೇಡಿ
- ವಾಹನದಿಂದ ತೊಂದರೆಯಾಗಬಹುದು
- ದುರ್ಗಾ ಆರಾಧನೆ ಮಾಡಿ
ಕುಂಭ
- ಸ್ಥಗಿತಗೊಂಡ ಕೆಲಸವಿದ್ದರೆ ಪುನರಾರಂಭಿಸಿ
- ಕೆಲಸದ ಗುಣಮಟ್ಟ ಕಾಪಾಡಿಕೊಳ್ಳಿ
- ಸುಖ ದುಃಖಗಳನ್ನು ಮನೆಯಲ್ಲಿ ಹಂಚಿಕೊಳ್ಳಬಹುದು
- ಆಲಸ್ಯದಿಂದ ವಂಚಿತರಾಗುವ ಸಾಧ್ಯತೆ ಇರಲಿದೆ
- ವೃತ್ತಿ ಜೀವನ ಚೆನ್ನಾಗಿದ್ದರೂ ಆಸಕ್ತಿಯಿಲ್ಲ
- ಉನ್ನತ ಅಧಿಕಾರಿಗಳ ಜೊತೆ ವಿವಾದ ಬೇಡ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನ
- ಹಳೆಯ ಸ್ನೇಹಿತರು ಸಹಾಯ ಮಾಡಬಹುದು
- ಕಾನೂನು ಹೋರಾಟದಲ್ಲಿ ಅಪಜಯವಾಗಬಹುದು
- ವೈವಾಹಿಕ ಜೀವನದಲ್ಲಿ ತುಂಬಾ ಗೊಂದಲಗಳಿರಬಹುದು
- ಬೇರೆಯವರ ಮಾತನ್ನು ಕೇಳದೆ ನಿಮಗೆ ತೊಂದರೆಯಾಗಬಹುದು
- ಆಸ್ತಿಯ ವಿಚಾರದಲ್ಲಿ ನಿಮ್ಮದೇ ನಿರ್ಧಾರ ಬೇಡ
- ಹಣಕಾಸು ವಿಚಾರದಲ್ಲಿ ಅನುಕೂಲವಿದೆ
- ಲಕ್ಷ್ಮಿನಾರಾಯಣ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ