ಆತುರದ ನಿರ್ಧಾರದಿಂದ ನಷ್ಟ, ವ್ಯಾಪಾರಿಗಳಿಗೆ ಅನುಕೂಲವಿದೆ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಪ್ರತಿಸ್ಪರ್ಧಿಗಳಿಂದ ವಿರೋಧಿಗಳಿಂದ ಸವಾಲುಗಳು ಬರಬಹುದು
  • ವ್ಯಾಪಾರ ಅಥವಾ ವ್ಯವಹಾರದಲ್ಲಿ ದೊಡ್ಡ ಯೋಜನೆಗಳಿರಲಿ
  • ವಿದ್ಯಾರ್ಥಿಗಳು ತುಂಬಾ ಗೊಂದಲಕ್ಕೆ ಸಿಲುಕಿ ಕೊಳ್ಳುವ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಮನಸ್ಸಿನ ಗೊಂದಲಗಳನ್ನು ದೂರ ಮಾಡಿ
  • ನಿಮ್ಮ ಆಲೋಚನೆಗಳು ಸಮತೋಲನದಲ್ಲಿರಲಿ
  • ಕೆಲಸದ ಬಗ್ಗೆ ಆಳವಾದ ಗಮನವಿರಲಿ
  • ಪ್ರತಿಸ್ಪರ್ಧಿಗಳಿಂದ ವಿರೋಧಿಗಳಿಂದ ಸವಾಲುಗಳು ಬರಬಹುದು
  • ಸಮಾಜದಲ್ಲಿ ಪ್ರಭಾವ ಕಡಿಮೆಯಾಗಬಹುದು
  • ಅನಗತ್ಯ ಆಲೋಚನೆಗಳು ದೂರವಾದರೆ ಶುಭವಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ವ್ಯಾವಹಾರಿಕವಾಗಿ ಕಷ್ಟವಿರಬಹುದು
  • ಖರ್ಚಿನ ಬಗ್ಗೆ ಚಿಂತಿಸಿ
  • ಅನಗತ್ಯ ಪ್ರಯಾಣಗಳು ತೊಂದರೆಯಾಗಬಹುದು
  • ನಿಗೂಢ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇರುವುದು
  • ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳಿರಬಹುದು
  • ಪ್ರಮುಖ ಕೆಲಸಗಳಲ್ಲಿ ತಾತ್ಸಾರ, ಬೇಸರ ಆಗಬಹುದು
  • ನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಿ

ಮಿಥುನ

publive-image

  • ಕೆಲಸದ ಗುಣಮಟ್ಟಕ್ಕೆ ಗಮನಹರಿಸಿ
  • ವ್ಯಾಪಾರ ಅಥವಾ ವ್ಯವಹಾರದಲ್ಲಿ ದೊಡ್ಡ ಯೋಜನೆಗಳಿರಲಿ
  • ಹೊಸ ವೈವಾಹಿಕ ಸಂಬಂಧಗಳಲ್ಲಿ ಬಿರುಕು ಸಾಧ್ಯತೆ
  • ನಿಮ್ಮ ಉತ್ತರ ಬೇರೆಯವರ ಮೇಲೆ ಹೇರಬೇಡಿ
  • ಪ್ರೇಮಿಗಳಿಗೆ ಸಂಕಷ್ಟದ ದಿನ
  • ವಿದ್ಯಾರ್ಥಿಗಳು ತುಂಬಾ ಗೊಂದಲಕ್ಕೆ ಸಿಲುಕಿ ಕೊಳ್ಳುವ ದಿನ
  • ಸರಸ್ವತಿ ಶಾರದೆಯನ್ನು ಆರಾಧನೆ ಮಾಡಿ

ಕಟಕ

publive-image

  • ನಕಾರಾತ್ಮಕ ಚಿಂತನೆಗಳೇ ಹೆಚ್ಚು ಕಾಡಬಹುದು
  • ಮನೆಯಲ್ಲಿ ಅಥವಾ ಮನದಲ್ಲಿ ಭಯದ ವಾತಾವರಣವಿರಲಿದೆ
  • ಹಿರಿಯರ ಆರೋಗ್ಯ ಹದಗೆಡಬಹುದು
  • ಆರ್ಥಿಕವಾಗಿ ಸಮಯ ಚೆನ್ನಾಗಿರುವುದಿಲ್ಲ
  • ವಿದ್ಯಾರ್ಥಿಗಳಿಗೆ ಮಾನಸಿಕ ಚಾಂಚಲ್ಯ
  • ಯೋಗ್ಯ ವ್ಯಕ್ತಿಯ ಮಾರ್ಗದರ್ಶನ ಪಡೆಯಿರಿ ಸಮಾಧಾನ ಆಗಲಿದೆ
  • ಸುದರ್ಶನನನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ವೃತ್ತಿ , ನೌಕರಿ ಬಗ್ಗೆ ಚಿಂತೆಯ ದಿನ
  • ಮೇಲಾಧಿಕಾರಿಗಳಿಂದ ತೊಂದರೆಯಾಗಬಹುದು
  • ಉದ್ಯೋಗ ನಿಮಿತ್ತ ಪ್ರಯಾಣ ಅಶುಭ
  • ಬೆಲೆ ಬಾಳುವ ವಸ್ತುಗಳನ್ನು ಸರಿಯಾಗಿ ಬಳಸಿ
  • ಮಾನಸಿಕ ಆತಂಕ, ಭಯ ಕಾಡಬಹುದು
  • ಕೆಲಸದಲ್ಲಿ ಹಿನ್ನಡೆ, ನೋವು ಉಂಟಾಗಬಹುದು
  • ಶಿವರಾಧನೆ ಮಾಡಿ

ಕನ್ಯಾ

publive-image

  • ಹೊಸ ಯೋಜನೆಗಳಿಗೆ ಸಕಾಲವಲ್ಲ
  • ಸಾಲದ ವಿಚಾರವಾಗಿ ಮನಸ್ತಾಪ ಉಂಟಾಗಲಿದೆ
  • ಭವಿಷ್ಯದ ಬಗ್ಗೆ ಚಿಂತಿಸಿ
  • ಮನಸ್ಸಿನಲ್ಲಿ ನಕಾರಾತ್ಮಕ ಚಿಂತನೆಗಳು ಬರಬಹುದು
  • ಯೋಚಿಸದೇ ಯಾವ ಕೆಲಸವನ್ನು ಮಾಡಬೇಡಿ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಈ ದಿನ ಅಷ್ಟೊಂದು ಶುಭವಲ್ಲ
  • ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗಬಹುದು
  • ಗೌರವಕ್ಕೆ ಅಥವಾ ಸ್ಥಾನಕ್ಕೆ ಧಕ್ಕೆ ಬರಬಹುದು
  • ಪತಿ-ಪತ್ನಿಯರ ಭಿನ್ನಾಭಿಪ್ರಾಯ ದೂರವಾಗಲಿದೆ
  • ಆರೋಗ್ಯದ ಬಗ್ಗೆ ಗಮನಿಸಿ
  • ಮನೆಯಲ್ಲಿ ಸಾಯಂಕಾಲದ ಹೊತ್ತಿಗೆ ಶುಭವಾರ್ತೆ ಸಂತೋಷ ಸಿಗಲಿದೆ
  • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಸಾರ್ವಜನಿಕ ಕೆಲಸಗಳಲ್ಲಿ ಭಾಗಿಗಳಾಗಬಹುದು
  • ಮಕ್ಕಳಿಂದ ಸಂತೋಷ ಸಿಗಲಿದೆ
  • ಹಣಕಾಸಿನ ಸಮಸ್ಯೆ ಪರಿಹಾರವಾಗಲಿದೆ
  • ಪ್ರೇಮಿಗಳು ವಿವಾಹ ವಿಚಾರವನ್ನು ಪ್ರಸ್ತಾಪಿಸಬಹುದು
  • ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿದೆ
  • ವಿದ್ಯಾರ್ಥಿಗಳಿಗೆ ಸಮಾಧಾನದ ವಾತಾವರಣ ಇರಲಿದೆ
  • ವೃದ್ಧರಿಗೆ ಹಣ್ಣು ದಾನ ಮಾಡಿ

ಧನಸ್ಸು

publive-image

  • ಆತುರದ ನಿರ್ಧಾರದಿಂದ ನಷ್ಟ ಆಗಬಹುದು
  • ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಗ್ರಹಗತಿ ದೃಷ್ಟಿಯಿಂದ ಮಾತೃ ಶಾಪ ಕಾಡುವ ದಿನ
  • ನಿಮ್ಮ ಮಾತಿನ ಬಗ್ಗೆ ಭಿನ್ನಾಭಿಪ್ರಾಯಗಳು ಇರಲಿದೆ
  • ಅನಗತ್ಯ ಹಣ ಖರ್ಚಾಗಬಹುದು
  • ರೋಗಿಗಳಿಗೆ ಸಹಾಯ ಮಾಡಿ

ಮಕರ

publive-image

  • ಕುಟುಂಬ ಜೀವನ ಚೆನ್ನಾಗಿರಲಿದೆ
  • ತುಂಬಾ ಉತ್ಸುಕರಾಗಿ ಕೆಲಸ ಮಾಡುವ ದಿನ
  • ಅನಗತ್ಯ ಅಥವಾ ಅನುಚಿತ ಸಂದರ್ಭಗಳಿಂದ ಬೇಸರವಾಗಬಹುದು
  • ಹಿರಿಯರ ಬೇಸರಕ್ಕೆ ಒಳಗಾಗುತ್ತೀರಿ
  • ಸಂತೋಷದಿಂದ ಕಾಲ ಕಳೆಯುತ್ತೀರಿ ಆದರೆ ಭಯ ಕಾಡಬಹುದು
  • ವಿಷ್ಣು ಸಹಸ್ರನಾಮವನ್ನು ಪಠಿಸಿ

ಕುಂಭ

publive-image

  • ವಿವಾಹ ವಿಚಾರಕ್ಕಾಗಿ ಮನಸ್ಸು ಚಂಚಲವಾಗಬಹುದು
  • ಪಶ್ಚಾತ್ತಾಪ ಪಡುವ ಯಾವ ಕೆಲಸವನ್ನು ಮಾಡಬೇಡಿ
  • ಮಾನಸಿಕ ದೃಢತೆ ಇರಲಿ
  • ಸಮಾಜದಲ್ಲಿ ನಿಮ್ಮನ್ನು ಹಾಸ್ಯ ಅಥವಾ ಟೀಕೆ ಮಾಡಬಹುದು
  • ವಾಹನ ಚಾಲನೆಯಲ್ಲಿ ಜಾಗೃತಿಯಿರಲಿ
  • ದೇಹಕ್ಕೆ ತೊಂದರೆಯ ಸೂಚನೆ ಇದೆ
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ಮೀನ 

publive-image

  • ದೂರದ ಸಂಬಂಧಿಗಳನ್ನು, ಸ್ನೇಹಿತರನ್ನು ಭೇಟಿಯಾಗಬಹುದು
  • ಕಬ್ಬಿಣದ ವ್ಯಾಪಾರಿಗಳಿಗೆ ಅನುಕೂಲವಿದೆ
  • ಜನರಿಗೆ ಸಹಾಯ ಮಾಡಲು ಒಳ್ಳೆಯ ದಿನ
  • ಮನೆಯಲ್ಲಿ ಹಲವು ಭಿನ್ನಾಭಿಪ್ರಾಯಗಳು ಇರಲಿದೆ
  • ಕೋಪ, ರೋಷದಿಂದ ಯಾವ ಕೆಲಸವನ್ನು ಮಾಡಬೇಡಿ
  • ಮಕ್ಕಳಿಗೆ ಶುಭ ಸಂದೇಶ ಸಿಗಲಿದೆ
  • ನವಗ್ರಹ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

Advertisment