/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ಆತ್ಮವಿಶ್ವಾಸದೊಂದಿಗೆ ಎಲ್ಲಾ ಕೆಲಸಗಳನ್ನು ಪ್ರಾರಂಭಿಸಿ ಶುಭವಿದೆ
- ಮಾನಸಿಕ ಶಾಂತಿಗಾಗಿ ದುಡಿದ ಹಣವನ್ನು ಸ್ವಲ್ಪ ಖರ್ಚು ಮಾಡಿ
- ಹೊಸ ಸ್ನೇಹಿತರನ್ನು, ಜನರನ್ನು ಆಕರ್ಷಿಸುತ್ತೀರಿ
- ಪ್ರೇಮಿಗಳಿಗೆ ಗೊಂದಲದ ದಿನ
- ಬೇರೆಯವರ ಸಹಾಯದಿಂದ ನಿಮಗೆ ತೃಪ್ತಿ ಸಿಗಬಹುದು
- ಕಾರ್ಯಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಬಹುದು
- ಕುಲದೇವತಾ ಆರಾಧನೆ ಮಾಡಿ
ವೃಷಭ
- ನಿಮಗೆ ಹಳೆಯ ನೆನಪುಗಳು ಸಂತೋಷ ಕೊಡಬಹುದು
- ನೀವಂದುಕೊಂಡ ಕೆಲಸಗಳು ಪರಿಪೂರ್ಣವಾಗುತ್ತದೆ
- ದಾಂಪತ್ಯ ಜೀವನದಲ್ಲಿ ಸುಖ, ಸಂತೋಷ ಇರಲಿದೆ
- ಪ್ರವಾಸ ಕುರಿತು ಮಾನಸಿಕ ಉಲ್ಲಾಸ
- ಉತ್ತಮ ವಾತಾವರಣವಿರಲಿದೆ
- ಜೀವನದ ಅನುಭವ ನಿಮ್ಮನ್ನು ಪರಿವರ್ತಿಸಬಹುದು
- ಗಣಪತಿಯ ಅನುಗ್ರಹ ಪಡೆಯಿರಿ
ಮಿಥುನ
- ಈ ದಿನ ವಿದ್ಯಾರ್ಥಿಗಳಿಗೆ ಯಶಸ್ಸಿದೆ
- ಭೂ ಸಂಬಂಧಿ ವ್ಯವಹಾರಗಳಿಂದ ನಷ್ಟ ಕಾಣಬಹುದು
- ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ತಾಯಿ,ತಂದೆಯವರ ದುಃಖ ಕಾರಣವಾಗಬಹುದು
- ಮನಸ್ಸಿನಲ್ಲಿರುವುದನ್ನ ಬೇರೆಯವರೊಂದಿಗೆ ಹಂಚಿಕೊಳ್ಳಬಹುದು
- ಹಣದ ಅಡಚಣೆಯೇ ಎಲ್ಲಾ ವಿಚಾರಕ್ಕೆ ಕಾರಣವಾಗಬಹುದು
- ಭೂವರಾಹನನ್ನು ಪ್ರಾರ್ಥನೆ ಮಾಡಿ
ಕಟಕ
- ನಕಾರಾತ್ಮಕ ಚಿಂತನೆಗಳೇ ಹೆಚ್ಚು ಕಾಡಬಹುದು
- ಮನೆಯಲ್ಲಿ ಅಥವಾ ಮನದಲ್ಲಿ ಭಯದ ವಾತಾವರಣವಿರಲಿದೆ
- ಹಿರಿಯರ ಆರೋಗ್ಯ ಹದಗೆಡಬಹುದು
- ಆರ್ಥಿಕವಾಗಿ ಸಮಯ ಚೆನ್ನಾಗಿರುವುದಿಲ್ಲ
- ವಿದ್ಯಾರ್ಥಿಗಳಿಗೆ ಮಾನಸಿಕ ಚಾಂಚಲ್ಯ
- ಯೋಗ್ಯ ವ್ಯಕ್ತಿಯ ಮಾರ್ಗದರ್ಶನ ಪಡೆಯಿರಿ ಸಮಾಧಾನ ಆಗಲಿದೆ
- ಸುದರ್ಶನನನ್ನು ಪ್ರಾರ್ಥನೆ ಮಾಡಿ
ಸಿಂಹ
- ಮಧ್ಯಾಹ್ನದ ನಂತರ ಹಣಕಾಸು ವಿಚಾರದಲ್ಲಿ ಅನುಕೂಲವಾಗಬಹುದು
- ಸಾಯಂಕಾಲ ಬಂಧುಗಳ, ಸ್ನೇಹಿತರ ಸಮಾಗಮವಾಗಬಹುದು
- ಪ್ರೇಮಿಗಳಿಗೆ ತಿರುವು ಪಡೆಯುವಂತಹ ದಿನ
- ಇಂದು ಕಠಿಣ ನಿರ್ಧಾರಗಳು ಬೇಡ
- ಅನಗತ್ಯ ವಿಚಾರಗಳೇ ಹೆಚ್ಚು ಪ್ರಸ್ತಾಪವಾಗುವ ದಿನ
- ಬೇರೆಯವರ ವಿಶ್ವಾಸ ಬೆಂಬಲ ಸಿಗುತ್ತದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ದೈಹಿಕ ಸಮಸ್ಯೆ, ನೋವಿನಿಂದ ಬಳಲಬಹುದು
- ವಿಶ್ರಾಂತಿಯಿರುತ್ತದೆ ಆದರೆ ಮನಸ್ಸು ಮಾತ್ರ ಸಮಾಧಾನದಲ್ಲಿ ಇರುವುದಿಲ್ಲ
- ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದರ ಬಗ್ಗೆ ಚಿಂತಿಸಿ
- ನಿಮ್ಮ ಕಾರ್ಯ ಅಥವಾ ನೌಕರಿ, ನಿಮಗೆ ಯಾವುದೇ ರೀತಿಯ ಸಮಾಧಾನ ಕೊಡುವುದಿಲ್ಲ
- ಮಕ್ಕಳ ಬಗ್ಗೆ ಚಿಂತೆ ಮಾಡಿ ಅವರಿಗೆ ಸರಿಯಾಗಿ ತಿಳುವಳಿಕೆ ನೀಡಿ
- ನಿಮ್ಮ ಸಂದೇಶ ಮನೆಯ ಮಕ್ಕಳಿಗೆ ದಾರಿದೀಪವಾಗಬಹುದು
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ತುಲಾ
- ಆಸ್ಪತ್ರೆಗಾಗಿ ಹಣ ಖರ್ಚು ಮಾಡಬೇಕಾಗಬಹುದು
- ಹಳೆಯ ಬಾಕಿ ಹಣ ನಿಮ್ಮ ಕೈ ಸೇರಬಹುದು
- ಹೊಸ ಯೋಜನೆಗಳು ಸಾಕಾರವಾಗಬಹುದು
- ನಿಮ್ಮ ಯೋಜನೆಗೆ ತಕ್ಕ ವ್ಯಕ್ತಿಗಳ ಪರಿಚಯ, ಸಹಾಯ ಸಿಗುತ್ತದೆ
- ಲೆಕ್ಕಶಾಸ್ತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಯಶಸ್ಸು
- ಅಧಿಕ ಖರ್ಚು, ಹಣ ಸಂಗ್ರಹದ ಬಗ್ಗೆ ಆಲೋಚನೆ ಬರಬಹುದು
- ಕಾಲಭೈರವ ಮಂತ್ರ ಪಠಿಸಿ
ವೃಶ್ಚಿಕ
- ಹಣ ಉಳಿಸಲು ಪ್ರಯತ್ನಿಸಿ, ತೊಂದರೆಯಲ್ಲಿ ಸಿಲುಕಬಹುದು
- ಅನಾರೋಗ್ಯ ಪೀಡಿತ ಬಂಧುಗಳ ಭೇಟಿ, ಖರ್ಚು ಹೆಚ್ಚಾಗಬಹುದು
- ನಿಮ್ಮ ಕೆಲಸ ಜವಾಬ್ದಾರಿ ಬಗ್ಗೆ ಬದ್ಧತೆ ಇರಲಿ
- ಜೀವನದ ತೊಂದರೆಗಳನ್ನು ಹೇಳಿಕೊಂಡು ತಪ್ಪು ಮಾಡಬೇಡಿ
- ನಿಮ್ಮ ಎಲ್ಲಾ ಪ್ರಯತ್ನಗಳು ಇಂದು ವಿಫಲ
- ಸಣ್ಣ ವ್ಯಾಪಾರಿಗಳಿಗೆ ಧನಲಾಭ
- ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ
ಧನಸ್ಸು
- ನಿಮ್ಮ ನಂಬಿಕೆ ಶ್ರದ್ಧೆ ನಿಮ್ಮನ್ನ ಕಾಪಾಡುತ್ತದೆ
- ಯಾವುದೇ ನೋವಿರಲಿ ಅದಕ್ಕೆ ಪರಿಹಾರ ಮಾರ್ಗ ಸಿಗಬಹುದು
- ಬಯಸದೇ ಬಂದ ಭಾಗ್ಯ ನಿಮ್ಮದಾಗುತ್ತದೆ
- ತಾಳ್ಮೆ ಇರಲಿ, ಕೋಪ ಪ್ರಯೋಜನವಿಲ್ಲ
- ಅಸಮಾಧಾನ ಬೇಡ, ನಿಮ್ಮ ಪಾಲಿಗಿರುವುದನ್ನು ಅನುಭವಿಸಿ
- ಜೀವನಪೂರ್ತಿ ಬಂಧನ ಎಂದು ಭಾಸವಾಗುವ ದಿನ
- ಶ್ರೀರಾಮ ಪರಿವಾರ ದೇವರನ್ನು ಪೂಜಿಸಿ
ಮಕರ
- ನಿಮ್ಮ ಜ್ಞಾನದ ಜೊತೆಗೆ ನಿರಂತರ ಪ್ರಯತ್ನ ಯಶಸ್ಸು ಕೊಡುತ್ತದೆ
- ನೀವು ಉಳಿಸಿದ ಹಣ ಸಕಾಲದಲ್ಲಿ ಉಪಯೋಗಕ್ಕೆ ಬರಬಹುದು
- ದುಃಖ ನಿವೃತ್ತಿಯಿದೆ ಆದರೆ ಮಾರ್ಗ ಸಿಗುವುದಿಲ್ಲ
- ನಿಜವಾದ ಕಷ್ಟದ ಬಗ್ಗೆ ನಿಮಗೆ ಅರಿವಿರುವುದಿಲ್ಲ
- ಬೇರೆಯವರು ನಿಮ್ಮ ಕೆಲಸದಲ್ಲಿ ಸಹಾಯ ಮಾಡಬಹುದು
- ಕುಟುಂಬ ಸದಸ್ಯರ ಜೊತೆ ಕಾಲ ಕಳೆಯಬಹುದು
- ಗೋವಿಗೆ ಅಕ್ಕಿ ಬೆಲ್ಲ ನೀಡಿ
ಕುಂಭ
- ಭರವಸೆಯ ನಿರೀಕ್ಷೆಯಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆ
- ಇಂದು ಆರ್ಥಿಕವಾಗಿ ಸಮಸ್ಯೆಯಿಲ್ಲ
- ಆಹಾರಕ್ಕಾಗಿ ನಿರೀಕ್ಷೆಯಲ್ಲಿದ್ದ ನಿಮಗೆ ತೊಂದರೆ ಸೂಚನೆಯಿದೆ
- ಆತುರದ ತೀರ್ಮಾನ ಬೇಡ
- ನಿಮ್ಮನ್ನು ಯಾರು ಮೋಸಗೊಳಿಸಲು ಈ ದಿನ ಆಗುವುದಿಲ್ಲ
- ನಿಮ್ಮ ಕೋಪ ಅಥವಾ ಶಿಸ್ತು ಈ ದಿನ ನಿಮ್ಮ ಪರವಾಗಿರುತ್ತದೆ
- ಈಶ್ವರನ ಆರಾಧನೆ ಮಾಡಿ, ಬಿಲ್ವಪತ್ರೆ ಸಮರ್ಪಿಸಿ
ಮೀನ
- ನಿಮಗೆ ಪ್ರಿಯವಾದ ಚಿಂತೆಗಳಲ್ಲಿ ಕಾಲ ಕಳೆಯಬಹುದು
- ದುಶ್ಚಟಗಳಿರುವವರು ಅದರಿಂದ ದೂರವಿರಬೇಕು ತೊಂದರೆಯಿದೆ
- ಆಸ್ತಿ ವಿಚಾರಕ್ಕೆ ಹಲವು ಚರ್ಚೆ ಆಗಬಹುದು
- ವ್ಯಾಪಾರ, ವ್ಯವಹಾರಗಳಲ್ಲಿ ಮಧ್ಯವರ್ತಿಗಳಿಂದ ಮೋಸಕ್ಕೆ ಸಂಚು
- ಬಾಕಿ ಇರುವ ಕೆಲಸಗಳ ಬಗ್ಗೆ ಚಿಂತಿಸುವಿರಿ
- ಎಲ್ಲಾ ದೃಷ್ಟಿಯಿಂದ ನಿಮಗೆ ಅನುಕೂಲವಿದ್ದರೂ ಹಿನ್ನಡೆ ಇದೆ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ