/newsfirstlive-kannada/media/post_attachments/wp-content/uploads/2025/02/VATAL_NAGARAJ.jpg)
ಬೆಂಗಳೂರು: MES ಪುಂಡಾಟ ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾರ್ಚ್ 22ಕ್ಕೆ ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ.
ಆದರೆ ಬಂದ್ಗೆ ಹಲವು ಸಂಘಟನೆಗಳು ಬೆಂಬಲ ಕೊಡಲು ಹಿಂದೇಟು ಹಾಕಿವೆ. ಬಂದ್ ಇದ್ದರೂ ಒಂದು ಲಕ್ಷ ಖಾಸಗಿ ವಾಹನಗಳು ಸಂಚಾರ ಮಾಡಲಿವೆ. ಹೋರಾಟಕ್ಕೆ ಬೆಂಬಲ ಇದೆ, ಆದರೆ ಬಂದ್ಗೆ ಬೆಂಬಲ ಇಲ್ಲ ಎಂದು ಖಾಸಗಿ ಸಾರಿಗೆ ಸಂಘಟನೆಗಳು ಹೇಳಿವೆ. ಕೇವಲ ನೈತಿಕ ಬೆಂಬಲ ನೀಡುವುದಾಗಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಇದನ್ನೂ ಓದಿ: ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡೋದು ಡೌಟ್; ಬದಲಿ ಆಟಗಾರ ಯಾರು?
ಎಂಇಎಸ್ ಪುಂಡಾಟ ಖಂಡಿಸಿ ಮರಾಠರ ಗಡಿ ಭಾಗದಲ್ಲಿ ಬಂದ್ ಮಾಡಿದ್ರೆ ಸರಿ. ಅದು ಬಿಟ್ಟು ಕರ್ನಾಟಕ ಬಂದ್ ಸರಿಯಲ್ಲ ಅನ್ನೋದು ಅನೇಕರ ವಾದ. ಜೊತೆಗೆ ಮಾರ್ಚ್ 21 ರಂದು ಎಸ್ಎಸ್ಎಲ್ಸಿ ಹಾಗೂ ಮಾರ್ಚ್ 22 ರಂದು ಮೌಲ್ಯಾಂಕ ಪರೀಕ್ಷೆ ಇದೆ. ಎಕ್ಸಾಂ ಇರೋದ್ರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ.
ಹೋಟೆಲ್ ಅಸೋಸಿಯೇಷನ್ ಕೂಡ ಬಂದ್ ಬೆಂಬಲ ನೀಡುವ ಬಗ್ಗೆ ನಿರ್ಧಾರ ಮಾಡಿಲ್ಲ. ಹೋಟೆಲ್ ಅಸೋಸಿಯೇಷನ್ ಅಡಿಯಲ್ಲಿ 60,009 ಹೋಟೆಲ್ಗಳಿವೆ. 60,000 ಹೋಟೆಲ್ಗಳಿಂದ ಬಂದ್ಗೆ ಬೆಂಬಲ ನೀಡುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ.
ಇದನ್ನೂ ಓದಿ: ತುಮಕೂರಲ್ಲಿ ಅಮಾನುಷ ಕೃತ್ಯ; 8 ತಿಂಗಳ ಗರ್ಭಿಣಿಯ ಜೀವ ತೆಗೆದ ಗಂಡನ ಅನುಮಾನ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ