newsfirstkannada.com

ನರ್ಸ್​​ನ ಕೊಲೆ ಮಾಡಿ ನೀರಿಲ್ಲದ ಬಾವಿಗೆ ಎಸೆದಿದ್ದ ಹೆಡ್​ ಕಾನ್​ಸ್ಟೆಬಲ್​.. ಅಸಲಿಗೆ ಆಗಿದ್ದೇನು?

Share :

Published May 19, 2024 at 5:48pm

Update May 19, 2024 at 5:49pm

    ನರ್ಸ್​ ಸಾವನ್ನಪ್ಪಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದೇ ರಣ ರೋಚಕ

    ನನಗೆ ಮದುವೆನೇ ಆಗಿಲ್ಲ, ಈವರೆಗೂ ಸಿಂಗಲ್​ ಎಂದು ಹೇಳಿದ್ದನು

    ಸತತ 2 ತಿಂಗಳು ಕಾಲ ಪೊಲೀಸ್ ಠಾಣೆ ಸುತ್ತ ಸುತ್ತಿದ್ದ ನರ್ಸ್​ ತಾಯಿ

ಲಕ್ನೋ: ಮದುವೆ ಆಗುವಂತೆ ಒತ್ತಾಯ ಮಾಡಿದ್ದಕ್ಕೆ ಮಹಿಳಾ ನರ್ಸ್​ ಒಬ್ಬರನ್ನ ಹೆಡ್​ ಕಾನ್​ಸ್ಟೆಬಲ್ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದು ಉತ್ತರ ಪ್ರದೇಶದ ಕಾನ್ಪುರದ ಇಟಾಹ್ ಗ್ರಾಮದಲ್ಲಿ ನಡೆದಿದೆ.

ಕಾನ್ಪುರದ ಬಾಡ ಪ್ರದೇಶದ ನಿವಾಸಿ ಶಾಲು ತಿವಾರಿ ಕೊಲೆಯದ ನರ್ಸ್​. ಹೆಡ್​ ಕಾನ್​ಸ್ಟೆಬಲ್​ ಮನೋಜ್​ ಕುಮಾರ್ ಕೊಲೆ ಮಾಡಿದ ಆರೋಪಿಯಾಗಿದ್ದು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಗಳು ಕೊಲೆಯಾಗಿದ್ದಾಳೆಂದು ತಾಯಿ, ಸಹೋದರ ಇಬ್ಬರು ಪೊಲೀಸ್​ ಠಾಣೆಗೆ ದೂರು ಕೊಡಲು ಸತತ 2 ತಿಂಗಳ ಕಾಲ ಅಲೆದಿದ್ದಾರೆ. ಆದ್ರೆ ಪೊಲೀಸರು ಬೆದರಿಕೆ ಹಾಕಿ ನಿಮ್ಮ ಮೇಲೆ ಎಫ್​ಐಆರ್ ಹಾಕುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ. ಆದರೆ ಕೊಲೆಯಾದ ಮಹಿಳೆಯ ಮೃತದೇಹ ಪತ್ತೆಯಾಗುತ್ತಿದ್ದಂತೆ ಪೊಲೀಸರು ಕೇಸ್ ದಾಖಲು ಮಾಡಿಕೊಂಡು ಆರೋಪಿ ಹಾಗೂ ಆತನ ಸಹಚರರನ್ನ ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ವಿರುಷ್ಕಾ ದಂಪತಿ ಜೊತೆ ಫೋಟೋಗೆ ಪೋಸ್ ಕೊಟ್ಟ ಕನ್ನಡತಿ ಕ್ಯೂಟ್ ಶ್ರೇಯಾಂಕ ಪಾಟೀಲ್

ಕಾನ್ಪುರ ನಗರದ ನರ್ಸಿಂಗ್​ ಹೋಮ್​ನಲ್ಲಿ ಶಾಲು ನರ್ಸ್​ ಆಗಿ 3 ವರ್ಷಗಳಿಂದ ಕೆಲಸ ಮಾಡುತ್ತಿರುತ್ತಾರೆ. ಆಕಸ್ಮಿಕವಾಗಿ ಬರ್ರಾ ಪೊಲೀಸ್ ಠಾಣೆಯ ಹೆಡ್​ ಕಾನ್​ಸ್ಟೆಬಲ್​ ಮನೋಜ್​ನನ್ನು ಭೇಟಿ ಮಾಡುತ್ತಾರೆ. ಆಗ 2 ಮಕ್ಕಳಿದ್ದರೂ ನನಗೆ ಮದುವೆಯಾಗಿಲ್ಲ ಎಂದು ಕಾನ್​​ಸ್ಟೆಬಲ್ ಸುಳ್ಳು ಹೇಳಿ ಸಂಬಂಧ ಬೆಳೆಸುತ್ತಾನೆ. ಬಳಿಕ​ ಆಗಾಗ ನರ್ಸ್​ ರೂಮ್​ಗೆ ಹೋಗುತ್ತಾ, ಬರುತ್ತಾ ಇದ್ದಾನೆ. ಹೀಗಾಗಿ ನರ್ಸ್​ ಮದುವೆ ಆಗುವಂತೆ ಒತ್ತಾಯ ಮಾಡುತ್ತಿರುತ್ತಾಳೆ. ಹೀಗಾಗಿ ಕೊಲೆ ಮಾಡಲು ಬಿಗ್ ಪ್ಲಾನ್ ರೂಪಿಸುತ್ತಾನೆ ಎನ್ನಲಾಗಿದೆ.

ಅದರಂತೆ ಅಯೋಧ್ಯೆಗೆ ಟ್ರಿಪ್ ಹೋಗೋಣವೆಂದು ನರ್ಸ್ ಅನ್ನು ನಂಬಿಸಿ ಕಾರಿನಲ್ಲಿ ತನ್ನ ಸ್ವಂತ ಊರು ಇಟಾಹ್​ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಕಾರಿನ ಚಾಲಕನ ಜೊತೆ ಸೇರಿ ನರ್ಸ್​ಳನ್ನ ಬರ್ಬರವಾಗಿ ಕೊಲೆ ಮಾಡಿ ನೀರಿಲ್ಲದ ಬಾವಿಗೆ ಮೃತದೇಹ ಎಸೆದಿದ್ದಾರೆ. ಬಳಿಕ ಅನುಮಾನ ಬಾರದಂತೆ ತನ್ನ ಕರ್ತವ್ಯಕ್ಕೆ ಹಾಜರು ಆಗಿದ್ದಾನೆ.

ಇದನ್ನೂ ಓದಿ: RCB ವಿನ್​ ಆಗಲೆಂದು ಪ್ರಾರ್ಥಿಸಿದ್ದು ಅಷ್ಟಿಷ್ಟಲ್ಲ.. ಪಂದ್ಯ ಗೆದ್ರು ಅಭಿಮಾನಿಗಳು​ ಬೇಸರವಾಗಿದ್ದಕ್ಕೆ ಕಾರಣವೇನು?

 

ಆದರೆ ಇತ್ತ ನರ್ಸ್​ ತಾಯಿ, ಸಹೋದರ ಸತತ 2 ತಿಂಗಳುಗಳ ಕಾಲ ಬಾರ್ರಾ ಪೊಲೀಸ್ ಠಾಣೆಯಿಂದ ಸಿಎಂ ಆದಿತ್ಯನಾಥ್​ವರೆಗೆ ದೂರು ನೀಡಲು ಹೋದರೂ ಯಾವುದೇ ಪ್ರಯೋಜನಾ ಆಗಿಲ್ಲ. ಆದರೆ ಕೊನೆಗೆ ಇವರ ಕಾಟ ತಡೆಯಲಾರದೇ ಮೊಬೈಲ್​ ಲೋಕೋಶನ್​ ಅನ್ನು ಪತ್ತೆ ಹಚ್ಚಿ ನೋಡಿದಾಗ ಇಬ್ಬರ ಮೊಬೈಲ್​ ಲೋಕೋಶನ್ ಒಂದೇ ಸ್ಥಳವನ್ನು ತೋರಿಸಿದೆ. ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಕಂಡುಕೊಂಡಿದ್ದಾರೆ. ಬಳಿಕ ಪೊಲೀಸರು ಮನೋಜ್ ಕುಮಾರ್ ಮತ್ತು ರಾಹುಲ್ ಎನ್ನುವನನ್ನ ಬಂಧಿಸಿದ್ದಾರೆ ಎಂದು ಹೇಳಲಾಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನರ್ಸ್​​ನ ಕೊಲೆ ಮಾಡಿ ನೀರಿಲ್ಲದ ಬಾವಿಗೆ ಎಸೆದಿದ್ದ ಹೆಡ್​ ಕಾನ್​ಸ್ಟೆಬಲ್​.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/UP_NURS.jpg

    ನರ್ಸ್​ ಸಾವನ್ನಪ್ಪಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದೇ ರಣ ರೋಚಕ

    ನನಗೆ ಮದುವೆನೇ ಆಗಿಲ್ಲ, ಈವರೆಗೂ ಸಿಂಗಲ್​ ಎಂದು ಹೇಳಿದ್ದನು

    ಸತತ 2 ತಿಂಗಳು ಕಾಲ ಪೊಲೀಸ್ ಠಾಣೆ ಸುತ್ತ ಸುತ್ತಿದ್ದ ನರ್ಸ್​ ತಾಯಿ

ಲಕ್ನೋ: ಮದುವೆ ಆಗುವಂತೆ ಒತ್ತಾಯ ಮಾಡಿದ್ದಕ್ಕೆ ಮಹಿಳಾ ನರ್ಸ್​ ಒಬ್ಬರನ್ನ ಹೆಡ್​ ಕಾನ್​ಸ್ಟೆಬಲ್ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದು ಉತ್ತರ ಪ್ರದೇಶದ ಕಾನ್ಪುರದ ಇಟಾಹ್ ಗ್ರಾಮದಲ್ಲಿ ನಡೆದಿದೆ.

ಕಾನ್ಪುರದ ಬಾಡ ಪ್ರದೇಶದ ನಿವಾಸಿ ಶಾಲು ತಿವಾರಿ ಕೊಲೆಯದ ನರ್ಸ್​. ಹೆಡ್​ ಕಾನ್​ಸ್ಟೆಬಲ್​ ಮನೋಜ್​ ಕುಮಾರ್ ಕೊಲೆ ಮಾಡಿದ ಆರೋಪಿಯಾಗಿದ್ದು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಗಳು ಕೊಲೆಯಾಗಿದ್ದಾಳೆಂದು ತಾಯಿ, ಸಹೋದರ ಇಬ್ಬರು ಪೊಲೀಸ್​ ಠಾಣೆಗೆ ದೂರು ಕೊಡಲು ಸತತ 2 ತಿಂಗಳ ಕಾಲ ಅಲೆದಿದ್ದಾರೆ. ಆದ್ರೆ ಪೊಲೀಸರು ಬೆದರಿಕೆ ಹಾಕಿ ನಿಮ್ಮ ಮೇಲೆ ಎಫ್​ಐಆರ್ ಹಾಕುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ. ಆದರೆ ಕೊಲೆಯಾದ ಮಹಿಳೆಯ ಮೃತದೇಹ ಪತ್ತೆಯಾಗುತ್ತಿದ್ದಂತೆ ಪೊಲೀಸರು ಕೇಸ್ ದಾಖಲು ಮಾಡಿಕೊಂಡು ಆರೋಪಿ ಹಾಗೂ ಆತನ ಸಹಚರರನ್ನ ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ವಿರುಷ್ಕಾ ದಂಪತಿ ಜೊತೆ ಫೋಟೋಗೆ ಪೋಸ್ ಕೊಟ್ಟ ಕನ್ನಡತಿ ಕ್ಯೂಟ್ ಶ್ರೇಯಾಂಕ ಪಾಟೀಲ್

ಕಾನ್ಪುರ ನಗರದ ನರ್ಸಿಂಗ್​ ಹೋಮ್​ನಲ್ಲಿ ಶಾಲು ನರ್ಸ್​ ಆಗಿ 3 ವರ್ಷಗಳಿಂದ ಕೆಲಸ ಮಾಡುತ್ತಿರುತ್ತಾರೆ. ಆಕಸ್ಮಿಕವಾಗಿ ಬರ್ರಾ ಪೊಲೀಸ್ ಠಾಣೆಯ ಹೆಡ್​ ಕಾನ್​ಸ್ಟೆಬಲ್​ ಮನೋಜ್​ನನ್ನು ಭೇಟಿ ಮಾಡುತ್ತಾರೆ. ಆಗ 2 ಮಕ್ಕಳಿದ್ದರೂ ನನಗೆ ಮದುವೆಯಾಗಿಲ್ಲ ಎಂದು ಕಾನ್​​ಸ್ಟೆಬಲ್ ಸುಳ್ಳು ಹೇಳಿ ಸಂಬಂಧ ಬೆಳೆಸುತ್ತಾನೆ. ಬಳಿಕ​ ಆಗಾಗ ನರ್ಸ್​ ರೂಮ್​ಗೆ ಹೋಗುತ್ತಾ, ಬರುತ್ತಾ ಇದ್ದಾನೆ. ಹೀಗಾಗಿ ನರ್ಸ್​ ಮದುವೆ ಆಗುವಂತೆ ಒತ್ತಾಯ ಮಾಡುತ್ತಿರುತ್ತಾಳೆ. ಹೀಗಾಗಿ ಕೊಲೆ ಮಾಡಲು ಬಿಗ್ ಪ್ಲಾನ್ ರೂಪಿಸುತ್ತಾನೆ ಎನ್ನಲಾಗಿದೆ.

ಅದರಂತೆ ಅಯೋಧ್ಯೆಗೆ ಟ್ರಿಪ್ ಹೋಗೋಣವೆಂದು ನರ್ಸ್ ಅನ್ನು ನಂಬಿಸಿ ಕಾರಿನಲ್ಲಿ ತನ್ನ ಸ್ವಂತ ಊರು ಇಟಾಹ್​ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಕಾರಿನ ಚಾಲಕನ ಜೊತೆ ಸೇರಿ ನರ್ಸ್​ಳನ್ನ ಬರ್ಬರವಾಗಿ ಕೊಲೆ ಮಾಡಿ ನೀರಿಲ್ಲದ ಬಾವಿಗೆ ಮೃತದೇಹ ಎಸೆದಿದ್ದಾರೆ. ಬಳಿಕ ಅನುಮಾನ ಬಾರದಂತೆ ತನ್ನ ಕರ್ತವ್ಯಕ್ಕೆ ಹಾಜರು ಆಗಿದ್ದಾನೆ.

ಇದನ್ನೂ ಓದಿ: RCB ವಿನ್​ ಆಗಲೆಂದು ಪ್ರಾರ್ಥಿಸಿದ್ದು ಅಷ್ಟಿಷ್ಟಲ್ಲ.. ಪಂದ್ಯ ಗೆದ್ರು ಅಭಿಮಾನಿಗಳು​ ಬೇಸರವಾಗಿದ್ದಕ್ಕೆ ಕಾರಣವೇನು?

 

ಆದರೆ ಇತ್ತ ನರ್ಸ್​ ತಾಯಿ, ಸಹೋದರ ಸತತ 2 ತಿಂಗಳುಗಳ ಕಾಲ ಬಾರ್ರಾ ಪೊಲೀಸ್ ಠಾಣೆಯಿಂದ ಸಿಎಂ ಆದಿತ್ಯನಾಥ್​ವರೆಗೆ ದೂರು ನೀಡಲು ಹೋದರೂ ಯಾವುದೇ ಪ್ರಯೋಜನಾ ಆಗಿಲ್ಲ. ಆದರೆ ಕೊನೆಗೆ ಇವರ ಕಾಟ ತಡೆಯಲಾರದೇ ಮೊಬೈಲ್​ ಲೋಕೋಶನ್​ ಅನ್ನು ಪತ್ತೆ ಹಚ್ಚಿ ನೋಡಿದಾಗ ಇಬ್ಬರ ಮೊಬೈಲ್​ ಲೋಕೋಶನ್ ಒಂದೇ ಸ್ಥಳವನ್ನು ತೋರಿಸಿದೆ. ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಕಂಡುಕೊಂಡಿದ್ದಾರೆ. ಬಳಿಕ ಪೊಲೀಸರು ಮನೋಜ್ ಕುಮಾರ್ ಮತ್ತು ರಾಹುಲ್ ಎನ್ನುವನನ್ನ ಬಂಧಿಸಿದ್ದಾರೆ ಎಂದು ಹೇಳಲಾಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More