/newsfirstlive-kannada/media/post_attachments/wp-content/uploads/2025/04/YASHASWI-JAISWAL.jpg)
IPL ಟೂರ್ನಿ ರೋಚಕ ಘಟ್ಟ ತಲುಪಿದ ಬೆನ್ನಲ್ಲೇ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಮ್ಯಾಚ್ ಫಿಕ್ಸಿಂಗ್ ಪೆಡಂಭೂತದ ಗಂಭೀರವಾದ ಆರೋಪ ಐಪಿಎಲ್ ಲೋಕವನ್ನ ಶೇಕ್ ಮಾಡಿದೆ. ಈ ಹಿಂದೆ 2 ವರ್ಷ ಬ್ಯಾನ್ ಆಗಿತ್ತಲ್ಲ ಅದೇ ರಾಜಸ್ಥಾನ್ ರಾಯಲ್ಸ್ ತಂಡ ಮತ್ತೆ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿದೆ.
ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನಲ್ಲಿ ಮತ್ತೆ ಫಿಕ್ಸಿಂಗ್ ಪೆಂಡಭೂತದ ಸುದ್ದಿ ಸದ್ದು ಮಾಡ್ತಿದೆ. ಈ ಹಿಂದೆ ಫಿಕ್ಸಿಂಗ್ ಕಾರಣಕ್ಕೆ 2 ವರ್ಷಗಳ ಕಾಲ ಬ್ಯಾನ್ ಆಗಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಮೇಲೆ ಗಂಭೀರವಾದ ಆರೋಪ ಕೇಳಿಬಂದಿದೆ. ಈ ಸೀಸನ್ ಕಳಪೆ ಆಟವಾಡ್ತಿರೋ ರಾಜಸ್ಥಾನ ತಂಡ ಕಳೆದ 4 ಪಂದ್ಯಗಳಲ್ಲಿ ಸತತವಾಗಿ ಸೋತಿದೆ. ಅದ್ರಲ್ಲೂ ಕಳೆದ 2 ಪಂದ್ಯಗಳಲ್ಲಿ ಸುಲಭಕ್ಕೆ ಗೆಲ್ಲಬಹುದಾಗಿದ್ದ ಪಂದ್ಯಗಳನ್ನ ಕೈಚೆಲ್ಲಿದೆ. ಇದ್ರ ಬೆನ್ನಲ್ಲೇ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಆಕ್ಸಿಜನ್ ಸಪೋರ್ಟ್ನಲ್ಲಿ ಭರತ್ ತಾಯಿ, ಮಗನ ದುರಂತ ಅಂತ್ಯದ ಬಗ್ಗೆ ತಾಯಿಗೆ ಇನ್ನೂ ಗೊತ್ತಿಲ್ಲ
ನಾಟಕೀಯ ಸೋಲಿಗೆ ಫಿಕ್ಸಿಂಗ್ ಕಾರಣ?
ಏಪ್ರಿಲ್ 19ರಂದು ರಾಜಸ್ಥಾನ್ ರಾಯಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ ವಿರುದ್ಧ ಹೋಮ್ಗ್ರೌಂಡ್ ಜೈಪುರದಲ್ಲಿ ಪಂದ್ಯವಾಡ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ 180 ರನ್ಗಳಿಸಿತ್ತು. 181 ರನ್ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ ತಂಡಕ್ಕೆ ಕೊನೆಯ ಓವರ್ನಲ್ಲಿ 9 ರನ್ ಬೇಕಿದ್ವು. ದೃವ್ ಜುರೇಲ್, ಶಿಮ್ರಾನ್ ಹೆಟ್ಮೆಯರ್ರಂತ ಕ್ರಿಸ್ನಲ್ಲಿದ್ರು. ಹೆಟ್ಮೆಯರ್ ಔಟಾದ ಮೇಲೆ ಶುಭಮ್ ದುಬೆ ಬ್ಯಾಟಿಂಗ್ಗೆ ಬಂದ್ರು. ಪ್ರಮುಖ ಆಟಗಾರರು ಬ್ಯಾಟಿಂಗ್ಗೆ ಬಂದ್ರೂ 2 ರನ್ಗಳಿಂದ ರಾಜಸ್ಥಾನ್ ಸೋಲ್ತು. ಈ ನಾಟಕೀಯ ಸೋಲಿಗೆ ಫಿಕ್ಸಿಂಗ್ ಕಾರಣ ಎಂಬ ಆರೋಪ ಕೇಳಿಬಂದಿದೆ.
ಫಿಕ್ಸಿಂಗ್ ಬಾಂಬ್ ಸಿಡಿಸಿದ RCA ಅಧಿಕಾರಿ
ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಶನ್ನ ಅಧಿಕಾರಿಯೇ ಈ ಸೋಲಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್ಮೆಂಟ್ ಮೇಲೆ ಆರ್ಸಿಎನ ಆ್ಯಡ್ ಹಾಕ್ ಕಮಿಟಿ ಸದಸ್ಯ ಜೈದೀಪ್ ಬಿಹಾನಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರೋ ಜೈದೀಪ್ ಫಿಕ್ಸಿಂಗ್ ಮಾಡಿಕೊಂಡು ರಾಜಸ್ಥಾನ್ ಸೋತಿದೆ. ಇದ್ರ ಬಗ್ಗೆ ತನಿಖೆಯಾಗ್ಬೇಕು ಅಂತಾ ಆಗ್ರಹಿಸಿದ್ದಾರೆ. ಪಂದ್ಯ ನಡೆದ ರೀತಿ ನೋಡಿದ್ರೆ ಪಂದ್ಯ ಫಿಕ್ಸ್ ಆಗಿದೆ ಅನ್ನೋದು ಪುಟ್ಟ ಮಗುವಿಗೂ ಅರ್ಥವಾಗುತ್ತೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Pahalgam attack: ಜೀವ ಕಳೆದುಕೊಂಡ ಮೂವರು ಕನ್ನಡಿಗರು.. ಸಂಕಷ್ಟದಲ್ಲಿ ಕರ್ನಾಟಕದ 40 ಮಂದಿ
ರಾಜಸ್ಥಾನ ಫ್ರಾಂಚೈಸಿ ಗರಂ
ಜೈದೀಪ್ ಆರೋಪವನ್ನ ರಾಜಸ್ಥಾನ್ ರಾಯಲ್ಸ್ ತಂಡ ಸಾರಾಸಗಟಾಗಿ ತಿರಸ್ಕರಿಸಿದೆ. ಆರ್ಸಿಎ ಅಧಿಕಾರಿ ಮೇಲೆ ಗರಂ ಆಗಿರೋ ಫ್ರಾಂಚೈಸಿ ಸಿಎಂ ಭಜನ್ಲಾಲ್ ಶರ್ಮಾಗೆ ದೂರು ನೀಡಿದೆ. ಸರ್ಕಾರದಿಂದ ನೇಮಕವಾಗಿರೋ ಅಧಿಕಾರಿ, ಗಂಗಾನಗರ ಹಾಲಿ ಶಾಸಕ ಜೈದೀಪ್ ಬಿಹಾನಿ ಮಾಡಿರೋ ಆರೋಪ ಸರಿಯಲ್ಲ. ಇದ್ರಿಂದ ನಮ್ಮ ಫ್ರಾಂಚೈಸಿಯ ಘನತೆಗೆ ಹಾನಿಯಾಗ್ತಿದೆ ಎಂದು ದೂರು ನೀಡಿದೆ. ಬಿಸಿಸಿಐಗೂ ಈ ಬಗ್ಗೆ ಮನವಿ ಮಾಡಿದ್ದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಮುಂದಿನ ಪಂದ್ಯವನ್ನಾಡಲು ರಾಜಸ್ಥಾನ್ ರಾಯಲ್ಸ್ ತಂಡ ಬೆಂಗಳೂರಿಗೆ ಬಂದ ಹೊತ್ತಲ್ಲೇ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. ಜಂಟಲ್ಮನ್ ಗೇಮ್ನ ರಿಯಲ್ ಜಂಟಲ್ಮನ್ ಅನಿಸಿಕೊಂಡಿರೋ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿರೋ ತಂಡದ ವಿರುದ್ಧ ಕೇಳಿ ಬಂದಿರೋ ಆರೋಪ ಅಭಿಮಾನಿಗಳಲ್ಲೂ ಅಚ್ಚರಿ ಮೂಡಿಸಿದೆ. ತನಿಖೆ ನಡೆದರಷ್ಟೇ ಸತ್ಯಾಸತ್ಯತೆ ತಿಳಿಯಲಿದೆ.
ಇದನ್ನೂ ಓದಿ: ಅಪ್ಪನ ಮೃತದೇಹದ ಮೇಲೆ ಕೂತು ಕಂದಮ್ಮ ಕಣ್ಣೀರು.. ಚಾಕೊಲೇಟ್ ಇದೆ ಎಂದಾಗ ಪಪ್ಪ ಬೇಕು ಎಂದ ಪಾಪು
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್