/newsfirstlive-kannada/media/post_attachments/wp-content/uploads/2024/11/GURU_PRASAD.jpg)
ಮಠ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮ*ಹತ್ಯೆ ಮಾಡಿಕೊಂಡಿರುವ ಸುದ್ದಿ ಈಗ ಕನ್ನಡ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ಮಠ ಸಿನಿಮಾ ಮೂಲಕ ದೊಡ್ಡ ಖ್ಯಾತಿ ಗಳಿಸಿದ್ದ, ವಿಶೇಷ ಸಂಭಾಷಣೆಯ ಬರೆಯುವಲ್ಲಿ ಗುರುತಿಸಿಕೊಂಡಿದ್ದ ಗುರು ಪ್ರಸಾದ್ 2006ರ ರಲ್ಲಿ ಮಠ ಸಿನಿಮಾ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು.
ಇದನ್ನೂ ಓದಿ:Breaking: ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹ*ತ್ಯೆ.. ಕೊಳೆತ ಸ್ಥಿತಿಯಲ್ಲಿ ಮೃ*ತದೇಹ ಪತ್ತೆ
ಮಠ ಚಿತ್ರದಲ್ಲಿ ನಟನೆಯನ್ನು ಮಾಡಿದ್ದ ಗುರುಪ್ರಸಾದ್ ಒಟ್ಟು ಐದು ಕನ್ನಡ ಸಿನಿಮಾಗಳನ್ನು ನಿರ್ದೇಶಸಿದ್ದಾರೆ. ಗುರು ಪ್ರಸಾದ್ ಅವರ 6ನೇ ಸಿನಿಮಾ ಆದೆಮ್ಮಾ ಶೂಟಿಂಗ್ ಕೂಡ ನರೆಯುತ್ತಿತ್ತು. ಇದರ ಮಧ್ಯೆಯೇ ಗುರುಪ್ರಸಾದ್ ಇಹಲೋಕವನ್ನು ತ್ಯಜಿಸಿದ್ದಾರೆ. ಆತ್ಮ*ಹತ್ಯೆ ಮಾಡಿಕೊಳ್ಳುವಂತ ಘಟನೆ ಅವರ ಬದುಕಲ್ಲಿ ಏನು ನಡೆದಿತ್ತು ಎಂಬುದು ಇನ್ನೂ ಕೂಡ ತಿಳಿದು ಬಂದಿಲ್ಲ. ಮಠ, ಎದ್ದೇಳು ಮಂಜುನಾಥ್, ಡೈರೆಕ್ಟರ್ ಸ್ಪೇಷಲ್, ಎರಡನೇ ಸಲ, ರಂಗನಾಯಕ ಸೇರಿದಂತೆ ಒಟ್ಟು ಐದು ಸಿನಿಮಾಗಳನ್ನು ಗುರುಪ್ರಸಾದ್ ತಾವೇ ಸ್ವತಃ ಕಥೆ ಬರೆದು ನಿರ್ದೇಶಿಸಿದ್ದರು.
ಕನ್ನಡ ಸಿನಿಮಾ ರಂಗ ಕಂಡ ಅತ್ಯಂತ ಸೃಜನಶೀಲ ನಿರ್ದೇಶಕರ ಸಾಲಿನಲ್ಲಿ ಗುರುಪ್ರಸಾದ್ ಗುರುತಿಸಿಕೊಂಡಿದ್ದರು. ಈಗ ಏಕಾಏಕಿ ಇಂತಹ ನಿರ್ಧಾರಕ್ಕೆ ಬಂದು ಜೀವ ಕಳೆದುಕೊಂಡಿದ್ದು ಇಡೀ ಚಿತ್ರರಂಗವೇ ಶಾಕ್ಗೆ ಒಳಗಾಗಿದೆ. ಅಭಿಮಾನಿಗಳು ಹೆಚ್ಚು ಕಡಿಮೆ ಬೆಚ್ಚಿ ಬಿದ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ