/newsfirstlive-kannada/media/post_attachments/wp-content/uploads/2025/01/mauniamavasya2025.jpg)
ಇಂದು ಮಹಾಸುದಿನ.. ಮಹಾಕುಂಭಮೇಳದಲ್ಲಿ ಶಾಹಿಸ್ನಾನದಿಂದ ಮೋಕ್ಷಪ್ರಾಪ್ತಿ ಆಗುತ್ತದೆ ಅನ್ನೋದು ಮೂಲ ನಂಬಿಕೆ. ಇಂದು ಮೌನಿ ಅಮಾವಾಸ್ಯೆ ಇದ್ದು, ತ್ರಿವೇಣಿಸಂಗಮದಲ್ಲಿ ಅಮೃತಸ್ನಾನ ಮಾಡಲು ಅಸಂಖ್ಯ ಭಕ್ತಗಣ ಕಾತರದಿಂದ ಕಾಯ್ತಿದೆ. ತ್ರಿವೇಣಿ ಸಂಗಮದಲ್ಲಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇನ್ನು ಪ್ರಯಾಗ್ರಾಜ್ಗೆ ಹೋಗುವ ಭಕ್ತರಿಗೆ ಕರ್ನಾಟಕದಿಂದಲೂ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ:VIDEO; ಪ್ರಯಾಗರಾಜ್ಗೆ ಹೊರಟಿದ್ದ ವಿಶೇಷ ರೈಲಿಗೆ ಕಲ್ಲಿನಿಂದ ಹೊಡೆದ ಪ್ರಯಾಣಿಕ; ಕಾರಣವೇನು?
ಮಾಘ ಮಾಸದಲ್ಲಿ ಮೌನಿ ಅಮವಾಸ್ಯೆಯನ್ನು ಪವಿತ್ರದಿನ ಎನ್ನಲಾಗಿದೆ. ಈ ದಿನ ಗಂಗಾನದಿಯ ನೀರು ಅಮೃತವಾಗಿ ಬದಲಾಗಲಿದ್ದು, ಪುಣ್ಯಸ್ನಾನ ಮಾಡಿದ್ರೆ ಮೋಕ್ಷಪ್ರಾಪ್ತಿ ಎಂಬ ನಂಬಿಕೆ ಇದೆ. ಹೀಗಾಗಿ ಇಂದು ಮಹಾಕುಂಭಮೇಳದಲ್ಲಿ ಎರಡನೇ ಅಮೃತಸ್ನಾನ ಮಾಡಲು ಅಸಂಖ್ಯ ಭಕ್ತಗಣ ಕಾತರಗೊಂಡಿದೆ. ಇಂದು ಮುಂಜಾನೆ 8ರಿಂದ 10 ಕೋಟಿ ಭಕ್ತರು ಸೇರುವ ನಿರೀಕ್ಷೆ ಇದ್ದು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇಂದು ಕೋಟಿ ಕೋಟಿ ಭಕ್ತರು ಬರುವ ಕಾರಣ ನಿಯಂತ್ರಣ ಕಷ್ಟಸಾಧ್ಯ, ಹೀಗಾಗಿ ತ್ರಿವೇಣಿ ಸಂಗಮದ ಸುತ್ತಲಿನ ರಸ್ತೆಗಳಲ್ಲಿ ಕಾರು, ಆಟೋ ಸಂಚಾರ ಬ್ಯಾನ್ ಮಾಡಲಾಗಿದೆ. ರೈಲು ನಿಲ್ದಾಣಗಳಿಂದ 5 ರಿಂದ 10 ಕಿ.ಮೀ ನಡೆದುಕೊಂಡೇ ಜನ ತ್ರಿವೇಣಿ ಸಂಗಮದತ್ತ ಹೋಗುತ್ತಿದ್ದಾರೆ. ಇಂದು ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ದೇಶದ ದಶ ದಿಕ್ಕುಗಳಿಂದ ಪ್ರತಿ ನಾಲ್ಕು ನಿಮಿಷಗಳಿಗೆ ಒಂದರಂತೆ ರೈಲುಗಳು ಪ್ರಯಾಗರಾಜ್ಗೆ ತೆರಳಲಿವೆ. ರಾಜಧಾನಿ ಬೆಂಗಳೂರಿನಿಂದಲೂ ಪ್ರಯಾಗರಾಜ್ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ವಿಮಾನ ಪ್ರಯಾಣ ಬಹಳ ದುಬಾರಿ ಕಾರಣ ರೈಲ್ವೇ ಇಲಾಖೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಇನ್ನು, ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರು ವಿಶ್ರಾಂತಿ ಪಡೆಯಲು ಜರ್ಮನ್ ಟೆಂಟ್ ಅಳವಡಿಸಲಾಗಿದೆ. ಮೌನಿ ಅಮಾವಾಸ್ಯೆ ಬಳಿಕವೂ ಪ್ರತಿದಿನ 150 ವಿಶೇಷ ರೈಲುಗಳ ಸಂಚಾರ ಇರಲಿದೆ.
ಇಂದು ರೈಲ್ವೇ ಇಲಾಖೆಯಿಂದ 360 ರಿಂದ 400 ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಗ್ರಾಜ್ನ 9 ರೈಲ್ವೇ ನಿಲ್ದಾಣಗಳಿಗೆ ರೈಲು ಸಂಚಾರ ಮಾಡಲಿದ್ದು, ಬೆಂಗಳೂರಿನಿಂದ ಪ್ರಯಾಗ್ರಾಜ್ಗೆ ಸ್ಲೀಪರ್ ಕ್ಲಾಸ್ನಲ್ಲಿ 1 ಸಾವಿರ ರೂ. ಟಿಕೆಟ್ ದರ ಇದೆ. ಇನ್ನು 3 AC ಟಿಕೆಟ್ಗೆ 2,200 ರೂ. ಇದ್ದು 2AC ಟಿಕೆಟ್ಗೆ 3,200 ರೂ. ಇದೆ. ಇಂದು ಪುಣ್ಯಸ್ನಾನ ಮಾಡಲು ದೇಶದ ವಿವಿಧೆಡೆಯಿಂದ ಈಗಾಗಲೇ ಪ್ರಯಾಗ್ರಾಜ್ಗೆ ಲಕ್ಷಾಂತರ ಮಂದಿ ಬಂದು ಬೀಡುಬಿಟ್ಟಿದ್ದಾರೆ. ಉಳಿದುಕೊಳ್ಳಲು ಟೆಂಟ್ಗಳು ಸಿಗದೇ ಕೊರೆಯುವ ಚಳಿಯಲ್ಲಿ ಫುಟ್ಪಾತ್ಗಳಲ್ಲೇ ವಿಶ್ರಾಂತಿಗೆ ಮೊರೆ ಹೋಗ್ತಿದ್ದಾರೆ. ಮಹಾಕುಂಭಮೇಳದಲ್ಲಿ ಕರ್ನಾಟಕದ ಬಾಬಾಗಳು, ಸನ್ಯಾಸಿಗಳು, ಸಾಧು-ಸಂತರು, ನಾಗಾಸಾಧುಗಳು ಭಾಗಿಯಾಗಿದ್ದಾರೆ. ನೆಲಮಂಗಲದ ಶಿವಗಂಗೆ ಮೂಲದ ಧನಂಜಯಗಿರಿ ಮಹಾರಾಜ್ ಮಹಾಕುಂಭಮೇಳದಲ್ಲಿ ನಾಡಧ್ವಜ ಹಾರಿಸಿದ್ದಾರೆ. ಒಟ್ಟಾರೆ, ಮಹಾಕುಂಭಮೇಳದಲ್ಲಿ ಇದುವರೆಗೆ 14 ಕೋಟಿಗೂ ಅಧಿಕ ಯಾತ್ರಿಕರು ಪುಣ್ಯಸ್ನಾನ ಮಾಡಿದ್ದಾರೆ. ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಅಸಂಖ್ಯ ಭಕ್ತರು ಪುಣ್ನಸ್ನಾನ ಮಾಡಿ ಪುನೀತರಾಗಲು ಕಾತರರಾಗಿದ್ದಾರೆ.
ಇಂದು ರೈಲ್ವೇ ಇಲಾಖೆಯಿಂದ 360 ರಿಂದ 400 ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಗ್ರಾಜ್ನ 9 ರೈಲ್ವೇ ನಿಲ್ದಾಣಗಳಿಗೆ ರೈಲು ಸಂಚಾರ ಮಾಡಲಿದ್ದು, ಬೆಂಗಳೂರಿನಿಂದ ಪ್ರಯಾಗ್ರಾಜ್ಗೆ ಸ್ಲೀಪರ್ ಕ್ಲಾಸ್ನಲ್ಲಿ 1 ಸಾವಿರ ರೂ. ಟಿಕೆಟ್ ದರ ಇದೆ. ಇನ್ನು 3 AC ಟಿಕೆಟ್ಗೆ 2,200 ರೂ. ಇದ್ದು 2AC ಟಿಕೆಟ್ಗೆ 3,200 ರೂ. ಇದೆ. ಇಂದು ಪುಣ್ಯಸ್ನಾನ ಮಾಡಲು ದೇಶದ ವಿವಿಧೆಡೆಯಿಂದ ಈಗಾಗಲೇ ಪ್ರಯಾಗ್ರಾಜ್ಗೆ ಲಕ್ಷಾಂತರ ಮಂದಿ ಬಂದು ಬೀಡುಬಿಟ್ಟಿದ್ದಾರೆ. ಉಳಿದುಕೊಳ್ಳಲು ಟೆಂಟ್ಗಳು ಸಿಗದೇ ಕೊರೆಯುವ ಚಳಿಯಲ್ಲಿ ಫುಟ್ಪಾತ್ಗಳಲ್ಲೇ ವಿಶ್ರಾಂತಿಗೆ ಮೊರೆ ಹೋಗ್ತಿದ್ದಾರೆ. ಮಹಾಕುಂಭಮೇಳದಲ್ಲಿ ಕರ್ನಾಟಕದ ಬಾಬಾಗಳು, ಸನ್ಯಾಸಿಗಳು, ಸಾಧು-ಸಂತರು, ನಾಗಾಸಾಧುಗಳು ಭಾಗಿಯಾಗಿದ್ದಾರೆ. ನೆಲಮಂಗಲದ ಶಿವಗಂಗೆ ಮೂಲದ ಧನಂಜಯಗಿರಿ ಮಹಾರಾಜ್ ಮಹಾಕುಂಭಮೇಳದಲ್ಲಿ ನಾಡಧ್ವಜ ಹಾರಿಸಿದ್ದಾರೆ. ಒಟ್ಟಾರೆ, ಮಹಾಕುಂಭಮೇಳದಲ್ಲಿ ಇದುವರೆಗೆ 14 ಕೋಟಿಗೂ ಅಧಿಕ ಯಾತ್ರಿಕರು ಪುಣ್ಯಸ್ನಾನ ಮಾಡಿದ್ದಾರೆ. ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಅಸಂಖ್ಯ ಭಕ್ತರು ಪುಣ್ನಸ್ನಾನ ಮಾಡಿ ಪುನೀತರಾಗಲು ಕಾತರರಾಗಿದ್ದಾರೆ.
ಪುಣ್ಯಸ್ನಾನಕ್ಕೆ ಸಮಯ ನಿಗದಿ
ಈಗಾಗಲೇ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಲು ಸಮಯ ನಿಗದಿಯಾಗಿದೆ. ಮೊದಲಿಗೆ ಬೆಳಗ್ಗೆ 6.15 ರಿಂದ ಮಹಾನಿರ್ವಾಣಿ, ಅಟಲ್ ಅಖಾಡಗಳಿಗೆ 40 ನಿಮಿಷ ಸಮಯ ನೀಡಲಾಗಿದ್ದು, ಬಳಿಕ ನಿರಂಜನಿ, ಆನಂದ್ ಅಖಾಡಕ್ಕೆ ಬೆಳಗ್ಗೆ 7.05ರಿಂದ ಅಮೃತ ಸ್ನಾನಕ್ಕೆ ಅವಕಾಶ ನೀಡಲಾಗಿದೆ. ನಂತರ ಜುನಾ, ಪಂಚಾಗ್ನಿ, ಅವಾಹನ ಅಖಾಡಕ್ಕೆ ಬೆಳಗ್ಗೆ 8 ರಿಂದ ಅಮೃತ ಸ್ನಾನಕ್ಕೆ ಅವಕಾಶ ನೀಡಿದೆ. ಇದಾದ ಬೆನ್ನಲ್ಲೇ ನಿರ್ವಾಣಿ, ದಿಗಂಬರ, ನಿರ್ಮೋಹಿ, ನಯಾ ಪಂಚಾಯಿತಿ, ಬಡಾ ಪಂಚಾಯಿತಿ ಅಖಾಡಗಳಿಗೆ ಅಮೃತ ಸ್ನಾನಕ್ಕೆ ಅವಕಾಶ ನೀಡಿದೆ. ಕೊನೆಯದಾಗಿ ನಿರ್ಮಲ್ ಅಖಾಡಕ್ಕೆ ಮಧ್ಯಾಹ್ನ 3.40 ರಿಂದ 40 ನಿಮಿಷಗಳ ಕಾಲ ಅಮೃತ ಸ್ನಾನಕ್ಕೆ ಅವಕಾಶ ಕೊಟ್ಟಿದೆ. ಹೀಗೆ ಬೆಳಿಗ್ಗೆ 7.05 ರಿಂದ ಸಂಜೆ 4.20 ರವರೆಗೆ ಅಖಾಡಗಳಿಗೆ ಅಮೃತ ಸ್ನಾನಕ್ಕೆ ಸಮಯ ನೀಡಲಾಗದೆ. ಹೀಗಾಗಿ ಬೇರೆ ಬೇರೆ ಘಾಟ್ಗಳಲ್ಲಿ ಜನ ಸಾಮಾನ್ಯರಿಗೆ ಅಮೃತ ಸ್ನಾನಕ್ಕೆ ಅವಕಾಶ ಕೊಟ್ಟಿದೆ. ಗಂಗಾ ನದಿಯ ತಟದ ಉದ್ದಕ್ಕೂ 25-30 ಹೊಸ ಘಾಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಎಲ್ಲ ಘಾಟ್ಗಳಲ್ಲೂ ಭಕ್ತರಿಗೆ ಅಮೃತ ಸ್ನಾನಕ್ಕೆ ಅವಕಾಶವಿದೆ. ಇಂದು ಒಂದೇ ದಿನ ಬರೋಬ್ಬರಿ 8- 10 ಕೋಟಿ ಭಕ್ತರು ಅಮೃತ ಸ್ನಾನ ಮಾಡುವ ನಿರೀಕ್ಷೆ ಇದೆ. ನಿನ್ನೆ ಕೂಡ 4.64 ಕೋಟಿ ಜನರಿಂದ ತೀರ್ಥ ಸ್ನಾನ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ