ವಿದ್ಯಾರ್ಥಿಗಳಿಗೆ ಮಿತ್ರರಿಂದಲೇ ತೊಂದರೆ, ದಂಪತಿ ಮಧ್ಯೆ ಕಿರಿಕಿರಿ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ನಿಮ್ಮ ಸೇವೆ ಅಥವಾ ಸಹಾಯಕ್ಕಾಗಿ ಸಮಾಜದಲ್ಲಿ ಮನ್ನಣೆ ಸಿಗಲಿದೆ
  • ಕೋಪದಿಂದ ಗಾಯವಾಗುವ ಸಾಧ್ಯತೆ ಇದೆ ಎಚ್ಚರಿಕೆಯಿರಲಿ
  • ಹಳೆಯ ವಿಚಾರಗಳನ್ನು ದೂರ ಮಾಡಿ ಬೇಸರ ಕಡಿಮೆ ಮಾಡಿಕೊಳ್ಳಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಬೆಳಗ್ಗೆ 7.30 ರಿಂದ 9.00 ರವರೆಗೆ
ಇರಲಿದೆ.

ಮೇಷ ರಾಶಿ

publive-image

  • ನಿಮ್ಮ ಸೇವೆ ಅಥವಾ ಸಹಾಯಕ್ಕಾಗಿ ಸಮಾಜದಲ್ಲಿ ಮನ್ನಣೆ ಸಿಗಲಿದೆ
  • ಬೆಲೆ ಬಾಳುವ ವಸ್ತು ಖರೀದಿ ಮಾಡುತ್ತೀರಿ
  • ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು
  • ನಿಮ್ಮ ಬಗ್ಗೆ ಹೆಚ್ಚು ಗಮನ ಕೊಡಿ ಭದ್ರತೆಯಿರಲಿ
  • ಪ್ರೀತಿ ಪ್ರೇಮ ವಿಚಾರದಲ್ಲಿ ಗೊಂದಲ ಬೇಸರವಾಗಬಹುದು
  • ಕುಲದೇವತಾ ಆರಾಧನೆ ಮಾಡಿ

ವೃಷಭ

publive-image

  • ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ದೊರೆಯಲಿದೆ
  • ಹಣದ ವಿಚಾರದಲ್ಲಿ ನಿರಾಸೆ ಉಂಟಾಗಬಹುದು
  • ಅನಗತ್ಯ ಅಥವಾ ಅನುಪಯುಕ್ತ ಕೆಲಸಗಳಲ್ಲಿ ಸಮಯ ವ್ಯರ್ಥವಾಗಬಹುದು
  • ವಾದ-ವಿವಾದಗಳಿಂದ ಸಮಸ್ಯೆ ಉಂಟಾಗಬಹುದು
  • ಆತಂಕ ಬೇಡ ಸಮಾಧಾನವನ್ನು ಕಾಪಾಡಿಕೊಳ್ಳಿ
  • ಈಶ್ವರನ ಆರಾಧನೆ ಮಾಡಿ

ಮಿಥುನ

publive-image

  • ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಬೇಡ
  • ಕುಟುಂಬದಲ್ಲಿ ನೆಮ್ಮದಿಯ ಶಾಂತಿಯ ವಾತಾವರಣವನ್ನು ಕಾಪಾಡಿಕೊಳ್ಳಿ
  • ಜನರು ನಿಮ್ಮ ಸಲಹೆಯನ್ನ ಸ್ವೀಕರಿಸಬಹುದು
  • ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲವಿದೆ
  • ಕೋಪದಿಂದ ಗಾಯವಾಗುವ ಸಾಧ್ಯತೆ ಇದೆ ಎಚ್ಚರಿಕೆಯಿರಲಿ
  • ತುಳಸಿಯಿಂದ ವಿಷ್ಣುವಿನ ಅರ್ಚನೆ ಮಾಡಿ

ಕಟಕ

publive-image

  • ಹಳೆಯ ವಿಚಾರಗಳನ್ನು ದೂರ ಮಾಡಿ ಬೇಸರ ಕಡಿಮೆ ಮಾಡಿಕೊಳ್ಳಿ
  • ಅನುಕೂಲದ ಸಮಯವನ್ನು ಉಪಯೋಗಿಸಿಕೊಳ್ಳಿ
  • ಹೊಸ ಹೂಡಿಕೆಗೆ ಇಂದು ಅನುಕೂಲವಿದೆ
  • ಯಾವುದೇ ಬದಲಾವಣೆಯ ಬಗ್ಗೆ ಚಿಂತೆ ಬೇಡ
  • ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ ಮಾಡಿಸಿ

ಸಿಂಹ

publive-image

  • ಧಾರ್ಮಿಕ ಅಥವಾ ಆಧ್ಯಾತ್ಮಿಕ ವಿಚಾರಗಳಿಂದ ಮಾನಸಿಕ ನೆಮ್ಮದಿ ಸಿಗಲಿದೆ
  • ಈ ದಿನ ನೀವು ಸಮಾರಂಭಗಳಿಗೆ ಹಾಜರಾಗಬಹುದು
  • ಮಕ್ಕಳಿಗೆ ನೀತಿ ಪಾಠ ಹೇಳಿ ಗೌರವ ಬರಬಹುದು
  • ಹೊಸ ಉದ್ಯಮಕ್ಕೆ ಬೇರೆಯವರ ಪರಿಚಯ ಆಗಬಹುದು
  • ನಿಮ್ಮ ಕೆಲಸಕ್ಕೆ ಅಥವಾ ಸಾಧನೆಗೆ ಪ್ರಶಂಸೆಯಿದೆ
  • ಆರ್ಥಿಕ ಬಿಕ್ಕಟ್ಟು ಕಾಡಬಹುದು
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ನಿಮ್ಮ ವೈಯಕ್ತಿಕ ವಿಚಾರಕ್ಕೆ ಬೇರೆ ಸಲಹೆ ಬೇಡ
  • ಇಂದು ನಿಮಗೆ ತಾಳ್ಮೆ ಮುಖ್ಯವಾಗಲಿದೆ
  • ಹಾಸ್ಯಾಸ್ಪದ ಅಥವಾ ವಿರೋಧಕ್ಕೆ ಅವಕಾಶವಾಗುವ ಪರಿಸ್ಥಿತಿ ಎದುರಿಸಬೇಕಾಗಬಹುದು
  • ಜವಾಬ್ದಾರಿಗಳಿಂದ ಹೊರಬರಬೇಕು
  • ಜನ ಸಂದಣಿಯಲ್ಲಿ ನಿಮಗೆ ತೊಂದರೆಯಾಗಬಹುದು
  • ಮಕ್ಕಳ ವರ್ತನೆ ಹಿರಿಯರಿಗೆ ಬೇಸರ ತರಲಿದೆ
  • ಆಂಜನೇಯ ಸ್ವಾಮಿಯನ್ನು ಉಪಾಸನೆ ಮಾಡಿ

ತುಲಾ

publive-image

  • ರಾಜಕೀಯ ಪ್ರಭಾವ ಕೆಲಸ ಮಾಡಬಹುದು
  • ವೃತ್ತಿಯಲ್ಲಿ ಅನುಕೂಲವಾದರೆ ತುಂಬಾ ಶ್ರಮ ಪಡಬೇಕಾಗಬಹುದು
  • ಆರೋಗ್ಯದ ಬಗ್ಗೆ ಸುಧಾರಣೆ ಇದೆ
  • ಇಂದು ಪ್ರೇಮಿಗಳಿಗೆ ಶುಭದಿನ
  • ಕಾಲಿಗೆ ಪೆಟ್ಟು ಬೀಳಬಹುದು ಜಾಗ್ರತೆವಹಿಸಿ
  • ವಿಕಲಚೇತನರಿಗೆ ಸಹಾಯ ಮಾಡಿ

ವೃಶ್ಚಿಕ

publive-image

  • ವಿದ್ಯಾರ್ಥಿಗಳಿಗೆ ಮಿತ್ರರಿಂದಲೇ ತೊಂದರೆಯಾಗಬಹುದು
  • ವ್ಯವಹಾರದಲ್ಲಿ ಉತ್ತಮ ಲಾಭ ಶುಭವೂ ಇದೆ
  • ಯಾರನ್ನಾದರೂ ಕ್ಷಮಿಸುವ ಪ್ರಸಂಗವಿದ್ದರೆ ಕ್ಷಮಿಸಿ
  • ಮನೆಯ ಅಗತ್ಯತೆಗೆ ಆದ್ಯತೆ ಕೊಡಿ
  • ಏಕಾಗ್ರತೆಯು ಉತ್ತಮ ಫಲಿತಾಂಶ ನೀಡಬಹುದು
  • ಜೀವನ ಶೈಲಿಯಲ್ಲಿ ಸುಧಾರಣೆ ಕಾಣುವ ದಿನವಾಗಿದೆ
  • ವಿದ್ಯಾ ಗೋಪಾಲಕೃಷ್ಣನನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ಮನೆಯ ಜವಾಬ್ದಾರಿಯ ಬಗ್ಗೆ ಪೂರ್ಣ ಜವಾಬ್ದಾರಿವಹಿಸಿ
  • ಇಂದು ಬದಲಾವಣೆಯ ಆಲೋಚನೆ ಬರಬಹುದು
  • ಮದುವೆ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬಹುದು ಆದರೆ ಉಪಯೋಗವಿಲ್ಲ
  • ಆರೋಗ್ಯ ವಿಚಾರದಲ್ಲಿ ಅದರಲ್ಲೂ ಬೆನ್ನು ನೋವಿನ ಬಗ್ಗೆ ಕಾಳಜಿವಹಿಸಿ
  • ವೆಂಕಟರಮಣನನ್ನು ಆರಾಧನೆ ಮಾಡಿ

ಮಕರ

publive-image

  • ತೋರಿಕೆಯ ಕೆಲಸದಲ್ಲಿ ಸಿಕ್ಕಿ ಬೀಳುವ ಸಾಧ್ಯತೆಗಳಿವೆ
  • ಇಂದು ನಿಮ್ಮ ನೈತಿಕತೆ ಚೆನ್ನಾಗಿರಲಿದೆ
  • ಸ್ವಯಂ ಪ್ರಜ್ಞೆಯಿಲ್ಲದೆ ಕೆಲವು ಅನಾಹುತಗಳಿಗೆ ಅವಕಾಶವಿರಬಹುದು
  • ನಿಮ್ಮ ಪ್ರಗತಿಯ ಬಗ್ಗೆ ಭಯವಿದೆ
  • ವೃತ್ತಿ ಅಥವಾ ಉದ್ಯೋಗದ ಒತ್ತಡ ತೊಂದರೆಗೆ ಕಾರಣವಾಗಬಹುದು
  • ಒಳ್ಳೆಯ ಸ್ನೇಹಿತರ ಅಥವಾ ಹಿತೈಷಿಗಳ ಮಾರ್ಗದರ್ಶನ ಪಡೆಯಿರಿ
  • ಶಿವನನ್ನು ಬಿಲ್ವಪತ್ರೆಯಿಂದ ಅರ್ಚನೆ ಮಾಡಿ

ಕುಂಭ

publive-image

  • ಮಕ್ಕಳ ಪ್ರಗತಿ ಅಥವಾ ವಿದ್ಯಾಭ್ಯಾಸದಿಂದ ಸಂತೋಷ
  • ವ್ಯಾಪಾರ ಅಥವಾ ವ್ಯವಹಾರದ ಪ್ರಗತಿ ಆರ್ಥಿಕ ಲಾಭ ಸಿಗಲಿದೆ
  • ಸಂಬಂಧಿಕರ ಆಗಮನ ಖುಷಿ ಕೊಡಲಿದೆ
  • ಬರಬೇಕಾದ ಬಾಕಿ ಹಣ ಬರಬಹುದು
  • ಅನಾರೋಗ್ಯ ಮುಕ್ತ ಸ್ನೇಹಿತರಿಂದ ಸಿಹಿ ಸುದ್ದಿ ಸಿಗಲಿದೆ
  • ಮಹಾಲಕ್ಷ್ಮಿಯನ್ನು ಮಲ್ಲಿಗೆ ಹೂವಿನಿಂದ ಅರ್ಚನೆ ಮಾಡಿ

ಮೀನ 

publive-image

  • ಕುಟುಂಬದಲ್ಲಿ ಶುಭ ಕಾರ್ಯದ ಚಿಂತನೆ ಇರಬಹುದು
  • ಮಿತ್ರರ ಭೇಟಿ ವಿರೋಧಿಗಳ ಬಗ್ಗೆ ಚರ್ಚೆಯಾಗಬಹುದು
  • ಮೂಲ ಉದ್ದೇಶ ಮರೆತು ಕಾರ್ಯಪ್ರವೃತ್ತರಾಗಬಹುದು
  • ಇಂದು ಸಮಯಕ್ಕೆ ಆದ್ಯತೆ ನೀಡಿ
  • ಧನಾತ್ಮಕ ಫಲಿತಾಂಶ ನಿಮ್ಮದಾಗಲಿದೆ
  • ಇಂದು ಮಾನಸಿಕ ನೆಮ್ಮದಿ ಸಿಗಬಹುದು
  • ಕೋಪ ಆತಂಕಗಳು ಮನೆ ಮಾಡಿರುವ ದಿನ
  • ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment