/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಬೆಳಗ್ಗೆ 7.30 ರಿಂದ 9.00 ರವರೆಗೆ
ಇರಲಿದೆ.
ಮೇಷ ರಾಶಿ
- ನಿಮ್ಮ ಸೇವೆ ಅಥವಾ ಸಹಾಯಕ್ಕಾಗಿ ಸಮಾಜದಲ್ಲಿ ಮನ್ನಣೆ ಸಿಗಲಿದೆ
- ಬೆಲೆ ಬಾಳುವ ವಸ್ತು ಖರೀದಿ ಮಾಡುತ್ತೀರಿ
- ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು
- ನಿಮ್ಮ ಬಗ್ಗೆ ಹೆಚ್ಚು ಗಮನ ಕೊಡಿ ಭದ್ರತೆಯಿರಲಿ
- ಪ್ರೀತಿ ಪ್ರೇಮ ವಿಚಾರದಲ್ಲಿ ಗೊಂದಲ ಬೇಸರವಾಗಬಹುದು
- ಕುಲದೇವತಾ ಆರಾಧನೆ ಮಾಡಿ
ವೃಷಭ
- ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ದೊರೆಯಲಿದೆ
- ಹಣದ ವಿಚಾರದಲ್ಲಿ ನಿರಾಸೆ ಉಂಟಾಗಬಹುದು
- ಅನಗತ್ಯ ಅಥವಾ ಅನುಪಯುಕ್ತ ಕೆಲಸಗಳಲ್ಲಿ ಸಮಯ ವ್ಯರ್ಥವಾಗಬಹುದು
- ವಾದ-ವಿವಾದಗಳಿಂದ ಸಮಸ್ಯೆ ಉಂಟಾಗಬಹುದು
- ಆತಂಕ ಬೇಡ ಸಮಾಧಾನವನ್ನು ಕಾಪಾಡಿಕೊಳ್ಳಿ
- ಈಶ್ವರನ ಆರಾಧನೆ ಮಾಡಿ
ಮಿಥುನ
- ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಬೇಡ
- ಕುಟುಂಬದಲ್ಲಿ ನೆಮ್ಮದಿಯ ಶಾಂತಿಯ ವಾತಾವರಣವನ್ನು ಕಾಪಾಡಿಕೊಳ್ಳಿ
- ಜನರು ನಿಮ್ಮ ಸಲಹೆಯನ್ನ ಸ್ವೀಕರಿಸಬಹುದು
- ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲವಿದೆ
- ಕೋಪದಿಂದ ಗಾಯವಾಗುವ ಸಾಧ್ಯತೆ ಇದೆ ಎಚ್ಚರಿಕೆಯಿರಲಿ
- ತುಳಸಿಯಿಂದ ವಿಷ್ಣುವಿನ ಅರ್ಚನೆ ಮಾಡಿ
ಕಟಕ
- ಹಳೆಯ ವಿಚಾರಗಳನ್ನು ದೂರ ಮಾಡಿ ಬೇಸರ ಕಡಿಮೆ ಮಾಡಿಕೊಳ್ಳಿ
- ಅನುಕೂಲದ ಸಮಯವನ್ನು ಉಪಯೋಗಿಸಿಕೊಳ್ಳಿ
- ಹೊಸ ಹೂಡಿಕೆಗೆ ಇಂದು ಅನುಕೂಲವಿದೆ
- ಯಾವುದೇ ಬದಲಾವಣೆಯ ಬಗ್ಗೆ ಚಿಂತೆ ಬೇಡ
- ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ ಮಾಡಿಸಿ
ಸಿಂಹ
- ಧಾರ್ಮಿಕ ಅಥವಾ ಆಧ್ಯಾತ್ಮಿಕ ವಿಚಾರಗಳಿಂದ ಮಾನಸಿಕ ನೆಮ್ಮದಿ ಸಿಗಲಿದೆ
- ಈ ದಿನ ನೀವು ಸಮಾರಂಭಗಳಿಗೆ ಹಾಜರಾಗಬಹುದು
- ಮಕ್ಕಳಿಗೆ ನೀತಿ ಪಾಠ ಹೇಳಿ ಗೌರವ ಬರಬಹುದು
- ಹೊಸ ಉದ್ಯಮಕ್ಕೆ ಬೇರೆಯವರ ಪರಿಚಯ ಆಗಬಹುದು
- ನಿಮ್ಮ ಕೆಲಸಕ್ಕೆ ಅಥವಾ ಸಾಧನೆಗೆ ಪ್ರಶಂಸೆಯಿದೆ
- ಆರ್ಥಿಕ ಬಿಕ್ಕಟ್ಟು ಕಾಡಬಹುದು
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ನಿಮ್ಮ ವೈಯಕ್ತಿಕ ವಿಚಾರಕ್ಕೆ ಬೇರೆ ಸಲಹೆ ಬೇಡ
- ಇಂದು ನಿಮಗೆ ತಾಳ್ಮೆ ಮುಖ್ಯವಾಗಲಿದೆ
- ಹಾಸ್ಯಾಸ್ಪದ ಅಥವಾ ವಿರೋಧಕ್ಕೆ ಅವಕಾಶವಾಗುವ ಪರಿಸ್ಥಿತಿ ಎದುರಿಸಬೇಕಾಗಬಹುದು
- ಜವಾಬ್ದಾರಿಗಳಿಂದ ಹೊರಬರಬೇಕು
- ಜನ ಸಂದಣಿಯಲ್ಲಿ ನಿಮಗೆ ತೊಂದರೆಯಾಗಬಹುದು
- ಮಕ್ಕಳ ವರ್ತನೆ ಹಿರಿಯರಿಗೆ ಬೇಸರ ತರಲಿದೆ
- ಆಂಜನೇಯ ಸ್ವಾಮಿಯನ್ನು ಉಪಾಸನೆ ಮಾಡಿ
ತುಲಾ
- ರಾಜಕೀಯ ಪ್ರಭಾವ ಕೆಲಸ ಮಾಡಬಹುದು
- ವೃತ್ತಿಯಲ್ಲಿ ಅನುಕೂಲವಾದರೆ ತುಂಬಾ ಶ್ರಮ ಪಡಬೇಕಾಗಬಹುದು
- ಆರೋಗ್ಯದ ಬಗ್ಗೆ ಸುಧಾರಣೆ ಇದೆ
- ಇಂದು ಪ್ರೇಮಿಗಳಿಗೆ ಶುಭದಿನ
- ಕಾಲಿಗೆ ಪೆಟ್ಟು ಬೀಳಬಹುದು ಜಾಗ್ರತೆವಹಿಸಿ
- ವಿಕಲಚೇತನರಿಗೆ ಸಹಾಯ ಮಾಡಿ
ವೃಶ್ಚಿಕ
- ವಿದ್ಯಾರ್ಥಿಗಳಿಗೆ ಮಿತ್ರರಿಂದಲೇ ತೊಂದರೆಯಾಗಬಹುದು
- ವ್ಯವಹಾರದಲ್ಲಿ ಉತ್ತಮ ಲಾಭ ಶುಭವೂ ಇದೆ
- ಯಾರನ್ನಾದರೂ ಕ್ಷಮಿಸುವ ಪ್ರಸಂಗವಿದ್ದರೆ ಕ್ಷಮಿಸಿ
- ಮನೆಯ ಅಗತ್ಯತೆಗೆ ಆದ್ಯತೆ ಕೊಡಿ
- ಏಕಾಗ್ರತೆಯು ಉತ್ತಮ ಫಲಿತಾಂಶ ನೀಡಬಹುದು
- ಜೀವನ ಶೈಲಿಯಲ್ಲಿ ಸುಧಾರಣೆ ಕಾಣುವ ದಿನವಾಗಿದೆ
- ವಿದ್ಯಾ ಗೋಪಾಲಕೃಷ್ಣನನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಮನೆಯ ಜವಾಬ್ದಾರಿಯ ಬಗ್ಗೆ ಪೂರ್ಣ ಜವಾಬ್ದಾರಿವಹಿಸಿ
- ಇಂದು ಬದಲಾವಣೆಯ ಆಲೋಚನೆ ಬರಬಹುದು
- ಮದುವೆ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬಹುದು ಆದರೆ ಉಪಯೋಗವಿಲ್ಲ
- ಆರೋಗ್ಯ ವಿಚಾರದಲ್ಲಿ ಅದರಲ್ಲೂ ಬೆನ್ನು ನೋವಿನ ಬಗ್ಗೆ ಕಾಳಜಿವಹಿಸಿ
- ವೆಂಕಟರಮಣನನ್ನು ಆರಾಧನೆ ಮಾಡಿ
ಮಕರ
- ತೋರಿಕೆಯ ಕೆಲಸದಲ್ಲಿ ಸಿಕ್ಕಿ ಬೀಳುವ ಸಾಧ್ಯತೆಗಳಿವೆ
- ಇಂದು ನಿಮ್ಮ ನೈತಿಕತೆ ಚೆನ್ನಾಗಿರಲಿದೆ
- ಸ್ವಯಂ ಪ್ರಜ್ಞೆಯಿಲ್ಲದೆ ಕೆಲವು ಅನಾಹುತಗಳಿಗೆ ಅವಕಾಶವಿರಬಹುದು
- ನಿಮ್ಮ ಪ್ರಗತಿಯ ಬಗ್ಗೆ ಭಯವಿದೆ
- ವೃತ್ತಿ ಅಥವಾ ಉದ್ಯೋಗದ ಒತ್ತಡ ತೊಂದರೆಗೆ ಕಾರಣವಾಗಬಹುದು
- ಒಳ್ಳೆಯ ಸ್ನೇಹಿತರ ಅಥವಾ ಹಿತೈಷಿಗಳ ಮಾರ್ಗದರ್ಶನ ಪಡೆಯಿರಿ
- ಶಿವನನ್ನು ಬಿಲ್ವಪತ್ರೆಯಿಂದ ಅರ್ಚನೆ ಮಾಡಿ
ಕುಂಭ
- ಮಕ್ಕಳ ಪ್ರಗತಿ ಅಥವಾ ವಿದ್ಯಾಭ್ಯಾಸದಿಂದ ಸಂತೋಷ
- ವ್ಯಾಪಾರ ಅಥವಾ ವ್ಯವಹಾರದ ಪ್ರಗತಿ ಆರ್ಥಿಕ ಲಾಭ ಸಿಗಲಿದೆ
- ಸಂಬಂಧಿಕರ ಆಗಮನ ಖುಷಿ ಕೊಡಲಿದೆ
- ಬರಬೇಕಾದ ಬಾಕಿ ಹಣ ಬರಬಹುದು
- ಅನಾರೋಗ್ಯ ಮುಕ್ತ ಸ್ನೇಹಿತರಿಂದ ಸಿಹಿ ಸುದ್ದಿ ಸಿಗಲಿದೆ
- ಮಹಾಲಕ್ಷ್ಮಿಯನ್ನು ಮಲ್ಲಿಗೆ ಹೂವಿನಿಂದ ಅರ್ಚನೆ ಮಾಡಿ
ಮೀನ
- ಕುಟುಂಬದಲ್ಲಿ ಶುಭ ಕಾರ್ಯದ ಚಿಂತನೆ ಇರಬಹುದು
- ಮಿತ್ರರ ಭೇಟಿ ವಿರೋಧಿಗಳ ಬಗ್ಗೆ ಚರ್ಚೆಯಾಗಬಹುದು
- ಮೂಲ ಉದ್ದೇಶ ಮರೆತು ಕಾರ್ಯಪ್ರವೃತ್ತರಾಗಬಹುದು
- ಇಂದು ಸಮಯಕ್ಕೆ ಆದ್ಯತೆ ನೀಡಿ
- ಧನಾತ್ಮಕ ಫಲಿತಾಂಶ ನಿಮ್ಮದಾಗಲಿದೆ
- ಇಂದು ಮಾನಸಿಕ ನೆಮ್ಮದಿ ಸಿಗಬಹುದು
- ಕೋಪ ಆತಂಕಗಳು ಮನೆ ಮಾಡಿರುವ ದಿನ
- ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ