/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ
ಇರಲಿದೆ.
ಮೇಷ ರಾಶಿ
- ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಒಳ್ಳೆಯ ಸಮಯ
- ಕೆಲಸದ ಒತ್ತಡ ಹೆಚ್ಚಾಗಿರಲಿದೆ
ಕೌಟುಂಬಿಕ ಏಕತೆಗೆ ಹೋರಾಡುತ್ತೀರಿ - ಕಚೇರಿಯಲ್ಲಿ ಉತ್ತಮ ಸ್ಪಂದನೆ ಸಿಗಲಿದೆ
- ಸಮಯಾಭಾವದಿಂದ ಕೆಲಸ ನಿಲ್ಲಬಹುದು
- ಹಣಕಾಸಿನ ಕೊರತೆ ಇರುವುದಿಲ್ಲ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ಹಲವಾರು ಸವಾಲುಗಳನ್ನು ಎದುರಿಸುತ್ತೀರಿ
- ಇಂದು ಆರ್ಥಿಕ ಲಾಭಗಳಿಸುತ್ತೀರಿ
- ಹೊಸ ವ್ಯವಹಾರದಲ್ಲಿ ಹಣ ಹೂಡಬಹುದು
- ಯಶಸ್ಸಿನ ಹಾದಿ ನಿಮ್ಮದಾಗಲಿದೆ
- ಆಧ್ಯಾತ್ಮಿಕ ಪ್ರಗತಿಗೆ ಸುಸಮಯ
- ಹಿರಿಯರ ಬೆಂಬಲ ದೊರೆಯಲಿದೆ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಮಿಥುನ
- ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ
- ತಂದೆಯವರಿಗೆ ಆಘಾತವಾಗುವ ಸಂಭವವಿದೆ ಎಚ್ಚರಿಕೆವಹಿಸಿ
- ಪ್ರೇಮಿಗಳಲ್ಲಿ ಪರಸ್ಪರ ಅನುಮಾನವಿರಲಿದೆ
- ಶಾಂತಿ, ತಾಳ್ಮೆ ದೂರವಾದರೆ ತೊಂದರೆಯಾಗಬಹುದು
- ಹಣದ ಸಮಸ್ಯೆಯಿಂದ ತೊಂದರೆಯಾಗಬಹುದು
- ಹವಾಮಾನ ವೈಪರೀತ್ಯದಿಂದ ಅನಾರೋಗ್ಯ ಕಾಡಬಹುದು
- ನವಗ್ರಹರನ್ನು ಆರಾಧನೆ ಮಾಡಿ ಅದರಲ್ಲೂ ರವಿಯನ್ನು ಪ್ರಾರ್ಥನೆ ಮಾಡಿ
ಕಟಕ
- ನಿಮ್ಮ ಕೆಲಸದಲ್ಲಿ ಬದಲಾವಣೆ ಕಾಣಬಹುದು
- ಭವಿಷ್ಯಕ್ಕಾಗಿ ಹಣಹೂಡಿಕೆ ಮಾಡಬಹುದು
- ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ
- ಶುಭ ಕಾರ್ಯದಲ್ಲಿ ಭಾಗವಹಿಸುತ್ತೀರಿ
- ಮನೆ ಅಥವಾ ಕಟ್ಟಡ ನಿರ್ಮಾಣದ ಪ್ರಗತಿಯಿದೆ
- ಷೇರು ಮಾರುಕಟ್ಟೆಯಿಂದ ಹಣಗಳಿಸಬಹುದು
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಹಳೆಯ ಬಾಕಿ ಪಡೆಯಬಹುದು
- ಅಪರಿಚಿತರನ್ನು ನಂಬಿ ಸಹಾಯ ಮಾಡಲು ಹೋಗದಿರಿ
- ಹಿರಿಯರ ಪ್ರೀತಿ ಮತ್ತು ಆಶೀರ್ವಾದ ಪಡೆಯಿರಿ
- ಬಯಸಿದ್ದ ಕೆಲಸಗಳು ಸಕಾಲದಲ್ಲಿ ಆಗಲಿದೆ
- ಇಂಜಿನಿಯರ್ಸ್ ಗಳಿಗೆ ಸಮಸ್ಯೆಯಾಗಬಹುದು
- ಉದ್ಯೋಗಿಗಳಿಗೆ ಈ ದಿನ ತುಂಬಾ ಚೆನ್ನಾಗಿದೆ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಬೇರೆಯವರೊಂದಿಗೆ ಜಗಳ ಬೇಡ
- ಸಂತೋಷದಿಂದ ಕಳೆಯಬೇಕಾದ ಸಮಯ ಹಾಳಾಗಬಹುದು
- ಸರ್ಕಾರಿ ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು
- ನಿರೀಕ್ಷಿಸಿದ ಫಲ ಸಿಗುವುದಿಲ್ಲ
- ನಿಮ್ಮ ಆಸಕ್ತಿಗೆ ಅನುಗುಣವಾಗಿ ಕೆಲಸ ಮಾಡಿ
- ಮನೆಯಲ್ಲಿ ಉಪಕರಣಗಳಿಂದ ತೊಂದರೆಯಾಗಬಹುದು
- ನವಗ್ರಹರನ್ನು ಆರಾಧನೆ ಮಾಡಿ ಅದರಲ್ಲೂ ಶನಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಆರೋಗ್ಯದ ಸಮಸ್ಯೆ ಕಾಡಬಹುದು
- ಕೆಲಸದ ಸ್ಥಳದಲ್ಲಿ ನಿಮಗೆ ಒಳ್ಳೆ ಹೆಸರಿರಲಿದೆ
- ಆಸ್ತಿ ವಿವಾದಗಳನ್ನು ತಪ್ಪಿಸಬೇಕು
- ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ
- ಕಾನೂನು ವಿಚಾರದಲ್ಲಿ ಜಯವಿದೆ
- ನಿಮ್ಮ ವರ್ತನೆ ಧನಾತ್ಮಕವಾಗಿರಲಿ
- ಕುಲದೇವತಾರಾಧನೆ ಮಾಡಿ
ವೃಶ್ಚಿಕ
- ನಿಮ್ಮ ಪರಿಶ್ರಮವನ್ನು ಗುರುತಿಸಲಾಗುವುದು
- ಮಹತ್ವದ ಯೋಜನೆಗೆ ಹಣವ್ಯಯವಾಗಬಹುದು
- ಮನೆಯ ಖರ್ಚಿಗಾಗಿ ಹಣದ ಕೊರತೆಯಾಗಬಹುದು
- ಕುಟುಂಬದ ಜವಾಬ್ದಾರಿಗಳನ್ನು ಗಮನಿಸಿ
- ಜನ ನಿಮ್ಮನ್ನು ನಂಬುತ್ತಾರೆ ಅದನ್ನ ಉಳಿಸಿಕೊಳ್ಳಬೇಕು
- ಎಲ್ಲಾ ಕೆಲಸಗಳು ವಿಳಂಬವಾಗುವುದರಿಂದ ಬೇಸರವಾಗಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಶಿಸ್ತು ಬದ್ಧವಾದ ದಿನಚರಿಯಿರಲಿ
- ತಾಯಿಯವರಿಗೆ ಆಘಾತ ಅಥವಾ ತೊಂದರೆಯಾಗಬಹುದು
- ಅಕ್ಕ ತಂಗಿಯರ ಜಗಳಕ್ಕೆ ಅವಕಾಶವಿದೆ
- ಕುಟುಂಬದ ಸದಸ್ಯರು ಸಹಕರಿಸುವುದಿಲ್ಲ
- ಬಂಧುತ್ವದಲ್ಲಿ ಬಿರುಕು, ಬೇಸರವಾಗಬಹುದು
- ರಾಜಕೀಯದವರಿಗೆ ಅನುಕೂಲವಿದೆ
- ಶಿವಾರಾಧನೆ ಮಾಡಿ
ಮಕರ
- ಮಕ್ಕಳ ಬಗ್ಗೆ ಸರಿಯಾಗಿ ಚಿಂತಿಸಿ
- ಜನರಿಗೆ ಪ್ರೀತಿ ಪಾತ್ರರಾಗುತ್ತೀರಿ
- ಇಂದು ವಿದ್ಯಾರ್ಥಿಗಳಿಗೆ ಯಶಸ್ವಿದೆ
- ವೈವಾಹಿಕ ಜೀವನದಲ್ಲಿ ಒತ್ತಡ ಹೆಚ್ಚು
- ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ
- ಹಣಕ್ಕಾಗಿ ಹೋರಾಟ ಮಾಡುವುದರಿಂದ ಜಯ ಸಿಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ವ್ಯಾಪಾರದಲ್ಲಿ ಹೊಸ ಪಾಲುದಾರರ ಸಹಾಯವಿದೆ
- ಮನೆಯಲ್ಲಿ ಭಿನ್ನಾಭಿಪ್ರಾಯ ಇರಲಿದೆ
- ಹಿರಿಯರ ಮಾತಿಗೆ ನಿಮ್ಮ ಕೋಪ ಅಧಿಕವಾಗಬಹುದು
- ಮನೆಯಲ್ಲಿನ ಪದಾರ್ಥ ನಷ್ಟವಾಗಬಹುದು
- ವ್ಯವಹಾರಕ್ಕಾಗಿ ಹೊಸ ಹೂಡಿಕೆಗೆ ಚಿಂತನೆ ಮಾಡುತ್ತೀರಿ
- ಈಶ್ವರ ಆರಾಧನೆ ಮಾಡಿ
ಮೀನ
- ವೈವಾಹಿಕ ವಿಚಾರದಲ್ಲಿ ಅಭಿಪ್ರಾಯ ಭೇದವಿರಬಹುದು
- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ
- ಸಹೋದರರಿಗೆ ತೊಂದರೆಯಾಗಬಹುದು
- ಆರೋಗ್ಯದ ಸಮಸ್ಯೆ ಬಗ್ಗೆ ಗಮನಹರಿಸಿ
- ನಾಗರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ