/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ಬಹಳ ದಿನಗಳ ಆಸೆ ಈ ದಿನ ಈಡೇರಬಹುದು
- ತಂದೆಯವರಿಗೆ ಸಮಸ್ಯೆಯಾಗಬಹುದು
- ಹಿಂದೆ ಮಾಡಿದ ಒಳ್ಳೆ ಕೆಲಸದಿಂದ ಫಲ ಸಿಗಲಿದೆ
- ಬೇರೆಯವರು ಅಪಹಾಸ್ಯ ಮಾಡುವುದನ್ನು ತಪ್ಪಿಸಿ
- ಇಂದು ಪ್ರಯಾಣ ಮಾಡಬೇಡಿ
- ಮನೆಯಲ್ಲಿ ಮಂಗಳ ಕಾರ್ಯದ ಚಿಂತೆ ಮಾಡುತ್ತೀರಿ
- ಕುಲದೇವತಾ ಆರಾಧನೆ ಮಾಡಿ
ವೃಷಭ
- ನೌಕರಿಯ ಒತ್ತಡದಿಂದ ಶಾರೀರಿಕ ಸಮಸ್ಯೆಯಾಗಬಹುದು
- ರಾಜಕಾರಣಿಗಳ ಭೇಟಿಯ ಸಾಧ್ಯತೆ ಇದೆ
- ಆಸ್ತಿಯ ಲಾಭಕ್ಕೆ ಅವಕಾಶವಿದೆ
- ಮನೆಯಲ್ಲಿ ಸಮಾಧಾನ ಇರುವುದಿಲ್ಲ
- ಮಾಂತ್ರಿಕ ದೋಷ ಇರುವುದು ಪತ್ತೆಯಾಗಲಿದೆ
- ಹಲವಾರು ರೀತಿಯ ಯೋಚನೆಗಳು ಬರಲಿದೆ
- ನವಗ್ರಹರ ಆರಾಧನೆ ಮಾಡಿ
ಮಿಥುನ
- ಧನ ಅಥವಾ ಉದ್ಯೋಗ ನಷ್ಟ ಆಗುವ ದಿನ
- ಕುಟುಂಬದಲ್ಲಿ ವಾಗ್ವಾದ ಇರಲಿದೆ
- ಪತ್ರ ಅಥವಾ ದಾಖಲಾತಿಗಳ ಸಮಸ್ಯೆಯಾಗಲಿದೆ
- ದೃಢವಾದ ನಿರ್ಧಾರದಿಂದ ಅನುಕೂಲವಿದೆ
- ಮಕ್ಕಳಿಂದ ಸಹಾಯ ಆಗಲಿದೆ
- ಕಾನೂನಿನ ಹೋರಾಟಕ್ಕೆ ಸಜ್ಜಾಗಬೇಕು
- ಗಣಪತಿಯ ಆರಾಧನೆ ಮಾಡಿ
ಕಟಕ
- ಸ್ವಂತ ನಿರ್ಧಾರಕ್ಕೆ ಅಡ್ಡಿಯಾಗಬಹುದು
- ಸರ್ಕಾರಿ ಅಧಿಕಾರಿಗಳಿಂದ ಕಿರುಕುಳ ಅಗಬಹುದು
- ಧನ ನಷ್ಟ ಆಗುವುದರಿಂದ ಚಿಂತೆ ಕಾಡಲಿದೆ
- ಕಟ್ಟಡ ಕಾಮಗಾರಿಯ ಕೆಲಸ ಪೂರ್ಣ ಆಗಲಿದೆ
- ಇಂದು ಉದ್ವೇಗಕ್ಕೆ ಒಳಗಾಗಬೇಡಿ
- ಆರ್ಥಿಕವಾಗಿ ಸಬಲರಾಗಿರುತ್ತೀರಿ
- ಶಿವಾರಾಧನೆ ಮಾಡಿ
ಸಿಂಹ
- ಈ ದಿನ ಏನು ನಷ್ಟವಾಗದಂತೆ ಗಮನಿಸಿಕೊಳ್ಳಿ
- ಪ್ರಶಂಸೆ ನಿಮಗೆ ಇಷ್ಟವಾಗುವುದಿಲ್ಲ
- ತಂದೆಯಿಂದ ಅನುಕೂಲ ಆಗಲಿದೆ
- ಹೊಸ ಕಟ್ಟಡದ ನಿರ್ಮಾಣಕ್ಕೆ ಚಿಂತನೆ ನಡೆಸುತ್ತೀರಿ
- ರಾಜಕೀಯವಾಗಿ ಸ್ವಲ್ಪ ಆಸಕ್ತಿ ಬರಲಿದೆ
- ಇಂದು ಆರ್ಥಿಕವಾಗಿ ತೊಂದರೆ ಇಲ್ಲ
- ದುರ್ಗಾಪೂಜೆ ಮಾಡಿ
ಕನ್ಯಾ
- ಆಸ್ತಿ ನಷ್ಟ ಅಗುವ ಭಯ ನಿಮ್ಮನ್ನು ಕಾಡಲಿದೆ
- ಜಾಣತನದ ವ್ಯವಹಾರದಿಂದ ಸಮಸ್ಯೆ ಮಾಡಿಕೊಳ್ಳುತ್ತೀರಿ
- ದಾಂಪತ್ಯದಲ್ಲಿ ಅಭಿಪ್ರಾಯ ಭೇದ ಇರಲಿದೆ
- ಮಕ್ಕಳಿಂದ ತಿಳುವಳಿಕೆ ಹೇಳಿಸಿಕೊಳ್ಳುತ್ತೀರಿ
- ಕುಟುಂಬದಲ್ಲಿ ಮಾತುಕತೆ ಇರುವುದಿಲ್ಲ
- ಮನಸ್ಸಿಗೆ ಬಂದದ್ದನ್ನು ಮಾಡಲು ಹೋದರೆ ತೊಂದರೆಯಾಗಬಹುದು
- ಇಷ್ಟದೇವತಾ ಪ್ರಾರ್ಥನೆ ಮಾಡಿ
ತುಲಾ
- ನಿರೀಕ್ಷಿಸಿದ ಕೆಲಸದಿಂದ ಬಹಳ ಸಂತೋಷ ಆಗಲಿದೆ
- ಕೆಲಸ ಕಾರ್ಯದಲ್ಲಿ ಜಯವನ್ನು ಸಾಧಿಸುತ್ತೀರಿ
- ಕಾನೂನು ಹೋರಾಟಕ್ಕೆ ಹೊಸ ತಿರುವು ಬರಲಿದೆ
- ಹಳೆಯ ಹೂಡಿಕೆಯಿಂದ ಲಾಭವೂ ಆಗಲಿದೆ
- ಮಂಗಳ ಕಾರ್ಯಗಳನ್ನು ಮಾಡಲು ನಿರ್ಧಾರ ಮಾಡುತ್ತೀರಿ
- ಇಂದು ಮಕ್ಕಳಿಂದ ಶುಭವಿದೆ
- ವಿಷ್ಣು ಸಹಸ್ರ ನಾಮವನ್ನು ಶ್ರವಣ ಮಾಡಿ
ವೃಶ್ಚಿಕ
- ಇಂದು ಪ್ರಯಾಣದ ಅವಶ್ಯಕತೆ ಇದೆ
- ದೂರದೂರಿಗೆ ಹೋಗುವುದಕ್ಕೆ ಮನಸ್ಸು ಮಾಡುತ್ತೀರಿ
- ರಾಜಕೀಯ ವ್ಯಕ್ತಿಗಳಿಂದ ನಿಮಗೆ ಅನುಕೂಲವಿದೆ
- ಉದ್ಯೋಗ ವಿಚಾರದಲ್ಲಿ ಅಸಮಾಧಾನ
- ಅಪರಿಚಿತರಿಂದ ಸಹಾಯ ಆಗಬಹುದು
- ಬೇಜವಾಬ್ದಾರಿಯ ಪರಾಕಾಷ್ಠೆ ಮತ್ತು ಆಲಸ್ಯ ತೊಂದರೆಯನ್ನು ಮಾಡಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಉಡುಗೊರೆ ಅಥವಾ ಬಹುಮಾನ ರೂಪದಲ್ಲಿ ಹಣ ಪಡೆಯಲು ಅವಕಾಶವಿದೆ
- ತಾಯಿಯವರಿಂದ ಸಹಾಯ ಆಗಲಿದೆ
- ಆರೋಗ್ಯದ ಬಗ್ಗೆ ಗಮನಹರಿಸಿ
- ಮನೆಯಲ್ಲಿ ಮಂಗಳ ಕಾರ್ಯದ ಚಿಂತನೆ
- ಮಾನಸಿಕವಾಗಿ ಕಳವಳ ಭಯದ ವಾತಾವರಣ ಇರಲಿದೆ
- ಧರ್ಮಕ್ಷೇತ್ರಕ್ಕೆ ಭೇಟಿ ನೀಡುತ್ತೀರಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಮಕರ
- ಶುಭ ಕಾರ್ಯಕ್ಕೆ ವಿಘ್ನ ಆಗಬಹುದು
- ಇಂದು ಸ್ನೇಹಿತರು ದೂರವಾಗಬಹುದು
- ಉನ್ನತ ಅಧಿಕಾರಿಗಳ ಸಹಾಯ ಅರ್ಧಕ್ಕೆ ನಿಲ್ಲಬಹುದು
- ದಾಂಪತ್ಯದಲ್ಲಿ ಕಲಹ ಆಗಲಿದೆ
- ಆಸ್ತಿ ವಿಚಾರದಲ್ಲಿ ಮುನ್ನಡೆಯಾಗಲಿದೆ
- ಕುಟುಂಬದಲ್ಲಿ ಅಸಹಕಾರದಿಂದ ಬೇಸರ ಆಗಬಹುದು
- ಲಕ್ಷ್ಮೀನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ
ಕುಂಭ
- ಹಣ ಹೂಡಿಕೆಯ ವಿಚಾರ ಸಮಸ್ಯೆಯಾಗಬಹುದು
- ಸಹೋದರ ವರ್ಗದಲ್ಲಿ ಜಗಳ ಆಗಬಹುದು
- ಇಂದು ವ್ಯವಹಾರದಲ್ಲಿ ಅನುಕೂಲವಿದೆ
- ಬೇರೆಯವರ ಆಸ್ತಿ, ಪದಾರ್ಥದಿಂದ ತೊಂದರೆಯಾಗಬಹುದು
- ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ
- ಮಾತೆಯರಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು
- ಗೋ ಸೇವೆಯನ್ನು ಮಾಡಿ
ಮೀನ
- ಉದ್ಯೋಗ ಸ್ಥಳದಲ್ಲಿ ಸಮಸ್ಯೆಯಾಗಬಹುದು
- ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು
- ಸಾಕು ಪ್ರಾಣಿಗಳಿಂದ ಎಚ್ಚರಿಕೆವಹಿಸಿ
- ಯಾವುದೇ ನಿರ್ಧಾರಕ್ಕೂ ಮುನ್ನ ಆಲೋಚನೆ ಮಾಡಿ
- ಮಾನಸಿಕ ಹಿಂಸೆಯಿಂದ ಬೇಸರ ಆಗಬಹುದು
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ಚಂದ್ರ ಗ್ರಹನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ