ಅಪರಿಚಿತರಿಂದ ಭಾರೀ ಲಾಭ, ಅವಿವಾಹಿತರಿಗೆ ಕಂಕಣ ಭಾಗ್ಯ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಪತ್ರ ಅಥವಾ ದಾಖಲಾತಿಗಳ ಸಮಸ್ಯೆಯಾಗಲಿದೆ
  • ಹಲವಾರು ರೀತಿಯ ಯೋಚನೆಗಳು ಬರಲಿದೆ
  • ಮನೆಯಲ್ಲಿ ಮಂಗಳ ಕಾರ್ಯದ ಚಿಂತೆ ಮಾಡುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಬಹಳ ದಿನಗಳ ಆಸೆ ಈ ದಿನ ಈಡೇರಬಹುದು
  • ತಂದೆಯವರಿಗೆ ಸಮಸ್ಯೆಯಾಗಬಹುದು
  • ಹಿಂದೆ ಮಾಡಿದ ಒಳ್ಳೆ ಕೆಲಸದಿಂದ ಫಲ ಸಿಗಲಿದೆ
  • ಬೇರೆಯವರು ಅಪಹಾಸ್ಯ ಮಾಡುವುದನ್ನು ತಪ್ಪಿಸಿ
  • ಇಂದು ಪ್ರಯಾಣ ಮಾಡಬೇಡಿ
  • ಮನೆಯಲ್ಲಿ ಮಂಗಳ ಕಾರ್ಯದ ಚಿಂತೆ ಮಾಡುತ್ತೀರಿ
  • ಕುಲದೇವತಾ ಆರಾಧನೆ ಮಾಡಿ

ವೃಷಭ

publive-image

  • ನೌಕರಿಯ ಒತ್ತಡದಿಂದ ಶಾರೀರಿಕ ಸಮಸ್ಯೆಯಾಗಬಹುದು
  • ರಾಜಕಾರಣಿಗಳ ಭೇಟಿಯ ಸಾಧ್ಯತೆ ಇದೆ
  • ಆಸ್ತಿಯ ಲಾಭಕ್ಕೆ ಅವಕಾಶವಿದೆ
  • ಮನೆಯಲ್ಲಿ ಸಮಾಧಾನ ಇರುವುದಿಲ್ಲ
  • ಮಾಂತ್ರಿಕ ದೋಷ ಇರುವುದು ಪತ್ತೆಯಾಗಲಿದೆ
  • ಹಲವಾರು ರೀತಿಯ ಯೋಚನೆಗಳು ಬರಲಿದೆ
  • ನವಗ್ರಹರ ಆರಾಧನೆ ಮಾಡಿ

ಮಿಥುನ

publive-image

  • ಧನ ಅಥವಾ ಉದ್ಯೋಗ ನಷ್ಟ ಆಗುವ ದಿನ
  • ಕುಟುಂಬದಲ್ಲಿ ವಾಗ್ವಾದ ಇರಲಿದೆ
  • ಪತ್ರ ಅಥವಾ ದಾಖಲಾತಿಗಳ ಸಮಸ್ಯೆಯಾಗಲಿದೆ
  • ದೃಢವಾದ ನಿರ್ಧಾರದಿಂದ ಅನುಕೂಲವಿದೆ
  • ಮಕ್ಕಳಿಂದ ಸಹಾಯ ಆಗಲಿದೆ
  • ಕಾನೂನಿನ ಹೋರಾಟಕ್ಕೆ ಸಜ್ಜಾಗಬೇಕು
  • ಗಣಪತಿಯ ಆರಾಧನೆ ಮಾಡಿ

ಕಟಕ

publive-image

  • ಸ್ವಂತ ನಿರ್ಧಾರಕ್ಕೆ ಅಡ್ಡಿಯಾಗಬಹುದು
  • ಸರ್ಕಾರಿ ಅಧಿಕಾರಿಗಳಿಂದ ಕಿರುಕುಳ ಅಗಬಹುದು
  • ಧನ ನಷ್ಟ ಆಗುವುದರಿಂದ ಚಿಂತೆ ಕಾಡಲಿದೆ
  • ಕಟ್ಟಡ ಕಾಮಗಾರಿಯ ಕೆಲಸ ಪೂರ್ಣ ಆಗಲಿದೆ
  • ಇಂದು ಉದ್ವೇಗಕ್ಕೆ ಒಳಗಾಗಬೇಡಿ
  • ಆರ್ಥಿಕವಾಗಿ ಸಬಲರಾಗಿರುತ್ತೀರಿ
  • ಶಿವಾರಾಧನೆ ಮಾಡಿ

ಸಿಂಹ

publive-image

  • ಈ ದಿನ ಏನು ನಷ್ಟವಾಗದಂತೆ ಗಮನಿಸಿಕೊಳ್ಳಿ
  • ಪ್ರಶಂಸೆ ನಿಮಗೆ ಇಷ್ಟವಾಗುವುದಿಲ್ಲ
  • ತಂದೆಯಿಂದ ಅನುಕೂಲ ಆಗಲಿದೆ
  • ಹೊಸ ಕಟ್ಟಡದ ನಿರ್ಮಾಣಕ್ಕೆ ಚಿಂತನೆ ನಡೆಸುತ್ತೀರಿ
  • ರಾಜಕೀಯವಾಗಿ ಸ್ವಲ್ಪ ಆಸಕ್ತಿ ಬರಲಿದೆ
  • ಇಂದು ಆರ್ಥಿಕವಾಗಿ ತೊಂದರೆ ಇಲ್ಲ
  • ದುರ್ಗಾಪೂಜೆ ಮಾಡಿ

ಕನ್ಯಾ

publive-image

  • ಆಸ್ತಿ ನಷ್ಟ ಅಗುವ ಭಯ ನಿಮ್ಮನ್ನು ಕಾಡಲಿದೆ
  • ಜಾಣತನದ ವ್ಯವಹಾರದಿಂದ ಸಮಸ್ಯೆ ಮಾಡಿಕೊಳ್ಳುತ್ತೀರಿ
  • ದಾಂಪತ್ಯದಲ್ಲಿ ಅಭಿಪ್ರಾಯ ಭೇದ ಇರಲಿದೆ
  • ಮಕ್ಕಳಿಂದ ತಿಳುವಳಿಕೆ ಹೇಳಿಸಿಕೊಳ್ಳುತ್ತೀರಿ
  • ಕುಟುಂಬದಲ್ಲಿ ಮಾತುಕತೆ ಇರುವುದಿಲ್ಲ
  • ಮನಸ್ಸಿಗೆ ಬಂದದ್ದನ್ನು ಮಾಡಲು ಹೋದರೆ ತೊಂದರೆಯಾಗಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ತುಲಾ

publive-image

  • ನಿರೀಕ್ಷಿಸಿದ ಕೆಲಸದಿಂದ ಬಹಳ ಸಂತೋಷ ಆಗಲಿದೆ
  • ಕೆಲಸ ಕಾರ್ಯದಲ್ಲಿ ಜಯವನ್ನು ಸಾಧಿಸುತ್ತೀರಿ
  • ಕಾನೂನು ಹೋರಾಟಕ್ಕೆ ಹೊಸ ತಿರುವು ಬರಲಿದೆ
  • ಹಳೆಯ ಹೂಡಿಕೆಯಿಂದ ಲಾಭವೂ ಆಗಲಿದೆ
  • ಮಂಗಳ ಕಾರ್ಯಗಳನ್ನು ಮಾಡಲು ನಿರ್ಧಾರ ಮಾಡುತ್ತೀರಿ
  • ಇಂದು ಮಕ್ಕಳಿಂದ ಶುಭವಿದೆ
  • ವಿಷ್ಣು ಸಹಸ್ರ ನಾಮವನ್ನು ಶ್ರವಣ ಮಾಡಿ

ವೃಶ್ಚಿಕ

publive-image

  • ಇಂದು ಪ್ರಯಾಣದ ಅವಶ್ಯಕತೆ ಇದೆ
  • ದೂರದೂರಿಗೆ ಹೋಗುವುದಕ್ಕೆ ಮನಸ್ಸು ಮಾಡುತ್ತೀರಿ
  • ರಾಜಕೀಯ ವ್ಯಕ್ತಿಗಳಿಂದ ನಿಮಗೆ ಅನುಕೂಲವಿದೆ
  • ಉದ್ಯೋಗ ವಿಚಾರದಲ್ಲಿ ಅಸಮಾಧಾನ
  • ಅಪರಿಚಿತರಿಂದ ಸಹಾಯ ಆಗಬಹುದು
  • ಬೇಜವಾಬ್ದಾರಿಯ ಪರಾಕಾಷ್ಠೆ ಮತ್ತು ಆಲಸ್ಯ ತೊಂದರೆಯನ್ನು ಮಾಡಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ಉಡುಗೊರೆ ಅಥವಾ ಬಹುಮಾನ ರೂಪದಲ್ಲಿ ಹಣ ಪಡೆಯಲು ಅವಕಾಶವಿದೆ
  • ತಾಯಿಯವರಿಂದ ಸಹಾಯ ಆಗಲಿದೆ
  • ಆರೋಗ್ಯದ ಬಗ್ಗೆ ಗಮನಹರಿಸಿ
  • ಮನೆಯಲ್ಲಿ ಮಂಗಳ ಕಾರ್ಯದ ಚಿಂತನೆ
  • ಮಾನಸಿಕವಾಗಿ ಕಳವಳ ಭಯದ ವಾತಾವರಣ ಇರಲಿದೆ
  • ಧರ್ಮಕ್ಷೇತ್ರಕ್ಕೆ ಭೇಟಿ ನೀಡುತ್ತೀರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಶುಭ ಕಾರ್ಯಕ್ಕೆ ವಿಘ್ನ ಆಗಬಹುದು
  • ಇಂದು ಸ್ನೇಹಿತರು ದೂರವಾಗಬಹುದು
  • ಉನ್ನತ ಅಧಿಕಾರಿಗಳ ಸಹಾಯ ಅರ್ಧಕ್ಕೆ ನಿಲ್ಲಬಹುದು
  • ದಾಂಪತ್ಯದಲ್ಲಿ ಕಲಹ ಆಗಲಿದೆ
  • ಆಸ್ತಿ ವಿಚಾರದಲ್ಲಿ ಮುನ್ನಡೆಯಾಗಲಿದೆ
  • ಕುಟುಂಬದಲ್ಲಿ ಅಸಹಕಾರದಿಂದ ಬೇಸರ ಆಗಬಹುದು
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಕುಂಭ

publive-image

  • ಹಣ ಹೂಡಿಕೆಯ ವಿಚಾರ ಸಮಸ್ಯೆಯಾಗಬಹುದು
  • ಸಹೋದರ ವರ್ಗದಲ್ಲಿ ಜಗಳ ಆಗಬಹುದು
  • ಇಂದು ವ್ಯವಹಾರದಲ್ಲಿ ಅನುಕೂಲವಿದೆ
  • ಬೇರೆಯವರ ಆಸ್ತಿ, ಪದಾರ್ಥದಿಂದ ತೊಂದರೆಯಾಗಬಹುದು
  • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ
  • ಮಾತೆಯರಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು
  • ಗೋ ಸೇವೆಯನ್ನು ಮಾಡಿ

ಮೀನ 

publive-image

  • ಉದ್ಯೋಗ ಸ್ಥಳದಲ್ಲಿ ಸಮಸ್ಯೆಯಾಗಬಹುದು
  • ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು
  • ಸಾಕು ಪ್ರಾಣಿಗಳಿಂದ ಎಚ್ಚರಿಕೆವಹಿಸಿ
  • ಯಾವುದೇ ನಿರ್ಧಾರಕ್ಕೂ ಮುನ್ನ ಆಲೋಚನೆ ಮಾಡಿ
  • ಮಾನಸಿಕ ಹಿಂಸೆಯಿಂದ ಬೇಸರ ಆಗಬಹುದು
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ಚಂದ್ರ ಗ್ರಹನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment