/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
- ಅನಾರೋಗ್ಯ ಪೀಡಿತರು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಈ ದಿನ ಹಿತಶತೃಗಳಿಂದ ತೊಂದರೆ ಸಾಧ್ಯತೆ, ಎಚ್ಚರಿಕೆ ಇರಲಿ
- ಕುಟುಂಬದ ಸದಸ್ಯರ ಮಧ್ಯೆ ಕಲಹ ಸಾಧ್ಯತೆ
- ಇಂದು ಶಾಂತವಾಗಿರಿ, ನಿಮ್ಮ ಕೆಲಸ-ಕಾರ್ಯಗಳ ಬಗ್ಗೆ ಗಮನಹರಿಸಿ
- ಈಶ್ವರನನ್ನು ಆರಾಧಿಸಿ
ವೃಷಭ
- ದೊಡ್ಡ ಉದ್ದಿಮೆ-ಕೈಗಾರಿಕೆಗಳನ್ನು ಹೊಂದಿರುವವರಿಗೆ ಶುಭಫಲ
- ಹಿಂದೆ ಮಾಡಿದ್ದ ಉತ್ತಮ ಕೆಲಸಗಳಿಗೆ ಇಂದು ಮೆಚ್ಚುಗೆ ಸಿಗುತ್ತದೆ
- ವೈವಾಹಿಕ ಜೀವನದಿಂದ ಸಂತೋಷ ಸಿಗುತ್ತದೆ
- ಕುಟುಂಬಕ್ಕೆ ಹೊಸ ಅತಿಥಿ ಆಗಮನ ಸಾಧ್ಯತೆ ಇದೆ
- ನಿಮ್ಮ ವೃತ್ತಿಯಲ್ಲಿ ಸಮಾಧಾನ ಸಿಗುವ ದಿನ
- ಬೇರೆಯವರಿಗೆ ಸಹಾಯ ಮಾಡುತ್ತಿರಿ, ಇದರಿಂದ ಮನಸ್ಸಿಗೆ ತೃಪ್ತಿ ಸಿಗಲಿದೆ
- ಹೊಸ ಕೆಲಸಗಳು, ಯೋಜನೆಗಳು ಆರಂಭವಾಗುವ ದಿನ
ಮಿಥುನ
- ಅವಸರದಲ್ಲಿ ಮಾಡಿದ ಕೆಲಸಗಳಿಂದ ನಷ್ಟ ಹೊಂದುತ್ತೀರಿ
- ಉದ್ಯೋಗ ವ್ಯಾಪಾರದೊಂದಿಗೆ ಇನ್ನೊಂದು ಕೆಲಸವನ್ನು ಶುರು ಮಾಡುವ ಯೋಚನೆ ಬರುತ್ತದೆ
- ಹಣಕಾಸಿನ ವಿಚಾರದಲ್ಲಿ ಈ ದಿನ ಚೆನ್ನಾಗಿದೆ
- ಪೂರ್ವಿಕರು, ಹಿರಿಯರು ಮಾಡಿದ ಧರ್ಮ-ಕರ್ಮಗಳಿಂದ ನಿಮಗೆ ಯಶಸ್ಸು ಸಿಗುತ್ತದೆ ಗುರುಗಳನ್ನು ಆರಾಧಿಸಿ
ಕಟಕ
- ವೃತ್ತಿಪರರು ನಿಮ್ಮ ಮೇಲಾಧಿಕಾರಿಗಳ ವಿಶ್ವಾಸಕ್ಕೆ ಪಾತ್ರರಾಗುತ್ತೀರಿ
- ಸಮಾಜದಲ್ಲಿ ನಿಮ್ಮ ಚಿಂತನೆ-ವಿಚಾರಗಳಿಗೆ ಮನ್ನಣೆ ದೊರೆಯುತ್ತದೆ
- ವಾದ-ವಿವಾದಗಳನ್ನು ಮಾಡಿಕೊಳ್ಳಬೇಡಿ ಕೆಲಸಗಳು ಹಾಳಾಗುತ್ತವೆ
- ಇಂದು ನಿಮ್ಮ ಮಾತುಗಳಲ್ಲಿ ಗೊಂದಲವಿಲ್ಲದೆ ಸ್ಪಷ್ಟವಾಗಿರಲಿ
- ಬಹಳ ಕಾಲದ ನಂತರ ನಿಮ್ಮ ಪ್ರೀತಿ ಪಾತ್ರರ ದರ್ಶನದಿಂದ ಮನಸ್ಸಿಗೆ ಆನಂದ
- ಮಕ್ಕಳ ಆರೋಗ್ಯ ವ್ಯತ್ಯಾಸದಿಂದ ಸಾಯಂಕಾಲದ ಸಮಯಕ್ಕೆ ಬೇಸರ ಸಾಧ್ಯತೆ
- ಸಾಯಂಕಾಲ ಸೂರ್ಯನನ್ನು ಪ್ರಾರ್ಥನೆ ಮಾಡಿ
ಸಿಂಹ
- ಜಮೀನು, ಆಸ್ತಿ ವಿಚಾರಗಳ ಬಗ್ಗೆ ಪರ-ವಿರೋಧ ಚರ್ಚೆ ಸಾಧ್ಯತೆ
- ಮನೆಯ ಹೊರಗಡೆ ವಿನಾಕಾರಣ ಜಗಳವಾಗಬಹುದು ಎಚ್ಚರಿಕೆ ಇರಲಿ
- ನೀವು ಬಳಸುವ ವಾಹನ ಬಗ್ಗೆ ಜಾಗ್ರತೆ ಇರಲಿ, ವಾಹನದಿಂದ ನಷ್ಟವಿದೆ
- ಇಂದು ವಾಹನ ಚಾಲನೆ ಮಾಡದೆ ಇದ್ದರೆ ಒಳ್ಳೆಯದು
- ಹೃದ್ರೋಗಿಗಳು ತುಂಬಾ ಕಷ್ಟ ಅನುಭವಿಸುವ ಸಾಧ್ಯತೆ ಇದೆ
- ಔಷಧೋಪಚಾರಗಳು ಪರಿಣಾಮ ಬೀರದೆ ಇರಬಹುದು ಎಚ್ಚರ
- ಉಗ್ರ ನರಸಿಂಹನ ಆರಾಧನೆ ಮಾಡಿ
ಕನ್ಯಾ
- ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ಸಾಧ್ಯತೆ
- ಕಾರ್ಯಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಸಾಧನೆ, ಬದಲಾವಣೆ ಸಾಧ್ಯತೆ
- ಸಹೋದರ ವರ್ಗದ ಹಾರೈಕೆಯಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯತೆ
- ವೈವಾಹಿಕ ಜೀವನ ಸುಖದಾಯಕವಾಗಿರುತ್ತದೆ
- ಅವಿವಾಹಿತರಿಗೆ ವಿವಾಹ ವಿಚಾರದಲ್ಲಿ ಶುಭ ಫಲ
- ಇಂದು ಆದಾಯದಲ್ಲಿ ಹೆಚ್ಚಳ ಆಗಲಿದೆ
- ಆತ್ಮವಿಶ್ವಾಸ ಹೆಚ್ಚಾಗಿ ಸಂತೋಷ ಪಡುತ್ತೀರಿ
ತುಲಾ
- ಬೇರೆಯವರ ವಿಷಯಕ್ಕೆ ತಲೆ ಹಾಕಬೇಡಿ, ಅವಮಾನ ಸಾಧ್ಯತೆ
- ಆದಾಯ ಇರುವ ದಿನ, ಆದರೆ ಖರ್ಚು ಕೂಡ ಹೆಚ್ಚಾಗಿರುತ್ತದೆ
- ಚಿನ್ನಾಭರಣಗಳ ಖರೀದಿ ಬೇಡ, ಮನೆಯಲ್ಲಿರುವ ಆಭರಣಗಳ ಬಗ್ಗೆ ಜಾಗ್ರತೆ ಇರಲಿ
- ಹೊಸ ಸಂಪರ್ಕಗಳಿಂದ ಮನಸ್ಸಿಗೆ ಖುಷಿಯಾಗಬಹುದು
- ಇಂದು ಮಕ್ಕಳ ಶಿಕ್ಷಣ ವಿಚಾರವಾಗಿ ಉತ್ತಮ ದಿನ
- ನಿಮ್ಮ ಆಲೋಚನೆಗಳು ಕುಟುಂಬಕ್ಕೆ ಸೀಮಿತವಾಗಿರದೆ ಸಮಾಜಮುಖಿಯಾಗಿರಲಿ
- ವೈಯಕ್ತಿಕ ಲಾಭಕ್ಕೆ ನಂಬಿದವರಿಂದ ಮೋಸ ಸಾಧ್ಯತೆ
- ವೀರಾಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಹಣ ಹೂಡಿಕೆಯಿಂದ ಮನಸ್ಸಿಗೆ ಸಮಾಧಾನ ಸಿಗಬಹುದು
- ಆಕಸ್ಮಿಕವಾಗಿ ಹಣ ಸಿಗುವುದರಿಂದ ಅಹಂಕಾರ ಬರಬಹುದು ಎಚ್ಚರ
- ಸಂಬಂಧಿಕರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ
- ನಿಮ್ಮ ತಾಳ್ಮೆ - ವಿನಯ ಮಾತ್ರ ನಿಮ್ಮನ್ನು ಕಾಪಾಡಬಲ್ಲದು
- ನಿಮ್ಮನ್ನು ನೀವು ಮರೆಯುವ ಸಾಧ್ಯತೆ ಇದೆ
- ಹಣದ ವ್ಯವಹಾರ, ಹೂಡಿಕೆಯನ್ನು ಮಧ್ಯಾಹ್ನದ ನಂತರ ಮಾಡಿ
- ಶ್ರೀರಾಮ ಪರಿವಾರ ದೇವತೆಗಳನ್ನು ಆರಾಧನೆ ಮಾಡಿ
ಧನಸ್ಸು
- ಸೈದ್ಧಾಂತಿಕವಾಗಿ ಮಾಡಬೇಕಿರುವ ಸಮಸ್ಯೆಗಳ ಪರಿಹಾರಕ್ಕೆ ಹಿನ್ನಡೆ
- ನಿಮ್ಮ ಶತ್ರುಗಳ ಮಾತಿನಿಂದ ನಿಮ್ಮ ಆತ್ಮಿಯರು ನಿಮ್ಮನ್ನು ಅವಮಾನಿಸುವ ಸಾಧ್ಯತೆ
- ನಿಮ್ಮೊಂದಿಗೆ ಸರಿಯಾಗಿ ವ್ಯವಹರಿಸುವುದಿಲ್ಲ, ಮಾತಾಡಲು ಒಪ್ಪುವುದಿಲ್ಲ
- ಇಂದು ನಿಮ್ಮ ವೈಯಕ್ತಿಕ ಪ್ರತಿಷ್ಠೆ, ಅಹಂಕಾರ ಬಿಟ್ಟರೆ ಒಳ್ಳೆಯದು
- ಸಮಾಜದಲ್ಲಿ ಚಿಕ್ಕವರ ಮುಂದೆ ಚಿಕ್ಕವರಾಗುವ ಸಾಧ್ಯತೆ ಇದೆ
- ಕಲ್ಕಿ ಭಗವಾನರನ್ನು ಸ್ಮರಿಸಿ
ಮಕರ
- ಸ್ಮೇಹಿತರೊಂದಿಗೆ ನಿಮ್ಮ ವಿದ್ಯಾಭ್ಯಾಸ, ಕೆಲಸ, ಹೊಸ ಆಲೋಚನೆಗಳ ಬಗ್ಗೆ ಚರ್ಚಿಸಿದರೆ ಒಳ್ಳೆಯದು
- ಕೆಲಸದ ಒತ್ತಡ ಇದ್ದಾಗ್ಯೂ ಜನಸೇವೆ ಮಾಡಿ ಗೌರವ ಹೆಚ್ಚಾಗುತ್ತದೆ
- ಜನರು ಕೊಡುವ ಅಭಿಮಾನ, ಪ್ರೀತಿ, ಗೌರವಕ್ಕೆ ಭಾಜನರಾಗುತ್ತೀರಿ
- ನಿಮ್ಮನ್ನು ನಂಬಿದವರಿಗೆ ನ್ಯಾಯವನ್ನು ಕೊಡುತ್ತೀರಿ
- ಬೆಳ್ಳಂಬೆಳಗ್ಗೆ ಕಹಿ ಘಟನೆಯಿಂದ ಮನೆಯಲ್ಲಿ ಅಶಾಂತಿ ಸಾಧ್ಯತೆಯಿದೆ
- ಕೋದಂಡರಾಮನ ಪ್ರಾರ್ಥನೆ ಮಾಡಿ
ಕುಂಭ
- ಇಂದು ಹಣದ ವಿಚಾರದಲ್ಲಿ ಗೊಂದಲ ಸಾಧ್ಯತೆ
- ಆದಾಯ-ಖರ್ಚಿನ ಅಸ್ಪಷ್ಟತೆಯಿಂದ ತೊಳಲಾಡಬಹುದು
- ಗಂಟಲಿನ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ
- ಸಂಗೀತಕಾರರಿಗೆ ತಮ್ಮ ಕಾರ್ಯದಲ್ಲಿ ಹಿನ್ನಡೆ, ಕಾರ್ಯಕ್ರಮ ರದ್ದಾಗುವ ಸೂಚನೆ
- ರಾಜಕಾರಣಿಗಳಿಗೆ ಹೊಸ ಸುದ್ದಿ ಸಾಧ್ಯತೆ
- ಮಕ್ಕಳ ಉತ್ತಮ ಫಲಿತಾಂಶದಿಂದ ಸಮಾಧಾನ
- ಶಿವಾರಾಧನೆ ಮಾಡಿ
ಮೀನ
- ತತ್ವ ಸಿದ್ಧಾಂತದ ಆಧಾರದ ಮೇಲೆ ಸಮಸ್ಯೆಗಳನ್ನು ಬಗೆಹರಿಸಲು ಕಷ್ಟದ ದಿನ
- ಪ್ರಾಯೋಗಿಕ ರೀತಿಯಿಂದ ಬಗೆಹರಿಸಿಕೊಳ್ಳಿ
- ದಾಕ್ಷಿಣ್ಯಕ್ಕೆ ಒಳಗಾಗಿ ನಿಮ್ಮ ಆತ್ಮಗೌರವಕ್ಕೆ ಕೊರತೆ ಸಾಧ್ಯತೆ
- ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಮುಕ್ತವಾಘಿ ಮಾತಾಡಿ ಬಗೆಹರಿಸಿಕೊಳ್ಳಿ
- ಈ ದಿನ ವಿದ್ಯಾರ್ಥಿಗಳಿಗೆ ಸಮಸ್ಯೆ ಬಗೆ ಹರಿಯುತ್ತದೆ
- ಮನೆ ದೇವಾಲಯಗಳಲ್ಲಿ ಕುಟುಂಬದ ಹಿತಕ್ಕಾಗಿ ಧರ್ಮಕಾರ್ಯ ನಡೆಯುತ್ತವೆ
- ಮನಸ್ಸಿಗೆ ಆಹ್ಲಾದ ನೆಮ್ಮದಿ ದೊರೆಯುತ್ತದೆ
- ನವಗ್ರಹರ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ