Advertisment

ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್.. ನಿಮ್ಮ ಕೀರ್ತಿ ಹೆಚ್ಚಾಗುತ್ತೆ; ಇಂದಿನ ರಾಶಿ ಭವಿಷ್ಯ!

author-image
admin
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಉಚಿತ ಸಲಹೆ ದೂರಮಾಡಿ, ನಿಮ್ಮ ನಿರ್ಧಾರವೇ ಅಂತಿಮವಾಗಿರಲಿ
  • ನಿಮ್ಮ ಬುದ್ಧಿವಂತಿಕೆ ಅಭ್ಯಾಸದ ಕಡೆಗೆ ಹೆಚ್ಚು ಇದ್ದರೆ ಯಶಸ್ಸು
  • ವ್ಯವಹಾರ, ಓದಿನಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅವಕಾಶವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಶತಭಿಷ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00ರಿಂದ 1.30ರವರೆಗೆ

ಮೇಷ ರಾಶಿ

publive-image

  • ಸಮಾಜದ ಗಣ್ಯರನ್ನು, ಯೋಗ್ಯ ವ್ಯಕ್ತಿಗಳನ್ನು ಭೇಟಿ ಮಾಡುವ ಯೋಗವಿದೆ
  • ಜನ ನಿಮ್ಮ ಸಲಹೆ, ಮಾತುಗಳನ್ನು ಇಷ್ಟಪಡುತ್ತಾರೆ
  • ದುಬಾರಿ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಯೋಗವಿದೆ
  • ಉದ್ಯೋಗಸ್ಥರಿಗೆ ಕೆಲಸದ ಒತ್ತಡ ಕಡಿಮೆ
  • ನಿಮ್ಮ ಗುರಿಗಳ ಬಗ್ಗೆ ಹೆಚ್ಚು ಜಾಗೃತರಾಗಿರಿ
  • ನಿಮ್ಮ ಎಲ್ಲ ಕೆಲಸಗಳು ಬಹಳ ನಿಧಾನವಾಗಿ ಸಾಗುತ್ತವೆ
  • ಕಾಲಭೈರವನನ್ನು ಧ್ಯಾನ ಮಾಡಿ

ವೃಷಭ

publive-image

  • ದೂರದ ಪ್ರಯಾಣ ಮಾಡದಿದ್ದರೆ ಒಳ್ಳೆಯದು
  • ಧರ್ಮದ ಕಾರ್ಯಗಳ ಬಗ್ಗೆ ಮನಸ್ಸು ವಿಚಲಿತ ಸಾಧ್ಯತೆ
  • ಇಂದು ಆರೋಗ್ಯದ ಬಗ್ಗೆ ತಾತ್ಸಾರ ಮಾಡಿದರೆ ಕಷ್ಟ ಸಾಧ್ಯತೆ
  • ಪತಿ-ಪತ್ನಿಯರಲ್ಲಿ ಸಣ್ಣ ವಿಚಾರಗಳಿಗೆ ಜಗಳ ಸಾಧ್ಯತೆ
  • ಹಳೆಯ ಕಹಿ ನೆನಪುಗಳು ಕಾಡಬಹುದು, ವೈಯಕ್ತಿಕ ತೇಜೋವಧೆ ಮಾಡಿಕೊಳ್ಳುತ್ತೀರಿ
  • ಲಕ್ಷ್ಮಿನಾರಾಯಣನನ್ನು ಪ್ರಾರ್ಥನೆ ಮಾಡಿ
Advertisment

ಮಿಥುನ

publive-image

  • ಅನಾರೋಗ್ಯದಿಂದ ಬಳಲುತ್ತಿದ್ದರೆ ಇಂದು ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ
  • ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಇರಬೇಕಾದ ದಿನ
  • ಓದಿನ ಹೊರತಾಗಿ ಬೇರೆ ಚಟುವಟಿಕೆಗಳಿಗೆ ಆಕರ್ಷಿತರಾದ್ರೆ ತೊಂದರೆಯಿದೆ
  • ನಿಮ್ಮ ಸ್ನೇಹಿತರ ಮಾತಿಗೆ ಮರುಳಾಗಿ ಆ ಕಾರ್ಯದಲ್ಲಿ ಭಾಗಿಯಾದರೆ ತೊಂದರೆಯಿದೆ
  • ನಿಮ್ಮ ಬುದ್ಧಿವಂತಿಕೆ ಅಭ್ಯಾಸದ ಕಡೆಗೆ ಹೆಚ್ಚು ಇದ್ದರೆ ಯಶಸ್ಸು ಸಿಗುತ್ತದೆ
  • ಪರ್ವತಾಂಜನೇಯನನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ದಿನ
  • ಪ್ರಮುಖ ನಿರ್ಧಾರಗಳಿಗೆ ಪ್ರೀತಿ ಪಾತ್ರರ ಸಲಹೆ ಮುಖ್ಯ
  • ಒಂದೇ ಬಾರಿಗೆ ಹಲವು ಕೆಲಸ ಅಥವಾ ವಿಚಾರ ಬೇಡ
  • ಗೊಂದಲ ಆವರಿಸಿ ಸಮಯ ಕಳೆದು ಬಿಡುತ್ತದೆ
  • ನಿಮ್ಮ ಮೇಲಿನ ಮನೆಯವರ-ಸ್ನೇಹಿತರ ನಿರೀಕ್ಷೆ ಹುಸಿ ಮಾಡಬೇಡಿ
  • ಲಕ್ಷ್ಮೀ ಆರಾಧನೆ ಮಾಡಿ

ಸಿಂಹ

publive-image

  • ನಿಮ್ಮ ನಿಮ್ಮ ಕಾರ್ಯಕ್ಷೇತ್ರದಲ್ಲಿ ಮನಸ್ಸಿರುವುದಿಲ್ಲ
  • ಹಿರಿಯರ, ಮೇಲಾಧಿಕಾರಿಗಳ ಅವಕೃಪೆಗೆ ಒಳಗಾಗುವ ಸಾಧ್ಯತೆಯಿದೆ
  • ಅನುಪಯುಕ್ತ ಕೆಲಸ, ವಸ್ತುಗಳ ಬಗ್ಗೆ ಮನಸ್ಸು ಎಳೆಯುತ್ತಿರುತ್ತದೆ
  • ತಲೆ ನೋವಿರುವ ವ್ಯಕ್ತಿಗಳು ಸೂರ್ಯನ ನೇರ ಬೆಳಕು, ಧೂಳಿನಿಂದ ರಕ್ಷಿಸಿಕೊಳ್ಳಿ
  • ಸಾಯಂಕಾಲ ಶುಭವಾರ್ತೆ ಕೇಳುವಿರಿ
  • ರಾಜಕೀಯ ಆಸಕ್ತಿ ಉಳ್ಳವರಿಗೆ ನಷ್ಟ ಸಾಧ್ಯತೆಯಿದೆ
  • ಸಾಯಂಕಾಲದ ಸೂರ್ಯನನ್ನು ಪ್ರಾರ್ಥನೆ ಮಾಡಿ
Advertisment

ಕನ್ಯಾ

publive-image

  • ಇಂದು ಕುಟುಂಬದಲ್ಲಿ ಸಾಮರಸ್ಯದ ಕೊರತೆ ಇರುತ್ತದೆ
  • ವಾದ-ವಿವಾದಗಳಿಂದ ಸತಿ-ಪತಿಗಳಲ್ಲಿ ಬಿರುಕು ಉಂಟಾಗಬಹುದು
  • ಜನ ನಿಮ್ಮ ಬೆನ್ನ ಹಿಂದೆ ಟೀಕಿಸುವ ಪ್ರಸಂಗಗಳು ಹೆಚ್ಚು ನಡೆಯಬಹುದು
  • ಮನೆಯಲ್ಲಿ ಬೇಸರವಾಗಿ ಹೊರಗೆ ಹೋಗಬಹುದು
  • ಹೆಂಗಸರು ತವರು ಮನೆ ಅಥವಾ ಸಂಬಂಧಿಕರ ಮನೆಗೆ ಹೋಗಬಹುದು
  • ಅಲರ್ಜಿ ಅಥವಾ ಕಫದಿಂದ ಕಿರಿಕಿರಿ ಉಂಟಾಗಬಹುದು
  • ಐಕ್ಯಮತ್ಯ ಮಂತ್ರವನ್ನು ಶ್ರವಣ ಮಾಡಿ

ತುಲಾpublive-image

  • ವಿದ್ಯಾರ್ಥಿಗಳು ಮತ್ತು ನೌಕರರಿಗೆ ಸ್ಪರ್ಧಾತ್ಮಕ, ಇಲಾಖಾ ಪರೀಕ್ಷೆಗಳಲ್ಲಿ ಯಶಸ್ಸು ಇದೆ
  • ದೇವರ ಧ್ಯಾನ, ಪೂಜಾದಿಗಳಿಂದ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ
  • ಉತ್ತಮ ಪದವೀಧರರ ಸಂಪರ್ಕ ಸಿಗುತ್ತದೆ
  • ವೈವಾಹಿಕ ಜೀವನವು ಮಧುರವಾಗಿರುತ್ತದೆ
  • ಕೆಲಸದ ಒತ್ತಡ ಕಡಿಮೆ, ಮಾನಸಿಕ ಸಂತೋಷ ಹೆಚ್ಚು
  • ವ್ಯವಹಾರ, ಓದಿನಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅವಕಾಶವಿದೆ
  • ಆರಾಧ್ಯ ದೇವತೆಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ನಿಮ್ಮ ಕೆಲಸಗಳಲ್ಲಿ ಬೇರೆಯವರ ಅಭಿಪ್ರಾಯ, ಮಾರ್ಗದರ್ಶನ ಬೇಡ
  • ಉಚಿತ ಸಲಹೆ ದೂರಮಾಡಿ, ನಿಮ್ಮ ನಿರ್ಧಾರವೇ ಅಂತಿಮವಾಗಿರಲಿ
  • ಹಳೆಯ ಅನುಭವಗಳ ಲಾಭ ನಿಮಗಿದೆ
  • ಸ್ವಂತ ನಿರ್ಧಾರದಿಂದ ದೂರವಾದರೆ ಕಷ್ಟ ಸಾಧ್ಯತೆ
  • ಮೇಲಾಧಿಕಾರಿಗಳು, ಹಿರಿಯರ ನಂಬಿಕೆ ಉಳಿಯೋದಿಲ್ಲ
  • ಯಾರೊಂದಿಗೂ ಜಗಳ ಮಾಡೋದಕ್ಕೆ ಹೋಗಬೇಡಿ
  • ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ
Advertisment

ಧನಸ್ಸು

publive-image

  • ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ
  • ಹಿಂದಿನಿಂದ ಇದ್ದ ತೊಂದರೆಗಳು ದೂರವಾಗುವ ಸಾಧ್ಯತೆ
  • ನಿಮ್ಮ ಕೆಲಸದ ರೀತಿ ಶೈಲಿ ನಿಮಗೆ ಯಶಸ್ಸನ್ನು ತಂದುಕೊಡುತ್ತದೆ
  • ನಿಗೂಢವಾದ ವಿಜ್ಞಾನ - ಸಂಶೋಧನೆ ವಿಷಯಗಳ ಕಡೆ ಆಸಕ್ತಿ ತೋರುತ್ತೀರಿ
  • ಮಾರುತಿಯನ್ನ ಪ್ರಾರ್ಥನೆ ಮಾಡಿ

ಮಕರ

publive-image

  • ಹಣದ ವಿಚಾರವಾಗಿ ಕುಟುಂಬ, ಸ್ನೇಹಿತರ ಜೊತೆ ಮನಸ್ತಾಪ ಸಾಧ್ಯತೆ
  • ಕೌಟುಂಬಿಕ ಜೀವನದಲ್ಲಿ ಒತ್ತಡ, ಮಾನಸಿಕ ಸೌಖ್ಯವಿರುವುದಿಲ್ಲ
  • ನಿಮ್ಮ ಹಠದಿಂದ ಜನರು ದೂರ ಉಳಿಯುತ್ತಾರೆ
  • ಬೇರೆಯವರ ಸಹಾಯ ನಿಮಗೆ ಬೇಕಿದ್ದರೂ ಹತ್ತಿರ ಬರುವುದಿಲ್ಲ
  • ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳಿ
  • ಸುದರ್ಶನನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ಮನೆ ಮತ್ತು ಉದ್ಯೋಗ ಸ್ಥಳದಲ್ಲಿ ನಿಮಗೆ ಪ್ರಶಂಸೆ
  • ವಿದ್ಯಾರ್ಥಿಗಳಿಗೆ ಶಹಬ್ಬಾಶ್‌ಗಿರಿ ಸಿಗುತ್ತದೆ
  • ಹೊಗಳಿಕೆಯಿಂದ ಧನಾತ್ಮಕ ಶಕ್ತಿ ನಿಮಗಿರುತ್ತದೆ
  • ಇಂದು ವಿರೋಧಿಗಳು ನಿಮ್ಮೆದುರು ಸೋಲುತ್ತಾರೆ
  • ನಿಮ್ಮ ಕೀರ್ತಿ ಹೆಚ್ಚಾಗುತ್ತದೆ, ಇದರಿಂದ ಬೀಗುತ್ತೀರಿ
  • ಹಿರಿಯರ ಆಶೀರ್ವಾದ ಪಡೆಯಿರಿ
Advertisment

ಮೀನ 

publive-image

  • ಇಂದು ಕೆಲಸದ ಒತ್ತಡ ಹೆಚ್ಚು, ಸುಳ್ಳು ಹೇಳಬೇಡಿ
  • ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಬೇಡ
  • ಹಣ ಅಥವಾ ಪದಾರ್ಥ ನಷ್ಟವಾಗುವ ಸಾಧ್ಯತೆ ಇರುತ್ತದೆ
  • ಮನೆಯಲ್ಲಿನ ವಿದ್ಯುತ್‌ ಉಪಕರಣಗಳಿಂದ ಹಾನಿ ಸಾಧ್ಯತೆ
  • ಮಕ್ಕಳ ವಿಚಾರಕ್ಕೆ ಮನೆಯಲ್ಲಿ ಮನಸ್ತಾಪ ಸಾಧ್ಯತೆ
  • ಧ್ಯಾನ ಮಾಡುತ್ತಿರುವ ಋಷಿಗಳನ್ನು ಸ್ಮರಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ                          

Advertisment
Advertisment
Advertisment