Advertisment

ಈ ರಾಶಿಯವರಿಗೆ ಶುಭ ಫಲ.. ಸರ್ಕಾರದಿಂದ ಬರಬೇಕಾದ ಹಣ ಇಂದು ಬರುತ್ತೆ; ಇಲ್ಲಿದೆ ಇಂದಿನ ರಾಶಿ ಭವಿಷ್ಯ!

author-image
admin
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಇಂದು ಹೊಸ ಕೆಲಸಗಳನ್ನು ಆರಂಭಿಸಲು ಉತ್ತಮ ದಿನ
  • ಬ್ಯಾಂಕ್ ಅಥವಾ ಫೈನಾನ್ಸ್​ ಉದ್ಯೋಗಿಗಳಿಗೆ ಶುಭ ಸುದ್ದಿ
  • ಹಣದ ಅಡಚಣೆಯಿಂದ ನಿಂತಿದ್ದ ಕೆಲಸ ಪ್ರಾರಂಭ ಸಾಧ್ಯತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಪೂರ್ವಭಾದ್ರ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ

ಮೇಷ ರಾಶಿ

publive-image

  • ಕೆಲಸದಲ್ಲಿ ವಿಶೇಷವಾದ ಆಸಕ್ತಿ ತೋರಿ ಅನುಕೂಲ ಪಡೆಯುತ್ತೀರಿ
  • ಸಗಟು ವ್ಯಾಪಾರಿಗಳಿಗೆ ಶುಭಫಲ
  • ವಿದ್ಯಾರ್ಥಿಗಳಿಗೆ ಅಪರೂಪದ ಯಶಸ್ಸು ಸಿಗಲಿದೆ
  • ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಾಗುವ ಸಾಧ್ಯತೆ
  • ನಿಮ್ಮ ಆತ್ಮೀಯರ ಜೊತೆ ಹೆಚ್ಚು ಕಾಲ ಕಳೆಯುತ್ತೀರಿ
  • ಸೂರ್ಯನಾರಾಯಣನನ್ನು ಆರಾಧನೆ ಮಾಡಿ

ವೃಷಭ

publive-image

  • ನಿಮ್ಮ ಯೋಚನೆ, ಯೋಜನೆಗಳನ್ನು ರಹಸ್ಯವಾಗಿಡಿ
  • ನರ, ಮೂಳೆಗೆ ಸಂಬಂಧಿಸಿದ ತೊಂದರೆ ಕಾಡಬಹುದು
  • ಇಂದು ತಾಳ್ಮೆಯಿಂದ ಇರುವುದು ಒಳ್ಳೆಯದು
  • ಮನೆಯವರಿಗೆಲ್ಲಾ ಆತಂಕ ಸೃಷ್ಟಿ ಮಾಡಿ ಅವರ ಕೋಪಕ್ಕೆ ಒಳಗಾಗಬಹುದು
  • ಮನೆಯಲ್ಲಿ ಅವಿವಾಹಿತರಿದ್ದರೆ ಪ್ರಯತ್ನಿಸಿ ಶುಭವಿದೆ
  • ಗಣಪತಿ ಪ್ರಾರ್ಥನೆ ಮಾಡಿ
Advertisment

ಮಿಥುನ

publive-image

  • ಸಮಾಜದ ಗಣ್ಯರ ಹೆಸರಿನೊಂದಿಗೆ ನಿಮ್ಮ ಹೆಸರು ಬರುತ್ತದೆ
  • ಪ್ರೇಮಿಯೊಂದಿಗೆ ಸಮಯ ಕಳೆಯುತ್ತೀರಿ
  • ಮಾಡಬೇಕಾದ ಕೆಲಸದಿಂದ ದೂರ ಉಳಿದು ನಷ್ಟವಾಗುವ ಸಾಧ್ಯತೆ
  • ನಿಮಗಿರುವ ಪ್ರತಿಭೆ ಅನಾವರಣ ಮಾಡಲು ಉತ್ತಮ ದಿನ
  • ವಾಹನದಿಂದ ನಷ್ಟ ಸಾಧ್ಯತೆ ಎಚ್ಚರಿಕೆ ಇರಲಿ
  • ದುರ್ಗಾಪರಮೇಶ್ವರಿಯನ್ನು ಆರಾಧನೆ ಮಾಡಿ

ಕಟಕ

publive-image

  • ಉದ್ಯೋಗ, ಸ್ಥಳ ಬದಲಾವಣೆಯಾಗುವ ಸಾಧ್ಯತೆ
  • ಸಹೋದ್ಯೋಗಿಗಳ ವರ್ತನೆಯಿಂದ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆ
  • ನಿಮ್ಮ ಧೈರ್ಯದ ಮಾತುಗಳಿಂದ ಅನುಕೂಲ ಆಗುತ್ತದೆ
  • ಇಂದು ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ
  • ಪಿತ್ರಾರ್ಜಿತ ಆಸ್ತಿ, ಹಣದಿಂದ ಅನುಕೂಲ ಸಾಧ್ಯತೆ
  • ಕುಲದೇವತಾ ಆರಾಧನೆ ಮಾಡಿ

ಸಿಂಹ

publive-image

  • ದೊಡ್ಡ ದೊಡ್ಡ ಕೆಲಸಗಳಿಂದ ಆಕರ್ಷಿತರಾಗುವ ಸಾಧ್ಯತೆ
  • ಮಾನಸಿಕ ಒತ್ತಡ, ಆರೋಗ್ಯ ಸಮಸ್ಯೆ ಕಾಡಬಹುದು
  • ನಿಮ್ಮ ಕೈ ಕೆಳಗೆ ಕೆಲಸ ನಿರ್ವಹಿಸುವವರೂ ನಿಮ್ಮಿಂದ ಸಂತೋಷವಾಗಿರುತ್ತಾರೆ
  • ನಿಮ್ಮ ತೊಂದರೆಗಳೆಲ್ಲಾ ದೂರವಾಗಲಿದೆ
  • ಹೊಸ ಜೀವನದ ಅನುಭವ, ಮನೆಗೆ ಅತಿಥಿಗಳ ಆಗಮನ ಸಾಧ್ಯತೆ
  • ನಿಂತಿದ್ದ ಕೆಲಸಗಳಿಗೆ ಮರು ಚಾಲನೆ ಸಿಗಬಹುದು
  • ಶ್ರೀರಾಮನ ಆರಾಧನೆ ಮಾಡಿ
Advertisment

ಕನ್ಯಾ

publive-image

  • ಇಂದು ನಿರಾಶಾದಾಯಕ ದಿನ
  • ಆರೋಗ್ಯದ ಸಮಸ್ಯೆ, ಅಧಿಕ ಖರ್ಚು, ಆಲಸ್ಯ ಕಾಡುವ ಸಾಧ್ಯತೆ
  • ಮನೆಯಲ್ಲಿ ಕೂತು ಕೆಲಸ ಮಾಡುವವರ ಕೆಲಸ ಹಾಗೇ ಉಳಿಯುವ ಸಾಧ್ಯತೆ
  • ಒತ್ತಡದಿಂದ ಮಾನಸಿಕ, ದೈಹಿಕ ತೊಂದರೆ ಉಂಟಾಗಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ತುಲಾpublive-image

  • ಇಂದು ಹೊಸ ಕೆಲಸಗಳನ್ನು ಆರಂಭಿಸಲು ಉತ್ತಮ ದಿನ
  • ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆ ಆಗುವ ಸಾಧ್ಯತೆ
  • ಮಧ್ಯಾಹ್ನದ ವೇಳೆಗೆ ಸಿಹಿ ಸುದ್ದಿ, ಮನಸ್ಸಿಗೆ ಸಮಾಧಾನ
  • ಕಠಿಣ ಪರಿಶ್ರಮದ ಕಡೆಗೆ ಮನಸ್ಸು ಬದಲಾವಣೆ ಆಗಬಹುದು
  • ಪಾಲುದಾರರು ತಮ್ಮ ಕಷ್ಟದಿಂದ ಹೊರಬರುತ್ತೀರಿ
  • ಆಸ್ತಿಯ ವಿಚಾರದಲ್ಲಿ ನಿಮಗೆ ಜಯವಿದೆ
  • ದೇವಿಯನ್ನು ಆರಾಧನೆ ಮಾಡಿ

ವೃಶ್ಚಿಕ

publive-image

  • ಸರ್ಕಾರದಿಂದ ಬರಬೇಕಾದ ಹಣ ಇಂದು ಬರುತ್ತದೆ
  • ಕೋರ್ಟು ಕೇಸ್​ಗಳಿರುವವರಿಗೆ ಶುಭ ದಿನ
  • ಅನಿರೀಕ್ಷಿತ ಹಣ ಖರ್ಚಾಗುವ ಸಾಧ್ಯತೆ
  • ನಿಮ್ಮ ದಾಖಲಾತಿಗಳಿಗೆ ಸಂಬಂಧಿಸಿದ ಪತ್ರಗಳನ್ನು ಬೇರೆಯವರಿಗೆ ಕೊಡಬೇಡಿ
  • ನಿಮ್ಮ ಕೆಲಸ ಮುಗಿದ ತಕ್ಷಣ ಮನೆ ಸೇರಿದರೆ ಒಳ್ಳೆಯದು
  • ಗುರು ರಾಘವೇಂದ್ರರನ್ನು ಸ್ಮರಿಸಿ
Advertisment

ಧನಸ್ಸು

publive-image

  • ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ನಿಮ್ಮ ಕುಟುಂಬದವರು ಅಥವಾ ಸ್ನೇಹಿತರು ನಿಮಗೆ ಆಶ್ಚರ್ಯ ಉಂಟು ಮಾಡಬಹುದು
  • ಮಕ್ಕಳು, ಮೊಮ್ಮಕ್ಕಳೊಂದಿಗೆ ವಿಶೇಷವಾದ ಸಮಯ ಕಳೆಯುತ್ತೀರಿ
  • ಚಿಕ್ಕಮಕ್ಕಳಿಗೆ ಬೆನ್ನಿನ ಭಾಗದಲ್ಲಿ ನೋವು ಸಾಧ್ಯತೆ
  • ಅಲರ್ಜಿ ತೊಂದರೆ ಕಾಡಬಹುದು ಜಾಗ್ರತೆ ವಹಿಸಿ
  • ಈಶ್ವರನ ಆರಾಧನೆಗಾಗಿ ಬಳಸಿದ ಭಸ್ಮವನ್ನು ಉಪಯೋಗಿಸಿ

ಮಕರ

publive-image

  • ಮನೆಯಲ್ಲಿ ಶುಭ ಕೆಲಸದ ಪ್ರಸ್ತಾಪ ಸಾಧ್ಯತೆ
  • ಸ್ಥಿರಾಸ್ತಿಗೆ ಸಂಬಂಧಿಸಿದ ಮಾತಿನ ಇತ್ಯರ್ಥವಾಗಬಹುದು
  • ಬ್ಯಾಂಕ್ ಅಥವಾ ಫೈನಾನ್ಸ್​ನಲ್ಲಿರುವ ಉದ್ಯೋಗಿಗಳಿಗೆ ಶುಭ ಸುದ್ದಿ
  • ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಸಾಧನೆಗೆ ಗೌರವ ಸಿಗುತ್ತದೆ
  • ಪ್ರಾಮಾಣಿಕತೆಗೆ ನಿಜವಾದ ಬೆಲೆ ತಿಳಿಯುವ ದಿನ
  • ಕುಲದೇವಾತಾ ಪ್ರಾರ್ಥನೆ ಮಾಡಿ

ಕುಂಭ

publive-image

  • ಮಕ್ಕಳಿಗಾಗಿ ಹಣ ಖರ್ಚು ಮಾಡಿ ತೃಪ್ತಿ ಪಡುವ ದಿನ
  • ಅನಾಥ ಮಕ್ಕಳ ಯೋಗಕ್ಷೇಮದ ಬಗ್ಗೆ ಚಿಂತಿಸಿ ಕೈಲಾದ ಸಹಾಯ ಮಾಡಿ
  • ಭಾವನಾತ್ಮಕ ನಿರ್ಧಾರಗಳಿಂದ ತೊಂದರೆಗೆ ಸಿಲುಕುತ್ತೀರಿ ಎಚ್ಚರಿಕೆ ಇರಲಿ
  • ಸಹೋದರ ಸಂಬಂಧ ಗಟ್ಟಿಯಾಗುವ ಸಾಧ್ಯತೆ
  • ನಿಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಿ
  • ಮನೆದೇವರನ್ನು ಪ್ರಾರ್ಥನೆ ಮಾಡಿ
Advertisment

ಮೀನ 

publive-image

  • ಹಣದ ಅಡಚಣೆಯಿಂದ ನಿಂತಿದ್ದ ಕೆಲಸ ಪ್ರಾರಂಭ ಸಾಧ್ಯತೆ
  • ಮರಗೆಲಸ ಮಾಡುವವರಿಗೆ ವಿಶೇಷ ದಿನ
  • ನಿಮ್ಮ ಕೆಲಸಕ್ಕೆ ಅನುಕೂಲವಾಗುವ ಉಪಕರಣ ಖರೀದಿಸುವ ಸಾಧ್ಯತೆ
  • ಮನಸ್ಸಿಗೆ ವಿಶೇಷವಾಗಿ ಖುಷಿಯಾಗುವ ದಿನ
  • ವಿಶೇಷವಾಗಿ ಉದ್ಯೋಗದಲ್ಲಿ ಆಸಕ್ತಿ ಹೊಂದುತ್ತೀರಿ
  • ವಿಶ್ವಕರ್ಮ ಮುನಿಯ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ                           

Advertisment
Advertisment
Advertisment