/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ಆಸೆ ಇದ್ರು ಅನುಮಾನವಿರುವ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಬೇಡಿ ನಷ್ಟವಾಗಬಹುದು
- ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ
- ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ
- ಮನೆಯಲ್ಲಿ ಅಗತ್ಯ ವಸ್ತುಗಳ ಸ್ಥಾನ ಪಲ್ಲಟದಿಂದ ಕೋಪ ಬರಬಹುದು
- ನಿಮ್ಮ ಕೋಪದಿಂದ ಎಲ್ಲರೊಂದಿಗೆ ನಿಷ್ಠುರವಾಗುವ ಸಾಧ್ಯತೆಯಿದೆ
- ದುರ್ಗಾದೇವಿ ಪ್ರಾರ್ಥನೆ ಮಾಡಿ
ವೃಷಭ
- ನಿಮ್ಮ ಕಾರ್ಯಕ್ಷೇತ್ರದಲ್ಲಿ, ವಿದ್ಯಾಸ್ಥಳಗಳಲ್ಲಿ ಹೊಸ ಅನುಭವ ಸಿಗುವ ದಿನ
- ವ್ಯವಹಾರದಲ್ಲಿ ದೊಡ್ಡ ಬದಲಾವಣೆ ಕಾಣಬಹುದು
- ಮೃದುವಾದ ನಡವಳಿಕೆಯಿಂದ ಜನರ ಪ್ರೀತಿ-ವಿಶ್ವಾಸ ಗಳಿಸುತ್ತೀರಿ
- ಸಂಗೀತ-ಭರತ ನಾಟ್ಯದ ಬಗ್ಗೆ ಒಲವಿರುವವರಿಗೆ ಉತ್ತಮ ಅವಕಾಶವಿದೆ
- ನಿಮ್ಮ ಮಾತು ಬೇರೆಯವರಿಗೆ ದಾರಿದೀಪ ಆಗಬಹುದು ಸರಿಯಾಗಿ ಮಾರ್ಗದರ್ಶನ ಮಾಡಿ
- ನಟರಾಜನನ್ನು ಪ್ರಾರ್ಥನೆ ಮಾಡಿ
ಮಿಥುನ
- ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರದಲ್ಲಿ ಹಿನ್ನಡೆಯ ದಿನ
- ನಿಮ್ಮ ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ ಸಾಧ್ಯತೆಯಿದೆ
- ನಿಮ್ಮ ನಂಬಿಕೆಯೇ ಅಹಂಕಾರವಾಗಿ ಪರಿವರ್ತಿತವಾಗಬಹುದು
- ಅನಗತ್ಯ ವಿಷಯಗಳನ್ನು ಬೇಡ, ದೂರವಿಟ್ಟರೆ ಒಳ್ಳೆಯದು
- ಕೆಟ್ಟ ಸಹವಾಸವಿರುವ ಜನರಿಂದ ಅವಮಾನ ಆಗಬಹುದು
- ಸಾಯಂಕಾಲ ಮನೆಯಲ್ಲಿ ಸಣ್ಣ ತೊಂದರೆ ಕಾಣುವ ಸಾಧ್ಯತೆಯಿದೆ
- ತುಳುಸಿ ಗಿಡದ ಮುಂದೆ ತುಪ್ಪದ ದೀಪ ಹಚ್ಚಿ
ಕಟಕ
- ಸಾಮಾಜಿಕ ಕಾರ್ಯಕ್ಷೇತ್ರಗಳಲ್ಲಿ ಗುರುತಿಸಿಕೊಂಡವರಿಗೆ ಪ್ರತಿಷ್ಠೆ ಹೆಚ್ಚಾಗುವ ದಿನ
- ಧಾರ್ಮಿಕ ಕಾರ್ಯಗಳಿಗೆ ಹಣದ ಸಹಾಯ ಮಾಡುತ್ತೀರಿ
- ನಿಮ್ಮ ಕಾರ್ಯ ಒತ್ತಡದಿಂದ ಸಮಯ ಪರಿಪಾಲನೆ ಮಾಡದೇ ಜನರ ಬೇಸರಕ್ಕೆ ಗುರಿಯಾಗುತ್ತೀರಿ
- ಅಲ್ಪರನ್ನು ತಿರಸ್ಕಾರ ಮಾಡಬೇಡಿ ಅವರಿಂದಲೇ ನಿಮಗೆ ಗೌರವ
- ಶಿವಾರಾಧನೆ ಮಾಡಿ
ಸಿಂಹ
- ನಿಮ್ಮ ಸಂಗಾತಿ, ಸ್ನೇಹಿತರ ಖುಷಿಗೆ ಕಾರಣರಾಗುತ್ತೀರಿ
- ಮನೆಯಲ್ಲಿ ಕೆಲವು ಅನಿರೀಕ್ಷಿತ ಬದಲಾವಣೆಗಳಾಗಬಹುದು
- ಮನೆಯಲ್ಲಿ ಹಲವು ಜನರ ಸಮಾಗಮಾವಾಗಬಹುದು
- ನಿಮ್ಮ ಸಾಧನೆಗೆ ಗಂಭೀರವಾದ ಪ್ರಶಂಸೆ ಸಿಗಬಹುದು
- ಹಿರಿಯರ ಆಶೀರ್ವಾದ, ಮಾರ್ಗದರ್ಶನ ಸಿಗುವ ಸದವಕಾಶವಿದೆ
- ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ ಅದನ್ನು ಉಳಿಸಿಕೊಳ್ಳಿ
- ದೊಡ್ಡವರನ್ನು ಗೌರವಿಸಿ ಆಶೀರ್ವಾದ ಪಡೆಯಿರಿ
ಕನ್ಯಾ
- ಬೇರೆಯವರ ಮಾತಿನಿಂದ ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಪರ್ವ ಸಾಧ್ಯತೆ
- ವಿದ್ಯಾರ್ಥಿಗಳಿಗೆ ಶಿಕ್ಷಕರು, ಉದ್ಯೋಗಿಗಳಿಗೆ ಮೇಲಾಧಿಕಾರಿಗಳು ತುಂಬಾ ಅಭಿನಂದನೆ ಸಲ್ಲಿಸುತ್ತಾರೆ
- ನಿಮ್ಮಲ್ಲಾಗುತ್ತಿರುವ ಬದಲಾವಣೆಗೆ ಹಲವಾರು ಜನ ಮೆಚ್ಚುಗೆ ಪಡುತ್ತಾರೆ
- ಯಾವುದೇ ಕಾರಣಕ್ಕೂ ದುರಹಂಕಾರ ಬೇಡ
- ಕುಬೇರನನ್ನು ಪ್ರಾರ್ಥನೆ ಮಾಡಿ
ತುಲಾ
- ಕಾನೂನಿನ ವಿಚಾರದಲ್ಲಿ ಸಣ್ಣ ಸಮಸ್ಯೆ ಎದುರಾಗುವ ಸಾಧ್ಯತೆ
- ಬೇರೆಯವರ ಮಾತನ್ನು ನಂಬಿ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳುತ್ತೀರಿ
- ನಿಮ್ಮ ಕೆಲಸದ ಬಗ್ಗೆ ಗಮನಕೊಡಲು ಸಾಧ್ಯವಾಗದ ಪರಿಸ್ಥಿತಿ ಇರುತ್ತದೆ
- ಮನೆಯಲ್ಲಿ ಆತಂಕದ ವಾತಾವರಣ ಇರುತ್ತದೆ
- ವಿದ್ಯಾರ್ಥಿಗಳಿಗೆ ಶಾಲೆಯಿಂದ ಬಿಟ್ಟು ಕಳುಹಿಸುತ್ತಾರೆಂಬ ಭಯ ಕಾಡಬಹುದು
- ನಿಮ್ಮ ತಪ್ಪಿನ ಅರಿವು ಮಾಡಿಕೊಂಡು ಕ್ಷಮೆಯಾಚಿಸಿದರೆ ಒಳ್ಳೆಯದು
- ಬನಶಂಕರಿ ದೇವಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಇಂದು ದಾಂಪತ್ಯದಲ್ಲಿ ಸಾಮರಸ್ಯದ ದಿನ
- ಅನ್ಯೋನ್ಯವಾಗಿ ದೂರದೂರಿಗೆ ಹೊಗಲು ಅವಕಾಶವಿದೆ
- ಸಂಸಾರದಲ್ಲಿ ಯಾವುದೇ ಭೇದಭಾವ ಇಲ್ಲದೆ ಇನ್ನಷ್ಟು ಹತ್ತಿರವಾಗುವ ದಿನ
- ಪ್ರಯಾಣದ ವೇಳೆ ಅಶುಭ ವಾರ್ತೆ ಕೇಳಿ ಸಂತೋಷಕ್ಕೆ ಭಂಗ, ಅರ್ಧದಾರಿಯಲ್ಲಿ ವಾಪಸಾಗಬಹುದು
- ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಹಾನಿಯಾಗಬಹುದು
- ವೈಯಕ್ತಿಕ ಜೀವನಕ್ಕೆ ಪ್ರಾಮುಖ್ಯತೆ ಸಿಗುವುದಿಲ್ಲ
- ಶನೈಶ್ಚರನನ್ನು ಪ್ರಾರ್ಥನೆ ಮಾಡಿ
ಧನಸ್ಸು
- ನಿಮ್ಮ ಸೋಮಾರಿತನದಿಂದ ಕೆಲಸಗಳ ಮುಂದೂಡಿ, ನಷ್ಟ ಅನುಭವಿಸುತ್ತೀರಿ
- ಭವಿಷ್ಯದಲ್ಲಿ ಉಳಿದ ಕೆಲಸಗಳೆಲ್ಲಾ ವಿಳಂಬವಾಗುತ್ತವೆ
- ಮನೆಗೆ ಬಂದ ಅತಿಥಿಗಳ ಸೇವೆಯಲ್ಲಿಯೇ ನಿಮ್ಮ ಸಮಯ ಕಳೆದುಹೊಗುತ್ತದೆ
- ಭೂಮಿಗೆ- ಆಸ್ತಿಗೆ ಸಂಬಂಧಪಟ್ಟ ಮಾತುಕತೆ ನಡೆಯಬಹುದು ಆದರೆ ಫಲವಿಲ್ಲ
- ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ
- ಅಪೂರ್ಣವಾಗಿ ಉಳಿದ ಕೆಲಸಗಳನ್ನು ಮುಗಿಸಲು ಪ್ರಯತ್ನ ಮಾಡಿ
- ಮಕ್ಕಳಿಗೆ ಶಿಸ್ತು ಕಲಿಸಿ, ಇಲ್ಲದಿದ್ದರೆ ಅವರಿಂದ ಅವಮಾನವಾಗಬಹುದು
- ಹಿಂದೆ ಮಾಡಿದ್ದ ಹೂಡಿಕೆಯಿಂದ ಇಂದು ಲಾಭ ಸಿಗುವ ಸೂಚನೆ
- ಇಂದು ಹಣದ ದುರುಪಯೋಗ ಮಾಡಬೇಡಿ
- ದೊಡ್ಡ ಸಂಸ್ಥೆಯವರು ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆಯಿದೆ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಕುಂಭ
- ಎಲ್ಲಾ ಕೆಲಸಗಳಲ್ಲಿ ಹೋರಾಟ ಮಾಡಬೇಕಾದ ದಿನ ಆದರೆ ವ್ಯರ್ಥ ಪ್ರಯತ್ನ
- ಅನುಚಿತವಾದ ಕೆಲಸಗಳನ್ನು ಆರಂಭ ಮಾಡುತ್ತೀರಿ
- ನಿಮ್ಮ ಮಾತು ಹಿತ-ಮಿತವಾಗಿರಿಲಿ ಯಾವುದೇ ಕಾರಣಕ್ಕೂ ಕೋಪ ಬೇಡ
- ಯಾವುದೇ ಕೆಲಸ ಮಾಡಿದರೂ ಫಲಿತಾಂಶ ಶೂನ್ಯವಾಗಿರುತ್ತದೆ
- ಆರೋಗ್ಯ ಹಾಗೂ ಆಹಾರದ ಬಗ್ಗೆ ಗಮನಹರಿಸಿ
- ತಾಪಸಮನ್ಯುವನ್ನು ಪ್ರಾರ್ಥನೆ ಮಾಡಿ
ಮೀನ
- ಉದ್ಯೋಗದ ದೃಷ್ಟಿಯಿಂದ ವರ್ಗಾವಣೆಯಾಗುವ ಸೂಚನೆ ಇದೆ
- ತಂದೆ-ತಾಯಿ, ಮಕ್ಕಳು ಕೆಲಸದ ನಿಮಿತ್ತ ಬೇರೆಯಾಗುವ ಸಂದರ್ಭ ಬರಬಹುದು
- ಮನಸ್ಸಿಗೆ ತುಂಬಾ ಬೇಸರವಾಗುವ ದಿನ
- ಸರಿಯಾದ ತೀರ್ಮಾನಕ್ಕೆ ಬರದೆ ತೊಳಲಾಟವಾಗಬಹುದು
- ಬುದ್ಧಿವಂತಿಕೆಯಿಂದ ವ್ಯವಹರಿಸಿದರೆ ಮಾತ್ರ ಶುಭವಿದೆ
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ