ಅವಿವಾಹಿತರಿಗೆ ಶುಭ ಸುದ್ದಿ, ಇಂದು ಸುಮ್ಮನೆ ಹಣ ಖರ್ಚಾಗಬಹುದು; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ ಜಾಗ್ರತೆವಹಿಸಿ
  • ಹೊರಗೆ ಸೇವಿಸಿದ ಆಹಾರದಿಂದ ತೊಂದರೆ ಉಂಟಾಗಬಹುದು ಎಚ್ಚರಿಕೆ
  • ಮನೆಯಿಂದ ಹೊರಗೆ ಹೋದಾಗ ಆಹಾರ ಸೇವನೆ ಮಾಡುವುದು ಬೇಡ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ ಜಾಗ್ರತೆವಹಿಸಿ
  • ಮನೆಯಿಂದ ಹೊರಗೆ ಹೋದಾಗ ಆಹಾರ ಸೇವನೆ ಮಾಡುವುದು ಬೇಡ
  • ಹೊರಗೆ ಸೇವಿಸಿದ ಆಹಾರದಿಂದ ತೊಂದರೆ ಉಂಟಾಗಬಹುದು ಎಚ್ಚರಿಕೆ
  • ಇಂದು ಹಣ ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ
  • ಮಾನಸಿಕವಾಗಿ ವ್ಯತ್ಯಯಗಳು ಉಂಟಾಗಬಹುದು
  • ನಿಮ್ಮ ಒತ್ತಡವನ್ನು ಬೇರೆಯವರ ಮೇಲೆ ಹೇರಿ ಅಪಹಾಸ್ಯಕ್ಕೆ ಈಡಾಗಬಹುದು ಎಚ್ಚರ
  • ಈ ದಿನ ಒಂದೇ ರೀತಿ ಇರಲು ಪ್ರಯತ್ನಿಸಿ
  • ಆರೋಗ್ಯದ ಬಗ್ಗೆ ಅತಿ ಹೆಚ್ಚು ಜಾಗ್ರತೆವಹಿಸಿ
  • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ವೃಷಭ

publive-image

  • ಅತಿಯಾದ ಕೆಲಸದ ಒತ್ತಡದಿಂದ ಆಯಾಸವಾಗಬಹುದು
  • ಇಂದು ಬೇರೆಯವರ ಸಮಸ್ಯೆ ಪರಿಹರಿಸುವಲ್ಲಿ ಮಗ್ನರಾಗಿರುತ್ತೀರಾ
  • ಕುಟುಂಬ ಸದಸ್ಯರ ಕಡೆ ಗಮನ ಕೊಡದೆ ಅವರ ಕೆಂಗಣ್ಣಿಗೆ ಗುರಿಯಾಗಬಹುದು
  • ಮನೆಯಲ್ಲಿ ಹೆಂಡತಿ, ಮಕ್ಕಳು ದೂಷಣೆ ಮಾಡುವ ಸಾಧ್ಯತೆ ಇದೆ
  • ನಿಮ್ಮ ಕುಟುಂಬದ ಕಡೆ ಗಮನ ಕೊಡಿ
  • ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
  • ಈ ದಿನ ನಿಮಗೆ ಸಮಾಧಾನ, ಬೇಸರದಿಂದ ಕೂಡಿರುತ್ತೆ
  • ಮನೆಯಲ್ಲಿ ಶಿಸ್ತಿನ ವಾತಾವರಣವನ್ನ ಕಾಪಾಡಿಕೊಳ್ಳುವುದು ಬಹಳ ಮುಖ್ಯ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ಈ ದಿನ ಸಮಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡಿ
  • ಸಮಯದ ಬಗ್ಗೆ ತಾತ್ಸಾರ ಇರುವವರು ಅವಕಾಶವಂಚಿತರಾಗುವ ಸಾಧ್ಯತೆ ಇದೆ
  • ನಿಮ್ಮ ಜೊತೆಯಲ್ಲಿ ಕೆಲಸ ಮಾಡುವವರ ವರ್ತನೆಯಿಂದ ಮನಸ್ಸಿಗೆ ನೋವಾಗಬಹುದು
  • ವಿದ್ಯಾರ್ಥಿಗಳು ಪರಸ್ಪರ ಜಗಳ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ
  • ಕುಟುಂಬದವರು ಬೇರೆಯವರಿಂದ ನಿಮಗೆ ತಿಳುವಳಿಕೆ ಹೇಳಿಸುವ ಪ್ರಯತ್ನವಾಗಿರುತ್ತೆ
  • ಮನಸ್ಸು ಏಕಾಗ್ರತೆಯಿಂದ ಕೆಲಸ ಮಾಡಿದರೆ ಒಳಿತು
  • ಇಂದು ವಿದ್ಯಾರ್ಥಿಗಳು ಓದುವ ಕಡೆ ಗಮನ ಹರಿಸಬೇಕು
  • ಸದ್ಗುರು ಶ್ರೀಧರ ಸ್ವಾಮಿಗಳನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ಈ ದಿನ ನೀವು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದಕ್ಕೆ ಪ್ರಯತ್ನಿಸುತ್ತೀರಿ
  • ಮನೆಯ ಸದಸ್ಯರ ಮೇಲೆ ಸ್ನೇಹಿತರು, ಸಂಬಂಧಿಕರಿಂದ ಒಳ್ಳೆಯ ಅಭಿಪ್ರಾಯವಿರುವುದಿಲ್ಲ
  • ದೂಷಿಸುವರನ್ನ ಹೊಗಳುವುದರಿಂದ ಕುಟುಂಬ ಸದಸ್ಯರ ಕೆಂಗಣ್ಣಿಗೆ ಗುರಿಯಾಗುತ್ತೀರಿ
  • ಸಾಲದ ವಹಿವಾಟು ಈ ದಿನ ಬೇಡ
  • ಚೀಟಿ ವ್ಯವಹಾರ ಮಾಡುವವರು ಜಾಗ್ರತೆ ವಹಿಸಿ
  • ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಿ
  • ಶಿವಾರಾಧನೆ ಮಾಡಿ

ಸಿಂಹ

publive-image

  • ಇಂದು ಆಭರಣಗಳ ಖರೀದಿಯಿಂದ ಕುಟುಂಬದವರು ಸಂತೋಷವಾಗಿರುವ ದಿನ
  • ಸಂಬಂಧಿಕರಲ್ಲಿ ಸೈದ್ಧಾಂತಿಕವಾದ ವಿಚಾರಕ್ಕೆ ನಿಷ್ಠೂರವನ್ನು ಮಾಡಿಕೊಳ್ಳಬೇಡಿ
  • ಉತ್ತಮರಾದ, ಶ್ರೇಷ್ಠ, ಸಾಧನೆ ಮಾಡಿರುವ ವ್ಯಕ್ತಿಗಳ ಸಂಪರ್ಕವಾಗುವ ದಿನವಾಗಿದೆ
  • ಕಳಂಕರಹಿತವಾದ ಕೆಲಸಕ್ಕೆ ಇವರ ಮಾರ್ಗದರ್ಶನ ಪಡೆದುಕೊಳ್ಳುವುದರಿಂದ ಒಳಿತಾಗುತ್ತದೆ
  • ಕುಲದೇವರನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ಬಹಳ ದಿನದ ಆಸೆಯೊಂದು ಈ ದಿನ ನೆರವೇರುವ ಸಾಧ್ಯತೆ ಇದೆ
  • ಇಂದು ನೀವು ನಿಮ್ಮ ಕೆಲಸದಲ್ಲಿ ಒಂಟಿಯಾಗಬಹುದು
  • ವಿದ್ಯಾರ್ಥಿಗಳಿಗೆ ತುಂಬಾ ಒತ್ತಡದ ದಿನವಾಗಿರುತ್ತದೆ
  • ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಿಂದ ಒತ್ತಡ, ಆತಂಕ ನಿಮ್ಮನ್ನು ಕಾಡಬಹುದು
  • ಈ ದಿನ ಮನಸ್ಸನ್ನು ಹಗುರ ಮಾಡಿಕೊಂಡರೆ ಒಳಿತು
  • ಸ್ವಲ್ಪ ಸಮಯ ಮಾಡಿಕೊಂಡು ಧ್ಯಾನ ಮಾಡುವುದರಿಂದ ಸಂತೋಷವಾಗಿರುತ್ತೀರಿ
  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನವಾಗಿದೆ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ತುಲಾ

publive-image

  • ಈ ರಾಶಿಯ ಸ್ತ್ರೀಯರು ಹೆಚ್ಚು ಹಣ ನೀಡಿ ದುಬಾರಿ ಪದಾರ್ಥಗಳನ್ನು ಖರೀದಿಸುವ ದಿನವಾಗಿದೆ
  • ಅವಿವಾಹಿತರಿಗೆ ಇಂದು ಶುಭಸೂಚನೆ ಪ್ರಯತ್ನಿಸಿ
  • ಮದುವೆ ವಿಚಾರದಿಂದ ನಿಮ್ಮ ಮನಸ್ಸಲ್ಲಿ ಗೊಂದಲಗಳು ಉಂಟಾಗುವ ದಿನ
  • ವ್ಯಾಪಾರ- ವ್ಯವಹಾರಗಳಲ್ಲಿ, ಹಣಕಾಸಿನ ವಿಚಾರದಲ್ಲಿ ಶುಭ ದಿನವಾಗಿದೆ
  • ವಿಶೇಷವಾಗಿ ಚಾಲಕರಿಗೆ ಶುಭದಿನ
  • ಸ್ತ್ರೀಯರು ಚಾಲಕರಾಗಿದ್ದರೆ ಅವರಿಗೆ ವಿಶೇಷ ಗೌರವ ಸಿಗುವ ದಿನವಾಗಿದೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಹೊಟ್ಟೆಗೆ ಸಂಬಂಧಪಟ್ಟ ಅನಾರೋಗ್ಯ ಈ ದಿನ ಹೆಚ್ಚಾಗಿ ಕಾಡತ್ತೆ ಗಮನಹರಿಸಿ
  • ಕೆಲಸದ ಒತ್ತಡ, ಮಾನಸಿಕ ಒತ್ತಡ, ಮಾನಸಿಕ ತೊಂದರೆ, ದೈಹಿಕ ತೊಂದರೆ ಕಾಡುವ ದಿನವಾಗಿದೆ
  • ನಿಮಗೆ ನಂಬಿಕೆ ಇರುವ ವ್ಯಕ್ತಿಯೊಂದಿಗೆ ಮಾತ್ರ ವಿಷಯವನ್ನ ಚರ್ಚಿಸಿ
  • ಇದರಿಂದ ಬೇರೆಯವರು ಉಪಯೋಗವನ್ನು ಪಡೆದುಕೊಳ್ಳುವ ಸಾಧ್ಯತೆ ಎಚ್ಚರವಹಿಸಿ
  • ನಿಮ್ಮ ಯೋಜನೆಗಳಿಂದ ಬೇರೆಯವರಿಗೆ ಉಪಕಾರವಾದರೆ ನಿಮಗೆ ನಷ್ಟವಾಗುವ ಸಂಭವವಿದೆ
  • ಸಾಯಿ ಬಾಬಾರನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ಇಂದು ರಾಜಕೀಯ ವ್ಯಕ್ತಿಗಳಿಗೆ ಶುಭದಿನ
  • ಕೈಯಲ್ಲಿ ಹೆಚ್ಚು ಹಣ ಓಡಾಡುವ ದಿನವಾಗಿದೆ
  • ಕುಟುಂಬದವರಿಗೆ, ಸಂಬಂಧಿಕರಿಗೆ ನಿಮ್ಮ ಜೊತೆ ಕೆಲಸ ಮಾಡುವವರಿಗೆ ವಿಶೇಷವಾದ ಉಡುಗೊರೆ ಕೊಡುತ್ತೀರಿ
  • ಎಲ್ಲರನ್ನೂ ನೀವು ಸಂತೋಷ ಪಡಿಸುತ್ತೀರಿ ಅದಕ್ಕೆ ಉತ್ತಮವಾದ ಪ್ರಶಂಸೆ ಸಿಗುತ್ತದೆ
  • ಅವಿವಾಹಿತರಿಗೆ ನೀವು ಮದುವೆಯನ್ನು ಮಾಡಿಸುವ ಭರವಸೆಯನ್ನ ನೀಡುತ್ತೀರಿ
  • ಸಾಯಂಕಾಲದ ವೇಳೆಗೆ ಕಹಿಸುದ್ಧಿಯಿಂದ ಮನಸ್ಸಿಗೆ ಬೇಸರವಾಗುವ ದಿನ
  • ಇದೇ ಯೋಚನೆಯಲ್ಲಿ ದಿನಕಳೆಯುವ ಸ್ಥಿತಿ ಉಂಟಾಗಬಹುದು
  • ಶ್ರೀಕೃಷ್ಣನನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಮನೆಯವರ ಒತ್ತಡಕ್ಕೆ ಮಣಿದು ಹೊಸ ವಾಹನ ಖರೀದಿಸಲು ಮುಂದಾಗಬಹುದು ಇದರಿಂದ ನಿಮಗೂ, ಕುಟುಂಬದವರಿಗೂ ಸಂತೋಷವಾಗುವ ದಿನ
  • ನಿಮ್ಮ ಕರ್ತವ್ಯ ನಮ್ಮ ಧರ್ಮದ ಬಗ್ಗೆ ನ್ಯಾಯವನ್ನು ಒದಗಿಸುವ ನಡವಳಿಕೆ ಇರುತ್ತದೆ
  • ಮಕ್ಕಳಿಗೆ ಮೊದಲು ಯಾವುದು ಸರಿ ತಪ್ಪು ಅನ್ನೋ ತಿಳುವಳಿಕೆ ನೀಡಿ
  • ಬೇರೆಯವರಿಗೆ ಒಳ್ಳೆಯದನ್ನ ಮಾಡಬೇಕೆಂಬ ಮನಸ್ಥಿತಿ ಉಂಟಾಗುತ್ತದೆ
  • ಶಾಶ್ವತವಾದ, ಗೌರವವನ್ನ, ಅಂತಸತ್ವವನ್ನು ಹೆಚ್ಚಿಸುವ ಕೆಲಸ ಇದರಿಂದಾಗುತ್ತದೆ
  • ಶ್ರೀಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ನಿಮ್ಮ ಪ್ರಾಮಾಣಿಕ ಹಾಗೂ ಶಿಸ್ತುಬದ್ಧ ಕೆಲಸವನ್ನು ಗಮನಿಸಿ ಮೇಲಾಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಬಹುದು
  • ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವಂತಹ ದಿನವಾಗಿದೆ
  • ಹೆಚ್ಚಿನ ವಿಚಾರ ಸಂಗ್ರಹಕ್ಕಾಗಿ ಅಧ್ಯಯನದ ಕಡೆಗೆ ಹೆಚ್ಚು ಗಮನ ಸಾಧ್ಯತೆ
  • ನಿಮ್ಮ ತಂದೆ-ತಾಯಿಯನ್ನು ಗೌರವ, ಸಂತೋಷದಿಂದ ನೋಡಿಕೊಳ್ಳಿ
  • ತಂದೆ-ತಾಯಿ ಸಂತೋಷವಾಗಿದ್ದರೆ ನಿಮ್ಮ ಕಾರ್ಯ ಸದಾ ಯಶಸ್ಸಿನದಾಗಿರುತ್ತದೆ
  • ತಂದೆ-ತಾಯಿಯನ್ನು ಮನಸಾರೇ ಪ್ರಾರ್ಥಿಸಿ

ಮೀನ 

publive-image

  • ನೀವು ಮಾಡಬೇಕಾದ ಕೆಲಸವನ್ನು ಬೇರೆಯವರಿಗೆ ವಹಿಸಬೇಡಿ
  • ನೀವು ನಿಮ್ಮ ಕಾರ್ಯ ಬೇರೆಯವರಿಗೆ ವಹಿಸುವುದರಿಂದ ನೀವು ನಷ್ಟವನ್ನು ಹೊಂದುವ ದಿನವಾಗಿರುತ್ತದೆ
  • ಈ ನಷ್ಟದಿಂದ ನೀವು ದಂಡ ಕಟ್ಟಬೇಕಾಗಬಹುದು
  • ಸಾಯಂಕಾಲದ ವೇಳೆಗೆ ಎದೆನೋವು ಕಾಣಿಸಿಕೊಳ್ಳಬಹುದು ಜಾಗ್ರತೆವಹಿಸಿ
  • ಇಂದು ಹುಳಿ ಪದಾರ್ಥ ಸೇವಿಸಬೇಡಿ ಆರೋಗ್ಯದ ಕಡೆ ಗಮನವಿರಲಿ
  • ಮಾರುತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment