/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಯಾವುದೋ ಕೆಲಸದ ಗುರಿಯಿಟ್ಟುಕೊಂಡು ಅದರ ಒತ್ತಡ ಬೇರೆಯವರ ಮೇಲೆ ಹೇರಬೇಡಿ
- ಈ ದಿನ ಕೂಗಾಡಿ ಬೇಸರ ಮಾಡಿಕೊಳ್ಳುತ್ತೀರಿ
- ಮನೆಯಲ್ಲಿ, ಕಾರ್ಯಕ್ಷೇತ್ರದಲ್ಲಿ, ವೃತ್ತಿಯಲ್ಲಿ ಈ ರೀತಿಯ ವಾತಾವರಣ ಇರಲಿದೆ
- ಎದುರಾಳಿಗಳು, ಪ್ರತಿಸ್ಪರ್ಧಿಗಳು ನಿಮ್ಮನ್ನು ಸೋಲಿಸುವ ಯೋಚನೆಯಲ್ಲಿರುತ್ತಾರೆ
- ಸಂಪೂರ್ಣವಾಗಿ ಬೇರೆಯವರನ್ನು ಆಶ್ರಯಿಸಿ ಕೆಲಸವನ್ನು ಮಾಡುತ್ತೀವಿ ಅನ್ನೋದು ತೊಂದರೆಯಾಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಭೂ ವ್ಯವಹಾರ, ಆಸ್ತಿ ಖರೀದಿ, ರಿಯಲ್ ಎಸ್ಟೇಟ್, ಪಿತ್ರಾರ್ಜಿತ ಆಸ್ತಿ ಮಾತುಕತೆಗೆ ಈ ದಿನ ಫಲ ಸಿಗುವುದಿಲ್ಲ
- ದಾಖಲಾತಿಗಳಿಗೆ ಸಂಬಂಧಪಟ್ಟಂತೆ ವ್ಯತ್ಯಾಸಗಳಾಗಿ ಕಿರಿಕಿರಿ ಉಂಟಾಗಬಹುದು
- ವ್ಯವಹಾರ ಹಿನ್ನಡೆಯಾಗುವುದರಿಂದ ಅಪನಂಬಿಕೆ ಬರಬಹುದು
- ಲಕ್ಷ್ಮಿ ಸರಸ್ವತಿಯನ್ನು ಪ್ರಾರ್ಥನೆ ಮಾಡಿ
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಸಹಜ ಸ್ವಭಾವದಿಂದ ಕುಟುಂಬದಲ್ಲಿ ನಿಮ್ಮ ಮಾತಿಗೆ ಬೆಲೆ ಕಡಿಮೆ
- ಹೊರಗೆ ಜನ ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ
- ಮನೆಗೆ ಮಾರಿ ಊರಿಗೆ ಉಪಕಾರಿ ಅನ್ನೋ ಶೈಲಿಯಲ್ಲಿ ಜನ ಬಣ್ಣಿಸುತ್ತಾರೆ
- ಮನೆಯವರನ್ನ ಸಮಾಧಾನ ಪಡಿಸಲು ಪ್ರಯತ್ನ ಪಡುತ್ತೀರಿ, ನಿಮ್ಮನ್ನು ನಿರ್ಲಕ್ಷಿಸುತ್ತಾರೆ
- ನೀವು ತಟಸ್ಥವಾಗಿದ್ದರೆ ಒಳಿತಾಗಲಿದೆ
- ಸಹೋದರರಲ್ಲಿ ಆರೋಗ್ಯ ವ್ಯತ್ಯಯ ಕಾಣಬಹುದು
- ಕುಲದೇವತೆಯನ್ನು ಪ್ರಾರ್ಥನೆ ಮಾಡಿ
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಕ್ಕಳ ವಿಚಾರದಲ್ಲಿ ಸ್ವಲ್ಪ ಬೇಸರವಾಗುವ ಸಾಧ್ಯತೆ ಹೆಚ್ಚು
- ಶಿಕ್ಷಕರು, ವಿದ್ಯಾರ್ಥಿಗಳ ಮಧ್ಯದಲ್ಲಿ ಅಸಮಾಧಾನ ಉಂಟಾಗುವ ಪರಿಸ್ಥಿತಿ
- ಶಿಕ್ಷಕರು ಮಕ್ಕಳನ್ನ ನಿಂದಿಸುವುದು, ಹೊಡೆಯುವುದು ಮಾಡಬೇಡಿ
- ನಿಮ್ಮ ಅವರ ಬಾಂಧವ್ಯಕ್ಕೆ ಅಡ್ಡಿಯಾಗಬಹುದು ತಾಳ್ಮೆಯಿರಲಿ
- ವಿದ್ಯಾರ್ಥಿಗಳು, ಮಕ್ಕಳು ದೊಡ್ಡವರ ಮಾತಿಗೆ ಗೌರವ ಕೊಡಬೇಕು
- ತಾಯಿ ಶಾರದೆಯನ್ನು ಪ್ರಾರ್ಥಿಸಿ
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಪದಾರ್ಥಗಳನ್ನು ಆಮದು ರಫ್ತು ಮಾಡುತ್ತಿರುವವರಿಗೆ ಇಂದು ಶುಭದಿನ
- ನಿಮ್ಮ ಅಭಿಪ್ರಾಯ, ಸಲಹೆಗಳನ್ನು ಬೇರೆಯವರಿಗೆ ಹೋಲಿಕೆ ಮಾಡಿ ಒತ್ತಡ ಹೇರಬೇಡಿ
- ಹೊಸ ವಾಹನ ಖರೀದಿಯ ಯೋಗವಿದೆ
- ಈ ದಿನ ದಿಢೀರ್​ ನಿರ್ಧಾರ ಬೇಡ
- ಐಷಾರಾಮಿ ಜೀವನಕ್ಕೆ ಅವಕಾಶವಿದೆ
- ಅದನ್ನ ಸದುಪಯೋಗ ಪಡಿಸಿಕೊಳ್ಳಿ
- ಹಣ, ಆಹಾರದ, ಸಹಾಯದ ಅಗತ್ಯವಿದೆಯೊ ಅವರಿಗೆ ಸಹಾಯವನ್ನು ಮಾಡಿ
- ಮನೆದೇವರ ದರ್ಶನ ಮಾಡಿ
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನೀವು ಕೆಲಸ ಮಾಡುವ ಸ್ಥಳದಲ್ಲಿ ಯಾರನ್ನು ನಿರ್ಲಕ್ಷ್ಯ ಮಾಡಬೇಡಿ
- ವಿದ್ಯಾರ್ಥಿಗಳು ಓದುವುದರಿಂದ ತುಂಬಾ ಆಯಾಸಗೊಳ್ಳುವ ದಿನ
- ಓದುವುದರಿಂದ ಭವಿಷ್ಯದಲ್ಲಿ ಅನುಕೂಲವಾಗಲಿದೆ
- ಇಂದು ವಿರಾಮ ತೆಗೆದುಕೊಳ್ಳಲು ಸಮಯವಿರುವುದಿಲ್ಲ
- ಅನಾರೋಗ್ಯದಿಂದ ಬಳಲುತ್ತಿರುವವರು ಎಚ್ಚರಿಕೆಯಿಂದಿರಬೇಕು
- ಪವಮಾನ ಹೋಮ ಮಾಡಿಸುವುದು ಸೂಕ್ತ ಪರಿಹಾರ
ತುಲಾ/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ರಾಶಿಯ ಕ್ರೀಡಾಪಟುಗಳಿಗೆ ಹಿಂದೆ ಮಾಡಿದ ತಪ್ಪುಗಳಿಂದ ಇಂದು ಹಿನ್ನಡೆಯಾಗಬಹುದು
- ಅವಕಾಶದಿಂದ ವಂಚಿತರಾಗುತ್ತೀರಿ ಎಚ್ಚರಿಕೆ
- ಪ್ರಾಮಾಣಿಕವಾದ ಸ್ಪರ್ಧಾಳುಗಳಿಗೆ ಸದಾಕಾಲ ಜಯ
- ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುವುದಾಗಿರುತ್ತದೆ
- ಪ್ರಾಮಾಣಿಕ ಪ್ರಯತ್ನ ಮಾಡಿ ಸದಾ ಶುಭಫಲವನ್ನು ಹೊಂದುತ್ತೀರಿ
- ನೀವು ಹೆತ್ತವರ ಆರ್ಶೀವಾದ ಪಡೆಯಿರಿ
- ಶತ್ರುಗಳ ಮೇಲೆ ನಿಮ್ಮ ಹಿಡಿತ ಹೆಚ್ಚಾಗಲಿದೆ
- ದಿನೇ ದಿನೇ ಶತ್ರುಗಳು ಹೆಚ್ಚಾಗುತ್ತಾರೆ ಜಾಗ್ರತೆ ಇರಲಿ
- ರಾಜರಾಜೇಶ್ವರಿಯನ್ನು ಉಪಾಸನೆ ಮಾಡಿ
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಾರ್ಯಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಹರಸಾಹಸ ಪಡಬೇಕಾಗುತ್ತದೆ
- ಹಿರಿಯ ಅಧಿಕಾರಿಗಳ ಬೆಂಬಲ ದೊರೆಯಬಹುದು
- ಮನೆಯನ್ನು ನವೀಕರಿಸುವ ಯೋಗವಿದೆ
- ಇಂದು ಯಾವುದೇ ಒಪ್ಪಂದಗಳಿಗೆ ಸಹಿ ಹಾಕಬೇಡಿ
- ಕಷ್ಟಕ್ಕೆ ಸಿಲುಕುತ್ತೀರಿ ಜಾಗ್ರತೆ ವಹಿಸಿ
- ಕುಟುಂಬದಲ್ಲಿ ಸಂತೋಷ ನಿಮ್ಮದಾಗಲಿದೆ
- ಧಾರ್ಮಿಕ ಕಾರ್ಯಕ್ರಮದ ಬಗ್ಗೆಯೂ ಚಿಂತನೆ ನಡೆಯುತ್ತದೆ
- ಸಾಯಂಕಾಲ ಸುಖ ಭೋಜನ ತಿರುಗಾಟಗಳಿಂದ ಮನಸ್ಸಿಗೆ ಸಮಾಧಾನ ದೊರೆಯುತ್ತದೆ
- ಯಾವುದೇ ವ್ಯವಹಾರದಲ್ಲಿ ಇಂದು ಮಧ್ಯಸ್ಥಿಕೆಯನ್ನ ವಹಿಸಬೇಡಿ
- ಹನುಮಾನ್​ ಚಾಲೀಸ್​ ಪಠಿಸಿ
ಧನಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ವ್ಯವಹಾರದಲ್ಲಿ ಉತ್ತಮ ವ್ಯಕ್ತಿಗಳ ಸಂರ್ಪಕ ದೊರೆಯಬಹುದು
- ಚೆನ್ನಾಗಿದ್ದ ಆರೋಗ್ಯವನ್ನ ನೀವೇ ಹಾಳು ಮಾಡಿಕೊಳ್ಳುತ್ತೀರಿ
- ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ
- ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ನಿಮ್ಮ ತೀರ್ಮಾನವನ್ನು ಕೈಗೊಳ್ಳಿ
- ಮಧ್ಯಾಹ್ನದ ಹೊತ್ತಿಗೆ ಒಂದು ಕಹಿಸುದ್ದಿ ನಿಮಗೆ ಆಘಾತವನ್ನುಂಟು ಮಾಡಬಹುದು
- IT ಕ್ಷೇತ್ರದವರಿಗೆ ಸಿಹಿಸುದ್ದಿ ವಿದೇಶದಲ್ಲಿ ಹಣ ಹೂಡಿಕೆ ಮಾಡುತ್ತೀರಿ
- ಗಣಪತಿಯ ಆರಾಧನೆ ಮಾಡಿ
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಅವಿವಾಹಿತರು ವಿವಾಹ ವಿಚಾರಕ್ಕೆ ಪ್ರಯತ್ನ ಪಡುತ್ತೀರಿ ಆದರೆ ಆ ಸಂಬಂಧ ಮುರಿದು ಬೀಳಬಹುದು
- ಸಂಬಂಧಿಕರು ಮಧ್ಯ ಮಾತಾಡಿ ಸಂಬಂಧ ಮುರಿದು ಬೀಳುವ ಸಾಧ್ಯತೆ ಇದೆ ಎಚ್ಚರಿಕೆ
- ಇಂದು ಕೈ ಅಥವಾ ಕೈ ಬೆರಳಿಗೆ ತೊಂದರೆಯಾಗಬಹುದು ಜಾಗ್ರತೆ ವಹಿಸಿ
- ಪ್ರಯಾಣದ ಸಮಯ ಸಂಪೂರ್ಣ ವ್ಯರ್ಥವಾಗಬಹುದು
- ಶ್ರೀನಿವಾಸ ಕಲ್ಯಾಣ ಮಾಡಿಸಿ
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ವಕೀಲರಿಗೆ ಇಂದು ಶುಭದಿನ
- ವಾದ-ವಿವಾದಗಳ ವಿಷಯ ಇತ್ಯರ್ಥಗೊಳ್ಳುವ ದಿನ
- ಕಾನೂನಿನ ಸರಿಯಾದ ಹೋರಾಟಕ್ಕೆ ಇಂದು ಜಯಪ್ರದವಾಗುತ್ತದೆ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳಾಗಬಹುದು
- ನಿಮಗೆ ಶತ್ರುಗಳು ಹೆಚ್ಚಾಗುತ್ತಾರೆ ಜಾಗ್ರತೆವಹಿಸಿ
- ಜನ ಬಲ, ಹಣ ಬಲ ಎರಡೂ ನಿಮ್ಮ ಕೈಯಲ್ಲಿರುತ್ತದೆ
- ಭವಾನಿಸ್ತೋತ್ರ ಪಠಿಸಿ
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ನೀವು ಮಾಡಿದ ಕೆಲಸದಿಂದ ಬೇರೆಯವರು ಅನುಕೂಲವನ್ನು ಪಡೆಯುತ್ತಾರೆ
- ಕುಟುಂಬದವರಿಂದ ಮನಸ್ಸಿಗೆ ಬೇಸರ ಉಂಟಾಗಬಹುದು
- ನಿಮಗೆ ಮೋಸ ಮಾಡಿದವರ ಜೊತೆ ಬಾಂಧವ್ಯ ದೂರ ಆಗಬಹುದು
- ನಿಮ್ಮ ಪ್ರತಿಭೆ ಬೇರೆಯವರಿಗೆ ಮಾದರಿಯಾಗುತ್ತದೆ
- ರಾತ್ರಿ ಪ್ರಯಾಣದಿಂದ ಹಾನಿಯಾಗಬಹುದು
- ಗೌರಿ ದೇವಿಯನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us