Advertisment

ಹುಷಾರಾಗಿರಿ.. ಇಂದು ಭೂ ವ್ಯವಹಾರ, ಆಸ್ತಿ ಖರೀದಿಗೆ ಒಳ್ಳೆಯದಲ್ಲ; ಇಲ್ಲಿದೆ ಇಂದಿನ ರಾಶಿ ಭವಿಷ್ಯ!

author-image
admin
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಕಾನೂನಿನ ಸರಿಯಾದ ಹೋರಾಟಕ್ಕೆ ಇಂದು ಜಯಪ್ರದವಾಗುತ್ತದೆ
  • ಐಷಾರಾಮಿ ಜೀವನಕ್ಕೆ ಅವಕಾಶ, ಈ ದಿನ ದಿಢೀರ್​ ನಿರ್ಧಾರ ಬೇಡ
  • ಅನಾರೋಗ್ಯದಿಂದ ಬಳಲುತ್ತಿರುವವರು ಎಚ್ಚರಿಕೆಯಿಂದಿರಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ

ಮೇಷ ರಾಶಿ

publive-image

  • ಯಾವುದೋ ಕೆಲಸದ ಗುರಿಯಿಟ್ಟುಕೊಂಡು ಅದರ ಒತ್ತಡ ಬೇರೆಯವರ ಮೇಲೆ ಹೇರಬೇಡಿ
  • ಈ ದಿನ ಕೂಗಾಡಿ ಬೇಸರ ಮಾಡಿಕೊಳ್ಳುತ್ತೀರಿ
  • ಮನೆಯಲ್ಲಿ, ಕಾರ್ಯಕ್ಷೇತ್ರದಲ್ಲಿ, ವೃತ್ತಿಯಲ್ಲಿ ಈ ರೀತಿಯ ವಾತಾವರಣ ಇರಲಿದೆ
  • ಎದುರಾಳಿಗಳು, ಪ್ರತಿಸ್ಪರ್ಧಿಗಳು ನಿಮ್ಮನ್ನು ಸೋಲಿಸುವ ಯೋಚನೆಯಲ್ಲಿರುತ್ತಾರೆ
  • ಸಂಪೂರ್ಣವಾಗಿ ಬೇರೆಯವರನ್ನು ಆಶ್ರಯಿಸಿ ಕೆಲಸವನ್ನು ಮಾಡುತ್ತೀವಿ ಅನ್ನೋದು ತೊಂದರೆಯಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ಭೂ ವ್ಯವಹಾರ, ಆಸ್ತಿ ಖರೀದಿ, ರಿಯಲ್ ಎಸ್ಟೇಟ್, ಪಿತ್ರಾರ್ಜಿತ ಆಸ್ತಿ ಮಾತುಕತೆಗೆ ಈ ದಿನ ಫಲ ಸಿಗುವುದಿಲ್ಲ
  • ದಾಖಲಾತಿಗಳಿಗೆ ಸಂಬಂಧಪಟ್ಟಂತೆ ವ್ಯತ್ಯಾಸಗಳಾಗಿ ಕಿರಿಕಿರಿ ಉಂಟಾಗಬಹುದು
  • ವ್ಯವಹಾರ ಹಿನ್ನಡೆಯಾಗುವುದರಿಂದ ಅಪನಂಬಿಕೆ ಬರಬಹುದು
  • ಲಕ್ಷ್ಮಿ ಸರಸ್ವತಿಯನ್ನು ಪ್ರಾರ್ಥನೆ ಮಾಡಿ
Advertisment

ಮಿಥುನ

publive-image

  • ನಿಮ್ಮ ಸಹಜ ಸ್ವಭಾವದಿಂದ ಕುಟುಂಬದಲ್ಲಿ ನಿಮ್ಮ ಮಾತಿಗೆ ಬೆಲೆ ಕಡಿಮೆ
  • ಹೊರಗೆ ಜನ ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ
  • ಮನೆಗೆ ಮಾರಿ ಊರಿಗೆ ಉಪಕಾರಿ ಅನ್ನೋ ಶೈಲಿಯಲ್ಲಿ ಜನ ಬಣ್ಣಿಸುತ್ತಾರೆ
  • ಮನೆಯವರನ್ನ ಸಮಾಧಾನ ಪಡಿಸಲು ಪ್ರಯತ್ನ ಪಡುತ್ತೀರಿ, ನಿಮ್ಮನ್ನು ನಿರ್ಲಕ್ಷಿಸುತ್ತಾರೆ
  • ನೀವು ತಟಸ್ಥವಾಗಿದ್ದರೆ ಒಳಿತಾಗಲಿದೆ
  • ಸಹೋದರರಲ್ಲಿ ಆರೋಗ್ಯ ವ್ಯತ್ಯಯ ಕಾಣಬಹುದು
  • ಕುಲದೇವತೆಯನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ಮಕ್ಕಳ ವಿಚಾರದಲ್ಲಿ ಸ್ವಲ್ಪ ಬೇಸರವಾಗುವ ಸಾಧ್ಯತೆ ಹೆಚ್ಚು
  • ಶಿಕ್ಷಕರು, ವಿದ್ಯಾರ್ಥಿಗಳ ಮಧ್ಯದಲ್ಲಿ ಅಸಮಾಧಾನ ಉಂಟಾಗುವ ಪರಿಸ್ಥಿತಿ
  • ಶಿಕ್ಷಕರು ಮಕ್ಕಳನ್ನ ನಿಂದಿಸುವುದು, ಹೊಡೆಯುವುದು ಮಾಡಬೇಡಿ
  • ನಿಮ್ಮ ಅವರ ಬಾಂಧವ್ಯಕ್ಕೆ ಅಡ್ಡಿಯಾಗಬಹುದು ತಾಳ್ಮೆಯಿರಲಿ
  • ವಿದ್ಯಾರ್ಥಿಗಳು, ಮಕ್ಕಳು ದೊಡ್ಡವರ ಮಾತಿಗೆ ಗೌರವ ಕೊಡಬೇಕು
  • ತಾಯಿ ಶಾರದೆಯನ್ನು ಪ್ರಾರ್ಥಿಸಿ

ಸಿಂಹ

publive-image

  • ಪದಾರ್ಥಗಳನ್ನು ಆಮದು ರಫ್ತು ಮಾಡುತ್ತಿರುವವರಿಗೆ ಇಂದು ಶುಭದಿನ
  • ನಿಮ್ಮ ಅಭಿಪ್ರಾಯ, ಸಲಹೆಗಳನ್ನು ಬೇರೆಯವರಿಗೆ ಹೋಲಿಕೆ ಮಾಡಿ ಒತ್ತಡ ಹೇರಬೇಡಿ
  • ಹೊಸ ವಾಹನ ಖರೀದಿಯ ಯೋಗವಿದೆ
  • ಈ ದಿನ ದಿಢೀರ್​ ನಿರ್ಧಾರ ಬೇಡ
  • ಐಷಾರಾಮಿ ಜೀವನಕ್ಕೆ ಅವಕಾಶವಿದೆ
  • ಅದನ್ನ ಸದುಪಯೋಗ ಪಡಿಸಿಕೊಳ್ಳಿ
  • ಹಣ, ಆಹಾರದ, ಸಹಾಯದ ಅಗತ್ಯವಿದೆಯೊ ಅವರಿಗೆ ಸಹಾಯವನ್ನು ಮಾಡಿ
  • ಮನೆದೇವರ ದರ್ಶನ ಮಾಡಿ
Advertisment

ಕನ್ಯಾ

publive-image

  • ನೀವು ಕೆಲಸ ಮಾಡುವ ಸ್ಥಳದಲ್ಲಿ ಯಾರನ್ನು ನಿರ್ಲಕ್ಷ್ಯ ಮಾಡಬೇಡಿ
  • ವಿದ್ಯಾರ್ಥಿಗಳು ಓದುವುದರಿಂದ ತುಂಬಾ ಆಯಾಸಗೊಳ್ಳುವ ದಿನ
  • ಓದುವುದರಿಂದ ಭವಿಷ್ಯದಲ್ಲಿ ಅನುಕೂಲವಾಗಲಿದೆ
  • ಇಂದು ವಿರಾಮ ತೆಗೆದುಕೊಳ್ಳಲು ಸಮಯವಿರುವುದಿಲ್ಲ
  • ಅನಾರೋಗ್ಯದಿಂದ ಬಳಲುತ್ತಿರುವವರು ಎಚ್ಚರಿಕೆಯಿಂದಿರಬೇಕು
  • ಪವಮಾನ ಹೋಮ ಮಾಡಿಸುವುದು ಸೂಕ್ತ ಪರಿಹಾರ

ತುಲಾpublive-image

  • ಈ ರಾಶಿಯ ಕ್ರೀಡಾಪಟುಗಳಿಗೆ ಹಿಂದೆ ಮಾಡಿದ ತಪ್ಪುಗಳಿಂದ ಇಂದು ಹಿನ್ನಡೆಯಾಗಬಹುದು
  • ಅವಕಾಶದಿಂದ ವಂಚಿತರಾಗುತ್ತೀರಿ ಎಚ್ಚರಿಕೆ
  • ಪ್ರಾಮಾಣಿಕವಾದ ಸ್ಪರ್ಧಾಳುಗಳಿಗೆ ಸದಾಕಾಲ ಜಯ
  • ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುವುದಾಗಿರುತ್ತದೆ
  • ಪ್ರಾಮಾಣಿಕ ಪ್ರಯತ್ನ ಮಾಡಿ ಸದಾ ಶುಭಫಲವನ್ನು ಹೊಂದುತ್ತೀರಿ
  • ನೀವು ಹೆತ್ತವರ ಆರ್ಶೀವಾದ ಪಡೆಯಿರಿ
  • ಶತ್ರುಗಳ ಮೇಲೆ ನಿಮ್ಮ ಹಿಡಿತ ಹೆಚ್ಚಾಗಲಿದೆ
  • ದಿನೇ ದಿನೇ ಶತ್ರುಗಳು ಹೆಚ್ಚಾಗುತ್ತಾರೆ ಜಾಗ್ರತೆ ಇರಲಿ
  • ರಾಜರಾಜೇಶ್ವರಿಯನ್ನು ಉಪಾಸನೆ ಮಾಡಿ

ವೃಶ್ಚಿಕ

publive-image

  • ಕಾರ್ಯಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಹರಸಾಹಸ ಪಡಬೇಕಾಗುತ್ತದೆ
  • ಹಿರಿಯ ಅಧಿಕಾರಿಗಳ ಬೆಂಬಲ ದೊರೆಯಬಹುದು
  • ಮನೆಯನ್ನು ನವೀಕರಿಸುವ ಯೋಗವಿದೆ
  • ಇಂದು ಯಾವುದೇ ಒಪ್ಪಂದಗಳಿಗೆ ಸಹಿ ಹಾಕಬೇಡಿ
  • ಕಷ್ಟಕ್ಕೆ ಸಿಲುಕುತ್ತೀರಿ ಜಾಗ್ರತೆ ವಹಿಸಿ
  • ಕುಟುಂಬದಲ್ಲಿ ಸಂತೋಷ ನಿಮ್ಮದಾಗಲಿದೆ
  • ಧಾರ್ಮಿಕ ಕಾರ್ಯಕ್ರಮದ ಬಗ್ಗೆಯೂ ಚಿಂತನೆ ನಡೆಯುತ್ತದೆ
  • ಸಾಯಂಕಾಲ ಸುಖ ಭೋಜನ ತಿರುಗಾಟಗಳಿಂದ ಮನಸ್ಸಿಗೆ ಸಮಾಧಾನ ದೊರೆಯುತ್ತದೆ
  • ಯಾವುದೇ ವ್ಯವಹಾರದಲ್ಲಿ ಇಂದು ಮಧ್ಯಸ್ಥಿಕೆಯನ್ನ ವಹಿಸಬೇಡಿ
  • ಹನುಮಾನ್​ ಚಾಲೀಸ್​ ಪಠಿಸಿ
Advertisment

ಧನಸ್ಸು

publive-image

  • ವ್ಯವಹಾರದಲ್ಲಿ ಉತ್ತಮ ವ್ಯಕ್ತಿಗಳ ಸಂರ್ಪಕ ದೊರೆಯಬಹುದು
  • ಚೆನ್ನಾಗಿದ್ದ ಆರೋಗ್ಯವನ್ನ ನೀವೇ ಹಾಳು ಮಾಡಿಕೊಳ್ಳುತ್ತೀರಿ
  • ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ
  • ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ನಿಮ್ಮ ತೀರ್ಮಾನವನ್ನು ಕೈಗೊಳ್ಳಿ
  • ಮಧ್ಯಾಹ್ನದ ಹೊತ್ತಿಗೆ ಒಂದು ಕಹಿಸುದ್ದಿ ನಿಮಗೆ ಆಘಾತವನ್ನುಂಟು ಮಾಡಬಹುದು
  • IT ಕ್ಷೇತ್ರದವರಿಗೆ ಸಿಹಿಸುದ್ದಿ ವಿದೇಶದಲ್ಲಿ ಹಣ ಹೂಡಿಕೆ ಮಾಡುತ್ತೀರಿ
  • ಗಣಪತಿಯ ಆರಾಧನೆ ಮಾಡಿ

ಮಕರ

publive-image

  • ಅವಿವಾಹಿತರು ವಿವಾಹ ವಿಚಾರಕ್ಕೆ ಪ್ರಯತ್ನ ಪಡುತ್ತೀರಿ ಆದರೆ ಆ ಸಂಬಂಧ ಮುರಿದು ಬೀಳಬಹುದು
  • ಸಂಬಂಧಿಕರು ಮಧ್ಯ ಮಾತಾಡಿ ಸಂಬಂಧ ಮುರಿದು ಬೀಳುವ ಸಾಧ್ಯತೆ ಇದೆ ಎಚ್ಚರಿಕೆ
  • ಇಂದು ಕೈ ಅಥವಾ ಕೈ ಬೆರಳಿಗೆ ತೊಂದರೆಯಾಗಬಹುದು ಜಾಗ್ರತೆ ವಹಿಸಿ
  • ಪ್ರಯಾಣದ ಸಮಯ ಸಂಪೂರ್ಣ ವ್ಯರ್ಥವಾಗಬಹುದು
  • ಶ್ರೀನಿವಾಸ ಕಲ್ಯಾಣ ಮಾಡಿಸಿ

ಕುಂಭ

publive-image

  • ವಕೀಲರಿಗೆ ಇಂದು ಶುಭದಿನ
  • ವಾದ-ವಿವಾದಗಳ ವಿಷಯ ಇತ್ಯರ್ಥಗೊಳ್ಳುವ ದಿನ
  • ಕಾನೂನಿನ ಸರಿಯಾದ ಹೋರಾಟಕ್ಕೆ ಇಂದು ಜಯಪ್ರದವಾಗುತ್ತದೆ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳಾಗಬಹುದು
  • ನಿಮಗೆ ಶತ್ರುಗಳು ಹೆಚ್ಚಾಗುತ್ತಾರೆ ಜಾಗ್ರತೆವಹಿಸಿ
  • ಜನ ಬಲ, ಹಣ ಬಲ ಎರಡೂ ನಿಮ್ಮ ಕೈಯಲ್ಲಿರುತ್ತದೆ
  • ಭವಾನಿಸ್ತೋತ್ರ ಪಠಿಸಿ
Advertisment

ಮೀನ 

publive-image

  • ನೀವು ಮಾಡಿದ ಕೆಲಸದಿಂದ ಬೇರೆಯವರು ಅನುಕೂಲವನ್ನು ಪಡೆಯುತ್ತಾರೆ
  • ಕುಟುಂಬದವರಿಂದ ಮನಸ್ಸಿಗೆ ಬೇಸರ ಉಂಟಾಗಬಹುದು
  • ನಿಮಗೆ ಮೋಸ ಮಾಡಿದವರ ಜೊತೆ ಬಾಂಧವ್ಯ ದೂರ ಆಗಬಹುದು
  • ನಿಮ್ಮ ಪ್ರತಿಭೆ ಬೇರೆಯವರಿಗೆ ಮಾದರಿಯಾಗುತ್ತದೆ
  • ರಾತ್ರಿ ಪ್ರಯಾಣದಿಂದ ಹಾನಿಯಾಗಬಹುದು
  • ಗೌರಿ ದೇವಿಯನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ                            

Advertisment
Advertisment
Advertisment