ನಾಳೆಯೇ ಆರ್​ಸಿಬಿ ಪಂದ್ಯ.. ಈ ಸ್ಟಾರ್​​ನನ್ನು ಆರಂಭದಲ್ಲೇ ಕಟ್ಟಿ ಹಾಕಿದ್ರೆ ಅರ್ಧ ಪಂದ್ಯ ಗೆದ್ದಂತೆ..!

author-image
Ganesh
Updated On
ನಾಳೆಯೇ ಆರ್​ಸಿಬಿ ಪಂದ್ಯ.. ಈ ಸ್ಟಾರ್​​ನನ್ನು ಆರಂಭದಲ್ಲೇ ಕಟ್ಟಿ ಹಾಕಿದ್ರೆ ಅರ್ಧ ಪಂದ್ಯ ಗೆದ್ದಂತೆ..!
Advertisment
  • ಚಿನ್ನಸ್ವಾಮಿಯಲ್ಲಿ ಆರ್​ಸಿಬಿಗೆ ಗೆಲುವಿನ ಕನಸು
  • ಪಂಜಾಬ್​ ಪವರ್​​​ನ ಕಟ್ ಮಾಡಲು ಆರ್​ಸಿಬಿ ಪ್ಲಾನ್
  • ಸಂಜೆ 7.30ರಿಂದ ಐಪಿಎಲ್ ಪಂದ್ಯ ಆರಂಭ ಆಗಲಿದೆ

ರಾಜಸ್ಥಾನ್​ ವಿರುದ್ಧ ರಾಯಲ್​ ಜಯ ಸಾಧಿಸಿದ ಆರ್​​ಸಿಬಿ ಇದೀಗ ಪಂಜಾಬ್​ಗೆ ಪಂಚ್​ ಕೊಡೋಕೆ ರೆಡಿಯಾಗಿದೆ. ಹೋಮ್​​ಗ್ರೌಂಡ್​ನಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರೋ ಆರ್​​ಸಿಬಿ, ಪಂಜಾಬ್​ ಕಿಂಗ್​ ಮಣಿಸುವ ಕನಸಿನಲ್ಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​​ಸಿಬಿ ಗೆದ್ದು ಬೀಗಬೇಕಂದ್ರೆ ಪಂಜಾಬ್​ ಪವರ್​​​ನ ಕಟ್​ ಮಾಡಬೇಕಿದೆ. ಅದರಲ್ಲೂ ವಿಶೇಷವಾಗಿ ಸ್ಫೋಟಕ ಬ್ಯಾಟರ್ ಪ್ರಿಯಾಂಶ್ ಆರ್ಯ.

ಆರಂಭಿಕನಾಗಿ ಕಣಕ್ಕಿಳಿಯೋ ಈ ಯಂಗ್​​ ಲೆಫ್ಟಿ ಬ್ಯಾಟರ್ ಪ್ರಿಯಾಂಶ್​, ಮೊದಲ ಬಾಲ್​ನಿಂದಲೇ ಬೌಲರ್​ಗಳ ಮೇಲೆ ದಂಡಯಾತ್ರೆ ನಡೆಸ್ತಾರೆ. ಪಂಜಾಬ್ ಸಕ್ಸಸ್​ ಸಿಕ್ರೇಟ್​ ಆಗಿರುವ ಈ ಡೆಲ್ಲಿ ಬಾಯ್, 6 ಪಂದ್ಯಗಳಿಂದ 216ರ ಬ್ಯಾಟಿಂಗ್ ಸ್ಟ್ರೈಕ್​​ರೇಟ್​ನಲ್ಲಿ 216 ರನ್ ಸಿಡಿಸಿದ್ದಾರೆ.

ಇದನ್ನೂ ಓದಿ: ಕೋಚ್​​ಗಳ ಮೇಲೆ ಸಿಟ್ಟು ತೀರಿಸಿಕೊಂಡ BCCI.. ಟಿ ದಿಲೀಪ್ ಸೇರಿ ಹಲವರಿಗೆ ಗೇಟ್​ಪಾಸ್​..!

publive-image

ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸೋ ಈತನಿಗೆ, ಚಿನ್ನಸ್ವಾಮಿಯ ಚಿಕ್ಕ ಗ್ರೌಂಡ್​ ನಿಜಕ್ಕೂ ಹೇಳಿ ಮಾಡಿಸಿದಂತಿದೆ. ಅಕಸ್ಮಾತ್ ಇಲ್ಲಿ ಪ್ರಿಯಾಂಶ್ ಸಿಡಿದು ನಿಂತ್ರೆ, ಆರ್​ಸಿಬಿಗೆ ಸಂಕಷ್ಟ ತಪ್ಪಿದ್ದಲ್ಲ. ಹೀಗಾಗಿ ಈತನಿಗೆ ಆರಂಭದಲ್ಲೇ ಪೆವಿಲಿಯನ್ ಹಾದಿ ತೋರಿಬೇಕಿದೆ. ಈ ನಿಟ್ಟಿನಲ್ಲಿ ಗೇಮ್​​ಪ್ಲಾನ್​ ಮಾಡಬೇಕಿದೆ.

ಈ ಬಾರಿಯ ಮೆಗಾ ಹರಾಜಿನಲ್ಲಿ ಪ್ರಿಯಾಂಶು ಆರ್ಯ ಅವರನ್ನು ಪಂಜಾಬ್ ಕಿಂಗ್ಸ್​ ಖರೀದಿಸಿದೆ. ದೇಸಿಯ ಕ್ರಿಕೆಟ್​ನಲ್ಲಿ ಇವರ ಆರ್ಭಟ ಗಮನಿಸಿದ್ದ ಪ್ರೀತಿ ಜಿಂಟಾ, ಬರೋಬ್ಬರಿ 3.80 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಇವರ ಬೇಸ್​ ಪ್ರೈಸ್ 30 ಲಕ್ಷ ರೂಪಾಯಿ ಆಗಿತ್ತು. ಇನ್ನು ನಾಳೆ ಸಂಜೆ 7.30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯಲಿದೆ.

ಇದನ್ನೂ ಓದಿ: PBKS ಆರ್​ಸಿಬಿಗೂ ಕಂಟಕ.. ಎಲ್ಲೋ ಇದ್ದ ಪಂಜಾಬ್ ಹಣೆಬರಹ ಬದಲಾಯಿಸಿದ್ದು ಇವರೇ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment