ಬ್ಯಾಕ್​ ಟು ಬ್ಯಾಕ್​​ 3 ಶತಕ ಸಿಡಿಸಿ ಟೀಮ್​ ಇಂಡಿಯಾ ಕದ ತಟ್ಟಿದ ಕನ್ನಡಿಗ; ಟೀಕಾಕಾರರಿಗೆ ಖಡಕ್​ ಉತ್ತರ ಕೊಟ್ಟ ಮಯಾಂಕ್​

author-image
Ganesh Nachikethu
Updated On
ಬ್ಯಾಕ್​ ಟು ಬ್ಯಾಕ್​​ 3 ಶತಕ ಸಿಡಿಸಿ ಟೀಮ್​ ಇಂಡಿಯಾ ಕದ ತಟ್ಟಿದ ಕನ್ನಡಿಗ; ಟೀಕಾಕಾರರಿಗೆ ಖಡಕ್​ ಉತ್ತರ ಕೊಟ್ಟ ಮಯಾಂಕ್​
Advertisment
  • ಬಹುನಿರೀಕ್ಷಿತ 2024ರ ವಿಜಯ್ ಹಜಾರೆ ಟ್ರೋಫಿ ಟೂರ್ನಿ!
  • ದೇಶೀಯ ಟೂರ್ನಿಯಲ್ಲಿ ಸ್ಟಾರ್​​ ಕನ್ನಡಿಗ ಅದ್ಭುತ ಪ್ರದರ್ಶನ
  • ಮೂರು ಶತಕ ಸಿಡಿಸಿ ಮಿಂಚಿದ ಮಯಾಂಕ್​ ಅಗರ್ವಾಲ್​​​

ಬಹುನಿರೀಕ್ಷಿತ 2024ರ ವಿಜಯ್ ಹಜಾರೆ ಟ್ರೋಫಿ ಟೂರ್ನಿ ನಡೆಯುತ್ತಿದೆ. ಟೀಮ್​ ಇಂಡಿಯಾದಿಂದ ಹಲವು ವರ್ಷಗಳಿಂದ ದೂರ ಉಳಿದಿರೋ ಸ್ಟಾರ್​ ಪ್ಲೇಯರ್​​ ಈ ದೇಶೀಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಒಂದೆಡೆ ಕ್ಯಾಪ್ಟನ್​​ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿ ಬ್ಯಾಟರ್​ಗಳೇ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇನ್ನೊಂದೆಡೆ ಟೀಮ್ ಇಂಡಿಯಾದಿಂದ ಹೊರಗುಳಿದಿರೋ ಆಟಗಾರರು ಭರ್ಜರಿ ಕಮ್​ಬ್ಯಾಕ್​ ಮಾಡಿದ್ದಾರೆ. ಅದರಲ್ಲೂ 2025ರ ಐಪಿಎಲ್​ ಹರಾಜಿನಲ್ಲಿ ಸೇಲ್​ ಆಗದ ಕರ್ನಾಟಕ ಆಟಗಾರ ಮಯಾಂಕ್​ ಅಗರ್ವಾಲ್​​ ತನ್ನ ಸಾಮರ್ಥ್ಯ ತೋರಿಸಿದ್ದಾರೆ.

ಹ್ಯಾಟ್ರಿಕ್​​ ಶತಕ ಚಚ್ಚಿದ ಮಯಾಂಕ್​​

ಕರ್ನಾಟಕ ತಂಡದ ಕ್ಯಾಪ್ಟನ್​ ಮಯಾಂಕ್​ ಅಗರ್ವಾಲ್​​. ಇವರು ವಿಜಯ್ ಹಜಾರೆ ಟ್ರೋಫಿ 2024ರ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದಾರೆ. ಸತತ ಮೂರು ಪಂದ್ಯಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಶತಕ ಸಿಡಿಸಿದ್ದಾರೆ.

ಇಂದು ಕರ್ನಾಟಕ ಮತ್ತು ಹೈದರಾಬಾದ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅಮೋಘ ಶತಕ ಚಚ್ಚಿದ್ರು. ತಾನು ಎದುರಿಸಿದ 112 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 124 ರನ್ ಗಳಿಸಿದ್ದಾರೆ. ಈ ಮೂಲಕ ಮಾಯಾಂಕ್ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ರು.

ಇದನ್ನೂ ಓದಿ:2025ರ ಐಪಿಎಲ್​​; ಆರ್​​ಸಿಬಿ ಸೇರಿದ ಬೆನ್ನಲ್ಲೇ ಕನ್ನಡಿಗ ದೇವದತ್​ ಪಡಿಕ್ಕಲ್​ಗೆ ಶಾಕಿಂಗ್​ ನ್ಯೂಸ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment