/newsfirstlive-kannada/media/post_attachments/wp-content/uploads/2024/12/Mayank-Agarwal.jpg)
ಬಹುನಿರೀಕ್ಷಿತ 2024ರ ವಿಜಯ್ ಹಜಾರೆ ಟ್ರೋಫಿ ಟೂರ್ನಿ ನಡೆಯುತ್ತಿದೆ. ಟೀಮ್​ ಇಂಡಿಯಾದಿಂದ ಹಲವು ವರ್ಷಗಳಿಂದ ದೂರ ಉಳಿದಿರೋ ಸ್ಟಾರ್​ ಪ್ಲೇಯರ್​​ ಈ ದೇಶೀಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
ಒಂದೆಡೆ ಕ್ಯಾಪ್ಟನ್​​ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿ ಬ್ಯಾಟರ್​ಗಳೇ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇನ್ನೊಂದೆಡೆ ಟೀಮ್ ಇಂಡಿಯಾದಿಂದ ಹೊರಗುಳಿದಿರೋ ಆಟಗಾರರು ಭರ್ಜರಿ ಕಮ್​ಬ್ಯಾಕ್​ ಮಾಡಿದ್ದಾರೆ. ಅದರಲ್ಲೂ 2025ರ ಐಪಿಎಲ್​ ಹರಾಜಿನಲ್ಲಿ ಸೇಲ್​ ಆಗದ ಕರ್ನಾಟಕ ಆಟಗಾರ ಮಯಾಂಕ್​ ಅಗರ್ವಾಲ್​​ ತನ್ನ ಸಾಮರ್ಥ್ಯ ತೋರಿಸಿದ್ದಾರೆ.
ಹ್ಯಾಟ್ರಿಕ್​​ ಶತಕ ಚಚ್ಚಿದ ಮಯಾಂಕ್​​
ಕರ್ನಾಟಕ ತಂಡದ ಕ್ಯಾಪ್ಟನ್​ ಮಯಾಂಕ್​ ಅಗರ್ವಾಲ್​​. ಇವರು ವಿಜಯ್ ಹಜಾರೆ ಟ್ರೋಫಿ 2024ರ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದಾರೆ. ಸತತ ಮೂರು ಪಂದ್ಯಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಶತಕ ಸಿಡಿಸಿದ್ದಾರೆ.
ಇಂದು ಕರ್ನಾಟಕ ಮತ್ತು ಹೈದರಾಬಾದ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅಮೋಘ ಶತಕ ಚಚ್ಚಿದ್ರು. ತಾನು ಎದುರಿಸಿದ 112 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 124 ರನ್ ಗಳಿಸಿದ್ದಾರೆ. ಈ ಮೂಲಕ ಮಾಯಾಂಕ್ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us