ಮಯಾಂಕ್​​ರನ್ನೇ ಆರ್​ಸಿಬಿ ಸೆಲೆಕ್ಟ್ ಮಾಡಿದ್ದು ಯಾಕೆ..? ಅಸಲಿ ಕಾರಣ ಇಲ್ಲಿದೆ..

author-image
Ganesh
Updated On
ಮಯಾಂಕ್​​ರನ್ನೇ ಆರ್​ಸಿಬಿ ಸೆಲೆಕ್ಟ್ ಮಾಡಿದ್ದು ಯಾಕೆ..? ಅಸಲಿ ಕಾರಣ ಇಲ್ಲಿದೆ..
Advertisment
  • 12 ವರ್ಷಗಳ ಬಳಿಕ ಮಯಾಂಕ್​ ಮರಳಿಗೂಡಿಗೆ
  • ಪಡಿಕ್ಕಲ್ ಬದಲಿಯಾಗಿ ಮಯಾಂಕ್ ಆಯ್ಕೆ ಯಾಕೆ?
  • ಮಯಾಂಕ್ ಆಗಮನದಿಂದ RCBಗೆ ಲಾಭನಾ..?

ಸೀಸನ್​​-18ರ ಐಪಿಎಲ್​​ ನಿರ್ಣಾಯಕ ಘಟ್ಟದತ್ತ ಸಾಗ್ತಿದೆ. ಈಗಾಗಲೇ ಪ್ಲೇಆಫ್ ರೇಸ್​ನಿಂದ 3 ತಂಡಗಳು ಹೊರ ಬಿದ್ದಿದ್ದು, 7 ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್, ಇಂಜುರಿ ಕಾರಣಕ್ಕೆ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದೀಗ ದೇವದತ್ ಸ್ಥಾನಕ್ಕೆ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್‌ವಾಲ್ ಸೇರ್ಪಡೆಯಾಗಿದ್ದಾರೆ.

ಬರೋಬ್ಬರಿ 12 ವರ್ಷಗಳ ಬಳಿಕ ಕನ್ನಡಿಗ ಮಯಾಂಕ್​ ಅಗರ್ವಾಲ್​​ ಮರಳಿ ಗೂಡು ಸೇರಿದ್ದಾರೆ. ಮಯಾಂಕ್ ಆರ್​​ಸಿಬಿ ಕೊಡುಕೊಂಡ ಬೆನ್ನಲ್ಲೇ, ನಾನಾ ಡಿಬೇಡ್​ಗಳು, ಲಾಭ ನಷ್ಟದ ಚರ್ಚೆಗಳು ಶುರುವಾಗಿವೆ. ಆರ್​​ಸಿಬಿ ಮ್ಯಾನೇಜ್​​ಮೆಂಟ್​ ಸುಖಾಸುಮ್ಮನೇ ಮಯಾಂಕ್​ಗೆ ಮಣೆ ಹಾಕಿಲ್ಲ. ​ ಮಯಾಂಕ್ ಆಯ್ಕೆಯ ಹಿಂದೆ ಹಲವು ಲೆಕ್ಕಾಚಾರಗಳಿವೆ.

ಇದನ್ನೂ ಓದಿ: ಕಿಂಗ್​ ಕೊಹ್ಲಿ ಜೊತೆ ಓಪನಿಂಗ್ ಬ್ಯಾಟಿಂಗ್ ಮಾಡೋದು ಯಾರು.. ಸಾಲ್ಟ್, ಬೆಥೆಲ್ ಯಾರಿಗೆ ಚಾನ್ಸ್​?

publive-image

ಮಯಾಂಕ್ ಅನುಭವವೇ ಪ್ಲಸ್

ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿಯ​​ ಅಂಚಿನಲ್ಲಿದೆ. ಈ ಮಹತ್ವದ ಘಟ್ಟದಲ್ಲಿ ತಂಡಕ್ಕೆ ಆಸರೆಯಾಗುವಂತ ಆಟಗಾರನ ಅವಶ್ಯಕತೆ ಇತ್ತು. ಇದಕ್ಕೆ ಮಯಾಂಕ್ ಅಗರ್ವಾಲ್ ಬೆಸ್ಟ್ ಚಾಯ್ಸ್. 14 ಐಪಿಎಲ್ ಸೀಸನ್​ಗಳಲ್ಲಿ ಆಡಿರುವ ಅನುಭವ ಹೊಂದಿರುವ ಮಯಾಂಕ್, ಎಲ್ಲಾ ಕಂಡೀಷನ್ಸ್​ಗೂ ಒಗ್ಗಿಕೊಳ್ಳುವ ಆಟಗಾರ. ಆಟಗಾರನಾಗಿ ಮಾತ್ರವಲ್ಲದೇ, ಐಪಿಎಲ್​ನಲ್ಲಿ ತಂಡವನ್ನು ಮುನ್ನಡೆಸಿರುವ ಅನುಭವ ಮಯಾಂಕ್​ಗಿದೆ. ಕನ್ನಡಿಗ ​ಫೀಲ್ಡ್​ನಲ್ಲಿದ್ರೆ ತಂಡಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಸಹಾಯವಾಗೋದ್ರಲ್ಲಿ ಡೌಟಿಲ್ಲ.

ಓಪನಿಂಗ್​ಗೂ ಸೈ!

ಪಡಿಕ್ಕಲ್ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್ ಆಯ್ಕೆ ಹಿಂದಿರೋ ಮೇನ್ ರೀಸನ್ ಮಯಾಂಕ್​ ಫ್ಲೆಕ್ಸಿಬಿಲಿಟಿ. ಮಯಾಂಕ್ ಅಗರ್ವಾಲ್ ಕೇವಲ ಓಪನರ್ ಆಗಿ ಮಾತ್ರವಲ್ಲ. 3ನೇ ಕ್ರಮಾಂಕಕ್ಕೂ ಸೂಕ್ತ ಆಟಗಾರ. ಈ ಹಿಂದೆ ಹಲವು ತಂಡಗಳ ಪರ 3ನೇ ಕ್ರಮಾಂಕದಲ್ಲಿ ಆಡಿರುವ ಅನುಭವವಿದೆ. ಅಗತ್ಯ ಬಿದ್ರೆ ವಿರಾಟ್ ಕೊಹ್ಲಿ ಜೊತೆ ಓಪನಿಂಗ್ ಮಾಡಲು ನೆರವಾಗ್ತಾರೆ.

ಇದನ್ನೂ ಓದಿ: ಆರ್​ಸಿಬಿಯಲ್ಲಿ ಈಗ ಮತ್ತೊಬ್ಬ ಕನ್ನಡಿಗ.. ಬ್ಯಾಟಿಂಗ್​ ವಿಭಾಗಕ್ಕೆ ಬಂದಿದೆ ಸೂಪರ್ ಪವರ್​..!

ಸ್ಪಿನ್​​ ಎದುರು ಅದ್ಭುತ ಆಟ

ಮಯಾಂಕ್ ಒಬ್ಬ ಕ್ಲಾಸ್ ಬ್ಯಾಟ್ಸ್​ಮನ್. ಆದ್ರೆ ಇದೇ ಕ್ಲಾಸ್ ಬ್ಯಾಟರ್​ನಲ್ಲಿ ಒಬ್ಬ ಟಿ20 ಸ್ಪೆಷಲಿಸ್ಟ್ ಕೂಡ ಇದ್ಧಾನೆ. ಸ್ಪಿನ್ ಎದುರು ಅದ್ಭುತವಾಗಿ ಆಟವಾಡಬಲ್ಲ ಕಲೆಗಾರನಿದ್ದಾನೆ. ಮಿಡಲ್ ಓವರ್​ಗಳಲ್ಲಿ ಸುಲಭಕ್ಕೆ ರನ್ ಗಳಿಸೋ ಮಯಾಂಕ್​ ಸೈಲೆಂಟ್​ ಆಟದಿಂದಲೇ ಎದುರಾಳಿಗಳ ಮೇಲೆ ಒತ್ತಡ ಹೇರ್ತಾರೆ. ಒತ್ತಡದ ಸಂದರ್ಭಗಳಲ್ಲಿ ನೆಲಕಚ್ಚಿ ಆಡುವ ಮಯಾಂಕ್, ಎದುರಾಳಿ ತಂಡಕ್ಕೆ ಯಾವುದೇ ಕ್ಷಣದಲ್ಲಾದರು ಅಪಾಯಕಾರಿಯೇ.

ಚಿನ್ನಸ್ವಾಮಿ ಮತ್ತು ಆರ್​ಸಿಬಿ ಕಲ್ಚರ್

ಬ್ಯಾಟಿಂಗ್​ ಹೊರತಾಗಿ ಮಯಾಂಕ್​ ಒಬ್ಬ ಸೇಫ್​ ಹ್ಯಾಂಡ್​ ಫೀಲ್ಡರ್​. ಕಷ್ಟಕರ ಕ್ಯಾಚ್​ಗಳನ್ನು ಸುಲಭಕ್ಕೆ ತೆಗೆದುಕೊಳ್ಳಬಲ್ಲ ಸಾಮರ್ಥ್ಯವಿದೆ. ಹೋಮ್​​ಗ್ರೌಂಡ್​ ಚಿನ್ನಸ್ವಾಮಿಯ ಗ್ರೌಂಡ್​ ಮತ್ತು ಪ್ಲೇಯಿಂಗ್​ ಕಂಡಿಷನ್ಸ್​ ಬಗ್ಗೆ ಇಂಚಿಂಚೂ ಮಾಹಿತಿಯಿದೆ. ಇದಲ್ಲಕ್ಕಿಂತ 2011ರಿಂದ 2013ರ ತನಕ ಆರ್​ಸಿಬಿ ಪರವಾಗಿಯೇ ಆಡಿರುವ ಮಯಾಂಕ್​​ಗೆ, ಫ್ರಾಂಚೈಸಿಯ ಕಲ್ವರ್, ಎಕ್ಸ್​ಪೆಕ್ಟೇಷನ್ಸ್​ ಏನು ಅನ್ನೋದು ಗೊತ್ತಿದೆ. ಹೀಗಾಗಿ ತಂಡಕ್ಕೂ ಬೇಗ ಹೊಂದಿಕೊಳ್ತಾರೆ.

ಬೆಟ್ಟದಷ್ಟು ನಿರೀಕ್ಷೆ

14 ವರ್ಷಗಳ ಕಾಲ ಐಪಿಎಲ್ ಆಡಿ ಡಿಸೆಂಟ್ ಪರ್ಫಾಮೆನ್ಸ್ ನೀಡಿದ್ರೂ ಮೆಗಾ ಹರಾಜಿನಲ್ಲಿ ಕನ್ನಡಿಗ ಮಯಾಂಕ್ ಅನ್​ಸೋಲ್ಡ್​ ಆಗಿದ್ದರು. ಹರಾಜಿನಲ್ಲಿ ಅನ್​ಸೋಲ್ಡ್ ಆಗಿ ರಿಪ್ಲೇಸ್​ಮೆಂಟ್​ ಆಟಗಾರರಾಗಿ ಬಂದ ಆಟಗಾರರು ಸದ್ಯ ಐಪಿಎಲ್​ನಲ್ಲಿ ಅಬ್ಬರಿಸ್ತಾ ಇದ್ದಾರೆ. ಚೆನ್ನೈನ ಆಯುಷ್ ಮ್ಹಾತ್ರೆ, ಡೆವಾಲ್ಡ್ ಬ್ರೇವಿಸ್, ಊವ್ರಿಲ್ ಪಟೇಲ್​ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​. ಇದೀಗ ಆರ್​​ಸಿಬಿಗೆ ರೀ ಎಂಟ್ರಿಯಾಗಿರೋ ಮಯಾಂಕ್​ ಮೇಲೂ ಅದೇ ನಿರೀಕ್ಷೆಯಿದೆ. ಕಳೆದ ಮಹಾರಾಜ ಟ್ರೋಫಿ, ವಿಜಯ್​ ಹಜಾರೆ ಟ್ರೋಫಿಯಲ್ಲಿ ಅಬ್ಬರಿಸಿದ್ದ ಮಯಾಂಕ್, ಮೆಗಾ ಹರಾಜಿನಲ್ಲಿ ಕಡೆಗಣಿಸಿದವರಿಗೆ ಬ್ಯಾಟ್​ನಿಂದ ಆನ್ಸರ್​ ಕೊಡ್ತಾರಾ.? ಆರ್​​ಸಿಬಿ ಭರವಸೆ ಉಳಿಸಿಕೊಳ್ತಾರಾ? ಕಾದು ನೋಡೋಣ.

ಇದನ್ನೂ ಓದಿ: ಪಾಕ್ ಜೊತೆಗೆ ಲಿಂಕ್.. ದೇಶಕ್ಕೆ ದ್ರೋಹ ಬಗೆದ ಆರೋಪ; ಫೇಮಸ್ ಯೂಟ್ಯೂಬರ್ ಅರೆಸ್ಟ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment