/newsfirstlive-kannada/media/post_attachments/wp-content/uploads/2025/05/Mayank_Agarawal.jpg)
ನಾಯಕ ಜಿತೇಶ್ ಶರ್ಮಾ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ ಬಿರುಸಿನ ಬ್ಯಾಟಿಂಗ್ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಣರೋಚಕ ವಿಜಯ ಸಾಧಿಸಿದೆ. ಲಕ್ನೋ ನೀಡಿದ್ದ 228 ರನ್ ಟಾರ್ಗೆಟ್ ಅನ್ನು ಚೇಸ್ ಮಾಡಿದ ಆರ್ಸಿಬಿ ಕೊನೆವರೆಗೂ ಹೋರಟದ ಫಲದಿಂದ ಪಾಯಿಂಟ್ ಟೇಬಲ್ನಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಪಂದ್ಯದಲ್ಲಿ ಗೆಲುವಿಗೆ ಕಾರಣರಾದ ಒಬ್ಬರಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಮಾತನಾಡಿ ಸಂತಸ ಹಂಚಿಕೊಂಡಿದ್ದಾರೆ.
ಪಂದ್ಯ ಮುಗಿದ ನಂತರ ಮಾತನಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು, ಪಂದ್ಯದಲ್ಲಿ ವಿಜಯ ಸಾಧಿಸಿರುವುದು ಖುಷಿ ನೀಡುತ್ತಿದೆ. ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ಯಾವಾಗಲೂ ನಾನು ಮಾತನಾಡುವುದು ತುಂಬಾ ಕಡಿಮೆ. ಪಂದ್ಯದಲ್ಲಿ ಜಿತೇಶ್ ಶರ್ಮಾ ಔಟ್ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡುತ್ತಿದ್ದರು. ಅವರ ಬ್ಯಾಟಿಂಗ್ಗೆ ನಾನು ಸ್ಟ್ರೈಕ್ ನೀಡುವುದು ಅವಶ್ಯಕ ಆಗಿತ್ತು. ಅದನ್ನು ಸಂಪೂರ್ಣವಾಗಿ ನಿಭಾಯಿಸಿದೆ ಎಂದು ಹೇಳಿದರು.
ಕ್ರೀಸ್ನಲ್ಲಿ ಇರುವಾಗ ಇಬ್ಬರು ಲೆಕ್ಕಾಚಾರ ಮಾಡಿ ವೇಗದ ಬೌಲರ್ಗಳನ್ನು ದಂಡಿಸಬೇಕು ಎಂದು ಮಾತನಾಡಿ ಕೊನೆವರೆಗೂ ವಿಕೆಟ್ ಕಾಪಾಡಿಕೊಂಡೇವು. ಇದು ನಮ್ಮಿಬ್ಬರಲ್ಲಿ ಸಾಕಷ್ಟು ಆತ್ಮವಿಶ್ವಾಸ, ಮೂಮೆಂಟಮ್ ಹಾಗೂ ನಂಬಿಕೆಕೆಯನ್ನು ದೃಢ ಪಡಿಸಿತು. ಕೊನೆಯ ಪಂದ್ಯದಲ್ಲಿ ಅನುಭವಿಸಿದ ನಷ್ಟವನ್ನು ಸರಿಯಾಗಿ ತಿದ್ದಿಕೊಂಡಿದ್ದರಿಂದ ಈ ಪಂದ್ಯದಲ್ಲಿ ಒಳ್ಳೆಯ ಪ್ರದರ್ಶನ ನೀಡಲು ಸಹಕಾರಿ ಆಯಿತು ಎಂದು ಹೇಳಿದರು.
ಇದನ್ನೂ ಓದಿ:ಕನ್ನಡಿಗ ಅನಿಲ್ ಕುಂಬ್ಳೆಗೆ ಹೊಸ ಜವಾಬ್ದಾರಿ.. ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಈ ರೋಚಕ ಪಂದ್ಯದಲ್ಲಿ ನಾನು ಕ್ರೀಸ್ಗೆ ಬ್ಯಾಟಿಂಗ್ ಹಿಡಿದು ಬಂದಾಗ ಪ್ರಮುಖ ಎರಡು ವಿಕೆಟ್ಗಳು ಉರುಳಿದ್ದವು. ಹೀಗಾಗಿ ಪಾರ್ಟನರ್ಶಿಪ್ನಲ್ಲಿ ಬ್ಯಾಟಿಂಗ್ ಮಾಡಬೇಕು ಎನ್ನುವುದು ನಮ್ಮ ಯೋಜನೆ ಆಗಿತ್ತು. ಅದರಲ್ಲಿ ಜಿತೇಶ್ ಹಾಗೂ ನಾನು ಯಶಸ್ಸು ಕಂಡೇವು. ವಿಕೆಟ್ಗಳು ಇದ್ದಿದ್ದರಿಂದ ವೇಗದ ಬ್ಯಾಟಿಂಗ್ಗೆ ನೆರವಾಯಿತು ಎಂದು ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಹೇಳಿದ್ದಾರೆ.
ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಹಾಗೂ ಜಿತೇಶ್ ಶರ್ಮಾ ಜೊತೆಯಾಟ ಆರ್ಸಿಬಿ ಪಂದ್ಯದ ಗತಿ ಅನ್ನೇ ಬದಲಿಸಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ಆರ್ಸಿಬಿ ರನ್ ವೇಗ ಪಡೆದುಕೊಂಡಿತು. ಜಿತೇಶ್ ಶರ್ಮಾ 49 ರನ್ ಸಿಡಿಸಿದ್ದಾಗ ವಿಕೆಟ್ ಪತನಗೊಂಡಿತ್ತು. ಆದರೆ ನೋ ಬಾಲ್ ಆಗಿರುವ ಸೈರನ್ ಸೌಂಡ್ ಬಂದ ಕಾರಣ ಆರ್ಸಿಬಿ ಅಭಿಮಾನಿಗಳು ಖುಷಿ ಇಮ್ಮಡಿ ಆಯಿತು. ಕ್ಯಾಪ್ಟನ್ ಜಿತೇಶ್ ಶರ್ಮಾ ಅಜೇಯ 85 ರನ್ ಬಾರಿಸಿದರೆ, ಮಯಾಂಕ್ ಅಗರ್ವಾಲ್ ಅಜೇಯ 41 ರನ್ ಸಿಡಿಸಿ ಆರ್ಸಿಬಿ ಗೆಲುವಿಗೆ ಕಾರಣರಾದರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ