ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್
ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಸಮಾಧಾನದ ಹೊಗೆ
ರೋಹಿತ್ಗೆ ಆದ ಅವಮಾನದ ಬಗ್ಗೆ ಹಾರ್ದಿಕ್ ಏನಂದ್ರು?
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಆರಂಭಕ್ಕೆ ಇನ್ನೇನು ಕೇವಲ 3 ದಿನಗಳು ಮಾತ್ರ ಬಾಕಿ ಇದೆ. ಮಾರ್ಚ್ 22ನೇ ತಾರೀಕಿನಂದು ಆರ್ಸಿಬಿ ಮತ್ತು ಚೆನ್ನೈ ನಡುವಿನ ಮೊದಲ ಪಂದ್ಯ ನಡೆಯಲಿದೆ. ಇದಾದ ಬಳಿಕ ಮಾರ್ಚ್ 24ನೇ ತಾರೀಕು ಭಾನುವಾರ ಮುಂಬೈ ಇಂಡಿಯನ್ಸ್, ಸನ್ರೈಸರ್ಸ್ ಹೈದರಾಬಾದ್ ಮಧ್ಯೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ.
ಇನ್ನು, ಇದಕ್ಕಾಗಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಟೀಮ್ ತಯಾರಿ ನಡೆಸುತ್ತಿದೆ. ಈ ಮುನ್ನ ತಂಡದ ತಯಾರಿ ಬಗ್ಗೆ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಸುದ್ದಿಗೋಷ್ಠಿ ನಡೆಸಿದ್ರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಅವಮಾನ ಮಾಡಿದ್ಯಾಕೆ? ಎಂಬ ಪ್ರಶ್ನೆಗೆ ಹಾರ್ದಿಕ್ ಉತ್ತರ ನೀಡಲಾಗಲಿಲ್ಲ. ಕಾರಣಕ್ಕೆ ಹಾರ್ದಿಕ್ ಮೌನಕ್ಕೆ ಜಾರಿದ್ರು.
ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾಗೆ ಅವಮಾನ ಮಾಡಿದ್ದು ಎಷ್ಟು ಸರಿ? ನಿಮ್ಮ ವಿರುದ್ಧ ಹಿಟ್ಮ್ಯಾನ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರ ಬಗ್ಗೆ ಅಭಿಪ್ರಾಯವೇನು? ಎಂದು ಕೇಳಿದ್ರು. ಇದಕ್ಕೆ ಹಾರ್ದಿಕ್ ಪಾಂಡ್ಯ ಉತ್ತರ ಹೀಗಿತ್ತು.
Hardik Pandya said “Rohit Sharma is captain of Indian team, which helps me, what this team has achieved, was achieved under his belt – I just carry forward, I played whole career under him and I know, he will always have his hand on my shoulder”. pic.twitter.com/DgBJX1EBDs
— Johns. (@CricCrazyJohns) March 18, 2024
ರೋಹಿತ್ ಶರ್ಮಾ ಅವರು ಭಾರತ ತಂಡದ ಕ್ಯಾಪ್ಟನ್. ಅವರ ನಾಯಕತ್ವದ ಅಡಿಯಲ್ಲಿ ಸುಮಾರು ವರ್ಷ ಕ್ರಿಕೆಟ್ ಆಡಿದ್ದೇನೆ. ಯಾವಾಗಲೂ ರೋಹಿತ್ ನನ್ನ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ಭಾವಿಸಿದ್ದೇನೆ ಎಂದರು. ಆದ್ರೆ, ರೋಹಿತ್ಗೆ ಅವಮಾನ ಮಾಡಿದ್ದರ ಬಗ್ಗೆ ಯಾವುದೇ ಮಾತು ಆಡಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್
ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಸಮಾಧಾನದ ಹೊಗೆ
ರೋಹಿತ್ಗೆ ಆದ ಅವಮಾನದ ಬಗ್ಗೆ ಹಾರ್ದಿಕ್ ಏನಂದ್ರು?
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಆರಂಭಕ್ಕೆ ಇನ್ನೇನು ಕೇವಲ 3 ದಿನಗಳು ಮಾತ್ರ ಬಾಕಿ ಇದೆ. ಮಾರ್ಚ್ 22ನೇ ತಾರೀಕಿನಂದು ಆರ್ಸಿಬಿ ಮತ್ತು ಚೆನ್ನೈ ನಡುವಿನ ಮೊದಲ ಪಂದ್ಯ ನಡೆಯಲಿದೆ. ಇದಾದ ಬಳಿಕ ಮಾರ್ಚ್ 24ನೇ ತಾರೀಕು ಭಾನುವಾರ ಮುಂಬೈ ಇಂಡಿಯನ್ಸ್, ಸನ್ರೈಸರ್ಸ್ ಹೈದರಾಬಾದ್ ಮಧ್ಯೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ.
ಇನ್ನು, ಇದಕ್ಕಾಗಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಟೀಮ್ ತಯಾರಿ ನಡೆಸುತ್ತಿದೆ. ಈ ಮುನ್ನ ತಂಡದ ತಯಾರಿ ಬಗ್ಗೆ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಸುದ್ದಿಗೋಷ್ಠಿ ನಡೆಸಿದ್ರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಅವಮಾನ ಮಾಡಿದ್ಯಾಕೆ? ಎಂಬ ಪ್ರಶ್ನೆಗೆ ಹಾರ್ದಿಕ್ ಉತ್ತರ ನೀಡಲಾಗಲಿಲ್ಲ. ಕಾರಣಕ್ಕೆ ಹಾರ್ದಿಕ್ ಮೌನಕ್ಕೆ ಜಾರಿದ್ರು.
ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾಗೆ ಅವಮಾನ ಮಾಡಿದ್ದು ಎಷ್ಟು ಸರಿ? ನಿಮ್ಮ ವಿರುದ್ಧ ಹಿಟ್ಮ್ಯಾನ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರ ಬಗ್ಗೆ ಅಭಿಪ್ರಾಯವೇನು? ಎಂದು ಕೇಳಿದ್ರು. ಇದಕ್ಕೆ ಹಾರ್ದಿಕ್ ಪಾಂಡ್ಯ ಉತ್ತರ ಹೀಗಿತ್ತು.
Hardik Pandya said “Rohit Sharma is captain of Indian team, which helps me, what this team has achieved, was achieved under his belt – I just carry forward, I played whole career under him and I know, he will always have his hand on my shoulder”. pic.twitter.com/DgBJX1EBDs
— Johns. (@CricCrazyJohns) March 18, 2024
ರೋಹಿತ್ ಶರ್ಮಾ ಅವರು ಭಾರತ ತಂಡದ ಕ್ಯಾಪ್ಟನ್. ಅವರ ನಾಯಕತ್ವದ ಅಡಿಯಲ್ಲಿ ಸುಮಾರು ವರ್ಷ ಕ್ರಿಕೆಟ್ ಆಡಿದ್ದೇನೆ. ಯಾವಾಗಲೂ ರೋಹಿತ್ ನನ್ನ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ಭಾವಿಸಿದ್ದೇನೆ ಎಂದರು. ಆದ್ರೆ, ರೋಹಿತ್ಗೆ ಅವಮಾನ ಮಾಡಿದ್ದರ ಬಗ್ಗೆ ಯಾವುದೇ ಮಾತು ಆಡಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ