newsfirstkannada.com

ಇದೆಂಥಾ ಶಾಕಿಂಗ್​ ನ್ಯೂಸ್​! ಮಿಡ್​ ವೀಕ್ ಎಲಿಮಿನೇಷನ್​.. ಬಿಗ್​ ಬಾಸ್​ ಮನೆಯಿಂದ ಹೊರಬಂದ ಸ್ಪರ್ಧಿ!

Share :

Published January 18, 2024 at 8:37am

Update January 18, 2024 at 8:39am

    ವಾರದ ನಡುವೆ ಶಾಕ್​ ಕೊಟ್ಟ ಬಿಗ್​ ಬಾಸ್​

    ತುಕಾಲಿ ಅಲ್ಲ, ವರ್ತೂರ್​ ಅಲ್ಲ, ಎಲಿಮಿನೇಟ್​ ಆಗಿದ್ದು ಮತ್ಯಾರು?

    ಕಣ್ಣೀರಿಡುತ್ತಾ ಬಿಗ್​ ಬಾಸ್​ ಮನೆಯ ಮುಖ್ಯದ್ವಾರದಿಂದ ಹೊರನಡೆದ ಸ್ಪರ್ಧಿ!

ಕಳೆದ ವಾರ ಬಿಗ್​ ಬಾಸ್​ ಮನೆಯಿಂದ ಒಬ್ಬ ಸ್ಪರ್ಧಿ ಹೊರ ಹೋಗಬೇಕಿತ್ತು. ಅದರಲ್ಲೂ ತುಕಾಲಿ ಸಂತೋಷ್​ ಮತ್ತು ವರ್ತೂರು ಪ್ರಕಾಶ್​ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರಹೋಗೋದು ಕನ್ಫರ್ಮ್​ ಆಗಿತ್ತು. ಆದರೆ ಕಿಚ್ಚ ಸುದೀಪ್​ ಇವರ ಸ್ನೇಹವನ್ನು ಕಂಡು ಇಬ್ಬರಿಗೆ ಸರ್​ಪ್ರೈಸ್​​ ನೀಡಿದ್ದರು. ಆದರೀಗ ವಾರದ ನಡುವೆ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​ ನೀಡಿದ್ದಾರೆ. ಮನೆಯ ಮುಖ್ಯ ದ್ವಾರದ ಮೂಲಕ ಹೊರಬರಲು ಹೇಳಿ ಎಲಿಮಿನೇಟ್​ ಮಾಡಿದ್ದಾರೆ. ಆದರೆ ವರ್ತೂರು ಅಥವಾ ತುಕಾಲಿ ಇಬ್ಬರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಹಾಗಿದ್ದರೆ ಮನೆಯಿಂದ ಹೊರ ಹೋದ ಸ್ಪರ್ಧಿ ಯಾರು?

ಬಿಗ್​ ಬಾಸ್​ ಮನೆಯಲ್ಲಿ ಯಾವಾಗ ಏನಾಗುತ್ತೋ ಗೊತ್ತಿಲ್ಲ. ಪ್ರತಿ ವಾರಾಂತ್ಯಕ್ಕಾಗಿ ಕಾಯುತ್ತಿದ್ದ ಪ್ರೇಕ್ಷಕರು ಎಲಿಮಿನೇಷನ್​ ಪ್ರಕ್ರಿಯೆಯನ್ನ ಮಾತ್ರ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು. ಆದರೆ ಈ ವಾರ ಮಾತ್ರ ಬಿಗ್​ ಬಾಸ್​ ವಾರದ ನಡುವೆಯೇ ಶಾಕ್​ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ ಅವರಿಗೆ ಬಿಗ್​ ಬಾಸ್​ ಮನೆಯ ಮುಖ್ಯ ದ್ವಾರದಿಂದ ಹೊರಬರಲು ಹೇಳುವ ಮೂಲಕ ಅವರ ಕಣ್ಣಾಲಿಯನ್ನು ಒದ್ದೆ ಮಾಡುವಂತೆ ಮಾಡಿಸಿದ್ದಾರೆ.

 

ಹೌದು. ತನಿಷಾ ಬಿಗ್​ ಬಾಸ್​ ಮನೆಯಿಂದ ಹೊರ ಹೋಗಿದ್ದಾರೆ. ಹೋಗುವ ಮುನ್ನ ತನಿಷಾ ಮಾತನಾಡಿದ್ದು, ತುಂಬಾ ಆಸೆ ಪಟ್ಟಿದ್ರಿ ಎಲ್ಲಾರೂ ಹೋಗಬೇಕಂತ.. ಬಿಗ್​ ಬಾಸ್​ ಯಾಕೆ ಬಿಗ್​ ಬಾಸ್​.. ನನ್ನ ಧ್ವನಿ ನಿಮಗೆ ಕಿರಿಕಿರಿ ನೀಡುತ್ತಿತ್ತು ಅಲ್ವಾ, ಇನ್ಮೇಲೆ ನನ್​ ವಾಯ್ಸ್​ ನಿಮ್ಗೆ ಯಾರಿಗೂ ಕಿರಿಕಿರಿ ಕೊಡಲ್ಲ ಎಂದು ಅಳುತ್ತಾ ಮನೆಯಿಂದ ಹೊರ ನಡೆದಿದ್ದಾರೆ.

ಒಟ್ಟಿನಲ್ಲಿ ಇಂದಿನ ಎಪಿಸೋಡ್​ ಮಾತ್ರ ಬಿಗ್​ ಬಾಸ್ ಪ್ರೇಕ್ಷಕರಿಗೂ ಮತ್ತು ತನಿಷಾ ಅಭಿಮಾನಿಗಳಿಗೆ ಶಾಕ್​ ನೀಡಲಿರೋದು ಮಾತ್ರ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದೆಂಥಾ ಶಾಕಿಂಗ್​ ನ್ಯೂಸ್​! ಮಿಡ್​ ವೀಕ್ ಎಲಿಮಿನೇಷನ್​.. ಬಿಗ್​ ಬಾಸ್​ ಮನೆಯಿಂದ ಹೊರಬಂದ ಸ್ಪರ್ಧಿ!

https://newsfirstlive.com/wp-content/uploads/2024/01/Bigg-boss-9.jpg

    ವಾರದ ನಡುವೆ ಶಾಕ್​ ಕೊಟ್ಟ ಬಿಗ್​ ಬಾಸ್​

    ತುಕಾಲಿ ಅಲ್ಲ, ವರ್ತೂರ್​ ಅಲ್ಲ, ಎಲಿಮಿನೇಟ್​ ಆಗಿದ್ದು ಮತ್ಯಾರು?

    ಕಣ್ಣೀರಿಡುತ್ತಾ ಬಿಗ್​ ಬಾಸ್​ ಮನೆಯ ಮುಖ್ಯದ್ವಾರದಿಂದ ಹೊರನಡೆದ ಸ್ಪರ್ಧಿ!

ಕಳೆದ ವಾರ ಬಿಗ್​ ಬಾಸ್​ ಮನೆಯಿಂದ ಒಬ್ಬ ಸ್ಪರ್ಧಿ ಹೊರ ಹೋಗಬೇಕಿತ್ತು. ಅದರಲ್ಲೂ ತುಕಾಲಿ ಸಂತೋಷ್​ ಮತ್ತು ವರ್ತೂರು ಪ್ರಕಾಶ್​ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರಹೋಗೋದು ಕನ್ಫರ್ಮ್​ ಆಗಿತ್ತು. ಆದರೆ ಕಿಚ್ಚ ಸುದೀಪ್​ ಇವರ ಸ್ನೇಹವನ್ನು ಕಂಡು ಇಬ್ಬರಿಗೆ ಸರ್​ಪ್ರೈಸ್​​ ನೀಡಿದ್ದರು. ಆದರೀಗ ವಾರದ ನಡುವೆ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​ ನೀಡಿದ್ದಾರೆ. ಮನೆಯ ಮುಖ್ಯ ದ್ವಾರದ ಮೂಲಕ ಹೊರಬರಲು ಹೇಳಿ ಎಲಿಮಿನೇಟ್​ ಮಾಡಿದ್ದಾರೆ. ಆದರೆ ವರ್ತೂರು ಅಥವಾ ತುಕಾಲಿ ಇಬ್ಬರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಹಾಗಿದ್ದರೆ ಮನೆಯಿಂದ ಹೊರ ಹೋದ ಸ್ಪರ್ಧಿ ಯಾರು?

ಬಿಗ್​ ಬಾಸ್​ ಮನೆಯಲ್ಲಿ ಯಾವಾಗ ಏನಾಗುತ್ತೋ ಗೊತ್ತಿಲ್ಲ. ಪ್ರತಿ ವಾರಾಂತ್ಯಕ್ಕಾಗಿ ಕಾಯುತ್ತಿದ್ದ ಪ್ರೇಕ್ಷಕರು ಎಲಿಮಿನೇಷನ್​ ಪ್ರಕ್ರಿಯೆಯನ್ನ ಮಾತ್ರ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು. ಆದರೆ ಈ ವಾರ ಮಾತ್ರ ಬಿಗ್​ ಬಾಸ್​ ವಾರದ ನಡುವೆಯೇ ಶಾಕ್​ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ ಅವರಿಗೆ ಬಿಗ್​ ಬಾಸ್​ ಮನೆಯ ಮುಖ್ಯ ದ್ವಾರದಿಂದ ಹೊರಬರಲು ಹೇಳುವ ಮೂಲಕ ಅವರ ಕಣ್ಣಾಲಿಯನ್ನು ಒದ್ದೆ ಮಾಡುವಂತೆ ಮಾಡಿಸಿದ್ದಾರೆ.

 

ಹೌದು. ತನಿಷಾ ಬಿಗ್​ ಬಾಸ್​ ಮನೆಯಿಂದ ಹೊರ ಹೋಗಿದ್ದಾರೆ. ಹೋಗುವ ಮುನ್ನ ತನಿಷಾ ಮಾತನಾಡಿದ್ದು, ತುಂಬಾ ಆಸೆ ಪಟ್ಟಿದ್ರಿ ಎಲ್ಲಾರೂ ಹೋಗಬೇಕಂತ.. ಬಿಗ್​ ಬಾಸ್​ ಯಾಕೆ ಬಿಗ್​ ಬಾಸ್​.. ನನ್ನ ಧ್ವನಿ ನಿಮಗೆ ಕಿರಿಕಿರಿ ನೀಡುತ್ತಿತ್ತು ಅಲ್ವಾ, ಇನ್ಮೇಲೆ ನನ್​ ವಾಯ್ಸ್​ ನಿಮ್ಗೆ ಯಾರಿಗೂ ಕಿರಿಕಿರಿ ಕೊಡಲ್ಲ ಎಂದು ಅಳುತ್ತಾ ಮನೆಯಿಂದ ಹೊರ ನಡೆದಿದ್ದಾರೆ.

ಒಟ್ಟಿನಲ್ಲಿ ಇಂದಿನ ಎಪಿಸೋಡ್​ ಮಾತ್ರ ಬಿಗ್​ ಬಾಸ್ ಪ್ರೇಕ್ಷಕರಿಗೂ ಮತ್ತು ತನಿಷಾ ಅಭಿಮಾನಿಗಳಿಗೆ ಶಾಕ್​ ನೀಡಲಿರೋದು ಮಾತ್ರ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More