/newsfirstlive-kannada/media/post_attachments/wp-content/uploads/2025/04/KANNADIGA.jpg)
ಕನ್ನಡ ನೆಲದಲ್ಲಿ ಕನ್ನಡಿಗರೇ ಸಾರ್ವಭೌಮ.. ಆದರೆ ಎಲ್ಲಿಂದಲೂ ಬಂದು, ಕನ್ನಡಿಗರ ಮೇಲೆ ದಬ್ಬಾಳಿ ನಡೆಯುತ್ತಿರೋದು ಇದೇ ಮೊದಲಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗ್ತಿದ್ದು, ಕನ್ನಡಿಗರನ್ನ ಮತ್ತೆ ಕೆರಳಿಸುವಂತೆ ಮಾಡಿದೆ.
ವಿಡಿಯೋದಲ್ಲಿ ಏನಿದೆ..?
ವಿಡಿಯೋದಲ್ಲಿ ಧಿಮಾಕಿನ ವ್ಯಕ್ತಿಯೊಬ್ಬ ಮಹಿಳೆಯೊಬ್ಬರ ಕೈಹಿಡಿದು ಹೋಗುತ್ತಿದ್ದಾನೆ. ಹಿಂದಿನಿಂದ ಕನ್ನಡಿಗನೊಬ್ಬ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾನೆ. ಅದಕ್ಕೆ ಕೋಪಿಸಿಕೊಂಡು ಬರುವ ಆತ, ರೆಕಾರ್ಡ್ ಮಾಡಬೇಡ ನೀನು. ಕನ್ನಡದಲ್ಲಾದ್ರೂ ಇರು, ಬೆಂಗಳೂರಲ್ಲಾದ್ರೂ ಇರು. ನೀನು ಹಿಂದಿಯಲ್ಲಿ ಮಾತನಾಡು. ಹಿಂದಿ, ಹಿಂದಿಯಲ್ಲಿ ಮಾತನಾಡು.. ಎಂದು ಧಮ್ಕಿ ಹಾಕಿದ್ದಾನೆ. ಅಲ್ಲಿಗೆ ಓಡಿ ಬರುವ ಮಹಿಳೆ ಆತನನ್ನು ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾಳೆ. ಆದರೂ ಕನ್ನಡಿಗನ ಜೊತೆ ವಾಗ್ವಾದಕ್ಕೆ ಮುಂದಾಗಿದ್ದಾನೆ.
ಇದನ್ನೂ ಓದಿ: ಆರ್ಸಿಬಿಗೆ ಬಿಗ್ ಶಾಕ್ ನೀಡಿದ ಲಕ್ನೋ ಸೂಪರ್ ಜೈಂಟ್ಸ್.. ಆಗಿದ್ದೇನು..?
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ. ರೊಟ್ಟಿ, ಬೆಣ್ಣೆ ಸಂಪಾದಿಸಲು ಕರ್ನಾಟಕಕ್ಕೆ ವಲಸೆ ಬಂದಿರುವ ವಲಸಿಗನ ಸೊಕ್ಕು ನೋಡಿ. ಕನ್ನಡಿಗರಿಗೆ ಬೆದರಿಕೆ ಹಾಕ್ತಿದ್ದಾನೆ. ಬೆಂಗಳೂರಿಗೆ ಬಂದು ಹಿಂದಿ ಮಾತನಾಡುವಂತೆ ಧಮ್ಕಿ ಹಾಕಿದ್ದಾನೆ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಬೆಂಗಳೂರಲ್ಲಿ ನಡೆದಿರುವ ಘಟನೆ ಇದಾಗಿದೆ. ಯಾವ ದಿನ ನಡೆದಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.
ಇದನ್ನೂ ಓದಿ: RCB ಪಾಲಿಗೆ 4 ಬಿಗ್ ಸ್ಟಾರ್ ಕಂಟಕ.. ಗೆಲುವಿನ ಕನಸಿಗೆ ನಮ್ಮವರೇ ವಿಲನ್..!
Look at the arrogance of this Migrant who came to Karnataka leaving his hometown to earn his bread and butter.
He openly threatened a Kannadiga, “If you want to be in Bengaluru, speak in Hindi.” Many still ask why Kannadigas oppose these hooligans.
pic.twitter.com/DSPi52veA2— Prathap ಕಣಗಾಲ್💛❤️ (@Kanagalogy) April 19, 2025
ತಮ್ಮುರಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಆಗದೆ
ನಮ್ಮೂರಿಗೆ ಬಂದ್ರು ಕನ್ನಡನಾ ಕನ್ನಡ್ ಮಾಡಿದ್ರು.
ಕನ್ನಡ ಕಲಿರಪ್ಪ ಅಂದ್ರೆ ಇಲ್ಲ ನಾವು ಕಲಿಯಲ್ಲ ಅಂದ್ರು.
ಈಗ ನಮ್ಮೂರಲ್ಲಿ ನಮಗೆ ಹಿಂದಿಲಿ ಮಾತಾಡಿ ಅಂತ ಬೆದರಿಕೆ ಹಾಕೋ ಲೆವೆಲ್ ಗೆ ಬಂದಿದ್ದಾರೆ..ಇದು ಇವರ ದುರಹಂಕಾರಕ್ಕೆ ಕಾರಣ ನಮ್ಮಲ್ಲೇ ಇರೋ ಗುಲಾಮಗಿರಿ ಮಾಡೋರು😡 pic.twitter.com/wufSLWh2l9— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) April 19, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್